ಉದಯರಶ್ಮಿ ದಿನಪತ್ರಿಕೆ
ಹೊನವಾಡ: ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ಸಂಘದ 2023-24 ನೇ ಸಾಲಿನ 104ನೇ ವಾರ್ಷಿಕ ಮಹಾ ಸಭೆ ಸಂಘದ ಕಚೇರಿಯ ಆವರಣದಲ್ಲಿ ನಡೆಯಿತು.
ಬ್ಯಾಂಕ್ನ ಅಧ್ಯಕ್ಷ ನಿಂಗಪ್ಪ ಗುಗ್ಗರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಶಿವರುದ್ರಯ್ಯ ಮಠಪತಿ ಸಭೆಯ ನಡಾವಳಿ ಓದಿದರು.
ಸಹಕಾರಿ ಬ್ಯಾಂಕುಗಳಿಗೆ ಠೇವಣಿದಾರರು ಹಾಗೂ ಷೇರುದಾರರು ಜೀವಾಳವಾಗಿದ್ದು, ಸಾಲ ಪಡೆದವರು ಸರಿಯಾಗಿ ಮರುಪಾವತಿ ಮಾಡಿದಲ್ಲಿ ಮಾತ್ರ ಸಹಕಾರಿ ಸಂಘ ಸಂಸ್ಥೆಗಳು ಅಭಿವೃದ್ಧಿಯೊಂದಿಗೆ ಮುನ್ನಡೆಯಲು ಸಾಧ್ಯ ಎಂದು ಉದ್ಘಾಟಿಸಿ ಬಾಬುರಾವ್ ಮಹಾರಾಜರು ಮಾತನಾಡಿದರು.
ರಸಗೊಬ್ಬರ ಸೇರಿದಂತೆ ನಾನಾ ಸಾಮಗ್ರಿಗಳನ್ನು ಮಾರಾಟ ಮಾಡುವ ಮೂಲಕ ಸಂಘವನ್ನು ಅಭಿವದ್ಧಿ ಪಥದತ್ತ ಸಾಗಿಸಲು ಸದಸ್ಯರು ಸೂಚಿಸಿದರು.
ಸಾವಯವ ಕೃಷಿಯು ಬೆಳೆ ಉತ್ಪಾದನೆಯ ಪಶುಸಂಗೋಪನೆಯ ನಡುವೆ ಸಾಮರಸ್ಯದ ಸಮತೋಲನವನ್ನು ಸೃಷ್ಟಿಸುತ್ತದೆ ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಗಳು ಮತ್ತು ಚಕ್ರಗಳ ಜೊತೆಗಿನ ಜೋಡಣೆಯನ್ನು ಸುಗಮಗೊಳಿಸುತ್ತದೆ ಎಂದು ತೆಲಸಂಗದ ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ಹೇಳಿದರು
ವೇದಿಕೆಯ ಮೇಲೆ ಕಾರ್ಯದರ್ಶಿ ದುಂಡಪ್ಪ ಗುಗ್ಗರಿ, ಹಿರಿಯರಾದ ನೀಲಕಂಠ ಕೋಟಿ ಲಾಲಾಸಾಬ್ ತೆಲಸಂಗ ಹೂವಣ್ಣ ಗುಗ್ಗರಿ ದತ್ತಾ ಮೋಹಿತೆ ಧರೆಪ್ಪ ಚಾವರ ಆನಂದ ಕೊರಬು ಸತ್ಯಪ್ಪ ಪೂಜಾರಿ ಮಲ್ಲಪ್ಪ ಯಚ್ಚಿ ಶ್ಯಾಮು ಬಡಳ್ಳಿ ಆಡಳಿತ ಮಂಡಳಿಯ ಸದಸ್ಯರು ಪಿಕೆಪಿಎಸ್ ಸಿಬ್ಬಂದಿಗಳು ಗ್ರಾಮಸ್ಥರು ಮತ್ತಿತರರು ಇದ್ದರು.

