ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಲಿ.ಬಸವಂತರಾಯ ಮಹಾರಾಜರು ಹಾಗು ಲಿಂ.ಬಸವರಾಜ ಮೇಲುಪ್ಪರಗಿಮಠ ನಿರಂತರ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕಾಗಿ ದುಡಿದು ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡ ಮಹಾನ ಸಾಧಕರು ಎಂದು ಹಿರಿಯ ಪ್ರವಚನಕಾರ ಬಾಬುರಾವ ಮಹಾರಾಜ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಹೊನವಾಡ ಗ್ರಾಮದ ವಿಠ್ಠಲ ಮಂದಿರದಲ್ಲಿ ಬುಧವಾರ ಲಿಂಗೈಕ್ಯ ಬಸವಂತರಾಯ ಮಹಾರಾಜರ ಹಾಗು ಲಿಂ.ಬಸವರಾಜ ಮೇಲುಪ್ಪರಗಿಮಠ ಅವರ ದತ್ತಿ ನಿಧಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ, ಗ್ರಾಮದ ಈ ಇಬ್ಬರು ಸಾಧಕರಿಂದ ಶೈಕ್ಷಣಿಕ ಹಾಗು ಆಧ್ಯಾತ್ಮಿಕ ಚಿಂತನೆಗಳಿಂದ ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಕನ್ನಡ ಸಾಹಿತ್ಯ ಪರಿಷತ್ತಿಗೆ ಶತಮಾನದ ಇತಿಹಾಸವಿದೆ. ಕನ್ನಡ ನಾಡು ನುಡಿಯು ಅತ್ಯಂತ ಶ್ರೀಮಂತವಾಗಿದೆ. ಸಾಹಿತ್ಯದಿಂದ ಸಾಮಾಜಿಕ ಮೌಲ್ಯ ಕಾಪಾಡಲು ಸಾಧ್ಯವಾಗಿದೆ ಎಂದರು.
ಉಪನ್ಯಾಸಕ ಡಿ.ಬಿ.ಡೇಮ್ರಿ ಮಾತನಾಡಿ, ವಚನ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ. ಗ್ರಾಮೀಣ ಸಮಾಜದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾಧ್ಯಾನತೆ ನೀಡಿ ಹೊನವಾಡದಲ್ಲಿ ಪ್ರೌಢ ಶಾಲೆ ಹಾಗು ಪದವಿಪೂರ್ವ ಕಾಲೇಜು ಸ್ಥಾಪಿಸಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದರು.
ಎಂ. ಎಸ್. ಖೋದ್ನಾಪೂರ, ಅಭಿಷೇಕ ಚಕ್ರವರ್ತಿ, ಸುಭಾಸಗೌಡ ಪಾಟೀಲ, ತಾಲ್ಲೂಕ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿದರು.
ವಿಜಯಕುಮಾರ ಹಿರೇಮಠ, ಗೌರಿಶಂಕರ ಹಿರೇಮಠ, ವೆಂಕಪ್ಪ ಉಪ್ಪಾರ, ಸಿದ್ದಲಿಂಗಪ್ಪಾ ಸಾರವಾಡ, ಅವಿನಾಶ ಮೇಲುಪ್ಪರಗಿಮಠ, ಮಹಾದೇವ ಜಾಧವ, ಸಾಬು ಕಾತ್ರಾಳ ಧರೆಪ್ಪ ಯಚ್ಚಿ, ಸಿದ್ದು ಬೆಳಗಾವಿ, ಲಿಂಗರಾಜ ಪಾಟೀಲ, ಶರಣು ಕಂಠಿ, ಬಸವರಾಜ ನಾವಿ, ಮುರಿಗೆಪ್ಪ ಕೋಟಿ, ಧರೇಪ್ಪ ಚಾವರ, ಬಸವರಾಜ ಐಗಳಿಮಠ, ನಚಿಕೇತ ಹಿರೇಮಠ, ಶ್ರೀಶೈಲ ಮಾಲಗಾರ, ಸಚೀನ ಸಾವಂತ, ಶ್ರೀಕಾಂತ ಕಂಟೇಕಾರ, ಬಸು ಏಕನಾಟಿ, ಚಿದಾನಂದ ಅರಮೋಟಿ, ಉಮೇಶ ಮೂರಕಲಿ, ಚಿದಾನಂದ ಗೊರವರ, ಬಾಪು ದೇವನಾಯಕ, ಪುಟ್ಟು ಮಠಪತಿ, ಶಿವಾಜಿ ಜಾಧವ, ಆನಂದ ಕೊರಬು, ಅಕ್ಬರ ತಿಕೋಟಿ ಇದ್ದರು.
ಆನಂದ ಹೊನವಾಡ ಪ್ರಾರ್ಥಿಸಿದರು, ಶರಣಮ್ಮ ಹಾದಿಮನಿ ಸ್ವಾಗತಿಸಿದರು, ಲಕ್ಷ್ಮಿ ಕಾತ್ರಾಳ ಕವನ ವಾಚಸಿದರು, ಹಣಮಂತ ಮೋಹಿತೆ ವಂದಿಸಿದರು.

