Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿದ್ದೇಶ್ವರ ಸ್ವಾಮೀಜಿ ಗುರುನಮನ ಮಹೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಮತ ವಿಜಯಪುರ: ಜ್ಯೋತಿ ತಾನು ಯಾವಾಗಲೂ ಪರರಿಗೆ ಬೆಳಕು ನೀಡುತ್ತದೆ. ಅದರಂತೆ ಇಡೀ ಜಗತ್ತಿನಾದ್ಯಂತ ತನ್ನ ಭಕ್ತ ಸಂಕುಲಕ್ಕೆ ಜ್ಞಾನದ ಜ್ಯೋತಿಯನ್ನು ನೀಡಿದಂತವರು ಶ್ರೀ ಸಿದ್ಧೇಶ್ವರ ಅಪ್ಪನವರು ಎಂದು ಶಾಸಕ ಬಿ. ವೈ. ವಿಜಯೇಂದ್ರ ಹೇಳಿದರು.ನಗರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಅಂಗವಾಗಿ “ಶಿಕ್ಷಣ ಹಾಗೂ ವಿಜ್ಞಾನ” ಎಂಬ ವಿಷಯದ ಕುರಿತು ಹಮ್ಮಿಕೊಂಡಿದ್ದ ೮ನೇ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸೃಷ್ಠಿಯಲ್ಲಿ ಭೂಮಿ ಬಹಳ ವಿಶಿಷ್ಟವಾದಂತದ್ದು. ಈ ಭೂಮಿಯ ಮೇಲೆ ಅನೇಕ ಜೀವ ಸಂಕುಲಗಳು ಹುಟ್ಟಿ ಜನ್ಮ ತಾಳುತ್ತವೆ. ಮಾನವ ಜನ್ಮ ದೊಡ್ಡದು ಎಂದು ದಾಸರ ಪದಗಳಲ್ಲಿ ನಾವು ಕಾಣುತ್ತೇವೆ. ಇಂತಹ ಭೂಮಿಯ ಮೇಲೆ ಕೆಲವೇ ಕೆಲವು ಶ್ರೇಷ್ಠ ಶಕ್ತಿಗಳು, ಹುಟ್ಟುತ್ತಾರೆ ಅದರಂತೆ ಈ ನಾಡಿನ ಮತ್ತು ಜಗತ್ತಿನ ಕೋಟ್ಯಾಂತರ ಜನಕ್ಕೆ ಜ್ಞಾನದ ಬೆಳಕು ನೀಡಿದಂತಹ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಅಪ್ಪನವರೂ ಸಹ ಒಬ್ಬರು ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಹಾಗೂ…
ಬಸವನಬಾಗೇವಾಡಿ: ತಾಲೂಕಿನ ನಾಗೂರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಶಾಲೆಗೆ ಡಾ.ಉಮಾಕಾಂತ ಬೋಕೆ(ಪೂಜಾರಿ) ಅವರು ಶನಿವಾರ ಎರಡು ಎಲ್ಡಿ ಟಿವ್ಹಿ ಕೊಡುಗೆಯಾಗಿ ನೀಡಿದರು.ನಂತರ ಡಾ.ಉಮಾಕಾಂತ ಬೋಕೆ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಉಪಕರಣಗಳನ್ನು ಬಳಕೆಮಾಡಿಕೊಂಡು ಉತ್ತಮ ಅಧ್ಯಯನ ಮಾಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಅನ್ನುವ ಉದ್ದೇಶದಿಂದ ನಾನು ಕಲಿತಿರುವ ಈ ಶಾಲೆಗೆ ಎರಡು ಟಿವ್ಹಿಗಳನ್ನು ಕೊಡುಗೆಯಾಗಿ ನೀಡುತ್ತಿದ್ದೇನೆ. ಇವುಗಳ ಸದುಪಯೋಗವಾಗಲಿ ಎಂದರು.ತಾಲೂಕು ವಿಕಲಚೇತನರ ಸಂಘದ ಅಧ್ಯಕ್ಷ ಬಂದೇನವಾಜ ವಾಲೀಕಾರ ಮಾತನಾಡಿದರು.ಈ ಸಂದರ್ಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರೇವಣಸಿದ್ದ ನಂದಿಹಾಳ, ಮುಖಂಡರಾದ ಬಸಪ್ಪ ಮುಳವಾಡ, ಬಸಪ್ಪ ಪೂಜಾರಿ, ಅಪ್ಪು ಮರೋಳ, ಧರ್ಮಣ್ಣ ಪೂಜಾರಿ, ಶಂಕ್ರೆಪ್ಪ ಪೂಜಾರಿ, ಮುಖ್ಯಗುರು ಸಿ.ಎಸ್.ಹಡಪದ, ಶಿಕ್ಷಕರಾದ ಶರಣಬಸು ಮಿಣಜಗಿ, ಕಾಳಗಿ, ಪಿ.ಎಸ್. ಮಂಗೊಂಡ, ಆರ್.ವ್ಹಿ.ನಾಯಕ, ಬಿ.ಬಿ.ಹಳೆಮನಿ, ಜ್ಯೋತಿ ಗಣಾಚಾರಿ, ಎಸ್.ಸಿ.ಪಾಟೀಲ ಇತರರು ಇದ್ದರು.ಇದೇ ಸಂದರ್ಭದಲ್ಲಿ ಶಾಲೆಗೆ ಟಿವ್ಹಿ ಕೊಡುಗೆಯಾಗಿ ನೀಡಿದ ಡಾ. ಉಮಾಕಾಂತ ಬೋಕೆ ಅವರನ್ನು ಎಸ್ಡಿಎಂಸಿ ಸಮಿತಿ,ಶಾಲೆಯ ಪರವಾಗಿ ಸನ್ಮಾನಿಸಲಾಯಿತು.
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣ ಪಂಚಾಯಿತಿಯ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ವಾರ್ಡ್ ನಂ.೭ ರ ಸದಸ್ಯ ಮೋದಿನಸಾಬ ಮಕಾನದಾರ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಡಿ.೨೭ ರಂದು ಜರುಗಿದ ಉಪಚುನಾವಣೆಯ ಮತಎಣಿಕೆ ಶನಿವಾರ ಸ್ಥಳೀಯ ತಹಸೀಲ್ದಾರ ಕಚೇರಿಯಲ್ಲಿ ನಡೆಯಿತು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಲೀಮ ಪತ್ತೆಶಾ ಮಕಾನದಾರ ಅವರು ೨೪೪ ಮತಗಳನ್ನು, ಜೆಡಿಎಸ್ ಅಭ್ಯರ್ಥಿ ಸಾಹೇಬಪಾಜ್ಯಾ ತೆಲಸಂಗ ಅವರು ೧೨೨ ಮತಗಳನ್ನು, ಬಿಜೆಪಿಯ ಅಭ್ಯರ್ಥಿ ಬಸಗೊಂಡಪ್ಪ ಮುತ್ತಪ್ಪನವರ ೬ ಮತಗಳನ್ನು, ಪಕ್ಷೇತರ ಅಭ್ಯರ್ಥಿ ವಾಹಿದಾಬಾನು ಆಲಮೇಲ ಅವರು ೯೩ ಮತಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು ೪೬೭ ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ೨ ಮತಗಳು ನೋಟಾಗೆ ಚಲಾವಣೆಯಾಗಿವೆ. ೨೪೪ ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿ ಸಲೀಮ ಪತ್ತೆಶಾ ಮಕಾನದಾರ ವಿಜೇತರಾಗಿದ್ದಾರೆ ಎಂದು ಚುನಾವಣಾಧಿಕಾರಿ, ತೋಟಗಾರಿಕೆ ಇಲಾಖೆಯ ಅಽಕಾರಿ ಸಿ.ಬಿ.ಪಾಟೀಲ ತಿಳಿಸಿದರು. ಮತಎಣಿಕೆ ಕಾರ್ಯ ಸಂದರ್ಭದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಶೀರಸ್ತೆದಾರ ಎ.ಎಚ್.ಬಳೂರಗಿ, ರಿಸಿಕೇತ ಇಂಗಳೆ, ಪ್ರವೀಣ ಲಮಾಣಿ, ಅನಿಲ ಅವಟಿ ಇದ್ದರು.*ಸಂಭ್ರಮಾಚರಣೆ:* ಕಾಂಗ್ರೆಸ್ ಅಭ್ಯರ್ಥಿ ವಿಜಯಶಾಲಿಯಾದ ಸುದ್ದಿ…
ಮುದ್ದೇಬಿಹಾಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಬ್ಬಿನ ಹೊಲಕ್ಕೆ ಬೆಂಕಿ ತಗುಲಿ ಸಂಪೂರ್ಣ ಬೆಳೆ ಹಾನಿಯಾದ ಘಟನೆ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.ಸಿದ್ದಯ್ಯ ರುದ್ರಯ್ಯ ಗಣಾಚಾರಿ ಮತ್ತು ಮಹೇಶ ರುದ್ರಯ್ಯ ಗಣಾಚಾರಿ ಎಂಬುವವರಿಗೆ ಸೇರಿದ್ದ ೫ ಎಕರೆ ಜಮೀನಿನಲ್ಲಿ ಬೆಳೆದ ಕಬ್ಬಿನ ಬೆಳೆ ಕಟಾವು ಹಂತದಲ್ಲಿದ್ದಾಗ ಈ ಅವಘಡ ಸಂಭವಿಸಿದ್ದು ರೈತರಿಗೆ ವಿಧಿ ಬರೆ ಎಳೆದಂತಾಗಿದೆ.ಈ ವೇಳೆ ಮಾಧ್ಯಮದವರೊಂದಿಗೆ ಸಿದ್ದಯ್ಯ ಮಾತನಾಡಿ ಮಳೆ ಇಲ್ಲದೇ ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ನಮಗೆ ಮತ್ತೊಂದು ದೊಡ್ಡ ಪೆಟ್ಟು ಬಿದ್ದಿದೆ. ಸರ್ಕಾರದ ಸೂಕ್ತ ಪರಿಹಾರಕ್ಕೆ ನಾವು ಎದುರು ನೋಡುತ್ತಿದ್ದೇವೆ. ಆದಷ್ಟು ಬೇಗ ಪರಿಹಾರ ನೀಡಿ ನಮ್ಮ ಕಣ್ಣೀರು ಒರೆಸಿ ಎಂದು ಅಧಿಕಾರಿಗಳಿಗೆ ಬೇಡಿಕೊಂಡರು.ಘಟನಾ ಸ್ಥಳಕ್ಕೆ ಶುಕ್ರವಾರ ಕಂದಾಯ ಇಲಾಖೆಯ ಅಧಿಕಾರಿ ಮೌಲಾಲಿ ನದಾಫ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮುದ್ದೇಬಿಹಾಳ: ಡಿ.೩೧ ರಂದು ಬೆಳಗ್ಗೆ ೧೦.೩೦ಕ್ಕೆ ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ದೇವಾಂಗ ಸಮಾಜದಸಮಾಜದ ಸಂಘಟನಾ ಸಭೆ ಹಮ್ಮಿಕೊಳ್ಳಲಾಗಿದೆ.ಕರ್ನಾಟಕ ರಾಜ್ಯ ದೇವಾಂಗ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಈ ಸಭೆಗೆ ಹಮ್ಮಿಕೊಂಡಿದ್ದು ಜಿಲ್ಲಾಧ್ಯಕ್ಷ ಬಸವರಾಜ ಚಿತ್ತರಗಿ, ಹಂಪಿ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ ಮಠದ ಟ್ರಸ್ಟಿ ನಾಗೇಶ ಭಾವಿಕಟ್ಟಿ, ಕರ್ನಾಟಕ ರಾಜ್ಯ ದೇವಾಂಗ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆನಂದ ಹುಲಮನಿ, ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಿನಕುಮಾರ್ ಕೋಷ್ಠಿ, ಕರ್ನಾಟಕ ರಾಜ್ಯ ದೇವಾಂಗದ ಸಂಘದ ವಿಜಯಪುರ ನಗರ ಘಟಕದ ಅಧ್ಯಕ್ಷ ಪ್ರಸಾದ ಬಸರಕೋಡ ಆಗಮಿಸುವರು ಎಂದು ತಾಲೂಕು ಸಂಘಟನಾ ಕಾರ್ಯದರ್ಶಿ ಎಸ್.ಆಯ್.ಹೆಬ್ಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಡಿ: ಭೀಮಾ ನದಿಯ ತೀರದಲ್ಲಿರುವ ಜನಸಾಮಾನ್ಯರ ಅಭಿವೃದ್ಧಿಗಾಗಿ ಇಂಡಿ ಜಿಲ್ಲೆಯಾಗಿಸಲು ಮನವಿ ಮಾಡಿಕೊಳ್ಳಲಾಗುತ್ತಿದೆಯೇ ಹೊರತಾಗಿ ಜನರ ಮಧ್ಯದಲ್ಲಿ ಬೆಂಕಿ ಹಚ್ಚುವ ಯಾವದೇ ಕೆಲಸ ನಮ್ಮ ಶಾಸಕರು ಮಾಡುತ್ತಿಲ್ಲ ಎಂದು ಸಮಗ್ರ ಇಂಡಿ ಕ್ಷೇಮಾಭಿವೃದ್ಧಿ ಸಂಘ ಮತ್ತು ಇಂಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ ಕಾಮಗೊಂಡ ಹೇಳಿದರು.ಶುಕ್ರವಾರ ಸಿಂದಗಿ ರಸ್ತೆಯ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.ಇಂಡಿ ಬ್ರಿಟೀಷರ ಕಾಲದಿಂದಲೂ ಸಿಂದಗಿ ಒಳಗೊಂಡು ಉಪ ಕಂದಾಯ ವಿಭಾಗಾಧಿಕಾರಿಗಳ ಕಚೇರಿ, ಡಿವೈಎಸ್ಪಿ ಕಚೇರಿಗಳನ್ನು ಹೊಂದಿದ್ದು, ಅಲ್ಲದೇ ಚುನಾವಣೆ ಹುಟ್ಟಿದಾಗಿನಿಂದಲೂ ೨೦೦೨ ರ ವರೆಗೆ ಸಿಂದಗಿ ತಾಲ್ಲೂಕಿನ ೪೨ ಗ್ರಾಮಗಳು ಇಂಡಿ ಮತಕ್ಷೇತ್ರದಲ್ಲಿಯೇ ಇದ್ದು, ಅವುಗಳಿಗೆ ಯಾವದೇ ತಾರತಮ್ಯ ಮಾಡದೇ ಆಡಳಿತ ನಡೆಸಲಾಗಿದೆ. ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳ ಜನ ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದಾರೆ. ಇವೆರಡೂ ತಾಲ್ಲೂಕುಗಳ ಮಧ್ಯದಲ್ಲಿ ಆಡಳಿತದ ದೃಷ್ಠಿಯಿಂದ ಯಾವದೇ ಭಿನ್ನಾಭಿಪ್ರಾಯ ಬಂದಿಲ್ಲ.ಇಂಡಿ ಶಾಸಕರು ವಿಧಾನ ಸಭೆಯ ಪೂರ್ವದಲ್ಲಿಯೇ ಈ ಭಾಗದ ಅಭಿವೃದ್ಧಿಯ ಕನಸನ್ನು ಹೊತ್ತು ಇಂಡಿ ಜಿಲ್ಲೆ ಮಾಡಬೇಕೆಂದು…
ಇಂಡಿ: ಓ ನನ್ನ ಚೇತನ ಆಗು ನೀ ಅನಿಕೇತನ ಎಂದು ವಿಶ್ವ ಮಾನವ ಸಂದೇಶ ನೀಡಿದ ಕುವೆಂಪು ಒಂದು ಧೀಮಂತ ಚೇತನ. ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಕೃತಿ ಸಾಧ್ಯತೆಗಳನ್ನು ಸಮೃದ್ಧವಾಗಿ ನೀಡಿದ ಕುವೆಂಪು ಮಾನವ ಸಮಾನತೆಯ ಹರಿಕಾರರಾಗಿದ್ದರು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಶುಕ್ರವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಕುವೆಂದು ಜನ್ಮ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.ಬದುಕಿನ ಸಣ್ಣ ಸಂಗತಿಗಳು ಚಿಲ್ಲರೆ ಮನಸುಗಳು ಅವರೆನ್ನಂದೂ ಬಾಧಿಸಲಿಲ್ಲ. ಕಡೆಗಣಿಸಲ್ಪಟ್ಟವರಿಗೆ ಉತ್ತಮ ಸ್ಥಾನವನ್ನು ನೀಡಿ ನೋವುಂಡ ಪಾತ್ರಗಳಿಗೆ ದನಿಯಾಗಿ ನಿಂತರು ಎಂದರು.ಗ್ರೇಡ್ ೨ ತಹಸೀಲ್ದಾರ ಧನಪಾಲಶೆಟ್ಟಿ, ಬಸವರಾಜ ರಾಹೂರ, ಎಸ್.ಆರ್. ಮುಜಗೊಂಡ, ಎಡಿಎಲ್ಆರ್ ಕಾಂಬಳೆ, ಎಂ.ಪಿ. ಕೊಡತೆ, ಲಲಿತಾ ಬಗಲಿ ಮತ್ತಿತರಿದ್ದರು.
ಇಂಡಿ: ಇಂಡಿ ಜಿಲ್ಲೆ ಮಾಡಬೇಕೆಂದು ಆಗ್ರಹಿಸಿ ೨೯ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿ ಮಿನಿ ವಿಧಾನಸೌಧ ತೆರಳಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರಿಗೆ ಮನವಿ ಅರ್ಪಿಸಿದರು.ಪ್ರತಿಭಟನೆ ಪಟ್ಟಣದ ಕುಂಬಾರ ಓಣಿಯಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಮಿನಿ ವಿಧಾನಸೌಧ ತಲುಪಿ ಅಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.ಅಲ್ಲಿ ಮಾತನಾಡಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಕಾಂತು ಇಂಡಿ, ರಾಜು ಕುಲಕರ್ಣಿ, ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಸಿದ್ದಣ್ಣ ತಾಂಬೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಂಬಣ್ಣ ಸುಣಗಾರ, ಶರಣ ಸಾಹಿತ್ಯ ಪರಿಷತ್ತಿನ ಬಿ.ಎಸ್.ಪಾಟೀಲ, ಖಾಸಗಿ ವೈದ್ಯಾಧಿಕಾರಿಗಳ ಸಂಘದ ಡಾ|| ಬಿ.ಎಸ್.ಅಂಕಲಗಿ, ಪುರಸಭೆ ಮಾಜಿ ಅಧ್ಯಕ್ಷ ಸಂಘದ ಶ್ರೀಕಾಂತ ಕುಡಿಗನೂರ, ಅಶೋಕ ಪಾಟೀಲ, ಮರಾಠಾ ಯುವ ಘಟಕ ಸಂಘದ ಯಮುನಾಜಿ ಸಾಳುಂಕೆ, ಗ್ರಾ.ಪಂ ಅಧ್ಯಕ್ಷರ ಸಂಘದ ಶೈಲಜಾ ಜಾಧವ, ಕದಳಿ ವೇದಿಕೆಯ ಶಶಿಕಲಾ ಬೇಟಗೇರಿ, ಕುಂಬಾರ ಸಮಾಜದ ಸಂಘದಿಂದ ಸತೀಶ ಕುಂಬಾರ, ಮತ್ತು ಕಾಂಗ್ರೆಸ್ ಮಹಿಳಾ ಘಟಕದ ನಿರ್ಮಲಾ ತಳಕೇರಿ, ಮಾತನಾಡಿ ಇಂಡಿ…
ಸಿಂದಗಿ: ಶ್ರೀ ಧರ್ಮಶಾಸ್ತಾ ಸನ್ನಿದಾನಂ ಹಾಗೂ ಸೇವಾ ಸಮಿತಿ ಸಿಂದಗಿ ಇವರ ವತಿಯಿಂದ ಡಿ. ೩೧ರಂದು ಹಮ್ಮಿಕೊಂಡಿರುವ ೪ನೇ ವರ್ಷದ ಅನ್ನ ಸಂತರ್ಪಣೆ ಕಾರ್ಯಕ್ರಮ ಮತ್ತು ನೂತನ ಶಾಸಕ ಅಶೋಕ ಮನಗೂಳಿಯವರಿಗೆ, ಪತ್ರಕರ್ತರಿಗೆ, ಪುರಸಭೆಯ ಸದಸ್ಯರಿಗೆ ಸನ್ಮಾನ ಸಮಾರಂಭ ನೇರವೇರಲಿದೆ ಎಂದು ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ ಅಧ್ಯಕ್ಷ ರಾಜಶೇಖರ ಉಪ್ಪಿನ ತಿಳಿಸಿದ್ದಾರೆ.ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಸೇವಾ ಸಮಿತಿಯ ಉಪಾಧ್ಯಕ್ಷ ಶಾಂತವೀರ ಕುಂಬಾರ, ಸಿಂದಗಿ ತಾಲ್ಲೂಕಿನ ಮಹಾಜನತೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಅಯ್ಯಪ್ಪ ಸ್ವಾಮಿಯವರ ಮಹಾಪ್ರಸಾದವನ್ನು ಸ್ವೀಕರಿಸಬೇಕು ಎಂದು ಹೇಳಿದರು..ಈ ವೇಳೆ ಸೇವಾ ಸಮಿತಿಯ ಸದಸ್ಯ ಕಿರಣ ಶಿವಸಿಂಪಿಗೇರ, ಶಾಂತು ಬಿರಾದಾರ, ಆನಂದ ಮಲ್ಲೇದ, ರಾಜ ಬಡಿಗೇರ, ಶಿವಾನಂದ ಪರಸಪ್ಪಗೋಳ, ಅರವಿಂದ ವಸ್ತ್ರದ ಸೇರಿದಂತೆ ಅಯ್ಯಪ್ಪ ಸ್ವಾಮಿ ವೃತಾಧಾರಿಗಳು ಇದ್ದರು.
ಮುದ್ದೇಬಿಹಾಳ: ಜಿದ್ದಾ ಜಿದ್ದಿಯಿಂದ ಕೂಡಿದ್ದ ಇಲ್ಲಿನ ೧೮ ನೇ ವಾರ್ಡ್ ನ ಉಪಚುನಾವಣೆಗೆ ಶನಿವಾರ ತೆರೆ ಬಿದ್ದಿದೆ.ಅಲ್ಲಾಭಕ್ಷ ಢವಳಗಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಒಟ್ಟು ೬ ಜನ ಸ್ಪರ್ದಿಸಿದ್ದು ಡಿ.೨೭ ರಂದು ಮತದಾನ ನಡೆದಿದ್ದು ಒಟ್ಟು ೮೨೬ ಮತಗಳು ಚಲಾವಣೆಗೊಂಡಿದ್ದವು.ಶನಿವಾರ ಬೆಳಿಗ್ಗೆ ೮:೩೦ ರ ಹೊತ್ತಿಗೆ ಮತ ಎಣಿಕೆ ಕಾರ್ಯ ಮುಕ್ತಾಯವಾಗಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಶಾಹಿರಾಬಾನು ಅಲ್ಲಾಭಕ್ಷ ಢವಳಗಿ ಅವರು ವಿಜಯದ ಮಾಲೆ ಧರಿಸಿದರು.ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳು ಸದಸ್ಯರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.ಈ ವೇಳೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ, ರಿಯಾಜ ಢವಳಗಿ, ಯುವ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದರಫೀಕ ಶಿರೋಳ, ದಾವಲ ಗೊಳಸಂಗಿ, ಬಾಪ್ ಢವಳಗಿ ಸೇರಿದಂತೆ ಮತ್ತೀತರರು ಇದ್ದರು.ಮತಗಳ ವಿವರ ಹೀಗಿದೆ :ದಯಾರಾಮ್ಸಿಂಗ್ ರಾಯಚೂರ – ೬೧ನೂರ್ಅಹಮ್ಮದ ಶಿವಣಗಿ – ೨೩ಲಾಳೇಮಶ್ಯಾಕ ನಾಯ್ಕೋಡಿ(ಬುಡ್ಡಾ) – ೪೮ಶಾಹಿರಾಬಾನು ಢವಳಗಿ – ೪೫೪ಮೊಹಮ್ಮದ ಹುಣಚಗಿ – ೧೮ಅಬ್ದುಲಅಜೀಜ ಢವಳಗಿ -…
