ಆಲಮೇಲ: ಸಮಾಜದ ಬಗ್ಗೆ ಕಾಳಜಿ ಸಮಾಜದಲ್ಲಿ ಉನ್ನತವಾಗಿ ಮತ್ತು ಬಡಕುಟುಂಬಕ್ಕೆ ಒಳ್ಳೆಯದನ್ನೆ ಮಾಡುತ್ತಾ ವಕೀಲ ವೃತ್ತಿಯನ್ನು ಸಾಮಾನ್ಯರಂತೆ ಮಾಡುತ್ತಿರುವ ಇವರಿಗೆ ಉಪಾಧ್ಯಕ್ಷರಾಗಿ ಆಯ್ಕೆ ಆಗಿದಕ್ಕೆ ಮತ್ತು ನಮ್ಮ ಭಾಗದ ಹೆಸರನ್ನು ಇಡಿ ದೇಶಕ್ಕೆ ಮುಟ್ಟಿಸಿದ್ದಕ್ಕೆ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೆವೆ ಎಂದು ಆಲಮೇಲದ ವೈದ್ಯರು, ದೇವರಗುಡ್ಡ ಗುರುಪೀಠದ ಒಡೆಯರಾದ ಡಾ.ಸಂದಿಪ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಲಮೇಲ ತಾಲೂಕು ಘಟಕ ಮತ್ತು ಗೆಳೆಯರ ಬಳಗ ಹಾಗೂ ಅಳ್ಳೊಳ್ಳಿಮಠ ಸೇವಾ ಸಮಿತಿ ವತಿಯಿಂದ ಅಖಿಲ ಭಾರತೀಯ ಸೋಮವಂಶ ಆರ್ಯ ಕ್ಷತ್ರಿಯ ಸಮಾಜ ಟ್ರಸ್ಟ್(ರಿ) ನಾಶಿಕ ಉಪಾಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಅಶೋಕ ಗಾಯಕವಾಡ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪ್ರೋ.ಶಾಂತು ಹಿರೇಮಠ ಮಾತನಾಡಿದರು.
ಸಾನಿದ್ಯವನ್ನು ಶ್ರೀಶೈಲಯ್ಯ ಸ್ವಾಮೀಜಿ ಅಳ್ಳೋಳ್ಳಿಮಠ, ನಿತ್ಯಾನಂದ ಶಿವಯೋಗಿಗಳು ಆರೂಡಮಠ ರಾಂಪೂರ, ಮುಖ್ಯ ಅತಿಥಿಗಳಾಗಿ ಎನ್ ಜಿ ಅಪನಾಯಕ, ರಿಯಾಜ ಬಿಳವಾರ, ಶಿವಶರಣ ಗುಂದಗಿ, ರಮೇಶ ಕತ್ತಿ, ಸುರೇಶ ಹಳ್ಳೂರ, ಸಿದ್ದುಗೌಡ ಕೊಳಾರಿ, ಮಹಿಬೂಬ ಮಸಳಿ, ಅಶೋಕ ಕೋಳಾರಿ, ಅಂಬಾದಾಸ ಅಲೊಣ, ಆತ್ಮಾರಾಮ ಅಲೊಣ, ನಾರಾಯಣ ಅಲೋಣ, ಸಾಗರ ಅಲೋಣ, ಶಕುಂತಲ ದರ್ಶನಕರ, ಅಂಬು ಅಂಬೊರೆ, ಸುರೇಖ ಅಲೋಣ ಇದ್ದರು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ರಮೇಶ ಬಂಟನೂರ, ಶ್ರೀಶೈಲ ಮಠಪತಿ ಮಾತನಾಡಿದರು.
ಸಂಗಿತ ಸೇವೆಯನ್ನು ಐಶ್ವರ್ಯ ಕೋಳಾರಿ ನಿವೇದಿತಾ ಹೂಗಾರ ಮತ್ತು ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

