Subscribe to Updates
Get the latest creative news from FooBar about art, design and business.
Author: editor.udayarashmi@gmail.com
Udayarashmi kannada daily newspaper
ಆಲಮಟ್ಟಿ:ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಗೆ ಬರುವ ಎಲ್ಲ ಕಾಲುವೆಗಳಿಗೆ ಏಫ್ರೀಲ್ 30ರ ವರೆಗೆ ಎಲ್ಲಾ ಕಾಲುವೆಗಳಿಗೆ ನೀರು ಹರಿಸುವುದನ್ನು ಮುಂದುವರೆಸಿ ಬೇಸಿಗೆ ಸಂದರ್ಭದಲ್ಲಿ ಬೆಳೆಯುವ ಬೆಳೆಗಳಿಗೆ ಅನುವು ಮಾಡಿ ಕೊಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಒತ್ತಾಯಿಸಿದ್ದಾರೆ.ಈ ಮೊದಲು ಮಾರ್ಚ 30ರ ವರೆಗೆ ಮಾತ್ರ ಕಾಲುವೆಗೆ ನೀರು ಹರಿಸುವುದಾಗಿ ನವೆಂಬರ 23 ರಂದು ಬೆಂಗಳೂರಿನಲ್ಲಿ ನಡೆಸಿದ್ದ ಐ.ಸಿ.ಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಏ. 30ರ ವರೆಗೂ ಎಲ್ಲ ಕಾಲುವೆಗಳಿಗೂ ನೀರು ಹರಿಸಲು ಸಂಘಟನೆ ವತಿಯಿಂದ ಹಲವು ಭಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗಿತ್ತು. ನಮ್ಮ ಹೋರಾಟಕ್ಕೆ ಸ್ಪಂದಿಸಿದ ನೀರಾವರಿ ಸಲಹಾ ಸಮೀತಿ ಅಧ್ಯಕ್ಷರಾಗಿದ್ದ ಮಾಜಿ ಸಚಿವ ಸಿ.ಸಿ. ಪಾಟೀಲ ಮತ್ತೆ ಏ. 10ರ ವರೆಗೆ ಮಾತ್ರ ನೀರು ಹರಿಸುವದನ್ನು ಮುಂದು ವರೆಸುವದಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಒಂದು ವೇಳೆ ಏ.10 ಕ್ಕೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದರೆ ಬೇಸಿಗೆ ಬೆಳೆಗಳು ರೈತರ…
ವಿಜಯಪುರ: ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಬಡ ಕಟ್ಟಡ ಕಾರ್ಮಿಕನಿಗೆ ಶಸ್ತ್ರಚಿಕಿತ್ಸೆಗೆ ನೆರವಾಗುವ ಮೂಲಕ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ವಿಜಯಪುರ ನಗರದ ಇಂಡಿ ರೋಡ್ ನಿವಾಸಿ ಹಣಮಂತ ಗೋಠೆ(28) ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಕಟ್ಟಡ ಕೂಲಿ ಕಾರ್ಮಿಕರಾಗಿರುವ ಈ ಯುವಕ ತಂದೆ, ತಾಯಿ ಮತ್ತು ಪತ್ನಿಯನ್ನು ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದರು. ಈ ವಿಷಯ ತಿಳಿದ ಸುನೀಲಗೌಡ ಪಾಟೀಲ ಅವರು, ಯುವಕನಿಗೆ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈಗ ಸಂಪೂರ್ಣ ಗುಣಮುಖನಾದ ಯುವಕ ಎಂಎಲ್ಸಿ ಸುನೀಲಗೌಡ ಅವರ ಮನೆಗೆ ಆಗಮಿಸಿ ಕೃತಜ್ಞತೆ ಸಲ್ಲಿಸಿದ್ದಾನೆ. ಈ ಸಂದರ್ಭಲ್ಲಿ ಮಾತನಾಡಿದ ಅಪ್ಪುಗೌಡ ಇಂಡಿ, ಶಬ್ಬೀರ ಪಾಟೀಲ, ಗೋವಿಂದ ಪವಾರ, ಕಿಟ್ಟು ಗಾಡಿವಡ್ಡರ ಮುಂತಾದವರು, ಹಣಮಂತ ಗೋಠೆ ಅವರಿಗೆ ಹಾರ್ಟ್ ಪ್ರಾಬ್ಲೆಮ್ ಆಗಿತ್ತು. ಖಾಸಗಿ ಚಿಕಿತ್ಸೆಗೆ ಹೋದಾಗ ರೂ. 1.20 ಲಕ್ಷ ಖರ್ಚಾಗುತ್ತದೆ ಎಂದು ಹೇಳಿದರು. ಮೇಲಾಗಿ…
ವಿಜಯಪುರ: ಧರಣಿ ಮುಗಿಸುವ ದಿನ ನೀಡಿದ ಭರವಸೆಯಂತೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಮೀಸಲಾತಿ ಹೆಚ್ಚಳ ಆದೇಶದ ಅಧಿಕೃತ ಪ್ರತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪಡೆದು, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಶ್ರೀಗಳಿಗೆ ನೀಡಿದರು. ಎರಡು ವರ್ಷಗಳಿಗಿಂತ ಹೆಚ್ಚು ನಿರಂತರವಾಗಿ ಹೋರಾಟ ಮಾಡಿದ ಪ್ರತಿಫಲವಾಗಿ ಇಡೀ ಲಿಂಗಾಯತ ಸಮುದಾಯದವರಿಗೆ ಹೊಸ 2d ವರ್ಗ ಸೃಷ್ಟಿಸಿ, ಶೇ 5 ರಿಂದ 7ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕಾರಣವಾಯಿತು. ಮೀಸಲಾತಿ ಘೋಷಣೆ ಮಾಡಿದಂತೆ, ಅಧಿಕೃತ ಆದೇಶ ಪ್ರತಿಯನ್ನು ಸಿಎಂ ಅವರಿಂದ ಪಡೆದು, ಶ್ರೀಗಳಿಗೆ ಹಸ್ತಾಂತರಿಸಿದೆ. ನಂತರ ಶ್ರೀಗಳೊಂದಿಗೆ, ಸಮಾಜದ ಮುಖಂಡರು ಮುಖ್ಯಮಂತ್ರಿ ಗಳ ಮನೆಗೆ ತೆರಳಿ ಸನ್ಮಾನಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಕೇವಲ ಪಂಚಮಸಾಲಿ ಸಮಾಜಕ್ಕೆ ಸೀಮಿತವಾಗದೆ, ನ್ಯಾಯಯುತವಾಗಿ ಮೀಸಲಾತಿ ಸಿಗಬೇಕಾದ ಎಲ್ಲ ಸಮುದಾಯಗಳ ಪರವಾಗಿ ಧ್ವನಿ ಎತ್ತಿರುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳರು ತಿಳಿಸಿದ್ದಾರೆ. ಶಾಸಕರಾದ ಸಿದ್ದು ಸವದಿ, ಕರ್ನಾಟಕ ದ್ರಾಕ್ಷಿ ಮತ್ತು ವೈನ್…
ಬಸವನಬಾಗೇವಾಡಿ: ರಾಮನಗರ ಜಿಲ್ಲೆಯ ಬೇಡ ಸಮುದಾಯದ ಅಪ್ರಾಪ್ತ ವಿದ್ಯಾರ್ಥಿನಿ ನಿರ್ಭಯಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆಯನ್ನು ಖಂಡಿಸಿ ತಾಲೂಕಾ ಬೇಡ ಜಂಗಮಭಿವೃದ್ದಿ ಸಂಘದ ಪದಾಧಿಕಾರಿಗಳು ತಹಶೀಲ್ದಾರ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. ರಾಮನಗರ ಉಪವಿಭಾಗದ ಕಗ್ಗಲಿಪುರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿ ನಿರ್ಭಯಳ ಅತ್ಯಾಚಾರ ಎಸಗಿ,ಕೊಲೆ ಸಂಭAದಿಸಿ ಕುರಿತು ಪ್ರಕರಣ ದಾಖಲಾಗಿದೆ.ಅಪ್ರಾಪ್ತ ನಿರ್ಭಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳ ಶೀಘ್ರವಾಗಿ ಬಂಧಿಸಿ ಉಗ್ರ ಶೀಕ್ಷೆ ಗುರಿಪಡಿಸಬೇಕು.ಆರೋಪಿಗಳನ್ನು ಜಾಮಿನಿನ ಮೇಲೆ ಹೊರ ಬರದಂತೆ ಸರ್ಕಾರ ನೋಡಿಕೊಂಡು ನಿರ್ಭಳ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಬದಲ್ಲಿ ಸ್ಥಳೀಯ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ರುದ್ರಮುನಿ ಸಾರಂಗಮಠ,ಪAಚಾಕ್ಷರಿ ಕಾಳಹಸ್ತೇಶ್ವರಮಠ,ಶಿವಲಿಂಗಯ್ಯ ತೆಗ್ಗಿನಮಠ,ಎಂ ಕೆ ಮಠ,ಎಸ್ ಆರ್ ಮಠ,ಪಿ ಎಲ್ ಹಿರೇಮಠ,ಸುಬಾಸ ಪುರಾಣಿಕಮಠ,ಸುಬಾಸ ಗಣಾಚಾರಿ,ಬಳಬಟ್ಟಿ ಸ್ವಾಮಿ ಸೇರಿದಂತೆ ಮುಂತಾದವರು ಇದ್ದರು.
ಚಡಚಣ : ದಾಖಲೆ ಇಲ್ಲದ 480 ಗ್ರಾಂ ಚಿನ್ನ ಹಾಗೂ ರೂ.6 ಲಕ್ಷ ನಗದು ಹಣ ವಶಪಡಿಸಿಕೊಂಡ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.ಪಟ್ಟಣದ ದೇವರನಿಂಬರಗಿ ಕ್ರಾಸ್ ಬಳಿ ಮಾರುತಿ ವ್ಯಾನದಲ್ಲಿ ಅಕ್ರಮವಾಗಿ ಸಾಗಿಸುತಿದ್ದ 480ಗ್ರಾಮ್ ಚಿನ್ನ ಹಾಗೂ ರೂ.6 ಲಕ್ಷ ನಗದು ಹಣ ವಶ ಪಡಿಸಿಕೊಂಡ ಘಟನೆ ನಡೆದಿದೆ.ನಿಖರ ಮಾಹಿತಿ ಮೇರೆಗೆ ಸಿಪಿಐ ಸಾಹೇಬಗೌಡ ಪಾಟೀಲ ಹಾಗೂ ಪಿಎಸೈ ಸಂಜಯ ತಿಪ್ಪರೆಡ್ಡಿ ಹಾಗೂ ಸಿಬ್ಬಂದಿ ಮಾರುತಿ ವ್ಯಾನ್ ದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 480 ಗ್ರಾಮ ಚಿನ್ನ ಹಾಗೂ 6ಲಕ್ಷ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಸಿಪಿಐ ಸಾಹೇಬಗೌಡ ಪಾಟೀಲ ತಿಳಿಸಿದ್ದಾರೆ.ಈ ಪ್ರಕರಣ ಚಡಚಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಅಲೆಯಲಿ ಕುಣಿಯುವದೋಣಿಯ ತೆರದಲಿಬಾಳಿನ ಜಂಜಡ ಮರೆಯುತಲಿಮರಳಿನ ಹಾಸಲಿನಡೆಯುವ ಜೊತೆಯಲಿಕೈಯೊಳು ಕೈಯನು ಬೆಸೆಯುತಲಿ ಹೆದ್ದೆರೆ ಬರಲೀಗಾಳಿಯು ಬೀಸಲಿಬಿಡಿಸಲು ಆಗದು ಈ ಬಂಧನಂಬಿಕೆಯೆನ್ನುವಪಾಯದಿ ಕುಳಿತಿದೆಮಿಡಿವ ಮನಗಳ ಸಂಬಂಧ ದೂರದಿಗಂತವನಿರುಕಿಸಿ ನೋಡಲುಕಾಣದು ಎಲ್ಲೆಯು ಎಂದೆಂದೂನಿನ್ನಯ ಹೆಗಲಲಿಭಾವವ ಅರುಹಲುಭರವಸೆ ಮುರಿಯದು ಮುಂದೆಂದೂ
ನಮ್ಮ ಸುತ್ತ ಮುತ್ತಲೂ ಅನೇಕ ರೀತಿಯ ವ್ಯಕ್ತಿತ್ವದವರನ್ನು ಕಾಣುತ್ತೇವೆ.ತನ್ನ ಮೂಗಿನ ನೇರಕ್ಕೆ ಮಾತನಾಡುವವರು ಕೆಲವರಾದರೆ,ಯಾವಾಗಲೂ ತನ್ನ ಬಗ್ಗೆಯೇ ಕೊಚ್ಚಿಕೊಳ್ಳುವವರು ಹಲವರು.ಇತರರ ತಪ್ಪುಗಳನ್ನು ಹುಡುಕಿ ಗೇಲಿ ಮಾಡುವವರು ಒಂದೆಡೆಯಾದರೆ,ಮಾತಿನಲ್ಲಿ ವ್ಯಂಗ್ಯವನ್ನು ಹಾಲು ಜೇನಿನಂತೆ ಬೆರೆಸಿ ಮಾತನಾಡುವವರು ಮತ್ತೊಂದೆಡೆ ಆಡಿದ ಮಾತಿಗೆ ಸಿಡಿಲಿನಂತೆ ಬಡಿವವರು,ಮಾತಿಗೆ ಪ್ರತಿ ಮಾತನ್ನೆ ಆಡದವರು,ಸದಾ ತನ್ನ ನೋವನ್ನೆ ತೋಡಿಕೊಳ್ಳುವವರು,ಒಂದೇ ಒಂದು ಮಾತಿಗೆ ಜೀವನ ಪರ್ಯಂತ ನಿಷ್ಠುರ ತನ ತೋರುವವರು,ಕಾರಣವಿಲ್ಲದೆ ಮಾತು ಬಿಡುವವರು, ಬೆಣ್ಣೆಯಿಂದ ಕೂದಲು ತೆಗೆದಂತೆ ನಯವಾಗಿ ಮಾತನಾಡುವವರು,ತನ್ನ ಎದುರು ಬಣ್ಣ ಬಣ್ಣವಾಗಿ ಮಾತನಾಡಿ ಹಿಂಬದಿಯಿಂದ ಚೂರಿ ಹಾಕುವವರು,ಎಂದಿಗೂ ಯಾರ ಮುಂದೆಯೂ ತಲೆ ಬಾಗದವರು,ಎಲ್ಲವನ್ನು ಸಹಿಸಿಕೊಂಡು ಮೌನವಾಗಿ ದುಃಖಿಸುವವರು, ತನ್ನದೇ ಸರಿ ಎನ್ನುವ ಮೊಂಡು ಸ್ವಭಾವದವರು, ತಾನು ಹೇಳಿದ್ದೇ ನಡೆಯಬೇಕೆಂಬ ಒರಟು ನಡೆಯವರು,ಯಶಸ್ಸಿನ ಎಲ್ಲಾ ಮೆಟ್ಟಿಲನ್ನು ಏರಿ ಮೊದಲ ಮೆಟ್ಟಿಲನ್ನು ಮರೆವವರು,ಯಾವಾಗಲೂ ತನ್ನವರ ಒಳಿತಿಗಾಗಿಯೆ ಚಿಂತಿಸುವವರು,ತನ್ನ ಗುಟ್ಟನ್ನು ಎಂದಿಗೂ ಬಿಟ್ಟು ಕೊಡದವರು,ಯಾವಾಗಲೂ ತನ್ನ ಸಂಗಾತಿಯನ್ನು ದೂರುವವರು,ಎಂದಿಗೂ ತನ್ನ ಸಂಗಾತಿಯನ್ನು ಇತರರ ಎದುರಿಗೆ ಕುಗ್ಗಿಸದವರು,ಸದಾ ಕೋಪಿಷ್ಟರು,ಯಾವಾಗಲೂ ನಗುಮೊಗದಿಂದ ಇರುವವರು,ಯಾರಿಗೂ ಗೌರವ ಕೊಡದವರು,ಅಧಿಕಾರ,ಹಣದ ಮದದಿಂದ…
ನಗು ಎಂಬುದು ಎಂತಹ ಕುರೂಪಿಯನ್ನೂ ಸಹ ಸುಂದರವಾಗಿ ಪ್ರಸ್ತುತ ಪಡಿಸಬಲ್ಲದು. ನಗೆಯಲ್ಲಿ ನೂರಾರು ಬಗೆ. ಮುಗ್ಧ ನಗೆ, ಕಿರು ನಗೆ, ಹುಸಿ ನಗೆ, ಶಿಷ್ಟಾಚಾರದ ನಗೆ. ಔಪಚಾರಿಕ ನಗೆ, ಪೆದ್ದು ನಗೆ, ವ್ಯಂಗ್ಯದ ನಗೆ ಹೀಗೆ ಹತ್ತಾರು ಬಗೆಯ ನಗುಗಳಿದ್ದರೂ ಪುಟ್ಟ ಮಗುವಿನ ಕಲ್ಮಶವಿಲ್ಲದ, ನಿರ್ಮಲ ಹೃದಯದ ಕಿರು ನಗೆ ಎಲ್ಲರನ್ನೂ ಸೆಳೆಯುತ್ತದೆ. ನಗುವಿಗಾಗಿ ಹಣ ತೆರಬೇಕಾದ ಸರತಿಯಲ್ಲಿ ಗಂಟೆಗಟ್ಟಲೆ ಕಾದು ಮಿತಿಯಲ್ಲಿ ಕಾರ್ಡ್ ತೋರಿಸಿ ಪಡೆದು ಸ್ವಲ್ಪ ಸ್ವಲ್ಪವೇ ಖರ್ಚು ಮಾಡುವ, ಅಥವಾ ಸಾಲ ಪಡೆಯುವ ಅಗತ್ಯವಿಲ್ಲ. ಮುಕ್ತವಾಗಿ ಭಗವಂತ ಎಲ್ಲರಿಗೂ ಈ ಶಕ್ತಿ ದಯಪಾಲಿಸಿ ” ನೀನೊಂದು ಸಲ ನಕ್ಕು ಪರರನು ನಗಿಸು” ಎಂದಿದ್ದಾನೆ. ಹೃದಯದಲ್ಲಿ ಹುಟ್ಟಿ ಕೆನ್ನೆ ಕಣ್ಣುಗಳಲಿ ಬೆಳಗಿ ತುಟಿಗಳಲ್ಲಿ ಅರಳುವ ನಗು ಶ್ರೇಷ್ಠ. ಬಹಳಷ್ಟು ಬಾರಿ ನಗುವ ಮುಕ್ತ ಅವಕಾಶವಿದ್ದರೂ, ಶ್ರೀಮದ್ ಗಾಂಭಿರ್ಯದಿಂದ ತಾವೂ ಇದ್ದು ಪರರನ್ನೂ ನಗಲು ಸಂಕೋಚ ಪಡುವಂತೆ ಮಾಡುವವರೂ ನಮ್ಮ ಮಧ್ಯೆ ಇರುತ್ತಾರೆ. ನಗು ಸ್ನಾಯುಗಳನ್ನು ಸಡಿಲಗೊಳಿಸಿ ರಕ್ತ…
ಅಂತರಂಗದಾ ಮೃದಂಗ ನಾದಮನದ ರಾಗದಿ ಬೆಸೆಯಿತು |ಭಾವ ತಾಳಗಳ ಕಾವ್ಯ ಹೊಮ್ಮಿಒಲವ ಗಾನಕೆ ನಾಂದಿಯಾಯ್ತು || ಮಧುರ ಪ್ರೀತಿ ಗಾನದೊನಲುಸವಿ ಸುಧೆಯನು ಸ್ಪುರಿಸಿತು |ಉಲಿವ ಇಂಪಿನ ಪ್ರತಿ ಸ್ವರಕೂಪ್ರೀತಿಯೊಲುಮೆ ಶೃತಿಯಾಯ್ತು || ಬೆರೆತ ಹೃದಯ ಬಿಗಿದ ಬಂಧಬಿಡಿಸಲಾರದಂತೆ ಬೆರೆಯಿತು |ಯಾವ ಜನ್ಮದ ಮೈತ್ರಿ ಇಂದುಜೀವದುಸಿರನು ಬೆರೆಸಿತು || ಚೈತ್ರ ಬನದಿ ಕೋಗಿಲೆಯ ಉಲಿಇಂಪು ಇಂಪಾಗಿ ಹೊಮ್ಮಿತು |ನಿನ್ನ ಇರುವಲಿ ಹೊಸೆದ ಹಾಡಲಿಪ್ರೇಮ ಭಾಷ್ಯವ ಬರೆಸಿತು || ಮಾಮರವು ಚಿಗುರಿ ಕಂಪ ಬೀರಿಪರಿಮಳವ ಸುತ್ತಲೂ ಹರಡಿತು |ಬದುಕ ಪಯಣದಿ ಜೊತೆಯಾಗಿಸಾಗುವ ಬಯಕೆಯ ತಂದಿತು || ಕಡಲ ಮೊರೆತದ ಸದ್ದು ಕೇಳುತಬಾನು ಬೆರೆಯಲು ಬಯಸಿತು |ಮುಗಿಲ ಮರೆಯ ಚಂದ್ರ ಬಿಂಬಬೆಳದಿಂಗಳ ಸುರಿಸುತ ನಕ್ಕಿತು || ಕನಸುಗಳ ಹಾದಿಯಲಿ ಹೃದಯಹೊಸ ಕಲ್ಪನೆಗಳನು ಚಿತ್ರಿಸಿತು |ಒಲವಿನೊಡಲ ಹರುಷದೊನಲುನಿನ್ನೊಲುಮೆಗೆ ಸಾಕ್ಷಿಯಾಯ್ತು ||
