Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಮಹಿಳೆಯರಿಗೆ ಸಿಕ್ಕ ಸಮಾನ ಅವಕಾಶ ಸರಿಯಾಗಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕರ ಪತ್ನಿ, ಸಿಂದಗಿ ಇನ್ನರವೀಲ್ ಕ್ಲಬ್ ಅದ್ಯಕ್ಷೆ ನಾಗರತ್ನ ಮನಗೂಳಿ ಹೇಳಿದರು.ಅವರು ಬಾನುವಾರ ಪಟ್ಟಣದ ನಿರ್ಮಲಾಯ ಸಮಾಜ ಸೇವಾ ಸಂಸ್ಥೆ ಹಾಗೂ ಬಾಂದವ್ಯ ಮಹಿಳಾ ಸ್ವಸಹಾಯ ಸಂಘಟನೆ ಒಕ್ಕೂಟದಿಂದ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ಮಹಿಳೆಯರು ಮೊದಲು ಮನೆಯವರ ಮನಸು ಗೆದ್ದು ನಂತರ ಸಮಾಜ ನಾಡು ಗೆಲ್ಲುವಂತ ಸಾಧನೆ ಮಾಡಬೇಕು. ಬಾಲ್ಯ ವಿವಾಹ ತಡೆಗಟ್ಟಲು ಮಹಿಳೆಯರೆ ಮುಂದಾಗಬೇಕು ಎಂದು ಹೇಳಿದರು.ಕೆನರಾ ಬ್ಯಾಂಕಿನ ಕ್ಷೇತ್ರಾಧಿಕಾರಿ ಓಂಕಾರ ಭೋಸಲೆ ಮಾತನಾಡಿ, ಕೆಂದ್ರ ಸರ್ಕಾರ ಸ್ವ ಉದ್ಯೋಗ ಮಾಡುವ ಮಹಿಳಾ ಸಂಘಟನೆಗಳಿಗೆ ಅನೇಕ ಸೌಲಭ್ಯ ಕಲ್ಪಿಸಿದೆ. ಅದಕ್ಕೆ ಸರಿಯಾಗಿ ಉದ್ಯೋಗ ಮಾಡುವ ಸಂಘಗಳಿಗೆ ಕೆನರಾ ಬ್ಯಾಂಕಿನಿಂದ 1 ಲಕ್ಷದಿಂದ 5 ಕೋಟಿ ವರೆಗೂ ಸಾಲ ನೀಡಲಾಗುತ್ತಿದೆ. ಅದಕ್ಕೆ ವಿಮಾ ಸೌಲಭ್ಯವು ಇದ್ದು ಇದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಗಳಾಗಿ ಇನ್ನೊಬ್ಬರಿಗೆ ಪ್ರೇರಣೆಯಾಗಬೇಕು…
ವಿಜಯಪುರದಲ್ಲಿ ಬಿಜೆಪಿ ಬೂತ್ ಮಟ್ಟದ ಏಜೆಂಟರಿಗೆ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿಜೆಪಿ ಪಕ್ಷದ ಬಗ್ಗೆ ಯಾವ ಕಾಂಗ್ರೆಸ್ ನಾಯಕರು ಅಂದು ಹಾಸ್ಯ ಮಾಡಿದ್ದರೋ ಅದೇ ನಾಯಕರು ಇಂದು ತಮ್ಮ ಮಕ್ಕಳನ್ನು ಬಿಜೆಪಿಗೆ ಕಳುಹಿಸುತ್ತಿದ್ದಾರೆ ಎಂದುರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.ವಿಜಯಪುರದ ಸಾಯಿ ವಿಹಾರ ಮಂಗಲ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ನಗರ ಮಂಡಳ ವತಿಯಿಂದ ಬೂತ್ ಮಟ್ಟದ ಏಜೆಂಟರಿಗೆ ಆಯೋಜಿಸಲಾಗಿದ್ದ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿಯೇ ಬಿಜೆಪಿ ಪರವಾದ ಅಲೆ ಇದೆ, ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಪಣಾ ಮನೋಭಾವ, ಅಭಿವೃದ್ಧಿಪರ ದೃಷ್ಟಿಕೋನದ ನಾಯಕತ್ವದಿಂದ ಬಿಜೆಪಿ ಬಲಿಷ್ಠವಾಗಿದೆ, ಕಾಂಗ್ರೆಸ್ ಇಷ್ಟಪಡುತ್ತಿದ್ದ ಅನೇಕರು ಸಹ ಇಂದು ಬಿಜೆಪಿಗೆ ಒಲವು ಬೆಳೆಸಿಕೊಳ್ಳುತ್ತಿದ್ದಾರೆ, ಅಂದು ಆರಂಭದ ದಿನದಲ್ಲಿ ಬೆರಳಣಿಕೆಯಷ್ಟು ಸೀಟುಗಳನ್ನು ಗೆಲ್ಲದ ಬಿಜೆಪಿಯನ್ನು ನೋಡಿ ನಗುತ್ತಿದ್ದ ಕಾಂಗ್ರೆಸ್ ನಾಯಕರೇ ಇಂದು ತಮ್ಮ ಮಕ್ಕಳನ್ನು ಬಿಜೆಪಿಗೆ ಕಳುಹಿಸುತ್ತಿದ್ದಾರೆ ಎಂದರು.ಕಾಂಗ್ರೆಸ್ ವೆಂಟಿಲೇಟರ್ನಲ್ಲಿರುವ ಹಡಗು, ಶೀಘ್ರವೇ…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಪಟ್ಟಣದ ಶ್ರೀ ಎ. ಬಿ. ಜತ್ತಿ ಪ್ರೌಢ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳ ಶುಭ ಹಾರೈಕೆ ಸಮಾರಂಭ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಬಿ. ಬಿ. ಪಾಟೀಲ, ಆಡಳಿತಾಧಿಕಾರಿ ವಿ. ಎಸ್. ಬಗಲಿ, ಎಸ್.ಎ. ಬಿರಾದಾರ, ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಗಂಗಾಧರ, ಉಪಪ್ರಾಚಾರ್ಯ ಜೆ. ಎಂ. ಪಾಟೀಲ, ಡಿ. ಬಿ. ಪಾಟೀಲ, ಬಿ. ಸಿ. ನಾವಿ, ಕುಮಾರಿ ಸೋನುಬಾಯಿ ಕುಂಬಾರ ಇದ್ದರು.ವಿದ್ಯಾರ್ಥಿಗಳು ಸಿದ್ದಪಡಿಸಿದ ಕೈ ಬರಹ ಪತ್ರಿಕೆಯನ್ನು ಬಿಡುಗಡೆಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ಶಾಲೆಯ ಎಲ್ಲ ಚಟುವಟಿಕೆಗಲ್ಲಿ ಭಾಗವಹಿಸಲು ಹಾಗೂ ಮಂಬರುವ ಎಸ್ ಎಸ್ ಎಲ್ ಸಿ ಪರೀಕ್ಷಗೆ ಶುಭಹಾರೈಸುವ ಮೂಲಕ ವಿದ್ಯಾರ್ಥಿಗಳಲ್ಲಿ ಚೈತನ್ಯ ತುಂಬಿದರು.
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದಿಂದ ಸುಮಾರು ಮುನ್ನೂರಕ್ಕೂ ಹೆಚ್ಚು ಜನ ಭಕ್ತಾದಿಗಳು ಗ್ರಾಮದಿಂದ ಆಂದ್ರಪ್ರದೇಶದ ಶ್ರೀಶೈಲಂ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ತೆರಳಿದರು.ಹೋಳಿ ಹುಣ್ಣಿಮೆಯ ಸೋಮವಾರ ರಾತ್ರಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಜಮಾವಣೆಗೊಂಡ ಭಕ್ತಾಧಿಗಳೀಗೆ ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ವಿಶೇಷವಾದ ಕಂಬಿಮಲ್ಲಯ್ಯ ದೇವರಿಗೆ ವಿಶೇಷ ಪೂಜೆ ನೆರವೇರಿದ ನಂತರ ಗ್ರಾಮದ ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಮಾರ್ಗವಾಗಿ ಶ್ರೀಶೈಲ ಕ್ಷೇತ್ರಕ್ಕ ಪಾದಯಾತ್ರೆ ನಡೆಸಿದರು, ಗ್ರಾಮಸ್ಥರು ಪಾದಯಾತ್ರಿಗಳಿಗೆ ಹಣ್ಣು, ನೀರು, ಅಲ್ಪೋಪಹಾರ ವಿತರಿಸುವ ಮೂಲಕ ತಮ್ಮ ಭಕ್ತಿಸೇವೆ ಸಲ್ಲಿಸಿದರು.ಗ್ರಾಮದ ಶ್ರೀ ಭ್ರಮರಾಂಬಾ ಮಲ್ಲಿಕಾರ್ಜುನ ಅನ್ನದಾಸೋಹ ಸೇವಾ ಸಮೀತಿಯಿಂದ ಪ್ರತೀ ವರ್ಷದಂತೆ ಈ ಬಾರಿಯೂ ಈ ಭಾಗದ ಶ್ರೀಶೈಲ ಪಾದಯಾತ್ರಿಗಳಿಗೆ ಉಚಿತ ಅನ್ನದಾಸೋಹ ಹಾಗೂ ವೈದ್ಯಕೀಯ ಸೇವೆ ಮಾ. ೫ (ಗುರುವಾರ) ರಿಂದ ನಿರಂತರವಾಗಿ ಐದು ದಿನಗಳಕಾಲ ಆದ್ರಪ್ರದೇಶದ ಗಡಿ ಬಾಗದ ಕರಿಹೊಳಿ ಹತ್ತಿರ ನಡೆಯುತ್ತದೆ.
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮೀಣ ಭಾಗದಲ್ಲಿ ಹಲಿಗೆ ಹಬ್ಬವೆಂದೆ ಖ್ಯಾತಿ ಪಡೆದ ಹೋಳಿ ಹಬ್ಬವನ್ನು ಸಡಗರದೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಯಿತು, ಯುವಕರು ವಿವಿಧ ಬಣ್ಣಗಳಲ್ಲಿ ಮಿಂದೆದ್ದು ಸಂಭ್ರಮಪಟ್ಟರು.ಮಕ್ಕಳು ಗುಂಪಾಗಿ ಹಲಿಗೆ ಬಾರಿಸುತ್ತ ಖುಷಿ ಅನುಭವಿಸಿದರೆ. ರೈತರು, ಕಾರ್ಮಿಕರು ಹೊಸ ಬಟ್ಟೆ ತೊಟ್ಟು ಹೋಳಿ ಹಾಡುಗಳನ್ನು ಹಾಡುತ್ತಾ ಆನಂದ ಪಟ್ಟರು. ಯುವಕರು ಬಣ್ಣಧಾಟ ನಿಷೇಧದ ಛಾಯೆ ಇದ್ದರೂ ತಮ್ಮ ಪಾಡಿಗೆ ಬಣ್ಣಗಳಲ್ಲಿ ಮಿಂದೆದ್ದು ಹೋಳಿ ಹಬ್ಬಕ್ಕೆ ರಂಗು ನೀಡಿದರು.ಸಾಂಸ್ಕೃತಿಕ ಕಾರ್ಯಕ್ರಮ; ಸೋಮವಾರ ಬೆಳಗ್ಗೆ ೬ ಗಂಟೆಗೆ ರಾಣಿ ಚನ್ನಮ್ಮ ವೃತ್ತದಲ್ಲಿರುವ ಕಾಮಣ್ಣನ ಕಟ್ಟೆ ಮೇಲೆ ರತಿ ಕಾಮರ ಮೂರ್ತಿ ಪ್ರತಿಷ್ಠಾಪಣೆ ಮಾಡಿದ ಗ್ರಾಮಸ್ಥರು ಇಡೀ ದಿನ ರೈತರು ಮಹಿಳೆಯರು ರತೀ ಕಾಮರಿಗೆ ವಿಶೇಷ ಪೂಜೆ ಸಲ್ಲಿಸಿದರು, ಗ್ರಾಮದ ಗಣಪತಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೋಳಿ ಹಾಗೂ ಕರ್ಬಲಾ ಪದಗಳ ಗಾಯಣ ರಾತ್ರಿ ೯.ಘಂಟೆಯವರೆಗೆ ನಡೆದವು, ಕಾಮಣ್ಣ ಸೇವಾ ಸಮೀತಿ ನೇತ್ರತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಷ್ಮಣ ಕಣದಾಳ ಹಾಗೂ ಭಾಗ್ಯಶ್ರೀ ಕುಂಬಾರಹಳ್ಳರವರ ತಂಡಗಳಿಂದ ಗೀಗಿ ಪದಗಳ ಗಾಯಣ…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಫೆಬ್ರುವರಿ ತಿಂಗಳು ಬಂತೆಂದರೆ ಸಾಕು ಎಲ್ಲರ ಮನೆಗಳಲ್ಲೂ ಒಂದು ರೀತಿಯ ಗಂಭೀರ ಆತಂಕದ ವಾತಾವರಣ. ಮಕ್ಕಳಿಂದ ಹಿಡಿದು ಮನೆಯ ಹಿರಿಯರವರೆಗೆ ಎಲ್ಲರಲ್ಲೂ ಒಂದು ರೀತಿಯ ಮೌನ. ಇಡೀ ಮನೆಯಲ್ಲಿ ಕರ್ಫ್ಯೂ ವಿಧಿಸಿದ ಹಾಗೆ ತೋರುವ ಭಾವ. ಮನೆಯಲ್ಲಿ ಮಕ್ಕಳು ಯಾವ ಯಾವ ಸಮಯಕ್ಕೆ ಏನೇನು ಮಾಡಬೇಕು ಎಂಬುದರ ಕುರಿತಾದ ಟೈಮ್ ಟೇಬಲ್ ಗಳು ಮಕ್ಕಳ ಕೊಠಡಿಯ ಬಾಗಿಲುಗಳ ಹಿಂದೆ ಮಾತ್ರವಲ್ಲ ಬದಲಾಗಿ ಮನೆಯ ಊಟದ ಮೇಜಿನ ಬಳಿ, ಫ್ರಿಜ್ಜಿನ ಬಾಗಿಲ ಬಳಿ ಮತ್ತು ಹಲವೆಡೆ ಅಂಟಿಸಲ್ಪಡುತ್ತದೆ. ಪದೇ ಪದೇ ಮಕ್ಕಳಿಗೆ ಬೋರ್ಡ್ ಎಕ್ಸಾಮ್ ಹತ್ತಿರ ಬರುತ್ತಿರುವ ಕುರಿತು ನೆನಪಿಸುತ್ತ ಪಾಲಕರು ಒಂದು ವಿಧವಾದ ಅಶಾಂತತೆಯನ್ನು ತಾವು ಅನುಭವಿಸುವ ಮೂಲಕ ಮಕ್ಕಳಲ್ಲೂ ಭಯವನ್ನು ಬಿತ್ತುವಂತಹ ವಾತಾವರಣ. ಇನ್ನು ಸಂಬಂಧಿಗಳು ಯಾವುದಾದರೂ ಮದುವೆ, ಮುಂಜಿ, ಗೃಹಪ್ರವೇಶದಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ನೋಡಿದಾಗ ಅರೆ ಬೋರ್ಡ್ ಎಕ್ಸಾಮ್ ಇದೆ. ಸಮಾರಂಭಕ್ಕೆ ಕರೆದುಕೊಂಡು ಬಂದಿದ್ದೀರಲ್ಲ ಎಂದು ಪಾಲಕರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹ ನಿರ್ದೇಶಕರು ಹಾಗೂ ಸ್ಥಳೀಯ ಪತ್ರಿಕೆಗಳ ಹಿತ ಚಿಂತಕರಾದ ಅಮರೇಶ ದೊಡಮನಿಯವರಿಗೆ ’ಉದಯರಶ್ಮಿ’ ದಿನಪತ್ರಿಕೆ ವತಿಯಿಂದ ಸೋಮವಾರ ಆದರಪೂರ್ವಕವಾಗಿ ಸನ್ಮಾನಿಸಲಾಯಿತು.’ಉದಯರಶ್ಮಿ’ ಸಂಪಾದಕ ಇಂದುಶೇಖರ ಮಣೂರ ಮತ್ತು ಪ್ರಕಾಶಕಿ ಶ್ರೀಮತಿ ಶೈಲಾ ಇಂದುಶೇಖರ ಅವರು ವಾರ್ತಾಧಿಕಾರಿ ಅಮರೇಶ ದೊಡಮನಿ ಅವರ ಪಾರದರ್ಶಕ ವ್ಯಕ್ತಿತ್ವ ಮತ್ತು ಕರ್ತವ್ಯದಕ್ಷತೆಗೆ ಅಭಿನಂದನೆ ಸಲ್ಲಿಸಿ ಗೌರವಿಸಿದರು.ಈ ವೇಳೆ ವಾರ್ತಾಧಿಕಾರಿ ಅಮರೇಶ ದೊಡಮನಿ ಅವರು ಮಾತನಾಡಿ, ’ಉದಯರಶ್ಮಿ’ ಪತ್ರಿಕೆಯ ಗುಣಮಟ್ಟದ ಬಗ್ಗೆ ಮೆಚ್ಚುಗೆ ಸೂಚಿಸಿ, ಪತ್ರಿಕೆಯ ಬೆಳವಣಿಗೆಗೆ ಸಹಕರಿಸುವುದಾಗಿ ಭರವಸೆ ನೀಡಿದರಲ್ಲದೆ, ಪತ್ರಿಕಾ ಧರ್ಮ ಪಾಲನೆ ಕೈಬಿಡದಂತೆ ಸಂಪಾದಕರಿಗೆ ಕಿವಿಮಾತು ಹೇಳಿದರು.
ಸಿಂದಗಿಯ ಎಸ್ ಎಮ್.ಮಣೂರ ಎಸ್ ಬಿ ಮಾಡೆಲ್ ಪಬ್ಲಿಕ್ ಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಶಾಸಕ ಅಶೋಕ ಮನಗೂಳಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಎಸ್ ಎಮ್.ಮಣೂರ ಎಸ್ ಬಿ ಮಾಡಲ ಪಬ್ಲಿಕ್ ಸ್ಕೂಲ್ ನಲ್ಲಿ ಇತ್ತೀಚೆಗೆ ವಾರ್ಷಿಕ ಸ್ನೇಹ ಸಮ್ಮೇಳನ ಅರ್ಥಪೂರ್ಣವಾಗಿ ಜರುಗಿತು.ಸಿಂದಗಿ ಶಾಸಕರಾದ ಅಶೋಕ್ ಮನಗೂಳಿಯವರು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮುಖಾಂತರ ಹೆಮ್ಮರವಾಗಿ ಬೆಳೆದ ಈ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಸುಂದರ ಪರಿಸರದ ಶೈಕ್ಷಣಿಕ ವಾತಾವರಣ ಮಕ್ಕಳಿಗೆ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಪ್ರೊ.ರವಿ ಗೋಲಾ ಮಾತನಾಡಿ, ಈ ಸಂಸ್ಥೆಯು ಶಿಕ್ಷಣ ಹಾಗೂ ಸಮಾಜಸೇವೆಗಾಗಿ ಮುಡುಪಾಗಿಟ್ಟಿರುವುದು ಶ್ಲಾಘನೀಯ ಎಂದರು.ನಗರ ಸಭೆಯ ಉಪಾಧ್ಯಕ್ಷ ಸಂದೀಪ್ ಚೌರ, ಬಿಜೆಪಿ ಮುಖಂಡ ರಾಜು ಪೂಜಾರಿ, ಅಶೋಕ ಕಮರಡ್ಡಿ ಹಾಗೂ ಇತರ ಗಣ್ಯರು ವೇದಿಕೆ ಮೇಲಿದ್ದರು.ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಮಣೂರ ಸರ್ವರಿಗೂ ಸ್ವಾಗತ ಕೋರಿದರು.ಶಾಲಾ ಆಡಳಿತ ಅಧಿಕಾರಿ ಎಸ್ ಎನ್ ಹೊಳಿ ಮಾತನಾಡಿ,…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ :ತಾಲೂಕಿನ ಕೃಷ್ಣಾತಟದ ಪುಣ್ಯಕ್ಷೇತ್ರ ಚಿಕ್ಕಪಡಸಲಗಿ ಗ್ರಾಮದ ಪುನರ್ವಸತಿ ಕೇಂದ್ರದ ಚಿಕ್ಕಲಕಿ ಕ್ರಾಸ್ ಹತ್ತಿರವಿರುವ ಶ್ರೀ ಸಿದ್ಧಲಿಂಗೇಶ್ವರ ಮಹಾರಾಜರ ಕಮರಿಮಠದಲ್ಲಿ ವಿಶ್ವಶಾಂತಿಗಾಗಿ 14ನೇಯ ವೇದಾಂತ ಪರಿಷತ್ ಕಾರ್ಯಕ್ರಮವು ಇಂಚಲದ ಪರಮ ಪೂಜ್ಯ ಶ್ರೀ ಸದ್ಗುರು ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಮತ್ತು ಮಹಾಲಿಂಗಪೂರದ ಪರಮ ಪೂಜ್ಯ ಶ್ರೀ ಸಹಜಾನಂದ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಮಾತೋಶ್ರೀ ಅಕ್ಕಮಹಾದೇವಿ ತಾಯಿಯವರ ಸದೀಚ್ಛೆಯ ಮೇರೆಗೆ ಇದೆ ಶುಕ್ರವಾರ ದಿನಾಂಕ ಫೆ.6 ಮತ್ತು 7 ರಂದು ಎರಡು ದಿನಗಳ ಕಾಲ ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯ ಮಾತೋಶ್ರೀ ಅಕ್ಕಮಹಾದೇವಿ ಅಮ್ಮನವರು ಹೇಳಿದರು. ಅವರು ಇಂಚಲದ ಸಾಧು ಸಂಸ್ಥಾನ ಮಠದ ಸಾಧು ಚಕ್ರವರ್ತಿ ಸದ್ಗುರು ಶ್ರೀ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳ ಕಿರೀಟ ಪೂಜೆ ಮತ್ತು ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಲಿದೆ ಎಂದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಲಿದೆ ಎಂದರು.ಈಗಾಗಲೇ ಕಾರ್ಯಕ್ರಮಕ್ಕೆ ಸರ್ವ ಪೂಜ್ಯರನ್ನು ಆಮಂತ್ರಿಸಿದ್ದು ಇಂಚಲದ ಪರಮ ಪೂಜ್ಯಶ್ರೀ ಸದ್ಗುರು ಡಾ. ಶಿವಾನಂದಭಾರತಿ…
ಉದಯರಶ್ಮಿ ದಿನಪತ್ರಿಕೆಜಮಖಂಡಿ : ತಾಲೂಕಿನ ಅಡಿಹುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂತನವಾಗಿ ಎಸ್ಡಿಎಂಸಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಸಂಗಪ್ಪ ಕೋಟ್ಯಾಳ, ಉಪಾಧ್ಯಕ್ಷರಾಗಿ ಗೀತಾ ಶಿಂಧೆ, ಸದಸ್ಯರಾಗಿ ಭೀಮಪ್ಪ ಚೌರಿ, ಲಕ್ಕಪ್ಪ ಬೆಳಗಲಿ, ಹಾಸಿಮ್ ಜಮಖಂಡಿ, ಸರ್ದಾರ್ ಯಡವೆ, ಶಿವಾನಂದ ವಾಲಿಕಾರ, ಶಾರದಾ ಆಕಳೆ, ಮೀನಾಕ್ಷಿ ಭಜಂತ್ರಿ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯ ಗುರುಗಳಾದ ವಿಜಯಕುಮಾರ ಲಿಗಾಡಿ, ತಾಲೂಕ ಪಂಚಾಯತ ಸದಸ್ಯ, ಧರೇಪ್ಪ ಗುಗ್ಗರಿ, ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಭರತ್ ಗುಗ್ಗರಿ, ಉಪಾಧ್ಯಕ್ಷ ಅಬ್ದುಲ್ ಜಮಖಂಡಿ, ಬಿ ಎಸ್ ಸವಾಸೆ, ಬೀರಪ್ಪ ಸನದಿ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹುಸೇನ್ ಜಮಖಂಡಿ, ಸದಾಶಿವ ಚೌರಿ, ಶಿವಪ್ಪ ಗಳವೆˌ ಮುತ್ತು ಚೌವ್ಹಾಣ, ಅಲ್ಲಾಭಕ್ಷ ಜಮಖಂಡಿ, ರವಿ ಗುಗ್ಗರಿ, ಕಾಸು ಬಿರಡಿ, ಅಶೋಕ ಗುಗ್ಗರಿ, ಭೀಮಪ್ಪ ಚೌರಿ ಸೇರಿದಂತೆ ಇತರರು ಹಾಜರಿದ್ದರು.
