ಮುದ್ದೇಬಿಹಾಳ : ಪವಿತ್ರ ರಂಜಾನ್ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತç ಚಿಕಿತ್ಸೆ ಶಿಬಿರವನ್ನು ಏ18 ರಂದು ಹಮ್ಮಿಕೊಂಡಿದ್ದು ಅಗತ್ಯವಿದ್ದವರು ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಸಮಾಜ ಸೇವಕ ಅಯೂಬ್ ಮನಿಯಾರ್ ಹೇಳಿದರು.
ಪಟ್ಟಣದ ದಾನೇಶ್ವರಿ ಪೆಟ್ರೋಲ್ ಪಂಪ್ ನ ಎದುರು ಇರುವ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ವಿಜಯಪುರ ರಸ್ತೆಯಲ್ಲಿರುವ ಮನಿಯಾರ್ ಕಾಂಪ್ಲೆಕ್ಸ್ ನಲ್ಲಿ ಹೆಸರು ನೊಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಏ17 ರಂದು ಸಂಜೆ 4 ಗಂಟೆಯವರೆಗೆ ಹೆಸರು ನೊಂದಾಯಿಸಬಹುದು. ಏ18 ರಂದು ಪಟ್ಟಣದ ಸ್ಟೇಟ್ ಬ್ಯಾಂಕ್ ಹತ್ತಿರ ಇರುವ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಗುವದು. ತಪಾಸಣೆ ಬಳಿಕ ಕನ್ನಡಕದ ಅವಶ್ಯಕತೆ ಇರುವವರಿಗೆ ಕನ್ನಡಕ ಒದಗಿಸಲಾಗುವದು. ಶಸ್ತçಚಿಕಿತ್ಸೆಗೆ ಆಯ್ಕೆಯಾದವರನ್ನು ಏ19 ರಂದು ಬೆಳೆಗ್ಗೆ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತç ಚಿಕಿತ್ಸೆ ಮಾಡಿಸಲಾಗುತ್ತದೆ. ವಾಹನದ ವ್ಯವಸ್ಥೆ ಕೂಡ ನಾವೇ ಮಾಡುತ್ತೇವೆ. ಫಲಾನುಭವಿಗಳ ಆರೈಕೆಗಾಗಿ ಜೊತೆಗೆ ಒಬ್ಬರು ಬಂದರೆ ಸಾಕು ಎಂದರು.
ಈ ವೇಳೆ ಹಿರಿಯ ಪರ್ತಕರ್ತ ಎಚ್.ಆರ್.ಬಾಗವಾನ್ ಅವರು ಮಾತನಾಡಿ, ಅಯೂಬ್ ಮನಿಯಾರ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಕಣ್ಣಿನ ಸಮಸ್ಯೆ ಎದುರಿಸುತ್ತಿರುವ ಅದೆಷ್ಟೋ ಬಡವರಿಗೆ ಈಗಾಗಲೇ ಉಚಿತವಾಗಿ ಶಸ್ತçಚಿಕಿತ್ಸೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಮ್ಮ ತಂದೆ-ತಾಯಿಗಳ ಸ್ಮರಣಾರ್ಥ ಇಂಥದ್ದೊAದು ಸೇವಾ ಕಾರ್ಯ ಮಾಡುತ್ತಿರುವದು ಹೆಮ್ಮೆಯ ಸಂಗತಿ. ಹೆಸರು ನೊಂದಾಯಿಸಲು ಬರುವಾಗ ಒಂದು ಐಡೆಂಟಿಟಿ ಸೈಜ್ ಕಲರ್ ಫೋಟೋ ಮತ್ತು ಆಧಾರ್ ಕಾರ್ಡ ಕಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗಾಗಿ 8123277124 ಈ ನಂಬರ್ ಗೆ ಸಂಪರ್ಕಿಸಬಹುದು ಎಂದರು.
ತಾಳಿಕೋಟೆಯಲ್ಲಿ ಹೆಸರು ನೊಂದಾಯಿಸಲು ಜಾಮಿಯಾ ಮಸೀದಿಯ ಹತ್ತಿರ ಇರುವ ಸಗರಿಯವರ ಔಷಧದ ಅಂಗಡಿಯಲ್ಲಿ ಮತ್ತು ನಾಲತವಾಡ ಪಟ್ಟಣದಲ್ಲಿ ಎ.ಎಚ್.ಖಾಜಿ, ರಿಯಾಜ್ ಮನಿಯಾರ, ಸೈದು ಬೆಣ್ಣೂರ ಇವರನ್ನು ಸಂಪರ್ಕಿಸಬಹುದಾಗಿದೆ.