ಚಡಚಣ ಓಂ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ
ಚಡಚಣ: ಇಂದಿನ ಸ್ಪರ್ದಾತ್ಮಕ ಹಾಗೂ ಕಂಪ್ಯೂಟರ್ ಯುಗದಲ್ಲಿ ವಿದ್ಯಾರ್ಥಿಗಳಗೆ ದೇಶಾಭಿಮಾನ, ಹಿರಿಯಲ್ಲಿ ಗೌರವ ಹಾಗೂ ನಮ್ಮ ದೇಶದ, ನೆಲದ ಸಂಸ್ಕಾರ ನೀಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಸ್ ಜೆ ನಾಯಕ ಹೇಳಿದರು.
ಪಟ್ಟಣದ ದೇವರ ನಿಂಬರಗಿ ಕ್ರಾಸ್ ಬಳಿಯಲ್ಲಿರುವ ಓಂ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಸಂರ್ವೋದಯ ಕೈಗಾರಿಕಾ ತರಬೇತಿ ಕೇಂದ್ರ, ಗೋಲ್ಡನ್ ಸೌಹಾರ್ದ ಸಂಘ ನಿಯಮಿತ ಹಾಗೂ ಜಿಪಿ ಕಾಲೇಜ ಆಫ್ ಫಾರ್ಮಸಿ ಸಹಯೋಗದಲ್ಲಿ ಆಯೋಜಿಸಲಾದ 78 ನೇ ಸ್ವಾತ್ರ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ದಿವ್ಯ ಸಾನಿಧ್ಯ ವಹಿಸಿದ ವಿರಕ್ತ ಮಠದ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಚಹಾ ಮಾಡುವ ಒಬ್ಬ ವ್ಯಕ್ತಿ ದೇಶದ ಚುಕ್ಕಾಣಿ ಹಿಡಿದಂತೆ ಇಲ್ಲಿಯ ವಿದ್ಯಾರ್ಥಿಗಳು ಮುಂದೆ ಯಾವ ಸ್ಥಾನಕ್ಕೇರುವರು ಎಂಬುದು ಗೊತ್ತಲ್ಲ. ಆದುದರಿಂದ ಇಲ್ಲಿರುವ ಶಿಕ್ಷಕರು ಉತ್ತಮ ಶಿಕ್ಷಣ ಹಾಗೂ ದೇಶಾಭಿಮಾನ ಬೆಳಸಬೇಕು ಎಂದರು.
“ಓಂ” ಯುವಕ ಗಡಿನಾಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಸುಮಿತ್ರಾ ಹಾವಿನಾಳ ದ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.
ವೇದಿಕೆಯ ಮೇಲೆ ನಿವೃತ್ತ ಶಿಕ್ಷಕ ಸಿ.ಜಿ ಬನಸೋಡೆ, ಶಿಕ್ಷಣ ಸಂಯೋಜಕ ಮಹಾದೇವ ಪಾಂಡ್ರೆ, ಪ್ರಾಚಾರ್ಯ ಎಸ್.ಕೆ ಪಾಟೀಲ, ಪ್ರಾಚಾರ್ಯ ಆರೀಫ ಕೋತ್ವಾಲ, ಕಾರ್ಯದರ್ಶಿ ಎಸ್ ಎಸ್ ಹಾವಿನಾಳ, ಮುಖ್ಯ ಶಿಕ್ಷಕ ಸುರೇಶ ಜಂತಿ, ಶಿಕ್ಷಕರಾದ ಪಿ ಎಚ್ ಪೂಜಾರಿ, ಎಮ್ ಎಲ್ ಚವ್ಹಾಣ, ಕೊಳಗೇರಿ, ಅರ್ಪಿತಾ ಭಂಡರಕವಟೆ, ಸೌಮ್ಯಾ, ಭವನೇಶ್ವರಿ, ಮಡ್ಡಿ, ಅಂಜುಟಗಿ ಸಾವಿತ್ರಿ ಪಾಟೀಲ, ಅಲೀಸಾಬ ಕೋತ್ವಾಲ, ಕುಂಬಾರ ಸೇರಿದಂತೆ ಇತರರು ಇದ್ದರು.

