ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ಮಕ್ಕಳೇ ಶಕ್ತಿ, ಪ್ರಭುದ್ಧ ಭಾರತದ ನಿಜವಾದ ಆಸ್ತಿ. ಅವರಲ್ಲಿ ಅಡಗಿರುವ ಪ್ರತಿಭೆ, ಕನಸುಗಳು ಮತ್ತು ಪರಿಶ್ರಮವೇ ನಾಳೆಯ ದೇಶದ ದಿಕ್ಕನ್ನು ನಿರ್ಧರಿಸುತ್ತವೆ. ಸರಿಯಾದ ಶಿಕ್ಷಣ, ನೈತಿಕ ಮೌಲ್ಯಗಳು ಮತ್ತು ಪ್ರೋತ್ಸಾಹ ದೊರೆತರೆ, ಅವರು ಕೇವಲ ತಮ್ಮ ಭವಿಷ್ಯವನ್ನಷ್ಟೇ ಅಲ್ಲ, ರಾಷ್ಟ್ರದ ಭವಿಷ್ಯವನ್ನೂ ಹೊಳೆಯುವಂತೆ ಮಾಡುತ್ತಾರೆ ಎಂದು ಪಿಎಸೈ ಮಹೇಶ ಸಂಕ ಹೇಳಿದರು.
ನಗರದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಯುವ ಬ್ರಿಗೇಡ್ ಆಯೋಜಿಸಿದ ಡಾ.ಬಾಬಾ ಸಾಹೇಬ ಅಂಬೇಡ್ಕರ ರ ೧೩೫ ನೇ ಜಯಂತ್ಯೋತ್ಸವದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಧನ ಹಾಗೂ ಪುಸ್ತಕ ವಿತರಣೆ ಮಾಡಿ ಅವರು ಮಾತನಾಡಿದರು.
“ಮಕ್ಕಳನ್ನು ಕೇವಲ ಪಾಠಪುಸ್ತಕಗಳಿಗೆ ಸೀಮಿತಗೊಳಿಸದೇ, ಅವರಲ್ಲಿರುವ ಸೃಜನಶೀಲತೆ ಮತ್ತು ಹೊಣೆಗಾರಿಕೆಯನ್ನು ಬೆಳೆಸುವುದು ಅತ್ಯಂತ ಮುಖ್ಯ. ಇಂದಿನ ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸಿದರೆ, ಪ್ರಭುದ್ಧ ಮತ್ತು ಶಕ್ತಿಶಾಲಿ ಭಾರತ ನಿರ್ಮಾಣ ಸಾಧ್ಯ. ಎಂದು ಹೇಳಿದರು. ಉದ್ಘಾಟಕರಾಗಿ ನಗರ ಪಾಲಿಕೆ ಸದಸ್ಯ ಕುಮಾರ ಗಡಗಿ ಮಾತನಾಡಿ, ಮಕ್ಕಳಲ್ಲಿ ಸೃಜನಾತ್ಮಕ ಚಿಂತನೆ ಪಾಲಕರು ಬಿತ್ತಬೇಕು. ಅವರ ಕನಸಿಗೆ ಸಾಕಾರಗೊಳ್ಳಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಯುವ ಲೇಖಕ ಕಿರಣ ಕಾಳೆ ಡಾ.ಅಂಬೇಡ್ಕರ ನಡೆದು ಬಂದು ಹಾದಿ ಹಾಗೂ ಅವರ ಸಂವಿಧಾನ ಆಶಯಗಳ ಕುರಿತು ವಿವರಿಸಿದರು.
ಅಧ್ಯಕ್ಷತೆ ವಹಿಸಿದ ಮಲ್ಲಿಕಾರ್ಜುನ ನಾಯ್ಕೋಡಿ ಮಾತನಾಡಿ, ಅಂಬೇಡ್ಕರ ಅವರ ಆಶಯದಂತೆ ನಾವೆಲ್ಲರೂ ಜಾತಿ ಭೇದ ಮರೆತು ಬಾಳಿದರೆ ವಿಶ್ವ ಗುರು ಭಾರತ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಪ್ರಶಾಂತ ಕಾಂಬ್ಳೆ, ಮಲಕು ಬ್ಯಾಲ್ಯಾಳ, ಅನೀಲ ಬ್ಯಾಲ್ಯಾಳ, ಶ್ರೀಧರ ಹಾಲ್ಯಾಳ, ಯುವ ಬಿಗ್ರೇಡನ ರಾಜ್ಯಾಧ್ಯಕ್ಷ ವಿರೇಶ ವಾಲಿಕಾರ, ಸಂತೋಷ ಕಾಂಬ್ಳೆ , ಮುತ್ತು ಅಗಸರ, ಸಂತೋಷ ಅಂಜುಟಗಿ ಪ್ರವಿಣ ಕಾಂಬ್ಕೇ ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.
ವಿಜುಗೌಡ ಕಾಳಶೆಟ್ಟಿ ನಿರೂಪಿಸಿದರು.
ಶರದ ವಂದಿಸಿದರು.

