ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರ ಸ್ವಚ್ಚತೆಯಿಂದ ಕೂಡಿರಬೇಕು ಜನರಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ ಮತ್ತು ಮೂತ್ರಾಲಯ ಒದಗಿಸಬೆಕು ಎನ್ನುವ ನಿಟ್ಟಿನಲ್ಲಿ ೨೦೨೩-೨೪ನೇ ಸಾಲಿನ ಎಸ್.ಬಿಎಂ ೨.೦ ಯೋಜನೆ ಅಡಿಯಲ್ಲಿ ರೂ.೫೯.೧೦ಲಕ್ಷಗಳ ಮಿಸಲಿಟ್ಟು ನಗರ ಜನತೆಯ ಜೊತೆ ಗ್ರಾಮೀಣದಿಂದ ವ್ಯಾಪಾರ ಉದ್ಯೋಗಕ್ಕಾಗಿ ಆಗಮಿಸುತ್ತಿರುವ ಸಾರ್ವಜನಿಕರು, ರೈತಾಪಿ ವರ್ಗ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಯ್ಕೆಯಾದ ನಗರದ ೮ಸ್ಥಳಗಳಲ್ಲಿ ೪ಶೌಚಾಲಯ ಹಾಗೂ ೪ ಮೂತ್ರಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಕನಕದಾಸ ವೃತ್ತದ ಹತ್ತಿರ ಸನ್ ೨೦೨೩-೨೪ನೇ ಸಾಲೀನ ಎಸ್ಬಿಎಂ ೨.೦ ಯೋಜನೆಯಡಿಯಲ್ಲಿ ರೂ ೫೯ಲಕ್ಷ ೧೦ಸಾವಿರ ರೂ.ವೆಚ್ಚದಲ್ಲಿ ೮ಶೌಚಾಲಯ ನಿರ್ಮಾಣದ ಭೂಮಿ ಪೂಜೆಯನ್ನು ನೇರವೇರಿಸಿ ಮಾತನಾಡಿದ ಅವರು, ಸಿಂದಗಿ ನಗರವನ್ನು ಸ್ವಚ್ಚತೆಯಿಂದ ಕೂಡಿರಬೇಕು ಎನ್ನುವ ನಿಟ್ಟಿನಲ್ಲಿ ಕನಕದಾಸ ವೃತ್ತ, ವಿದ್ಯಾನಗರ ಕ್ರೀಡಾಂಗಣ, ಬಸ್ ಡಿಪೋ ಆಶ್ರಯ ಕಾಲೋನಿ, ಗಾಂಧಿ ವೃತ್ತದ ಹತ್ತಿರ ೪ ಶೌಚಾಲಯ ಹಾಗೂ ಸಂಗಮ ಬಾರ್, ಕೆಇಬಿ, ಮೋರಟಗಿ ನಾಕಾ, ಕೋರ್ಟ ಹತ್ತಿರ ಒಟ್ಟು ೪ ಮೂತ್ರಾಲಯಗಳನ್ನು ನಿರ್ಮಾಣ ಮಾಡಿ ಈ ನಗರವನ್ನು ಅಭಿವೃದ್ಧಿ ಪಡಿಸಲು ನಾವೆಲ್ಲರೂ ಕಂಕಣಬದ್ಧರಾಗಿ ಕೆಲಸ ಪ್ರಾರಂಭ ಮಾಡಿದ್ದೇವೆ. ಪುರಸಭೆಯಿಂದ ನಗರಕ್ಕೆ ೨೪*೭ ಕುಡಿಯುವ ನೀರಿನ ಕಾಮಗಾರಿ ಟೆಂಡರ ಹಂತದಲ್ಲಿದೆ. ಅಲ್ಲದೆ ಇನ್ನೂ ಹತ್ತು ಹಲವಾರು ಕಾಮಗಾರಿಗಳು ಪ್ರಾರಂಭವಾಗಲಿವೆ. ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತೇನೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕಾಧ್ಯಕ್ಷ ಸುರೇಶ ಪೂಜಾರಿ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಸದಸ್ಯರಾದ ಸಂದೀಪ ಚೌರ, ಹಾಸೀಂ ಆಳಂದ, ಶರಣಗೌಡ ಪಾಟೀಲ, ಬಸವರಾಜ ಯರನಾಳ, ರಹೀಮ ದುದ್ದನಿ, ಪುರಸಭೆ ಜೆಇ ಅಜರುದ್ದಿನ ನಾಟೀಕಾರ, ಮುಖಂಡರಾದ ಅರವಿಂದ ಹಂಗರಗಿ, ಪ್ರವೀಣ ಕಂಠಿಗೊಂಡ, ಸೈಪನ್ ನಾಟೀಕಾರ, ಮಹ್ಮದಪಟೇಲ ಬಿರಾದಾರ, ಶರಣಪ್ಪ ಸುಲ್ಪಿ, ಬಿರಾದಾರ, ಆನಂದ ಡೋಣೂರ, ಮಾಳಪ್ಪ ಪೂಜಾರಿ, ಜಿಲಾನಿ ನಾಟೀಕಾರ, ಶಬ್ಬೀರಪಟೇಲ ಬಿರಾದಾರ, ಮಹಿಬೂಬ ಆಳಂದ, ಬಂದೇನವಾಜ ಕರ್ಜಗಿ ಸೇರಿದಂತೆ ಇತರರು ಇದ್ದರು.

