ಚಡಚಣ: ಪಟ್ಟಣದ ಯುವ ಕವಿಯತ್ರಿ ಹಾಗೂ ಪತ್ರಕರ್ತೆಯಾದ ವಿದ್ಯಾ ಕಲ್ಯಾಣಶೆಟ್ಟಿ ರಚಿಸಿದ ಕಾವ್ಯಕನ್ನಿಕೆ ಕವನ ಸಂಕಲನಕ್ಕೆ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ 2024 ರ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಗಡಿಭಾಗದ ಚಡಚಣ ಪಟ್ಟಣದಲ್ಲಿರುವ ಕವಯತ್ರಿಗೆ ದೊರೆತಿರುವದರಿಂದ ತಾಲೂಕಿನ ಸಾಹಿತಿಗಳಿಗೆ ಹರ್ಷ ತಂದಿದೆ. ಇದಕ್ಕೆ ಹಿರಿಯ ಸಾಹಿತಿ ಡಾ ಸಂಗಮೇಶ ಮೇತ್ರಿ ಗಡಿಭಾಗದ ಮಹಿಳಾ ಕವನ ಸಂಕಲನಕ್ಕೆ ದೊರೆತಿರುವದು ಸಂತಸವಾಗಿದೆ. ಇದು ಬೆಳೆಯುತ್ತಿರುವ ಯುವ ಕವಿಗಳಿಗೆ ಸ್ಫೂರ್ತಿ ತಂದಿದೆ. ಈ ಭಾಗದ ಸಾಹಿತ್ಯ ನಾಡಿನ ತುಂಬ ಹಬ್ಬಲೆಂದು ಶುಭಾಶಯಗಳು ಹೇಳಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

