Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವರದಿ: ಬಸವರಾಜ ನಂದಿಹಾಳಬಸವನಬಾಗೇವಾಡಿ: ಸ್ವಚ್ಛ ಸುಂದರ ಪಟ್ಟಣ ನಮ್ಮ ಕನಸು ಪರಿಕಲ್ಪನೆಯೊಂದಿಗೆ ಸ್ಥಳೀಯ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕವು ವಿನೂತನ ಪೈಪ್ ಕಾಂಪೋಸ್ಟಿಂಗ್ ವಿಧಾನ ಯೋಜನೆಯನ್ನು ವೀರಭದ್ರೇಶ್ವರ ನಗರದಲ್ಲಿ ಅನುಷ್ಠಾನ ಮಾಡುವ ಈ ಯೋಜನೆಯನ್ನು ಜಾರಿಗೆ ತಂದಿದೆ.ಈ ಯೋಜನೆಯಡಿ ಮನೆ ಹತ್ತಿರ ಪುರಸಭೆ ಅಳವಡಿಸಲಾಗುವ ಪೈಪ್ ನಲ್ಲಿ ಆಯಾ ಮನೆಯವರು ತಮ್ಮಲ್ಲಿರುವ ಬೇಡವಾದ ತರಕಾರಿ, ಸೋಸಿದ ತೊಪ್ಪಲು ಪಲ್ಲ್ಯೆ ಕಸ, ಇದರಲ್ಲಿ ಹಾಕಬೇಕು. ನಂತರ ಸಗಣಿ ನೀರು ಇಲ್ಲವೇ ಬೆಲ್ಲದ ನೀರು ಇದರಲ್ಲಿ ಸುರಿಯಬೇಕು. 45 ದಿನಗಳ ನಂತರ ಇದು ಸಾವಯವ ಗೊಬ್ಬರವಾಗಿ ತಯಾರು ಆಗುತ್ತದೆ. ಆಯಾ ಮನೆಯವರು ಈ ಸಾವಯವ ಗೊಬ್ಬರವನ್ನು ತಮ್ಮ ಮನೆ ಸುತ್ತಮುತ್ತ ಇರುವ ಗಿಡ-ಮರಗಳಿಗೆ ಗೊಬ್ಬರವಾಗಿ ಬಳಕೆ ಮಾಡಬಹುದು.ಈ ಯೋಜನೆಯ ಉಸ್ತುವಾರಿಯನ್ನು ಸಮುದಾಯದ ಸಂಘಟಿಕರಾದ ವಿದ್ಯಾ ರವಿ ಮಸಬಿನಾಳ, ರೇಖಾ ನಾಗಪ್ಪ ಭಜಂತ್ರಿ, ಹೇಮಾ ಸರೋಜಿನಿ ಹೊಸಮನಿ, ಕವಿತಾ ಮನೋಜಕುಮಾರ ರಜಪೂತ, ಭಾಗೀರಥಿ ರಮೇಶ ಕೊಂಡಗುಳಿ ನೋಡಿಕೊಳ್ಳುವರು.ಈ ಕುರಿತು ಪುರಸಭೆ ಆರೋಗ್ಯ ನಿರೀಕ್ಷಕರಾದ…
ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನಮಠದ ದಿಂಗಾಲೇಶ್ವರ ಶ್ರೀ ಅಭಿಮತ ಉದಯರಶ್ಮಿ ದಿನಪತ್ರಿಕೆ ಇಂಡಿ: ಸರಳ ಸಾಮೂಹಿಕ ವಿವಾಹ ಭಾಗ್ಯವಂತರ ವಿವಾಹ. ಸಾಮೂಹಿಕ ವಿವಾಹ ಶ್ರೇಷ್ಠ ವಿವಾಹ. ಸಾಮೂಹಿಕ ಮದುವೆಗಳು ಅರ್ಥಿಕ ಹೊರೆಯನ್ನು ಕಡಿಮೆ ಮಾಡುವದರ ಜೊತೆಗೆ ಬಡ ಕುಟುಂಬಗಳನ್ನು ಸಂಕಷ್ಟದಿಂದ ಪಾರು ಮಾಡುತ್ತದೆ ಎಂದು ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನಮಠದ ಜಗದ್ಗುರು ದಿಂಗಾಲೇಶ್ವರ ಶ್ರೀಗಳು ಹೇಳಿದರು.ಅವರು ಬುಧವಾರ ತಾಲೂಕಿನ ಗೋಳಸಾರ ಗ್ರಾಮದ ಸದ್ಗುರು ಚಿನ್ಮಯಮೂರ್ತಿ ತ್ರಿಮೂರ್ತಿ ಮಹಾಶಿವಯೋಗಿಗಳ ೩೨ ನೆಯ ಪುಣ್ಯ ಸ್ಮರಣೋತ್ಸವ, ಧರ್ಮಸಭೆ, ದೀಪೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.ನಾಡಿನ ಸಂತ ಶರಣ ಸ್ವಾಮೀಜಿಗಳು ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಪುಣ್ಯವಂತರು. ಈಗ ಮದುವೆಯಾದ ೨೮ ನವಜೋಡಿಗಳು ಪ್ರತಿಯೊಬ್ಬರೂ ಮೂರು ಮಕ್ಕಳಿಗೆ ಜನ್ಮ ನೀಡಬೇಕು. ಒಬ್ಬ ಮಗ ಅಥವಾ ಮಗಳು ಸಮಾಜಕ್ಕಾಗಿ, ಒಂದು ದೇಶಕ್ಕಾಗಿ, ಒಂದು ನಮಗಾಗಿ ಹೀಗೆ ೩ ಮಕ್ಕಳಿಗೆ ಜನ್ಮ ನೀಡಬೇಕೆಂದರು.ಸಾಲ ಮಾಡಿ ಮದುವೆ ಮಾಡಿಕೊಂಡು ಸಾಲದ ಜೊತೆ ಮಲಗುವುದಕ್ಕಿಂತ, ಸಾಮೂಹಿಕ ಮದುವೆಗಳಲ್ಲಿ ಮದುವೆಯಾಗಿ ಹೆಂಡತಿಯ ಜೊತೆಗೆ ಸುಖ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರಕ್ಕೆ ಆಗಮಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ನವ ಕರ್ನಾಟಕ ಸಂಗೀತ ಪದವೀಧರ ಸಂಘದ ಸದಸ್ಯರು ಭೇಟಿ ಮಾಡಿ ಕಳೆದ ೧೫ ವರ್ಷಗಳಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನೇಮಕಾತಿಯಾಗದೆ ಇರುವ ಸಂಗೀತ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕುವೆಂಪು ಶತಮಾನ ಮಾದರಿ ಶಾಲೆಗಳಲ್ಲಿ, ಆದರ್ಶ ವಿಶ್ವವಿದ್ಯಾಲಯ ಶಾಲೆಗಳಲ್ಲಿ, ಕರ್ನಾಟಕ ಪಬ್ಲಿಕ್ ಮತ್ತು ಆಂಗ್ಲ ಶಾಲೆಗಳಲ್ಲಿ ಸಂಗೀತ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಸಿಂದಗಿ ಮಾನ್ಯ ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ, ಅಲಮೇಲ ತಾಲೂಕಿನ ಕಾಂಗ್ರೆಸ್ ಗ್ಯಾರಂಟಿ ಸಮಿತಿ ಅದ್ಯಕ್ಷ ಅಶೋಕ ಕೋಳಾರಿ ಅವರ ಸಮ್ಮುಖದಲ್ಲಿ ಸಂಗೀತ ಪದವೀಧರ ಡಾ.ಪ್ರಕಾಶ ಮೂಡಲಗಿ ರಾಗರಂಜಿನಿ, ಹಾಗೂ ಪೂಜಾ ಹಿರೇಮಠ ಮನವಿ ಸಲ್ಲಿಸಿದ್ದರು ಎಂದು ನವ ಕರ್ನಾಟಕ ಸಂಗೀತ ಪದವೀಧರ ಸಂಘದ ರಾಜ್ಯಾಧ್ಯಕ್ಷ ಬಂಡಯ್ಯ ಶಾಸ್ತ್ರಿ ಸುಂಟನೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಅಂದು ನಾರಿಮಣಿಗಳಿಗೆ ಗಗನ ಕುಸಮವಾಗಿದ್ದ ಶಿಕ್ಷಣ ವಿದ್ಯಾಭ್ಯಾಸಕ್ಕೆ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಪ್ರೇರಿಪಿಸಿದ್ದಾರೆ. ಹೆಣ್ಣು ಕುಲಕ್ಕೆ ಧೈರ್ಯದಿಂದ ಅಕ್ಷರ ಕಲಿಕಾ ಮುನ್ನುಡಿ ಬರೆದಿರುವ ದಿಟ್ಟತನದ ಸಾಧಕಿ ಪುಲೆ ಅವರು ಪುರುಷ ಪ್ರಧಾನ ಸಮಾಜದಲ್ಲಿ ಎದೆಗುಂದದೆ ಮಾನವೀಯತೆ ನೆಲೆಗಟ್ಟಿನ ಮೇಲೆ ಶಿಕ್ಷಣದ ಪ್ರೀತಿಧಾರೆ ತೋರಿದ್ದಾರೆ. ಸಾವಿತ್ರಿಬಾಯಿ ಅವರ ಅಚಲ ಛಲದಿಂದಲೇ ವಿದ್ಯೆ ಮೌಲ್ಯ, ಶಿಕ್ಷಣದ ಕಂಪು ಇಂದು ಹೆಣ್ಣು ಮಕ್ಕಳು ಪಡೆಯುವಂತಾಗಿದೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹೇಳಿದರು.ಸ್ಥಳೀಯ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಸಾವಿತ್ರಿಬಾಯಿ ಪುಲೆ ಜನ್ಮದಿನಾಚರಣೆ ಪ್ರಯುಕ್ತ ಸಾಧಕಿ ಪುಲೆ ಹಾಗೂ ವೈಚಾರಿಕ ಸಂತ ಲಿಂ,ತೋಂಟದ ಡಾ,ಸಿದ್ದಲಿಂಗ ಶ್ರೀಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಾಲ್ಕು ಗೋಡೆಗಳ ಮಧ್ಯೆ ಮಹಿಳೆಯರು ಸೀಮಿತವಾಗಿದ್ದ ಕಾಲದಲ್ಲಿ ನವಕ್ರಾಂತಿ, ಭ್ರಾಂತಿಯನ್ನು ಶಿಕ್ಷಣದ ಮೂಲಕ ಸಾವಿತ್ರಿಬಾಯಿ ಪುಲೆ ಸೃಜೀಸಿದ್ದಾರೆ. ಮಹಿಳಾ ಸಾಕ್ಷರತೆಗೆ ನವಭಾಷ್ಪ ಬರೆದು ಸಾಕಾರತೆ ಮೆರೆದಿದ್ದಾರೆ. ವೀರನಾರಿ ಪುಲೆ ನಿಜಕ್ಕೂ ಭಾರತೀಯ ಅಕ್ಷರಮ್ಮ ಎಂದರು.ವಿದ್ಯೆ ಮೌಲ್ಯ ಹೆಣ್ಣು ರಂಗಕ್ಕೆ ಸಾರ್ವತ್ರಿಕವಾಗಿ ಸಾವಿತ್ರಿಬಾಯಿ ಪುಲೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಗೆ ಘೋಷಿತ ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು ಸ್ಥಾಪನೆಯನ್ನು ಕೈಬಿಟ್ಟು ಸರ್ಕಾರದಿಂದಲೇ ಕಾಲೇಜು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಿಲ್ಲೆಯ ಸಚಿವರಾದ ಶಿವಾನಂದ ಪಾಟೀಲ ಅವರಿಗೆ ಭರವಸೆ ನೀಡಿದ್ದಾರೆ.ಬುಧವಾರ ಹಾವೇರಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ನೂತನ ಕಟ್ಟಡ ಲೋಕಾರ್ಪಣೆ ಸಮಾರಂಭಕ್ಕೆ ಚಾಲನೆ ನೀಡಿದ ಬಳಿಕ ತಮ್ಮ ಭಾಷಣದ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರನ್ನು ಉಲ್ಲೇಖಿಸಿ, ಶಿವಾನಂದ ಪಾಟೀಲ ಅವರೇ ವಿಜಯಪುರ ಜಿಲ್ಲೆಗೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಾಗಿ ಪ್ರಕಟಿಸಿದರು.ವಿಜಯಪುರ ಜಿಲ್ಲೆಗೆ ಘೋಷಿಸಿತ ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಚಿವ ಶಿವಾನಂದ ಪಾಟೀಲ ಅವರು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಬೇಡಿಕೆ ಇರಿಸಿದ್ದರು.ತಾವು ಆರೋಗ್ಯ ಸಚಿವರಾಗಿದ್ದ ಕಾಲದಲ್ಲಿ ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಟ್ರಾಮಾ ಕೇಂದ್ರ, ತಾಯಿ ಮಕ್ಕಳ ಆಸ್ಪತ್ರೆ ಸೇರಿದಂತೆ ಹತ್ತಾರು ಸೌಲಭ್ಯ ಕಲ್ಪಿಸಿದ್ದನ್ನು ಮನವರಿಕೆ ಮಾಡಿ ಸಚಿವ…
ಹೆಚ್ ಡಿ ಕೋಟೆ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಇರೋದಿಲ್ಲ. ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗೆ ನಿಲ್ಲುವವರು ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಿ ಎಂದು ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ಕರೆ ನೀಡಿದರು.ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಹೆಚ್ ಡಿ ಕೋಟೆ -ಸರಗೂರು ತಾಲೂಕಿನ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇರಲ್ಲ ಎಂದು ಎರಡು ಬಾರಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇರೋದಿಲ್ಲ. ಎಲ್ಲಿಯವರೆಗೆ ಈ ಮೈತ್ರಿ ಮುಂದುವರೆಯುತ್ತೆ ಎಂಬುದು ಕೂಡ ಗೊತ್ತಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸುವವರು ಮೈತ್ರಿ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಲೋಣಿ ಬಿ.ಕೆ. ವಲಯದ ಜಿಗಜಿವಣಿ ಸಮೀಪದ ಲಮಾಣಿಹಟ್ಟಿ ಗ್ರಾಮದಲ್ಲಿ ಜಾನುವಾರು ಆರೋಗ್ಯ ತಪಾಸಣಾ ಶಿಬಿರವನ್ನು ಮಂಗಳವಾರ ಆಯೋಜಿಸಲಾಗಿತ್ತು.ಶಿಬಿರದಲ್ಲಿ ಪಶು ವೈದ್ಯ ಡಾ. ರೋಹನ್ ಬಿರಾದಾರ ಅವರು ಸುಮಾರು 30 ಜಾನುವಾರುಗಳಿಗೆ ಗರ್ಭಪರೀಕ್ಷೆ, ಜಂತು ನಿವಾರಣ ಔಷಧೋಪಚಾರ, ಕಾಲುಬೇನೆ–ಬಾಯಿಬೇನೆ ತಪಾಸಣೆ ಹಾಗೂ ಅಗತ್ಯ ಚಿಕಿತ್ಸೆ ನೀಡಿದರು. ಜೊತೆಗೆ ಹಾಲಿನ ಉತ್ಪಾದನೆ ಹೆಚ್ಚಿಸಲು ಮಿನರಲ್ ಮಿಕ್ಸರ್ ಬಳಕೆ, ಜಾನುವಾರುಗಳಿಗೆ ನೀಡಬೇಕಾದ ವ್ಯಾಕ್ಸಿನ್ಗಳ ಮಹತ್ವ ಕುರಿತು ರೈತರಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಿನ ಕೃಷಿ ಮೇಲ್ವಿಚಾರಕ ಸುದೀಪ ಎಸ್.ಕೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಕಾರ್ಯಕ್ರಮದಡಿಯಲ್ಲಿ ರೈತರ ಜಾನುವಾರುಗಳಿಗೆ ಉಚಿತ ಚಿಕಿತ್ಸೆ ಹಾಗೂ ಜಾಗೃತಿ ನೀಡಲಾಗುತ್ತಿದೆ ಎಂದರು. ರೈತ ಕ್ಷೇತ್ರ ಪಾಠಶಾಲೆಗಳ ಮೂಲಕ ಹೈನುಗಾರಿಕೆ ತರಬೇತಿ, ಕೃಷಿಯಲ್ಲಿ ನೀರಾವರಿ ವಿಧಾನಗಳು, ಮಣ್ಣು ಪರೀಕ್ಷೆ, ಮಳೆನೀರು ಕೊಯ್ಲು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ರೈತರ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.ವಲಯದ ಮೇಲ್ವಿಚಾರಕ ಮಹಾಂತೇಶ ವಿ.ಎ. ಮಾತನಾಡಿ ಧರ್ಮಸ್ಥಳ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕಿನ ಜಾಲವಾದ ಗ್ರಾಮದ ಮುರುಗೇಂದ್ರಶ್ರೀ ಆಶ್ರಮದ ಜಾತ್ರೋತ್ಸವದಲ್ಲಿ ಪಟ್ಟಣದ ಹಿರಿಯ ವೈದ್ಯ ಆರ್.ಆರ್.ನಾಯಿಕ್ರವರು ವೈದ್ಯಕೀಯ ರಂಗದಲ್ಲಿ ಸಲ್ಲಿಸಿದ ಜೀವಮಾನ ಸಾಧನೆ ಹಾಗೂ ಸೇವೆಯನ್ನು ಪರಿಗಣಿಸಿ “ಕರ್ನಾಟಕ ರಾಜ್ಯ ಆರೋಗ್ಯರತ್ನ ಪುರಸ್ಕಾರ” ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಗದ್ದಿಗೆಮಠದ ಮಡಿವಾಳೇಶ್ವರ ಸ್ವಾಮೀಜಿ ಹಾಗೂ ಕಿರಿಯ ಮಹಾಂತ ಸ್ವಾಮೀಜಿ ಇದ್ದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕರಾಗಿ ಆಯ್ಕೆಯಾದ ಸಿದ್ಧಾರ್ಥ ರೂಗಿ ಅವರನ್ನು ತಾಲ್ಲೂಕು ಡಿಎಸ್ಎಸ್ ಪ್ರಮುಖರಾದ ವೈ.ಸಿ.ಮಯೂರ, ಅಶೋಕ ಕೊಂಡಗೂಳಿ, ಜಾನು ಗುಡಿಮನಿ, ಅರುಣ ಕೋರವಾರ, ತಿಪ್ಪಣ್ಣ ಮೇಲಿನಮನಿ, ಸುಭಾಸ ನಾಟೀಕಾರ, ದೇವೇಂದ್ರ ಬನಸೋಡೆ, ರಾಮು ವಂದಾಲ ಸನ್ಮಾನಿಸಿದರು.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ವಿಜಯಪುರ ಸರ್ಕಾರಿ ವೈದ್ಯಕೀಯ ಹೋರಾಟ ಸಮಿತಿಯ ಹೋರಾಟಗಾರರ ಬಂಧನ ಖಂಡಿಸಿ ಹಾಗೂ ಬಿಡುಗಡೆಗೊಳಿಸಲು ಆಗ್ರಹಿಸಿ ಪಟ್ಟಣದ ಜನವೇದಿಕೆ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಹಶೀಲ್ದಾರ ನಿಂಗಣ್ಣ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯಕ್ಕೆ ಸೋಮವಾರ ಆಗಮಿಸಿದ ಜನವೇದಿಕೆ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ಹೋರಾಟಗಾರರ ಬಂಧನದ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕಾಧ್ಯಕ್ಷ ರಹಿಮಾನ್ ಕಣಕಾಲ ಮಾತನಾಡಿ, ಪಿಪಿಪಿ ಮಾದರಿ ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ಅದರ ಬದಲಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಅನಿರ್ಧಿಷ್ಟ ಮತ್ತು ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡ ೨೭ ಜನ ಹೋರಾಟಗಾರರ ಬಂಧನ ಖಂಡನೀಯ. ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಹಾಗೂ ಅವರ ಮೇಲಿನ ಪ್ರಕರಣಗಳನ್ನು ಕೂಡಲೇ ಹಿಂತೆಗೆದುಕೊಳ್ಳಲು ಆಗ್ರಹಿಸಿದರು.ನಂತರ ತಹಶೀಲ್ದಾರರಿಗೆ ಮನವಿ ನೀಡಿದರು.ರಾಷ್ಟ್ರೀಯ ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾ ಪಾಟೀಲ, ಶಾಂತಾ ದೇಗಿನಾಳ, ಜೈನಾಬಿ ಮೋಮಿನ,…
