Author: editor.udayarashmi@gmail.com

ಚಡಚಣ: ಪಟ್ಟಣದ ಸಂಗಮೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದ ಹತ್ತು ವಿದ್ಯಾರ್ಥಿಗಳಿಗೆ ಸಂಸ್ಥೆಯು ಉಚಿತ ಶಿಕ್ಷಣ ನೀಡಲಿದೆ ಎಂದು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಎಸ್.ಎಸ್. ಚೋರಗಿ ಹೇಳಿದರು.ಮಹಾವಿದ್ಯಾಲಯ ನಡೆಸಿದ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಮೊದಲ ಹತ್ತು ಸ್ಥಾನ ನಡೆದ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಮನೋಜ ಕಟಗೇರಿ ಮಾತನಾಡಿ, ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳು ಶಿಕ್ಷಣ ಕಲಿತ ಸಂಸ್ಥೆ ಇದಾಗಿದ್ದು, ಜಾಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕರು ಹತ್ತು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ನಿರ್ಧಾರ ಕೈಕೊಂಡಿದ್ದಾರೆ ಎಂದರು.ವಿದ್ಯಾರ್ಥಿಗಳಾದ ಸ್ನೇಹಾ ಪಾಟೀಲ, ಮಲ್ಲಿಕಾರ್ಜುನ ಸದ್ದಲಗಿ, ಸುಹಾನಿ ಭೋಹಿ, ಬಸವರಾಜ ಕೋಳಿ, ಐಶ್ವರ್ಯಾ ಪಾಟೀಲ, ಸಂತೋಷ ಹಾವಿನಾಳ, ಲಕ್ಷ್ಮೀ ನಂದೂರ, ಆಕಾಶ ಬಗಲಿ, ಮಲ್ಲಿಕಾ ಕಂಟಿಕರ, ಉಪನ್ಯಾಸಕರಾದ…

Read More

ಬೆಂಗಳೂರು: ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಹಾಗೂ ಆಗಾಗ ಕಾಂಗ್ರೆಸ್‌ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿರುವ ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಅವರು ಅಡ್ಡ ಮತದಾನ ಮೂಲಕ ಮೂಲಕ ಬಿಜೆಪಿ ಹಾಗೂ ಜೆಡಿಎಸ್‌ ಗೆ ಬಿಗ್‌ ಶಾಕ್‌ ನೀಡಿದ್ದಾರೆ.ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್‌ ಸಿ ಸೋಮಶೇಖರ್‌ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆಂದು ತಿಳಿದುಬಂದಿದೆ.ಇನ್ನು ಎಸ್‌ ಟಿ ಸೋಮಶೇಖರ್‌ ಅವರು ಕಾಂಗ್ರೆಸ್‌ ಗೆ ಅಡ್ಡ ಮತದಾನ ಮಾಡಿದ್ದಾರೆ ಎಂದು ಬಿಜೆಪಿ ಚುನಾವಣಾ ಏಜೆಂಟ್‌ರೊಬ್ಬರು ಖಚಿತಪಡಿಸಿದ್ದಾರೆ.ಮತದಾನಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ್ದ ಸೋಮಶೇಖರ್ ಅವರು, “11 ವರ್ಷದಿಂದ ಎಲ್ಲರಿಗೂ ಮತ ಹಾಕಿದ್ದೇನೆ. ಆದರೆ, ರಾಜ್ಯಸಭೆಗೆ ಆಯ್ಕೆ ಆದವರು ಒಂದು ರೂಪಾಯಿ ಅನುದಾನವನ್ನೂ ಕೊಟ್ಟಿಲ್ಲ. ನೇರ ನೇರ ಹೇಳುತ್ತೇನೆ, ನಾನು ಈ ಬಾರಿ ಆತ್ಮಸಾಕ್ಷಿಯಂತೆ ಮತ ಹಾಕುತ್ತೇನೆ.‌ ಕಳೆದ ಬಾರಿ (ಹಾಲಿ ಹಣಕಾಸು ಸಚಿವೆ) ನಿರ್ಮಲಾ ಸೀತಾರಾಮನ್ ಅವರಿಗೆ ಮತ ಹಾಕಿದ್ದೆ. ಆಮೇಲೆ ನಿರ್ಮಲಾ ಸೀತಾರಾಮನ್ ನನಗೆ ಭೇಟಿಗೆ ಅಪಾಯಿಟ್ಮೆಂಟ್ ಕೂಡ ಕೊಡಲೇ ಇಲ್ಲ,” ಎಂದು…

Read More

ಸಿಂದಗಿ: ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಮಿತಿಗೆ ನಿಖಟ ಪೂರ್ವ ಅಧ್ಯಕ್ಷ ರಾಜಶೇಖರ ಕೂಚಬಾಳ ರಾಜಿನಾಮೆ ಸಲ್ಲಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು, ನಾನು ನೇಮಿತ ಅಧ್ಯಕ್ಷನಾಗಿ ತೃಪ್ತಿಕರವಾಗಿ ಕಾರ್ಯನಿರ್ವಹಿಸಿದ್ದೇನೆ. ಜಿಲ್ಲಾಧ್ಯಕ್ಷರ ಆದೇಶದಂತೆ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡಿದ್ದರೂ ನಿಕಟ ಪೂರ್ವ ಅಧ್ಯಕ್ಷನಾಗಿ ಪರಿಷತ್ತಿನ ಹತ್ತು ಹಲವಾರು ಕಾರ್ಯ ಚಟುವಟಿಕೆಗಳನ್ನು ಪ್ರಸ್ತುತ ತಾಲೂಕಾಧ್ಯಕ್ಷರ ಬೆಂಬಲವಾಗಿ ನಿಂತು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಆದರೆ ಇತ್ತೀಚಿನ ದಿನಮಾನದಲ್ಲಿನ ಪರಿಷತ್ತಿನ ಬೆಳವಣಿಗೆಗೆ ಬೆಸತ್ತು ಸ್ವ ಇಚ್ಚೆಯಿಂದ ರಾಜೀನಾಮೆಯನ್ನು ಜಿಲ್ಲಾಧ್ಯಕ್ಷರಿಗೆ ಸಲ್ಲಿಸುತ್ತಿದ್ದೇನೆ. ನನ್ನೊಂದಿಗೆ ತಾಲೂಕು ಗೌರವ ಕಾರ್ಯದರ್ಶಿ ಶಿವುಕುಮಾರ ಕಲ್ಲೂರ, ಸಂಘಟನಾ ಕಾರ್ಯದರ್ಶಿ ರಮೇಶ ಪೂಜಾರಿ, ದತ್ತಿ ಸಂಚಾಲಕ ಸಿದ್ದಲಿಂಗ ಕಿಣಗಿ, ಗೌರವ ಕೋಶಾಧ್ಯಕ್ಷ ಖಾದರಬಾಷಾ ವಾಲಿಕಾರ, ಪ್ರಚಾರ ಸಮಿತಿಯ ದುಂಡಪ್ಪ ಸೊನ್ನದ, ಕಾರ್ಯಕಾರಿಣಿ ಸದಸ್ಯ ಭೀಮಣ್ಣ ಹೆರೂರ ಯರಗಲ್ಲ ಬಿ.ಕೆ ಅವರು ರಾಜೀನಾಮೆಯನ್ನು ಸಲ್ಲಿಸುತಿದ್ದಾರೆ. ಇಲ್ಲಿಯವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಟ್ಟ ಜಿಲ್ಲಾಧ್ಯಕ್ಷರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಕೂಚಬಾಳ ತಿಳಿಸಿದ್ದಾರೆ.

Read More

ಸಿದ್ಧಾಪುರ ಶಿವಕುಮಾರ್ ನಿಮಗೊಬ್ಬ ಅದ್ಭುತ ಕಲಾವಿದ ವ್ಯಕ್ತಿಯನ್ನು ಪರಿಚಯಿಸುತ್ತೇನೆ ಎಂದು ಟಿ.ಎಂ.ವೀರೇಶ್ ಅವರು ಹೇಳಿದಾಗ ಖುಷಿ ಕುತೂಹಲ ಒಟ್ಟಿಗೆ ಆಯ್ತು. ಯಾಕೆಂದರೆ ಅವರೊಬ್ಬ ಸಹೃದಯಿ ಕಲಾವಿದರಾಗಿ ಅವರದು ಯಾವಾಗಲೂ ತೀಕ್ಷ್ಣ ಗ್ರಹಿಕೆಯ ಆಯ್ಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅವರ ಮಾತು ನನ್ನಲ್ಲಿ ಕುತೂಹಲ ಹೆಚ್ಚಿಸಿತು. ಒಂದು ಸಮಯ ಪಿಕ್ಸ್ ಮಾಡಿಕೊಂಡು ನನ್ನೊಂದಿಗೆ ಮತ್ತೊಬ್ಬ ಚಿತ್ರಕಲಾವಿದರಾದ ವೆಂಕಟೇಶ ರೆಡ್ಡಿಯವರನ್ನು ಆ ಕಲಾವಿದರ ಹತ್ತಿರ ಕರೆದುಕೊಂಡು ಹೋದರು. ಮೊದಲ ನೋಟದಲ್ಲೆ ಕಲಾವಿದನ ಕಳೆ ಕಂಡಿತು. ಅವರು ನಾನು ವಿಜಯಕುಮಾರ್ ಎಂದು ಸಹಜ ಸೌಜನ್ಯದಿಂದ ಪರಿಚಯಿಸಿಕೊಂಡರು. ಅವರೊಬ್ಬ ಸಾದಾರಣ ಶಿಲ್ಪ ಕಲಾವಿದರಲ್ಲ ಎಂಬುದನ್ನು ನಮ್ಮೆದುರು 31ಅಡಿ ಎತ್ತರದ ಸಿಮೆಂಟಿನ ಭವ್ಯವಾದ ಧ್ಯಾನಸ್ತ ಶಿವ ಪ್ರತಿಮೆ ಸಾಕ್ಷಿಕರಿಸಿತು. ಪ್ರತಿಮೆಯ ಪ್ರತಿ ಭಾಗವೂ ಶಿವ ದೇವರ ಜೀವ ಭಾವ ತನ್ಮಯತೆ ರೋಚಕವೆನಿಸಿತು. ವಿಜಯಕುಮಾರರೊಂದಿಗೆ ಹತ್ತಾರು ಕಲಾವಿದರು ಸೇರಿ ನಿರ್ಮಿಸಿದ ಈ ಕೃತಿಯೂ ನೋಡುಗರಲ್ಲಿ ಭಕ್ತಿಭಾವವನ್ನು ಮೂಡಿಸುತ್ತದೆ. ನಮ್ಮ ವೀರೇಶ್ ಅವರಂತೂ ಪ್ರತಿಮೆ ಮುಂದೆ ಎರಡು ಕೈಜೋಡಿಸಿ ಮುಗಿಯುತ್ತ ನಿಂತು ಬಿಟ್ಟರು.…

Read More

-ಸಿದ್ಧಾಪುರ ಶಿವಕುಮಾರ್ ನಿಮಗೊಬ್ಬ ಅದ್ಭುತ ಕಲಾವಿದ ವ್ಯಕ್ತಿಯನ್ನು ಪರಿಚಯಿಸುತ್ತೇನೆ ಎಂದು ಟಿ.ಎಂ.ವೀರೇಶ್ ಅವರು ಹೇಳಿದಾಗ ಖುಷಿ ಕುತೂಹಲ ಒಟ್ಟಿಗೆ ಆಯ್ತು. ಯಾಕೆಂದರೆ ಅವರೊಬ್ಬ ಸಹೃದಯಿ ಕಲಾವಿದರಾಗಿ ಅವರದು ಯಾವಾಗಲೂ ತೀಕ್ಷ್ಣ ಗ್ರಹಿಕೆಯ ಆಯ್ಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅವರ ಮಾತು ನನ್ನಲ್ಲಿ ಕುತೂಹಲ ಹೆಚ್ಚಿಸಿತು. ಒಂದು ಸಮಯ ಪಿಕ್ಸ್ ಮಾಡಿಕೊಂಡು ನನ್ನೊಂದಿಗೆ ಮತ್ತೊಬ್ಬ ಚಿತ್ರಕಲಾವಿದರಾದ ವೆಂಕಟೇಶ ರೆಡ್ಡಿಯವರನ್ನು ಆ ಕಲಾವಿದರ ಹತ್ತಿರ ಕರೆದುಕೊಂಡು ಹೋದರು. ಮೊದಲ ನೋಟದಲ್ಲೆ ಕಲಾವಿದನ ಕಳೆ ಕಂಡಿತು. ಅವರು ನಾನು ವಿಜಯಕುಮಾರ್ ಎಂದು ಸಹಜ ಸೌಜನ್ಯದಿಂದ ಪರಿಚಯಿಸಿಕೊಂಡರು. ಅವರೊಬ್ಬ ಸಾದಾರಣ ಶಿಲ್ಪ ಕಲಾವಿದರಲ್ಲ ಎಂಬುದನ್ನು ನಮ್ಮೆದುರು 31ಅಡಿ ಎತ್ತರದ ಸಿಮೆಂಟಿನ ಭವ್ಯವಾದ ಧ್ಯಾನಸ್ತ ಶಿವ ಪ್ರತಿಮೆ ಸಾಕ್ಷಿಕರಿಸಿತು. ಪ್ರತಿಮೆಯ ಪ್ರತಿ ಭಾಗವೂ ಶಿವ ದೇವರ ಜೀವ ಭಾವ ತನ್ಮಯತೆ ರೋಚಕವೆನಿಸಿತು. ವಿಜಯಕುಮಾರರೊಂದಿಗೆ ಹತ್ತಾರು ಕಲಾವಿದರು ಸೇರಿ ನಿರ್ಮಿಸಿದ ಈ ಕೃತಿಯೂ ನೋಡುಗರಲ್ಲಿ ಭಕ್ತಿಭಾವವನ್ನು ಮೂಡಿಸುತ್ತದೆ. ನಮ್ಮ ವೀರೇಶ್ ಅವರಂತೂ ಪ್ರತಿಮೆ ಮುಂದೆ ಎರಡು ಕೈಜೋಡಿಸಿ ಮುಗಿಯುತ್ತ ನಿಂತು ಬಿಟ್ಟರು.…

Read More

ಬಿಇಓ ಕಚೇರಿಯಲ್ಲಿ ಅನಾಥವಾಗಿ ಬಿದ್ದಿರುವ ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು! *- ಚೇತನ ಶಿವಶಿಂಪಿ* ಮುದ್ದೇಬಿಹಾಳ: ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಭಯ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಂತೂ ಪರೀಕ್ಷೆ ಬರೆದು ಫಲಿತಾಂಶ ಬರೋವರೆಗೂ ಸಮಾಧಾನವಿರಲ್ಲ. ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಕೈ ಸೇರುತ್ತಿದ್ದಂತೆ ಅಬ್ಬಾ! ನನಗೆ ಇಷ್ಟು ಮಾಕ್ಸ್ ಬರುತ್ತೆ ಅಂದುಕೊಂಡಿರ್ತಾರೆ. ಆದರೆ ಫಲಿತಾಂಶ ಬಂದಾಗ ಬೇರೆನೇ ಆಗಿರುತ್ತೆ. ಕಾಣದ ಕೈಗಳ ಕೈಚಳಕದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಅಂಕದಲ್ಲಿ ಏರುಪೇರಾಗಿಬಿಟ್ಟಿರುತ್ತೆ. ಮುಗ್ಧ ಮಕ್ಕಳು ಇಲಾಖೆಯ ಮೇಲೆ ವಿಶ್ವಾಸ ಇಟ್ಟು ಪರೀಕ್ಷಾ ಕೇಂದ್ರಗಳಿಗೆ ಬಂದು ಪರೀಕ್ಷೆಗಳನ್ನು ಬರೀತಾರೆ. ಆದರೆ ಕೆಲ ಕರಾಳ ಮುಖಗಳು ತಮ್ಮ ಮಗು ಎಲ್ಲರಿಗಿಂತ ಹೆಚ್ಚಿನ ಅಂಕ ಗಳಿಸಬೇಕು ಅಂತಾ ಏನೇನೋ ಕರಾಮತ್ತನ್ನ ಮಾಡಿರ್ತಾರೆ.ಇಲಾಖೆಯವರು ಅಧಿಕಾರಿಗಳಿಗೆ ಕೆಲವು ಸುತ್ತೋಲೆಗಳನ್ನು ಕೊಟ್ಟು ಪರೀಕ್ಷೆಗಳನ್ನು ಕಟ್ಟು ನಿಟ್ಟಾಗಿ ನಡೆಸುವಂತೆ ಆದೇಶ ಮಾಡ್ತಾರೆ. ಕೆಲವು ಬಾರಿ ಕಟ್ಟು ನಿಟ್ಟಾಗಿ ಪರೀಕ್ಷೆಗಳು ನಡೆಯದೇ ಎಲ್ಲೋ ಒಂದೆಡೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಇಲಾಖೆಯ ಮರ್ಯಾದೆ ಮೂರು ಪಾಲಾದ್ರೂ ಮೇಲಾಧಿಕಾರಿಗಳು ತಪ್ಪಿತಸ್ಥರ…

Read More

ಚಡಚಣ: ಆಧ್ಯಾತ್ಮಿಕ ಪ್ರವಚನಗಳು ಮನುಷ್ಯನಿಗೆ ಮಾನಸಿಕ ನೆಮ್ಮದಿಯನ್ನು ನೀಡಿ ಸಾತ್ವಿಕ ಜೀವನ ನಡೆಸಲು ಶಕ್ತಿಯನ್ನು ನೀಡುತ್ತವೆ ಎಂದು ಕಾತ್ರಾಳದ ಗುರುದೇವ ಆಶ್ರಮದ ಅಮೃತಾನಂದ ಶ್ರೀಗಳು ಹೇಳಿದರು.ಸಮೀಪದ ಜೀರಂಕಲಗಿ ಗ್ರಾಮದಲ್ಲಿ ಹತ್ತು ದಿನಗಳವರೆಗೆ ನಡೆದ ಪ್ರವಚನ ಕಾರ್ಯಕ್ರಮದ ಕೊನೆಯ ದಿನ ಶ್ರೀಗಳು ಭಕ್ತರನ್ನು ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು.ಹತ್ತು ದಿನಗಳವರೆಗೆ ಬೆಳಗ್ಗೆ 6.30 ರಿಂದ 7.30 ರ ವರೆಗೆ ಶ್ರೀಗಳು ವಿವಿಧ ಶರಣರ ವಚನಗಳನ್ನು ಮತ್ತು ಸಿದ್ದೇಶ್ವರ ಶ್ರೀಗಳ ಜೀವನ ಮತ್ತು ಪ್ರವಚನಗಳ ಕೆಲವು ಭಾಗಗಳನ್ನು ವಿಶ್ಲೇಷಣೆ ಮಾಡುತ್ತ ಭಕ್ತರಿಗೆ ಆಧ್ಯಾತ್ಮಿಕ ಜ್ಞಾನವನ್ನು ಉಣಬಡಿಸಿದರು.ಕಿಸೆ ಇಲ್ಲದ ಸಂತ ನಾಡಿನಗುರು ಸಿದ್ದೇಶ್ವರ ಶ್ರೀಗಳ ಬದುಕು ನಮ್ಮೆಲ್ಲರಿಗೆ ಆದರ್ಶಪ್ರಾಯವಾಗಿದೆ. ನಿಸರ್ಗದಲ್ಲಿ ದೇವರನ್ನು ಕಾಣುವ ಇವರು ಅವರ ತತ್ವಾದರ್ಶ ನಮ್ಮೆಲ್ಲರಿಗೆ ಪೂರಕವಾಗಿ, ಅವರ ಪ್ರವಚನಗಳ ಧ್ವನಿ ಸುರಳಿಯನ್ನು ದಿನಂಪ್ರತಿ ಕೇಳಿ ಆನಂದಪಡೋಣ ಎಂದರು.ಕಾರ್ಯಕ್ರಮದಲ್ಲಿ ಜ್ಞಾನಯೋಗಾಶ್ರಮದ ಅನೇಕ ಶ್ರೀಗಳು ಭಾಗವಹಿಸಿ ಪ್ರತಿದಿನ ತಮ್ಮ ಪ್ರವಚನ ನೀಡಿದರು.ಜೀರಂಕಲಗಿ ಮತ್ತು ಸುತ್ತಮುತ್ತಲಿನ ನೂರಾರು ಗ್ರಾಮಗಳ ಸಾವಿರಾರು ಭಕ್ತರು ಪ್ರತಿದಿನ ಪ್ರವಚನ ಕಾರ್ಯಕ್ರಮದಲ್ಲಿ…

Read More

ಹುಣಸಗಿ: ಪಟ್ಟಣದಲ್ಲಿ ಫೆ.27ರಂದು ಬೆಳಿಗ್ಗೆ ಸುರಪುರದ ಜನಪ್ರಿಯ ಶಾಸಕರಾದ ದಿ|| ಶ್ರೀ ರಾಜಾ ವೆಂಕಟಪ್ಪ ನಾಯಕ ಅವರ ವೃತ್ತ ಪಟ್ಟಣದ ಕಾಂಗ್ರೆಸ್ ಮುಖಂಡರು ಎಲ್ಲರೂ ಸೇರಿ ವೃತ್ತ ಉದ್ಘಾಟನೆ ಮಾಡಲಾಯಿತುಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಸಿದ್ದಣ್ಣ ಮಲಗಲದಿನ್ನಿ, ಕಾಂಗ್ರೆಸ್ ಯುವ ಮುಖಂಡರು ‌ಆರ್.ಎಂ.ರೇವಡಿ, ಕರೀಂಸಾಬ ಮುನ್ಸಿ, ಬಸವರಾಜ ನೂಲಿನ್, ಸಿಧ್ಧಾರೂಡ ನೂಲಿನ್, ಖಾಸೀಂಸಾಬ ಟೊಣ್ಣೂರ, ಶಾಂತಣ್ಣ ಮಲಗಲದಿನ್ನಿ, ಮಹಾದೇವಿ ಬೇನಾಳ ಮಠ, ಖಾಜಾ ಪಟೇಲ ಹುಣಸಗಿ, ಹಾಗೂ ರವಿ ಮಲಗಲದಿನ್ನಿ, ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು, ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

Read More

ರಾಜ್ಯಸಭಾ ಚುನಾವಣೆ ಫಲಿತಾಂಶ | ಕಾಂಗ್ರೆಸ್‌ನ ಮೂವರು, ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು | ಗೆದ್ದು ಬೀಗಿದ ಕೈ ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್‌ನ ಮೂವರು ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಜಯಗಳಿಸಿದ್ದಾರೆ. ಅಚ್ಚರಿಯ ಪಲಿತಾಂಶ ನಿರೀಕ್ಷಿಸಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ತಂತ್ರ ಫಲಿಸದೆ ಹೋಗಿದೆ.ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಅಜಯ್ ಮಾಕನ್ 47, ಸೈಯ್ಯದ್ ನಾಸೀರ್ ಹುಸೇನ್ ಮತ್ತು ಜಿ ಸಿ ಚಂದ್ರಶೇಖರ್ ತಲಾ 46 ಮತಗಳನ್ನು ಪಡೆದು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ, ಪುಟ್ಟಸ್ವಾಮಿ ಗೌಡ, ಜನಾರ್ದನ ರೆಡ್ಡಿ ಮತ್ತು ದರ್ಶನ್ ಪುಟ್ಟಣ್ಣಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರು.ಬಿಜೆಪಿ ಅಭ್ಯರ್ಥಿ ನಾರಾಯಣಾಸಾ ಬಾಂಡಗೆ ಅವರು 47 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಅವರಿಗೆ ನಿರಾಸೆಯಾಗಿದೆ. ವರದಿಗಳ ಪ್ರಕಾರ, ಜೆಡಿಎಸ್‌ನ ಎಲ್ಲ ಶಾಸಕರು ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಮತ…

Read More