ಬಸವನಬಾಗೇವಾಡಿ: ತಾಲೂಕಿನ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪ ಮುತ್ಯಾರ ಜಾತ್ರಾಮಹೋತ್ಸವದಂಗವಾಗಿ ಸೋಮವಾರ ಜೀಣೋದ್ಧಾರಗೊಂಡ ದೇವಸ್ಥಾನಕ್ಕೆ ಕಳಸಾರೋಹಣ ಸಂಭ್ರಮ, ಸಡಗರದಿಂದ ಜರುಗಿತು.
ತಾಲೂಕಿನ ಕಾನ್ನಾಳ ಗ್ರಾಮದ ಸಜ್ಜನ ಬಂಧುಗಳಿಂದ ಹಾಗೂ ಗ್ರಾಮದ ಸದ್ಭಕ್ತರಿಂದ ದೇವಸ್ಥಾನದ ಕಳಸ ಹಾಗೂ ಜಾಯವಾಡಗಿ ಗ್ರಾಮದಿಂದ ಪಲ್ಲಕ್ಕಿ ಸಕಲ ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿದ ನಂತರ ಭಕ್ತರ ಜಯಘೋಷದೊಂದಿಗೆ ದೇವಸ್ಥಾನದ ಕಳಸಾರೋಹಣ ನೆರವೇರಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಮೆರವಣಿಗೆಯಲ್ಲಿ ಸಂಗಪ್ಪ ಸಜ್ಜನ, ಶರಣಪ್ಪಮಾಸ್ತರ ಸಜ್ಜನ, ರಾಜಶೇಖರ ಸಜ್ಜನ, ಕುಮಾರ ನಾಗರೆಡ್ಡಿ, ಸಿದ್ದು ಹೂಗಾರ, ಚಂದ್ರಶೇಖರ ನಾಗರೆಡ್ಡಿ, ಮಂಜು ಈಳಗೇರ,ನೀಲಪ್ಪ ಮಂತ್ರಿ, ಸಿದ್ರಾಮ ಕಲ್ಲೂರ, ಚಂದಪ್ಪ ಕಾಮನಹಟ್ಟಿ, ರಾಜಶೇಖರ ಪಾಟೀಲ, ಮಹಾದೇವಪ್ಪಗೌಡ ಬಿರಾದಾರ, ಪರಶುರಾಮ ಪೂಜಾರಿ ಇತರರು ಇದ್ದರು. ರಾತ್ರಿ ಪಾಲಭಾವಿಯ ಬ್ರಹ್ಮಲಿಂಗೇಶ್ವರ ನಾಟ್ಯ ಸಂಘದಿಂದ ಯಾರ ವಿಶ್ವಾಸ ಯಾರಿಗೆ ಇಲ್ಲ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ಇಂದು ರಥೋತ್ಸವಃ ಪ್ರತಿ ವರ್ಷ ಯುಗಾದಿ ಪಾಡ್ಯದಿನದಂದು ನಡೆಯುವ ಸೋಮನಾಥೇಶ್ವರ, ಶಿವಪ್ಪ ಮುತ್ಯಾರ ರಥೋತ್ಸವ ಏ.೯ ರಂದು ನಡೆಯಲಿದೆ. ಬೆಳಗ್ಗೆ ತೇರಿನ ಶೃಂಗಾರ ನಂತರ ಬ್ಯಾಕೋಡ ಗ್ರಾಮಸ್ಥರಿಂದ ಬರುವ ಕಳಸ ಏರಿಸುವುದು. ಸೋಲವಾಡಗಿ ಗ್ರಾಮಸ್ಥರಿಂದ ರಥದ ಮಿಣಿ, ಅಗಸಬಾಳ ಗ್ರಾಮಸ್ಥರಿಂದ ರಥದ ಛತ್ರಿ ಚಾಮರ ಆಗಮನವಾದ ನಂತರ ಸಂಜೆ ೫ ಗಂಟೆಗೆ ವಿವಿಧ ಶ್ರೀಗಳ ಸಾನಿಧ್ಯದಲ್ಲಿ ರಥೋತ್ಸವ ಜರುಗಲಿದೆ. ನಂತರ ವಿವಿಧ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಜಾತ್ರಾ ಉತ್ಸವ ಸಮಿತಿಯವರು ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

