ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಅಂಚೆ ಇಲಾಖೆಯು ಮಿನಿ ಬ್ಯಾಂಕ್ ಆಗಿ ಪರಿವರ್ತನೆಗೊಂಡು ಗ್ರಾಹಕರ ಸೇವೆಯನ್ನು ಮಾಡುತ್ತಿದೆ ಅಂಚೆ ಇಲಾಖೆಯ ಇತರ ಸೇವೆಗಳನ್ನು ಪಡೆದುಕೊಳ್ಳಬೇಕೆಂದು ಹಿರಿಯ ಮುಖಂಡ ಶ್ರೀಮಂತಗೌಡ ನಾಗೂರ ಹೇಳಿದರು.
ಅವರು ತಾಲೂಕಿನ ದೇವಣಗಾಂವ ಗ್ರಾಮದ ಅರಿವು ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ನಡೆದ ಅಂಚೆ ಜನ ಸಂಪರ್ಕ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನೂರಾರು ವರ್ಷಗಳ ಇತಿಹಾಸ ಇರುವ ಅಂಚೆ ಇಲಾಖೆಯು ಕೇವಲ ಪತ್ರಗಳ ಬಟವಡೆ ಮಾಡುವುದನ್ನ ಅಷ್ಟೇ ಅಲ್ಲ ಅದರ ಜೊತೆಗೆ ಗ್ರಾಹಕರಿಗೆ ಅನುಕೂಲವಾಗುವ ಬ್ಯಾಂಕ್ ಸೇವೆಯನ್ನು, ಜೀವ ವಿಮೆ, ಪಿಂಚಣಿ, ಸೇರಿದಂತೆ ಅನೇಕ ಸವಲತ್ತುಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ ಆದ್ದರಿಂದ ಎಲ್ಲರೂ ಅಂಚೆ ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೇ. ಈರಯ್ಯ ಮಠ ಮಾತನಾಡಿ ಹಿಂದಿನ ಕಾಲದಲ್ಲಿ ಅಂಚೆ ಇಲಾಖೆ ಜನರ ಜೀವನದ ಜೀವನ ಅಡಿಯಾಗಿತ್ತು ಕಾಲಕ್ರಮೇಣ ಸ್ವಲ್ಪ ತೆರೆಮರೆಗೆ ಸರಿದಿದ್ದರೂ ಕೂಡ ಇಂದು ಹೊಸ ಹೊಸ ಸೇವೆಗಳನ್ನು ನೀಡುವ ಮೂಲಕ ಮತ್ತಷ್ಟು ಗ್ರಾಹಕರಿಗೆ ಹತ್ತಿರವಾಗುವಂತ ಕೆಲಸ ಅಂಚೆ ಇಲಾಖೆ ಮಾಡುತ್ತಿದೆ ಎಂದರು.
ಅಂಚೆ ಇಲಾಖೆಯ ಎಸ್.ಪಿ.ಎಂ. ಶ್ರೀಮತಿ ಸೀಮಾ ಸಾಲಿಮಠ, ಪಿಕೆಪಿಎಸ್ ನಿರ್ದೇಶಕ ಬಸವರಾಜ ಪೂಜಾರಿ, ಗ್ರಾಪಂ ಕಾರ್ಯದರ್ಶಿ ಎನ್. ಎ.ಬಂಡಗಾರ, ಸದ್ದಾಂ ಹುಸೇನ್ ಆಲಗೂರ, ಮನೋಹರ ಪೋಳ, ಅಮರೇಶ ಕಲಶೆಟ್ಟಿ , ಶಕೀಲ್ ಅಹ್ಮದ್ ಬಡೇಘರ್ , ದಿವ್ಯ ಮಲಕಣ್ಣನವರ, ಸೌಮ್ಯ ಚೌಧರಿ, ಐಶ್ವರ್ಯ ಉಟಗಿ, ಸೋಮಶೇಖರ ಮಠ, ಬಲಭೀಮ ಪಾಟೀಲ ಇದ್ದರು
ದತ್ತಾತ್ರೇಯ ಸೊನ್ನ ನಿರೂಪಿಸಿದರು, ಚಿದಾನಂದ ಹೊಸಮನಿ ವಂದಿಸಿದರು.

