Author: editor.udayarashmi@gmail.com

ನೀರಾವರಿ ಕಲ್ಪಿಸಿ ತಮ್ಮ ಜನ ಗುಳೆ ಹೋಗುವುದನ್ನು ತಪ್ಪಿಸಿದ ಶಾಸಕ ಎಂ.ಬಿ.ಪಾಟೀಲರಿಗೆ ಕೃತಜ್ಞತೆ ಸಲ್ಲಿಕೆ ವಿಜಯಪುರ: ನೀರಾವರಿ ಸೌಲಭ್ಯ ಒದಗಿಸಿ ಜನ ಗುಳೆ ಹೋಗುವುದನ್ನು ತಪ್ಪಿಸಲು ಕಾರಣರಾದ ಆಧುನಿಕ ಭಗೀರಥ ಎಂ. ಬಿ. ಪಾಟೀಲ ಅವರಿಗೆ ಈ ಬಾರಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮತ್ತು ಖರ್ಚಿಗಾಗಿ ಬಂಜಾರಾ ವೃದ್ಧೆಯೊಬ್ಬರು ರೂ. 50 ಸಾವಿರ ಹಣ ನೀಡಲು ನಿರ್ಧರಿಸಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಎಲ್. ಟಿ. 2ರ ವೃದ್ದೆ ಪುತಲಿಬಾಯಿ ರಾಮು ರಾಠೋಡ(65) ಎಂ. ಬಿ. ಪಾಟೀಲರ ಮೇಲಿನ ಅಭಿಮಾನದಿಂದ ಈ ನಿರ್ಧಾರ ಕೈಗೊಂಡಿದ್ದಾರೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಪುತಲಿಬಾಯಿ ರಾಮು ರಾಠೋಡ, ನಾನು ಮದುವೆಯಾಗಿ ಗಂಡನ ಮನೆಗೆ ಬಂದಾಗಿನಿಂದಲೂ ಸ್ವಂತ ಹೊಲವಿದ್ದರೂ ನೀರು ಇರದ ಕಾರಣ ದೇಶಾಂತರ(ಗುಳೆ) ಹೋಗುತ್ತಿದ್ದೇವು. ನಾಲ್ಕು ಎಕರೆ ಜಮೀನಿದ್ದರೂ, ಕೇವಲ ಒಣ ಬೇಸಾಯದಿಂದಾಗಿ ಬೆಳೆ ಬಾರದೇ ಸಂಕಷ್ಟ ಎದುರಿಸುತ್ತಿದ್ದೇವು. ಇದರಿಂದಾಗಿ ಹೊಟ್ಟೆ ತುಂಬಿಸಿಕೊಳ್ಳಲು ಕೂಲಿ ಹುಡುಕಿಕೊಂಡು ಕುಟುಂಬಸ್ಥರೆಲ್ಲರೂ ಸೇರಿಕೊಂಡು ಮಹಾರಾಷ್ಟ್ರ ಮತ್ತೀತರ ಕಡೆ ದುಡಿಯಲು…

Read More

ಅಂತರಾಳದ ಸರೋವರದ ತೆರೆಗಳಲಿನೋವು ನಲಿವಿನ ಸುಮಧುರ ಬಾಳಿನಲಿಸುಯ್ಯನೇ ಬೀಸುವ ತಂಗಾಳಿಯಲಿನಿನ್ನ ಆರಾಧನೆಯೇ ನವ ವಸಂತ ಗೆಳತಿ ನನ್ನಲಿ॥ ಕಣ್ಣಲ್ಲೇ ಕಣ್ಣಿಟ್ಟು ನೋಡಬೇಡ ಹಿಂಗ ಚಿನ್ನಅಂತರಂಗದ ಅರಮನೆಯಲಿ ನೀನೇ ರನ್ನನಿನ್ನಪ್ಪುಗೆಯ ಸಂಭ್ರಮ ನನಗಿರಲಿ ಚೆನ್ನನಿನ್ನ ಪ್ರೀತಿಯ ಸಿರಿಯಲಿ ಸಂತಸದ ಬಣ್ಣ ನೀನೀರದ ಕ್ಷಣ ಬೇಡವೆನಗೆ ಬದುಕಲಿಸದಾ ನಿನ್ನ ಪಿಸುಮಾತಿನ ಸೊಬಗಿರಲಿಸಪ್ತಸ್ವರ ಸಂಗೀತದ ಸಂಗಮದಂತಿರಲಿನಿನ್ನ ಆರಾಧನೆಯಲಿ ನನಗೆ ಆತ್ಮಸಂತೃಪ್ತಿ ಸಿಗಲಿ

Read More

ಎಷ್ಟು ವಿಚಿತ್ರ ಈ ಜೀವನ ಮಗು ಹುಟ್ಟಿದಾಗ ಎಲ್ಲರೂ ಕೇಳುವುದು ಒಂದೇ ಮಾತು ಅದೆನೆಂದರೆ ಮಗು ತೂಕ ಎಷ್ಟು?ಒಂದೂವರೆ ಕೆ ಜೀ ಅಥವಾ ಎರಡರ ಹತ್ತಿರ ಅಂದರೆ ಅಯ್ಯೋ ತುಂಬಾ ವೀಕ್ ಇದೆ ಮಗು ಅಂತಾರೆ.ಎರಡೂವರೆ ,ಮುಕ್ಕಾಲು ಅಂದರೆ,ಆಹಾ!! ಗುಂಡು ಗುಂಡಾದ ಚಂದದ ಮಗು ಅಂತಾರೆ. ಬೆಳೆಯುತ್ತಿರುವಾಗ,ಹೆಣ್ಣು ಮಗು ಇರಲಿ ಗಂಡಿರಲಿ ಗುಂಡು ಗುಂಡಾಗಿದ್ದರೆ ಚಂದ ಚಂದ ಅಂತ ಹೊಗಳುತ್ತಾರೆ ಜನ.ದುಂಡಗಿನ ಮಕ್ಕಳನ್ನು ಎಲ್ಲರೂ ಇಷ್ಟ ಪಡುತ್ತಾರೆ.ಆದರೆ ಸಮಯಕ್ಕೆ ಸರಿಯಾಗಿ ಕಾಳಜಿ ವಹಿಸದಿದ್ದರೆ ಅದು ಬೊಜ್ಜಾಗಿ ಪರಿವರ್ತನೆಗೊಳ್ಳುತ್ತದೆ.ಹರೆಯಕ್ಕೆ ಬರುತ್ತಿದ್ದಂತೆ ಅಯ್ಯೋ ,ಆ ಹುಡುಗಿ ತುಂಬಾ ದಪ್ಪ, ಯಾರಪ್ಪಾ ಈಕೆನ್ನ ಮದುವೆ ಆಗೋದು.. ಸ್ವಲ್ಪ ತೂಕ ಇಳಿಸಿಕೊಳ್ಳಬಾರದ ಅಂತ.ಪಾಪ ಆಕೆ ಆರೋಗ್ಯವಾಗಿದ್ದರೂ ಕೂಡಇನ್ನು ಗಂಡನಿಗೆ ಮನೇಲಿ ಚಪಾತಿ ಮತ್ತು ಹೆಂಡತಿ ಎರಡೂ ತೆಳ್ಳಗಿರಬೇಕು. ಒಂದು ಕಾಲದಲ್ಲಿ ಗುಂಡಗಿದ್ದವರಿಗೇ ಹೊಗಳಿಕೆ ಬರುತಿತ್ತು. ವಾವ್ ಅತ್ತೆ ಮನೆಯವರು ಬಹಳ ಚೆನ್ನಾಗಿ ನೋಡಿಕೊಳ್ತಾ ಇದ್ದಾರೆ ಅನ್ನಿಸತ್ತೆ. ನೋಡು ಹೇಗೆ ಗುಂಡ್ ಗುಂಡಗೆ ಆಗಿದ್ದಾಳೆ ಅಂತ ಶಭಾಷ್ಗಿರಿ ಕೊಡ್ತಾ…

Read More

ಆಲಮಟ್ಟಿ: ಗೋವುಗಳನ್ನು ಕಸಾಯಿಕಾನೆಗೆ ಕಳುಹಿಸಲು ಪ್ರೋತ್ಸಾಹ ನೀಡುವ ರಾಷ್ಟ್ರಕ್ಕೆ ಹಾನಿ ಸಂಭವಿಸುತ್ತದೆ, ಗೋ ರಕ್ಷಣೆಯಿಂದ ದೇಶ ಮಂಗಲವಾಗುತ್ತದೆ ಎಂದು ಉತ್ತರಾದಿಮಠದ ಶ್ರೀ ಸತ್ಯಾರ್ಥತೀರ್ಥ ಶ್ರೀಪಾದಂಗಳವರು ಹೇಳಿದರು.ಯಲಗೂರದ ಪ್ರಮೋದಾತ್ಮ ಗೋಶಾಲೆಯಲ್ಲಿ ಮೂರ್ತಿ ಫೌಂಡೇಶನ್ ನೀಡಿದ 1.5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ಗೋಶಾಲೆಯ ನೂತನ ಕಟ್ಟಡ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.ಗೋವಿನ ಪ್ರತಿ ಅಂಗಗಳಲ್ಲಿಯೂ ದೇವತೆಗಳು ನೆಲೆಸಿದ್ದಾರೆ ಎಂದರು.ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಸುಧಾಮೂರ್ತಿ ಅವರು ಈ ಗೋಶಾಲೆಯನ್ನು, ಹೆಚ್ಚುವರಿ ಕೊಠಡಿಯನ್ನು ಕಟ್ಟಿಸಿಕೊಟ್ಟಿದ್ದಾರೆ. ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಡುವ ಜತೆಗೆ, ಅಂಗವಿಕಲರಿಗೆ, ಎಲ್ಲಾ ವರ್ಗದ ಜನರಿಗೆ ಶೈಕ್ಷಣಿಕವಾಗಿ, ವೈದ್ಯಕೀಯವಾಗಿ, ಸಾಮಾಜಿಕವಾಗಿ ಸಹಾಯ ಮಾಡಿ ಅವರನ್ನು ಮೇಲೆತ್ತುವ ಕಾರ್ಯ ಮಾಡಿದ್ದಾರೆ ಎಂದರು.ಪಾವಗಡ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಜಪಾನಂದಜೀ ಮಹಾರಾಜರು ಮಾತನಾಡಿ, ರಾಜ್ಯದ ಮೂರು ಕಡೆ ಗೋಶಾಲೆ ತೆರೆದು ಸುಮಾರು 10000 ಕ್ಕೂ ಅಧಿಕ ಗೋವುಗಳನ್ನು ರಕ್ಷಿಸಿ ಸಾಕಲಾಗುತ್ತಿದೆ. ಇದಕ್ಕೆಲ್ಲಾ ಹಿಂದಿನ ಪ್ರೇರಕ ಶಕ್ತಿ ಸುಧಾಮೂರ್ತಿಯವರು ಎಂದರು.ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮಾತನಾಡಿ, ಪ್ರತಿಯೊಬ್ಬರು ಗೋಗ್ರಾಸಕ್ಕಾಗಿ…

Read More

ಚಡಚಣ: ವೃದ್ಧೆಯೊಬ್ಬಳಿಗೆ ಬದುಕಿರುವಾಗಲೇ ಮರಣ ಪತ್ರ ನೀಡಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡ ವಿಚಿತ್ರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.ಈ ಪ್ರಕರಣದ ಹಿಂದೆ ಸಂಬಂಧಿಕರು ವೃದ್ಧೆಯ ಆಸ್ತಿ ಲಪಟಾಯಿಸುವ ಕುತಂತ್ರ ಅಡಗಿದೆಯೋ ಅಥವಾ ಇದಕ್ಕೆ ಜನನ ಮತ್ತು ಮರಣ ಪತ್ರ ನೋಂದಣಿ ಕೇಂದ್ರದ ಅಧಿಕಾರಿಗಳ ಎಡವಟ್ಟು ಕಾರಣವೊ ಎನ್ನುವುದು ಬರಲಾಗಬೇಕಿದೆ.ಸಮೀಪದ ದೇವರ ನಿಂಬರಗಿ ಗ್ರಾಮದ 60 ವರ್ಷದ ಸಾವಿತ್ರಿ ರಾಮಾಗುಂಡ ಮಾಳಿ ಎಂಬವಳಿಗೆ ಚಡಚಣ ಜನನ ಮತ್ತು ಮರಣ ನೋಂದಣಿ ಇಲಾಖೆ ಅಧಿಕಾರಿಗಳು ಅವಳು ಬದುಕಿರುವಾಗಲೇ ಅವಳಿಗೆ ಮರಣ ಪತ್ರ ನೀಡಿ ಅಚ್ಚರಿ ಮತ್ತು ಆತಂಕ ಮೂಡಿಸಿದ್ದಾರೆ. ವೃದ್ದೆ ಸಾವಿತ್ರಿ ಮಾಳೆ ತಮ್ಮ ತಾಯಿಯ ಮರಣ ಪತ್ರ ಪಡೆಯಲು ಕಚೇರಿಗೆ ಹೋದಾಗ ಅಧಿಕಾರಿಗಳು ನೀವು 12/3/2001ರಲ್ಲಿ ನಿಧನರಾಗಿದ್ದೀರಿ ಎಂದು ಅವಳ ಮರಣ ಪತ್ರವೇ ನೀಡಿದ್ದಾರೆ. ಇದರಿಂದ ಆಘಾತಕ್ಕೆ ಒಳಗಾದ ಸಾವಿತ್ರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಸಾವಿತ್ರಿ ಮೂಲತಃ ಹೊನ್ನಳ್ಳಿ ಗ್ರಾಮದವರು. ಇವರ ತಂದೆಗೆ ಒಬ್ಬಳೇ ಮಗಳು. ತಂದೆ ನಿಧನಾನಂತರ ಅವರ 12 ಎಕರೆ…

Read More

ಶಾಸಕ ಯತ್ನಾಳರಿಗೆ ಬೀದರ TO ಚಾಮರಾಜವರೆಗೆ ಪ್ರಭಾವ | ಎಲ್ಲಿಂದ ಸ್ಪರ್ಧಿಸಿದರೂ ಗೆಲ್ಲುವ ಶಕ್ತಿ ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ರಾಜ್ಯದ ಪ್ರಭಾವಿ ನಾಯಕರು. ಬೀದರನಿಂದ ಚಾಮರಾಜನಗರದವರೆಗೂ ಅವರ ಪ್ರಭಾವವಿವೆ. ವಿಜಯಪುರನಗರ ಕ್ಷೇತ್ರ ಬಿಟ್ಟು ಜಿಲ್ಲೆಯ ಬೇರೆ ಕ್ಷೇತ್ರದಿಂದ ಅವರು ಸ್ಪರ್ಧಿಸಿದರೆ ಗೆಲ್ಲುವುದು ಖಚಿತ. ಕಾರಣ ಪಕ್ಷದ ವರಿಷ್ಠರು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರಿಗೆ ನಗರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿಯ ಮಾಜಿ ಕಾರ್ಪೋರೇಟರಗಳು ಮತ್ತು ಪದಾಧಿಕಾರಿಗಳು ಪ್ರತಿಪಾದಿಸಿದರು.ಶುಕ್ರವಾರ ನಗರದಲ್ಲಿ ನಡೆದ ಜಂಟಿ ಸುದ್ದಿಗೊಷ್ಠಿಯಲ್ಲಿ ಅವರು ಮಾತನಾಡಿದರು.ವಿಜಯಪುರ ನಗರಾಭಿವೃದ್ಧಿ ಪ್ರಾಧಕಾರದ ಮಾಜಿ ಅಧ್ಯಕ್ಷ ಹಾಗೂ ಪಕ್ಷದ ಜಿಲ್ಲಾ ಖಜಾಂಚಿ ಭೀಮಾಶಂಕರ ಹದನೂರ ಮಾತನಾಡಿ, ಅಪ್ಪು ಪಟ್ಟಣಶೆಟ್ಟಿ ಅವರಿಗೆ ಪಕ್ಷವು ಎರಡು ಬಾರಿ ಸ್ಪರ್ಧೆಗೆ ಅವಕಾಶ ನಿರಾಕರಿಸಿದರೂ ಅವರು ಪಕ್ಷದ ನಿರ್ಣಯಕ್ಕೆ ಬದ್ಧರಾಗಿ ಕಾರ್ಯಕರ್ತರನ್ನು ಹುರಿದುಂಬಿಸುತ್ತ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡರು. ಎಂದೂ ಜಾತಿಗಳ ನಡುವೆ ತಾರತಮ್ಯ ಮಾಡದೇ ಎಲ್ಲ ಸಮುದಾಯಗಳಂದಿಗೆ ಅನೋನ್ಯತೆಯಿಂದ ಇದ್ದವರು. ಅವರಿಗೆ ಈ…

Read More

ವಿಜಯಪುರ: ಕಳೆದ ನಾಲ್ಕಾರು ದಿನಗಳಿಂದ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರವಾಗಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣದ ಬೆಂಬಲಿಗರ ನಡುವೆ ಪತ್ರಿಕಾ ಹೇಳಿಕೆಗಳ ಸಮರ ನಡೆದಿದ್ದು ಅದರ ಮುಂದುವರಿದ ಭಾಗವಾಗಿ ಇಂದೂ (ಏ.೭) ಸಹ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗರಿAದ ಸುದ್ದಿಗೊಷ್ಟಿ ನಡೆಯಿತು.ಶಾಸಕ ಯತ್ನಾಳ ಮತ್ತು ಮಾಜಿ ಸಚಿವ ಪಟ್ಟಣಶೆಟ್ಟಿಯವರ ಬೆಂಬಲಿಗರ ಈ ಹಿಂದಿನ ಎರಡು ಸುದ್ದಿಗೋಷ್ಠಿಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದಲೇ ಕೂಡಿದ್ದವು. ತಮ್ಮ ನಾಯಕರಿಗೆ ಪಕ್ಷದ ಟಿಕೆಟ್ ದೊರೆಯದಿದ್ದರೆ ತಟಸ್ಥರಾಗುಳಿಯುವ ಎಚ್ಚರಿಕೆ ಹೊಂದಿದ್ದವು. ಪರಸ್ಪರ ಕಾಲೆಳೆಯುವ ವ್ಯಂಗ್ಯೋಕ್ತಿಗಳಿAದ ಕೂಡಿದ್ದವು. ಆದರಿಂದು ಅದಕ್ಕೆ ಅಪವಾದವೆಂಬAತೆ ಅಂತಹ ಯಾವ ಚಟುವಟಿಕೆಯೂ ಕಂಡು ಬರದೆ ಈರ್ವರೂ ನಾಯಕರ ನಡುವಿನ ಶೀತಲ ಸಮರ ತಹಬದಿಗೆ ಬಂದಿದೆ ಎಂಬ ಲಕ್ಷಣಗಳು ಗೋಚರವಾಗಿದ್ದಂತೂ ನಿಜ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಪ್ಪು ಬೆಂಬಲಿಗರು ಮತ್ತು ಮಾಜಿ ಕಾರ್ಪೊರೇಟರ್‌ಗಳು ಶಾಸಕ ಯತ್ನಾಳ ಅವರೂ ತಮ್ಮ ನಾಯಕರು. ಅವರೊಬ್ಬ ರಾಜ್ಯದ ಪ್ರಮುಖ ನಾಯಕ. ಜಿಲ್ಲೆಯಲ್ಲಿ ತಮ್ಮ ನಾಯಕ ಅಪ್ಪು…

Read More

ದೇವರಹಿಪ್ಪರಗಿ: ಸಕಲ ಜೀವಿಗಳಿಗೆ ಲೇಸನ್ನು ಬಯಸುವವನೇ ಪರಮಾತ್ಮ ಎನ್ನುವಂತೆ ಈ ನಾಡಿನ ಒಳಿತಿಗೆ ಈ ಭೂಲೋಕದಲ್ಲಿ ಉದಯಿಸಿದ ದೇವಾನುದೇವತೆಗಳಲ್ಲಿ ಅಫಜಲಪುರ ತಾಲ್ಲೂಕಿನ ಘತ್ತರಗಿಯ ಪುರದೊಡತಿ ಭಾಗ್ಯವಂತಿ ಮಾತೆಯು ಕೂಡಾ ಅಗ್ರಗಣ್ಯಳಾಗಿದ್ದಾಳೆ ಎಂದು ಚಿಣಮಗೇರಾ ಮಹಾಮಠದ ಶ್ರೀ ಶಿವಶರಣಯ್ಯ ಪೂಜ್ಯರು ಹೇಳಿದರು.ಅವರು ದೇವರಹಿಪ್ಪರಗಿ ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ಐದೇಶಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಘತ್ತರಗಿ ಭಾಗ್ಯವಂತಿ ದೇವಿಯ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಭೀಮಾ ನದಿ ತೀರದಲ್ಲಿ ನೆಲೆಸಿ ನಾಡಿನ ಭಕ್ತರ ಹರಕೆ ಆಶೋತ್ತರಗಳನ್ನು ಈಡೇರಿಸುವಲ್ಲಿ ಘತ್ತರಗಿ ಭಾಗ್ಯವಂತಿ ದೇವಿಯು ನಿರತರಾಗಿದ್ದಾಳೆ. ಜೊತೆಗೆ ನಾವೆಲ್ಲರೂ ಸಂಸ್ಕಾರವAತರಾಗಿ ಬಾಳಿ ಸಂಸ್ಕಾರಯುತ ಸಮಾಜವನ್ನು ಕಟ್ಟಬೇಕಾಗಿದೆ. ಮೊಬೈಲ್ ಹಾವಳಿಯಿಂದಾಗಿ ಇಂದು ಸಂಸ್ಕಾರ ಕಡಿಮೆಯಾಗಿದೆ. ಹಿರಿಯರು ಮಕ್ಕಳಿಗೆ ಸಂಸ್ಕಾರ ನೀಡಲು ತಮ್ಮ ಸಮಯವನ್ನು ಮೀಸಲಿಡಬೇಕು. ಸಂಪ್ರದಾಯಗಳನ್ನು ಕಾಟಾಚಾರಕ್ಕಾಗಿ ಪಾಲಿಸದೇ ಆಚಾರ ವಿಚಾರಗಳ ಉನ್ನತೀಕರಣಕ್ಕಾಗಿ ಸಂಪ್ರದಾಯಗಳನ್ನು ಉಳಿಸಿ ಬೆಳೆಸಿ ಈ ನಾಡಿನ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕಾಗಿದೆ ಎಂದು ಶಿವಶರಣಯ್ಯ ಶ್ರೀಗಳು ಹಿತವಚನ ಹೇಳಿದರು.ಈ ಸಂದರ್ಭದಲ್ಲಿ ಗವಾಯಿಗಳಾದ ಸಿದ್ದರಾಮ…

Read More

ಕೊಲ್ಹಾರ: ಪಟ್ಟಣದ ದಿಗಂಬರೇಶ್ವರ ಸಂಸ್ಥಾನ ಮಠದ ದಿಗಂಬರೇಶ್ವರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿAದ ಗುರುವಾರ ದಿವಸ ತಡರಾತ್ರಿ ಜರುಗಿತು.ಅಂದು ನಸುಕಿನ ಜಾವ ೪ ಗಂಟೆಯಿAದ ಮುಂಜಾನೆ ೯ ಗಂಟೆಯವರೆಗೆ ತಮ್ಮ ಇಷ್ಟಾರ್ಥ ಸಿದ್ದಿಸಿದ್ದಕ್ಕಾಗಿ ಹಾಗೂ ಹರಕೆಯನ್ನು ತೀರಿಸಲು ಧೀರ್ಘ ದಂಡ ಪ್ರಣಾಮ ಸೇವೆಯನ್ನು ಭಕ್ತರು ಸಲ್ಲಿಸಿದರು. ದಿಗಂಬರೇಶ್ವರ ಮಠದ ರಥದ ಕಳಸಾರೋಹಣ ನಡೆದ ಬಳಿಕ ಸಾಯಂಕಾಲ ಬೀಳಗಿ ತಾಲೂಕಿನ ಡವಳೇಶ್ವರ ಗ್ರಾಮದ ಭಕ್ತರು ತಂದ ತೇರಿನ ಹಗ್ಗದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠಕ್ಕೆ ಆಗಮಿಸಿತು.ನಂತರ ಭಕ್ತರ ಉದ್ಘೋಷದೊಂದಿಗೆ ಹಷೋದ್ಘಾರಗಳೊಂದಿಗೆ ಪೀಠಾಧಿಕಾರಿಗಳಾದ ಕಲ್ಲಿನಾಥ ದೇವರು ಮೂರ್ತಿಯೊಂದಿಗೆ ರಥದಲ್ಲಿ ಕುಳಿತುಕೊಂಡ ಬಳಿಕ ತೇರು ಎಳೆಯುವ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಭಕ್ತರು ರಥೋತ್ಸವಕ್ಕೆ ಉತ್ತತ್ತಿ ಹಾಗೂ ಬಾಳೆ ಹಣ್ಣುಗಳನ್ನು ಹಾರಿಸುವ ಮೂಲಕ ಭಕ್ತಿ ಸೇವೆ ಸಲ್ಲಿಸಿದರು. ಅತ್ಯಂತ ಜಾಗೃತಿಯಿಂದ ರಥೋತ್ಸವ ನೆರವೇರಿತು.ಮಠಾಧೀಶರು, ಸತ್ಯಜೀತ ಶಿವಾನಂದ ಪಾಟೀಲ, ಕಲ್ಲು ದೇಸಾಯಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಚನಮಲ್ಲಪ್ಪ ಗಿಡ್ಡಪ್ಪಗೋಳ,…

Read More