Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ:ಸಿದ್ದರಾಮಯ್ಯ ಅವರು ರಾಜ್ಯದ ಅತ್ಯಂತ ಯಶಸ್ವಿ ರಾಜಕಾರಣಿಗಳಲ್ಲಿ ಒಬ್ಬರು. ಅವರು ತಮ್ಮ ಸುದೀರ್ಘ ರಾಜಕೀಯ ಬದುಕಿನಲ್ಲಿ ಹಿಂದುಳಿದ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.ಪಟ್ಟಣದ ಕನಕದಾಸ ವೃತ್ತದಲ್ಲಿ ಮಾಜಿ ಸಿಎಂ ದಿ. ಡಿ.ದೇವರಾಜು ಅರಸು ಅವರ ಅಧಿಕಾರ ಅವಧಿಯ ದಾಖಲೆಯನ್ನು ಹಿಂದಿಕ್ಕಿ ಹೊಸ ಮೈಲಿಗಲ್ಲು ಸೃಷ್ಠಿಸಿದ ರಾಜ್ಯದ ಸಿ.ಎಂ.ಸಿದ್ದರಾಮಯ್ಯನವರ ಸಂಭ್ರಮಾಚರಣೆ ನಾಟಿ ಕೋಳಿ ಬಾಡೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಡಾ.ಅಂಬೇಡ್ಕರ ಹಾಗೂ ಬಸವಣ್ಣನವರ ತತ್ವಾದರ್ಶಗಳನ್ನು ಜನರಿಗೆ ತಲುಪಿಸುವ ಮೂಲಕ ಜನಮಾನಸದಲ್ಲಿ ಹೆಸರಾಗಿದ್ದಾರೆ. ಅಲ್ಪ ಸಂಖ್ಯಾತರ, ಬಡವರ, ದೀನ ದಲಿತರ ಮತ್ತು ಮಹಿಳೆಯರ ಏಳಿಗೆಗೆ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮುಖೇನ ಅವರ ಹಿತ ಕಾಪಾಡಿದ್ದಾರೆ ಎಂದರು.ಈ ವೇಳೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭ ವರ್ಷ ೨೪೦ ದಿನಗಳ ದಾಖಲೆಯ ಅಧಿಕಾರ ಅವಧಿ ಪೂರೈಸಿದ ಹಿನ್ನಲೆ ಸಿಂದಗಿ ಪಟ್ಟಣದ ಹಾಲುಮತ ಸಮಾಜ ಹಾಗೂ ಅಭಿಮಾನಿ ಬಳಗದ ವತಿಯಿಂದ ೧೦೦ ನಾಟಿ…
ಲಚ್ಯಾಣದಲ್ಲಿ ಜವಳಿ, ಕಬ್ಬು, ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ಇಂಡಿ: ಎಕರೆಗೆ ೧೭೨ ಟನ್ ಕಬ್ಬು ಬೆಳೆದ ಲಚ್ಯಾಣ ಗ್ರಾಮದ ರೈತ ಶ್ರೀಮಂತ ಇಂಡಿ ಅವರ ತೋಟಕ್ಕೆ ಜವಳಿ, ಕಬ್ಬು ಅಭಿವೃಧ್ಧಿ ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ ಆಧುನಿಕ ವ್ಯವಸಾಯದ ಕುರಿತು ಸಮಗ್ರವಾಗಿ ಚರ್ಚಿಸಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರಿಗಾಗಿ ಸರಕಾರಗಳು ಹಲವು ಯೋಜನೆಗಳನ್ನು ರೂಪಿಸಿವೆ. ಆದರೆ ಅದಕ್ಕೆ ದರ ನಿಗದಿ ಮಾತ್ರ ಯಾವ ಸರಕಾರಗಳೂ ಮಾಡುತ್ತಿಲ್ಲ. ರೈತರಾದ ನಾವು ಮೊದಲು ಉತ್ತಮವಾದ ಬೆಳೆಗಳನ್ನು ಬೆಳೆಯಲು ಪ್ರಯತ್ನ ಮಾಡೋಣ. ಲಚ್ಯಾಣದ ಶ್ರೀಮಂತ ಇಂಡಿ ಅವರು ಒಂದು ಎಕರೆ ಪ್ರದೇಶದಲ್ಲಿ ೧೭೦ ಕ್ಕೂ ಹೆಚ್ಚು ಟನ್ ಕಬ್ಬು ಬೆಳೆ ಬೆಳೆದಿದ್ದಾರೆ. ರೈತರು ಅವರು ಅನುಸರಿದ ಕ್ರಮಗಳ ಬಗ್ಗೆ ತಿಳಿದುಕೊಂಡು ಹೆಚ್ಚಿನ ಇಳುವರಿ ಬರುವಂತೆ ನೋಡಿಕೊಳ್ಳೋಣ ಎಂದರು.ರೈತ ಶ್ರೀಮಂತ ಇಂಡಿ ಮಾತನಾಡಿ, ನಾನು ಮೊದಲು…
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ರಾವೂರ, ಸಾಬು ಮಾಶ್ಯಾಳ, ಮಳುಗೌಡ ಪಾಟೀಲ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಬಿಜೆಪಿಯಲ್ಲಿ ಹಣ ಇದ್ದವರಿಗೆ ಮಣೆ ಹಾಕಲಾಗುತ್ತಿದೆ, ಹಣ ಪಡೆದು ಪದಾಧಿಕಾರ ನೀಡಲಾಗುತ್ತಿದೆ ಎಂಬ ಯುವ ಮುಖಂಡ ಶಂಕರ ಹೂಗಾರ ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು, ಸಂಪೂರ್ಣ ಪಾರದರ್ಶಕತೆಯಿಂದ ಪದಾದಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ರಾವೂರ, ಸಾಬು ಮಾಶ್ಯಾಳ, ಮಳುಗೌಡ ಪಾಟೀಲ ತಿರುಗೇಟು ನೀಡಿದ್ದಾರೆ.ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತೀಯ ಜನತಾ ಪಕ್ಷ ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡ ಪಕ್ಷ, ಇಲ್ಲಿರುವ ಎಲ್ಲ ಕಾರ್ಯಕರ್ತರು ಸಮರ್ಪಣಾ ಮನೋಭಾವ, ದೇಶಾಭಿಮಾನದ ಗುಣಗಳಿಂದ ದುಡಿಯುವವರು, ನಿಸ್ವಾರ್ಥತೆಯಿಂದ ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡವರು, ಹೀಗಾಗಿ ಯಾರೂ ಸಹ ಪದಾಧಿಕಾರಿಯಾಗಲು ಹಣ ಕೊಡುವ ಪ್ರಶ್ನೆಯೇ ಬರುವುದಿಲ್ಲ, ಹಣ ಕೇಳುವ ಪ್ರಮೇಯವೇ ಉದ್ಭವಿಸುವುದಿಲ್ಲ, ವಿನಾಕಾರಣ ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಸರಿಯಲ್ಲ, ಕೋರ್ ಕಮೀಟಿ ರಚನೆಯೂ ಆಗಿಲ್ಲ, ಈ…
ವಿಜಯಪುರದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವೀರ ರಾಣಿ ಚೆನ್ನಮ್ಮ ಅವರ ಮೂರ್ತಿ ಪ್ರತಿಷ್ಠಾಪನೆಗೆ ಯಾವ ವಿರೋಧವೂ ಇಲ್ಲ, ಕಾರ್ಯಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದವರಿಗೆ ಸಮಾಜದ ಗಣ್ಯರು, ಸ್ವಾಮೀಜಿಗಳು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ, ಕಾರ್ಯಕ್ರಮ ಅಭೂತಪೂರ್ವವಾಗಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಹಾಗೂ ಪಂಚಮಸಾಲಿ ಮುಖಂಡ ಉಮೇಶ ಕೋಳಕೂರ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರ ರಾಣಿ ಚೆನ್ನಮ್ಮ ಸಾಹಸ, ದೇಶಾಭಿಮಾನದ ಪ್ರತೀಕ, ಅವರ ಆದರ್ಶಗಳು ಎಲ್ಲರಿಗೂ ಮಾದರಿ, ಅವರ ಪ್ರತಿಮೆ ವಿಜಯಪುರದಲ್ಲಿ ಸ್ಥಾಪಿಸಬೇಕು ಎಂಬ ಬಹುದಿನಗಳ ಬೇಡಿಕೆ ಈಡೇರಿದೆ, ದಿ.೯ ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೂರ್ತಿ ಅನಾವರಣ ಮಾಡಲಿದ್ದಾರೆ, ಅಂದು ಕಿತ್ತೂರ ರಾಣಿ ಚೆನ್ನಮ್ಮ ಅವರ ಸಾಹಸಗಾಥೆಯನ್ನು ವಿವರಿಸುವ ಪ್ರತಿಬಿಂಬವಾಗಿ ವೀರಜ್ಯೋತಿ ಮೆರವಣಿಗೆ ನಡೆಯಲಿದ್ದು, ಅಂದು ಜಂಬಗಿಯಲ್ಲಿರುವ ರಾಣಿ ಚೆನ್ನಮ್ಮ ಅವರ ವಂಶಜರಾದ ಜಂಬಗಿಯ ದೇಶಮುಖ ಅವರ ನಿವಾಸದಿಂದ ಬೆಳಿಗ್ಗೆ ೬ ರಿಂದ ಈ ಜ್ಯೋತಿಯ ಮೆರವಣಿಗೆ ಆರಂಭವಾಗಿ ಶ್ರೀ ಸಿದ್ದೇಶ್ವರ…
ವಿಜಯಪುರದಲ್ಲಿ ಎಸ್ಯುಸಿಐ ಪಕ್ಷದ ರಾಜ್ಯ ಸೆಕ್ರೆಟ್ರಿಯರೇಟ್ ಸದಸ್ಯ ಡಾ. ಟಿ.ಎಸ್.ಸುನೀತಕುಮಾರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟಗಾರರ ಮೇಲೆ ಕೊಲೆ ಯತ್ನದಂತಹ ಸುಳ್ಳು ಪ್ರಕರಣ ದಾಖಲಿಸಿರುವುದು ಖೇದಕರ, ಹೋರಾಟಗಾರರನ್ನು ಈ ರೀತಿ ಬೆದರಿಸಿ ದಮನಗೊಳಿಸುವ ನೀತಿ ಸರ್ಕಾರ ಪ್ರದರ್ಶಿಸುತ್ತಿದೆ, ಕೂಡಲೇ ಎಲ್ಲ ಬಂಧಿತ ಹೋರಾಟಗಾರರನ್ನು ಜೈಲಿನಿಂದ ಬಿಡುಗಡೆಗೊಳಿಸಿ, ಉಳಿದೆಲ್ಲ ೨೭ ಜನ ಆರೋಪಿಗಳ ವಿರುದ್ಧ ದಾಖಲಾದ ಮೊಕದ್ದಮೆಗಳನ್ನು ವಾಪಾಸ್ಸು ಪಡೆಯಬೇಕು ಎಂದು ಎಸ್ಯುಸಿಐ ಸೆಕ್ರೆಟ್ರಿಯರೇಟ್ ಸದಸ್ಯ ಡಾ.ಟಿ.ಎಸ್. ಸುನೀತಕುಮಾರ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ನ್ಯಾಯೋಚಿತ ಆಗ್ರಹ, ಪೂರಕವಾದ ಜಾಗೆ, ಪೂರಕವಾದ ಸೌಲಭ್ಯ ಇದ್ದರೂ ನಮ್ಮ ಜಿಲ್ಲೆಗೆ ಏಕೆ ಕೊಡುತ್ತಿಲ್ಲ ಎಂಬುದು ನ್ಯಾಯೋಚಿತವಾದ ಕೂಗು, ಅನೇಕ ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಮಾಡಲಾಗುತ್ತಿದೆ, ಆದರೆ ನಮ್ಮ ಜಿಲ್ಲೆಯ ವಿಷಯವಾಗಿ ವಿಳಂಬವೇಕೆ ಎಂದರು.ಅನೇಕ ಹೋರಟಗಾರರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ, ಕೊಲೆಯತ್ನದಂತಹ ಸುಳ್ಳು ಆರೋಪ ಹೊರೆಸಿ ದೂರು ದಾಖಲಿಸಿರುವುದು ಸರಿಯಲ್ಲ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರಿ ಮೆಡಿಕಲ್ ಕಾಲೇಜ್ ವಿಷಯವಾಗಿ ಸಚಿವ ಡಾ.ಎಂ.ಬಿ. ಪಾಟೀಲ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದು, ಅವರನ್ನು ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ದೂರ ಸರಿಯಬೇಕು, ಜನಸಾಮನ್ಯರ ಹಿತ ಕಾಪಾಡುವ ಮಂತ್ರಿಯನ್ನು ಈ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿಸಿ ಎಂದು ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಗಂಭೀರವಾಗಿ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಸಮವಸ್ತ್ರವಿಲ್ಲದೇ ಅಲ್ಲೇಕೆ ಹೋದರು? ಇದರ ಹಿಂದೆ ಯಾರ ಕೈವಾಡವಿದೆ, ಈ ಬಗ್ಗೆ ತನಿಖೆ ನಡೆಸಲು ಐಜಿಪಿ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ತನಿಖಾ ತಂಡ ರಚಿಸಬೇಕು, ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಕರೆ ನೀಡಿದರು. ಜನಪರ ಹೋರಾಟಗಾರನ್ನು ಬಂಧಿಸುವುದು ಎಷ್ಟು ಸರಿ? ಒಂದು ರೀತಿ ಹೋರಾಟ ಹಕ್ಕು ನೀಡಿದ ಸಂವಿಧಾನವನ್ನೇ ಜೈಲಿಗೆ ಹಾಕಿದಂತಾಗಿದೆ ಎಂದರು.ಜಿಲ್ಲಾಡಳಿತ, ಪೊಲೀಸ್ ವ್ಯವಸ್ಥೆ ಹಿಡನ್ ಅಜೆಂಡಾ ಇರಿಸಿಕೊಂಡೇ ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟವನ್ನು ಸರ್ಕಾರದ ಅಣತಿಯೊಂದಿಗೆ ಹತ್ತಿಕ್ಕುವ ಪ್ರಯತ್ನ ಮಾಡಿದೆ, ಪೊಲೀಸರು ಅಲ್ಲಿ ಕಲರ್ ಡ್ರೆಸ್ನಲ್ಲಿ ಬರುವ ಔಚಿತ್ಯವೇನಿತ್ತು? ಪ್ರತಿಭಟನಾಕಾರರಿಗೆ…
ವಿಜಯಪುರ ಜಿಲ್ಲೆಯ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಜ.9ರಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆ-ಶಂಕುಸ್ಥಾಪನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇದೇ ಜ.9 ರಂದು ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ಜಿಲ್ಲೆಗೆ ಆಗಮಿಸುತ್ತಿದ್ದು, ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರತಿಮೆ ಅನಾವರಣ, ಬಸ್ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ ನಾಮಕರಣ, ನಗರದಲ್ಲಿ ವೆಲೋಡ್ರೊಮ ಉದ್ಘಾಟನಾ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆ, ಉದ್ಘಾಟನೆ, ಶಿಲಾನ್ಯಾಸ ಕಾಮಗಾರಿಯ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಸುಸೂತ್ರವಾಗಿ ನಿರ್ವಹಿಸುವಂತೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಹೇಳಿದರು.ಮುಖ್ಯಮಂತ್ರಿ ಅವರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಂಬಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು, ಕಾರ್ಯಕ್ರಮಗಳನ್ನು ಕೈಗೊಂಡಿರುವ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಕಾರ್ಯಕ್ರಮದಲ್ಲಿ ಯಾವುದೆ ರೀತಿಯ ಲೋಪವಾಗದಂತೆ ಮುಂಜಾಗ್ರತೆ ವಹಿಸಬೇಕೆಂದು ಅವರು ಸೂಚಿಸಿದರು.ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಹಾಗೂ ವಿವಿಧ ಇಲಾಖೆಯ ಸಚಿವರು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ…
ಉದಯರಶ್ಮಿ ದಿನಪತ್ರಿಕೆ ಚಡಚಣ: ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಮೂರನೇ ವರ್ಷದ ಗುರು ನಮನ ಕಾರ್ಯಕ್ರಮವು ಚಡಚಣ ಪಟ್ಟಣದ ವಾರ್ಡ್ ನಂ. 15ರ ನೇಕಾರ ಕಾಲೋನಿಯಲ್ಲಿರುವ ಶ್ರೀ ಮರಡಿ ಮಹಾದೇವ ಗುಡಿ ಸಮೀಪ ಭಕ್ತಿಭಾವದಿಂದ ನೆರವೇರಿತು.ಈ ಸಂದರ್ಭದಲ್ಲಿ ನೇಕಾರ ಕಾಲೋನಿಯ ತಾಯಂದಿರು ಹಾಗೂ ಸದ್ಭಕ್ತರು ಸ್ವಾಮೀಜಿಯವರ ಸ್ಮರಣೆಯಲ್ಲಿ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು, ಅವರ ಆದರ್ಶ ಜೀವನ, ವಚನಬೋಧನೆ ಮತ್ತು ಮಾನವೀಯ ಸಂದೇಶಗಳನ್ನು ಸ್ಮರಿಸಿದರು. ವಿಶೇಷ ಪೂಜೆ, ಭಜನೆ ಹಾಗೂ ಪ್ರಾರ್ಥನೆಗಳು ಜರುಗಿದವು.
ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ವಿಜಯಪುರದ ಲೋಕಾಯುಕ್ತ ಅಧಿಕಾರಿಗಳು ಧಿಡೀರ ಭೇಟಿ ನೀಡಿ, ವಿವಿಧ ಕಡತ ಹಾಗೂ ಎಲ್ಲ ವಿಭಾಗಗಳನ್ನು ಪರಶೀಲಿಸಿದರು.ಆಸ್ಪತ್ರೆಯ ಎಕ್ಸರೇ, ಹೆರಿಗೆ ಕೋಣೆ, ಶಸ್ತ್ರ ಚಿಕಿತ್ಸೆ ಘಟಕ, ದಂತ ಹಾಗೂ ನೇತ್ರ ತಪಾಸಣೆ, ಲ್ಯಾಬರೋಟರಿ, ಡಯಾಲಿಸಿಸ್ ಕೋಣೆ ಹಾಗೂ ಇನ್ನಿತರ ವಿಭಾಗಗಳ ಎಲ್ಲ ಕೋಣೆಗಳ ಮೂಲೆ ಮೂಲೆಯನ್ನು ಜಾಲಾಡಿದರು.ಇತ್ತೀಚಿಗೆ ಅಂದರೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷರು ಹಾಗೂ ಹಸಿರು ಸೇನೆ ಅಧ್ಯಕ್ಷರು ವತಿಯಿಂದ ರೈತರು ಪ್ರತಿಭಟನೆ ನಡೆಸಿ, ಪಟ್ಟಣದಲ್ಲಿ ಇರುವ ತಾಲೂಕಾ ಸಮುದಾಯ ಕೇಂದ್ರದಲ್ಲಿ ವೈದ್ಯರು ರೈತರಿಗೆ ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ.ಚಿಕಿತ್ಸೆ ನೀಡಿದರೂ ಔಷಧಿಗಳನ್ನು ಹೊರಗಿನಿಂದ ತರಬೇಕು ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಾರೆ ಎಂದು ಆರೋಪಿಸಿ, ತಹಶೀಲದಾರ ಅವರಿಗೆ ಮನವಿ ಕೊಟ್ಟಿದ್ದರು ಅದನ್ನು ಲೋಕಾಯುಕ್ತರ ಗಮನಕ್ಕೆ ಸಾರ್ವಜನಿಕರು ತಂದಾಗ ಡಾ.ಎ.ಎನ್.ಅಗರಖೇಡ ಅವರು ಮಧ್ಯ ಪ್ರವೇಶಿಸಿ ಅದೆಲ್ಲ ಸುಳ್ಳು ಆರೋಪ ಸತ್ಯವಾಗಿದ್ದರೆ ಪ್ರೀಕ್ರಿಷ್ಯನ್ (ಪುರಾವೆ)ತೆಗೆದುಕೊಡು ಬರಲಿ ಎಂದು ಹೇಳಿದರು.ಲೋಕಾಯುಕ್ತ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನನ್ನ ಆಡಳಿತ ಅವಧಿಯಲ್ಲಿ ಶಂಕು ಸ್ಥಾಪನೆಗೊಂಡಿರುವ ಶಿಕ್ಷಕರ ಭವನಕ್ಕೆ ಹಾಲಿ ಶಾಸಕರು ಮತ್ತೊಮ್ಮೆ ಭೂಮಿ ಪೂಜೆ ಮಾಡುವ ಮೂಲಕ ವಿಡಂಬನೆಯ ಸುಳ್ಳು ಪ್ರಚಾರ ಪಡೆಯಲು ಸಿದ್ದರಾಗಿದ್ದಾರೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಆರೋಪಿಸಿದರು.ಜ.೦೭ರಂದು ನಡೆಯಲಿರುವ ಶಿಕ್ಷಕರ ಭವನದ ಕಾಮಗಾರಿ ಭೂಮಿ ಪೂಜೆಯ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಹಂದಿಗನೂರ ಸಿದ್ರಾಮಪ್ಪ ಭವನ ಹಾಗೂ ಶಿಕ್ಷಕರಿಗಾಗಿ ಗುರು ಭವನದ ಕಾಮಗಾರಿಗೆ ನನ್ನ ಅಧಿಕಾರವಧಿಯಲ್ಲಿ ಅನುದಾನ ತಂದು ಭೂಮಿ ಪೂಜೆ ಮಾಡಿರುವೆ. ಈ ಕೆಲಸವನ್ನು ಗುತ್ತಿಗೆದಾರ ತೆಗ್ಗೆಳ್ಳಿ ಬಸವರಾಜ ಅವರಿಗೆ ಟೆಂಡರ್ ಮಾಡಲಾಗಿತ್ತು. ಸೇಡಿನ ಮನೋಭಾವನೆ ಇರುವ ಶಾಸಕರು ಈ ಟೆಂಡರ್ನ್ನು ರದ್ದುಗೊಳಿಸಿ ಮರು ಟೆಂಡರ್ ಮಾಡಿ ಸುಳ್ಳು ಪ್ರಚಾರ ಪಡೆಯುತ್ತಿದ್ದಾರೆ. ಮತಕ್ಷೇತ್ರದ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಾಲಿ ಶಾಸಕ ಅವಧಿಯಲ್ಲಿ ಯಾವುದೇ ಹೊಸ ಕಾಮಗಾರಿಗಳಾಗಿಲ್ಲ ಎಂದು ಕಿಡಿಕಾರಿದರು.
