ಆಲಮಟ್ಟಿ: ಸಮೀಪದ ಸುಕ್ಷೇತ್ರ ಯಲಗೂರು ಗ್ರಾಮದ ಯಲಗೂರೇಶನ ದೇವಸ್ಥಾನದಲ್ಲಿ ಗುರುವಾರ ಹನುಮ ಜಯಂತಿಯನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು.
ಬೆಳಗ್ಗೆ ೪ಕ್ಕೆ ಉತ್ಸವ ಮೂರ್ತಿಯನ್ನು ಕೃಷ್ಣಾ ನದಿಗೆ ಒಯ್ದು ಅಲ್ಲಿ ಅಭಿವೃತ್ತ ಸ್ನಾನ ಮಾಡಿಸಲಾಯಿತು. ನದಿ ತೀರದಿಂದ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು. ದೇವಸ್ಥಾನದಲ್ಲಿ ಸೂರ್ಯೋದಯ ಸಮಯದಲ್ಲಿ ಹನುಮನ ತೊಟ್ಟಿಲು ಹಾಕುವ ಕಾರ್ಯಕ್ರಮ ಜರುಗಿತು. ನಂತರ ಪಾನಕ ಕೋಸಂಬರಿ ವಿತರಿಸಲಾಯಿತು.
ನಂತರ ವೇದ ಮಂತ್ರಗಳೊAದಿಗೆ ಪೂಜೆ ನೆರವೇರಿದ ಮೇಲೆ ಅನೇಕ ಮಹಿಳೆಯರು ಹನುಮನ ಭಕ್ತಿಗೀತೆಗಳನ್ನು ಹಾಡಿದರು. ಯಲಗೂರೇಶನಿಗೆ ಸಾಮೂಹಿಕ ಪಂಚಾಮೃತ ಅಭಿಷೇಕ, ಮಹಾಪೂಜೆ, ಅಲಂಕಾರ, ಮಹಾನೈವೇದ್ಯ, ಅನ್ನ ಸಂತರ್ಪಣೆ ಜರುಗಿತು.
ಚೈತ್ರ ಮಾಸದ ಪ್ರತಿಪದೆಯಿಂದ ಪೂರ್ಣಿಮೆವರೆಗೆ ೧೫ ದಿನಗಳ ಕಾಲ ರಾಮನವಮಿ ಉತ್ಸವ ನಿಮಿತ್ತ ನಡೆದ ರಾಮನವಮಿ ಉತ್ಸವ ಗುರುವಾರ ಸಮಾರೋಪಗೊಂಡಿತು.
ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಅನಂತ ಓಂಕಾರ, ಪಂ.ರಘುಮೋತ್ತಾಚಾರ್ಯ, ವಿಠ್ಠಲಾಚಾರ್ಯ ಗದ್ದನಕೇರಿ, ಬದರಿನಾರಾಯಣ ಚಿಮ್ಮಲಗಿ, ಸಂತೋಷ ಪೂಜಾರಿ, ಗೋಪಾಲಾಚಾರ್ಯ ಹಿಪ್ಪರಗಿ, ಗೋಪಾಲ ಗದ್ದನಕೇರಿ, ಗುರುರಾಜ ಪರ್ವತಿಕರ, ನಾರಾಯಣ ಒಡೆಯರ,
ಪಾಂಡುರಂಗಾಚಾರ್ಯ ಹೊಸೂರ,ಮುರಳಿ ಚಿಮ್ಮಲಗಿ, ಮನೋಹರ ಚಿಮ್ಮಲಗಿ, ಯಲಗೂರದಪ್ಪ ಪೂಜಾರ, ಭೀಮಪ್ಪ ಪೂಜಾರ, ಸಂಜೀವ ಪೂಜಾರ, ಗುಂಡಪ್ಪ ಪೂಜಾರ ಸೇರಿದಂತ ಮತ್ತಿತರರಿದ್ದರು.
ಮಹಾರಾಷ್ಟçದ ಫಂಡರಪುರದ ಕಲಾವಿದರಿಂದ ನಡೆದ ಹನುಮನಿಗೆ ಮಾವಿನ ಹಣ್ಣಿನ ಅಲಂಕಾರ ಭಕ್ತರ ಗಮನ ಸೆಳೆಯಿತು.
Subscribe to Updates
Get the latest creative news from FooBar about art, design and business.
Related Posts
Add A Comment