ಕೊಲ್ಹಾರ: ಪ್ರತಿಯೊಬ್ಬ ಮಾನವನು ಸಮಾಜದಲ್ಲಿ ಬದುಕುವಾಗ ಸಂಸ್ಕಾರ, ಸಂಸ್ಕೃತಿ, ಧರ್ಮ ಆಚರಣೆ, ನಡೆ ನುಡಿಯಲ್ಲಿ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಕುಟುಂಬ ವ್ಯವಸ್ಥೆಯನ್ನು ಉತ್ತುಂಗ ಶಿಖರಕ್ಕೆ ಒಯ್ಯುವ ಉದಾತ್ತ ಚಿಂತನೆಯ ಮನೋಭಾವನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಬೇಲೂರು & ಕೊಲ್ಹಾರ ಹಿರೇಮಠದ ಪೀಠಾಧೀಕಾರಿ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಶುಕ್ರವಾರ ಹಿರೇಮಠದಲ್ಲಿ ಹಮ್ಮಿಕೊಂಡ ವಿಶ್ವ ಮಾನವ ದಿನಾಚರಣೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಯುವ ಸಮೂಹ ಮಧ್ಯ ಸೇವನೆ, ಮಾದಕ ದ್ರವ್ಯ, ಬೀಡಿ ಸಿಗರೇಟ ತಂಬಾಕು ಭಂಗಿ ಸೇವನೆ ಮಾಡುವದರ ಜೊತೆಗೆ ವಿವಿಧ ತರಹದ ಜೂಜಾಟಗಳಲ್ಲಿ ತೊಡಗಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವವರಲ್ಲದೇ ಕುಟುಂಬದ ನೆಮ್ಮದಿಯನ್ನು ಕಳೆಯುತ್ತಿರುವದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದರು.
ದುಶ್ಚಟಗಳಿಗೆ ಬಲಿಯಾಗಿ ತಾವು ಮಾಡಿದ ದುಡಿಮೆಯ ಹಣ ತಂದೆ ತಾಯಿಗಳ ಕೂಡಿಟ್ಟ ಹಣ ವ್ಯಯವಾಗುವದಲ್ಲದೇ ದೇಹಾರೊಗ್ಯ ಮಾನಸಿಕ ಖಿನ್ನತೆ ಬೌದ್ದಿಕ ಆರೋಗ್ಯವನ್ನು ಕೆಡಿಸಿಕೊಂಡು ಕ್ಷಣ ಕ್ಷಣಕ್ಕೂ ದುಖಃ ಸಂಕಟದ ಯಾತನೆ ಅನುಭವಿಸುವರು. ಅಷ್ಟೇ ಅಲ್ಲದೇ ಮನೆಗಳಿಗೆ ಮಹಾಮಾರಿಯಾಗಿ ಸಮಾಜಕ್ಕೆ ಕಂಟಕ ಪ್ರಾಯರಾಗಿ ಕೊನೆಗೊಮ್ಮೆ ತಮ್ಮ ತಲೆ ಮೇಲೆ ತಾವೇ ಚಪ್ಪಡಿ ಎಳೆದುಕೊಳ್ಳುವ ಹೀನಾಯ ಸ್ಥಿತಿಗೆ ತಲುಪಿಸುವಂತಹ ಕೆಟ್ಟ ಚಟಗಳಿಂದ ಪ್ರತಿಯೊಬ್ಬ ವ್ಯಕ್ತಿಗಳು ದೂರವಿದ್ದು ಸಮಾಜದಲ್ಲಿ ಸುಂದರ ಸ್ವಚ್ಚಂದ ಬದುಕನ್ನು ಸಾಗಿಸುವ ಮಾನವರಾಗಿ ಜೀವಿಸಲು ಕಲಿಯಬೇಕೆಂದು ಹೇಳಿದರು.
ನಮ್ಮ ನಾಡಿನ ಸಂತ ಶ್ರೇಷ್ಠರಾದ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಲಿಂಗೈಕ್ಯದ ವರ್ಷಾಚರಣೆಯೂ ಕೂಡ ಹೊಸ ವರ್ಷದಲ್ಲಿಯೇ ಬರುವುದರಿಂದ ಅವರಿಗೆ ಗೌರವ ತರಲು ಸಮಾಜದ ಪ್ರತಿಯೊಬ್ಬರು ಶ್ರಮವಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ಸಿದ್ದರಾಗಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ ಎಂದರು.
ಈ ವೇಳೆ ಶ್ರೀಗಳ ಪೂರ್ವಾಶ್ರಮದ ತಂದೆಯವರಾದ ಮುರುಘೇಂದ್ರ ಮಹಾಸ್ವಾಮಿಗಳು, ಕೊಲ್ಹಾರ ತಾಲೂಕು ಹೋರಾಟ ಸಮೀತಿ ಅಧ್ಯಕ್ಷ ಈರಣಗೌಡ ಕೋಮಾರ, ವ್ಯಸನಮುಕ್ತ ಸಮಾಜ ನಿರ್ಮಾಣ ಹೋರಾಟ ಸಮೀತಿಯ ಪರಶುರಾಮ ಗಣಿ, ಸಂಜೀವ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಡಿ :ಪ್ರಭುಕುಮಾರ ಶ್ರೀ
Related Posts
Add A Comment

