ಇಂಡಿ: ಸಮಾಜದಲ್ಲಿ ಸ್ವಾಸ್ತ್ಯ ಕಾಪಾಡುವದು ಎಲ್ಲರ ಕರ್ತವ್ಯ. ಸಂತೋಷ ಹಂಚಿಕೊಳ್ಳಲಿಕ್ಕೆ ಶಾಂತಿ ಸಾರಲಿಕ್ಕೆ ಹಬ್ಬಗಳು ಆಚರಿಸುತ್ತೇವೆ ಎಂದು ಡಿ.ವೈ.ಎಸ್.ಪಿ ಎಚ್.ಎಸ್.ಜಗದೀಶ ಹೇಳಿದರು.
ಪಟ್ಟಣದ ಡಿಎಎಸ್ಪಿ ಕಚೇರಿಯ ಸಬಾಭವನದಲ್ಲಿ ನಡೆದ ಹೋಳಿ ಮತ್ತು ರಮಜಾನ ಪ್ರಯಕ್ತ ಶಾಂತಿ ಸಭೆಯಲ್ಲಿ ಮಾತನಾಡಿದರು.
ಪಟ್ಟಣದ ಪೋಲಿಸ್ ಠಾಣಾ ಸಿಪಿಐ ರತನಕುಮಾರ ಜಿರಗಿಹಾಳ ಮಾತನಾಡಿ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಗೆಯಲ್ಲಿ ಇರುವದರಿಂದ ರಾಜಕೀಯ ಧುರೀಣರ ಬ್ಯಾರ್ಸ, ಬಂಟಿಗ್ಸ ಮತ್ತು ಪ್ಲಕ್ಸ ಅಳವಡಿಸಬಾರದು. ಹಚ್ಚಿದರೆ ಕ್ಷಣಾರ್ಧದಲ್ಲೇ ತೆರವುಗೊಳಿಸಲಾಗುವದು ಎಂದರು.
ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ ಜಟ್ಟೆಪ್ಪ ರವಳಿ, ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ, ಭೀಮನಗೌಡ ಪಾಟೀಲ, ಅಯೂಬ ನಾಟಿಕಾರ, ರೈಸ್ ಅಷ್ಟೇಕರ ಮಾತನಾಡಿ ಹಿಂದು ಮುಸ್ಲಿಂ ಬಾಂಧವರು ಒಗ್ಗಟ್ಟಿನಿಂದ ಹಬ್ಬ ಆಚರಿಸುತ್ತ ಬಂದಿದ್ದಾರೆ. ಯಾವದೇ ಸಮಸ್ಯೆ ಎಂದೂ ಉದ್ಭವಿಸಿಲ್ಲ. ರಂಗಪಂಚಮಿ ಎಂದು ಇದೆ ಡಂಗುರ ಸಾರಲಾಗುವದು. ೨೪ ರಂದು ಕಾಮದಹನ ಇದೆ. ಇಂಡಿಯಲ್ಲಿ ಸುಮಾರು ೫೦ ಕಡೆ ಕಾಮದಹನ ಮಾಡುತ್ತಾರೆ. ಅಣ್ಣ ತಮ್ಮಂದಿರಂತೆ ಮುಸ್ಲಿಂ ಬಾಂಧವರು ಸಹಕರಿಸುತ್ತಾರೆ ಎಂದರು.
ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಭೀಮಾಶಂಕರ ಮೂರಮನ, ಅಂಜುಮನ್ ಸಮಿತಿ ಅಧ್ಯಕ್ಷ ಅಪಝಲ ಹವಾಲದಾರ, ಎಸ್.ಜಿ.ಬಾಗವಾನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮತ್ತು ಬಾಗವಾನ ಅಲ್ಪ ಸಂಖ್ಯಾತ ಬ್ಯಾಂಕಿನ ಅಧ್ಯಕ್ಷ ಸತ್ತಾರ ಬಾಗವಾನ, ಪುರಸಭೆ ಸದಸ್ಯ ಎ.ಆರ್.ಬಾಗವಾನ, ದೇವೆಂದ್ರ ಕುಂಬಾರ, ಪ್ರಕಾಶ ಬಿರಾದಾರ, ಜಬ್ಬಾರ ಅಣ್ಣಾ, ಭಿಮು ಗುಡ್ಲ,ಸತೀಶ ಕುಂಬಾರ, ದತ್ತಾ ಬಂಡೆನ್ನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ ಮೋಮಿನ್, ಶಿವಾನಂದ ಮೂರಮನ್ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

