Author: editor.udayarashmi@gmail.com

ಲೇಖನ:- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦  ಉದಯರಶ್ಮಿ ದಿನಪತ್ರಿಕೆ ಒಮ್ಮೆ ಆಕಾಶವಿಡೀ ಕಾರ್ಮೋಡದಿಂದ ಕಪ್ಪಿಟ್ಟುಕೊಂಡು ಜೋರಾಗಿ ಗಾಳಿಯು ಬೀಸಲಾರಂಭಿಸಿತು. ಮಳೆಯು ಜೋರಾಗಿ ಸುರಿಯಲಾರಂಭಿಸಿ ಊರಿನ ಹಳ್ಳಕೊಳ್ಳಗಳು, ನದಿ ತೊರೆಗಳು ತುಂಬಿ ಹರಿಯಲು ಪ್ರಾರಂಭಿಸಿದವು. ಇಡೀ ಊರಿಗೆ ಪ್ರಳಯವು ಆವರಿಸಿ ಕಾಡನ ಮರಗಿಡಗಳೆಲ್ಲವೂ ನದಿಯ ನೀರಿಗೆ ಕೊಚ್ಚಿಕೊಂಡು ಹೋಗಲಾರಂಭಿಸಿತು. ಅದೇ ರೀತಿ ಈ ಕೋತಿಯಿದ್ದ ಕಾಡೂ ಪ್ರಳಯಕ್ಕೆ ತುತ್ತಾಗಿ ಅಲ್ಲಿನ ಪ್ರಾಣಿಗಳೆಲ್ಲಾ ದಿಕ್ಕುಪಾಲಾಗಿ ಒಡಲಾರಂಭಿಸಿದವು. ಕೆಲವು ಪ್ರವಾಹದ ನೀರಿಗೆ ಕೊಚ್ಚಿಕೊಂಡು ಹೋದರೆ ಕೆಲವು ಅಲ್ಲೋ ಇಲ್ಲೋ ಓಡಲಾರಂಭಿಸಿದವು. ಅದೇ ರೀತಿ ಈ ತಾಯಿ ಕೋತಿಯೂ ಪ್ರವಾಹದ ನೀರಿಗೆ ಹೆದರಿ ತನ್ನ ಮರಿಯನ್ನು ಹಿಡಿದುಕೊಂಡು ಕಾಡಿನ ಅತ್ಯಂತ ದೊಡ್ಡದಾದ ಮರವನ್ನೇರಿ ಕುಳಿತಿತು. ಕಾಡು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿ ಮರಗಳೆಲ್ಲವೂ ಉರುಳಲಾರಂಭಿಸಿದವು. ದೊಡ್ಡದಾದ ಮರವಾದ್ದರಿಂದ ತಾಯಿ ಕೋತಿಯು ಮಗುವನ್ನು ಅಪ್ಪಿಕೊಂಡು ಮರವನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿತು. ಪ್ರವಾಹವು ಮತ್ತಷ್ಟು ಹೆಚ್ಚಾಗಿ ತಾಯಿ ಕೋತಿ ಕುಳಿತಿದ್ದ ಮರವು ಅರ್ಧದಷ್ಟು ಮುಳುಗಿದಾಗ…

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಪಾಲಕರು ತಮ್ಮ ಸಮಾನ ವಯಸ್ಕರೊಂದಿಗೆ ಮಾತನಾಡುವಾಗ ಮಕ್ಕಳೊಂದಿಗೆ ವಿಪರೀತ ಶಿಸ್ತಿನಿಂದ ಸ ಮತ್ತು ಕಠಿಣತೆಯಿಂದ ನಡೆದುಕೊಳ್ಳಬೇಕು ಎಂದು ಹೇಳುವುದನ್ನು ನಾವು ಬಹುತೇಕ ಕೇಳಿದ್ದೇವೆ. ಮಕ್ಕಳೊಂದಿಗೆ ಶಿಸ್ತಿನಿಂದ ನಡೆದುಕೊಳ್ಳಲು ನಾವು ಬಯಸಿದಾಗ ನಮ್ಮದೇ ಆದ ಕಿಲ ನಿಯಮಾವಳಿಗಳನ್ನು ಮಾಡಿಕೊಂಡು ಅವುಗಳನ್ನು ಮಕ್ಕಳು ಪಾಲಿಸಲಿ ಎಂದು ಅಪೇಕ್ಷಿಸುತ್ತೇವೆ, ಆಶಿಸ್ತುಕ್ರಮಗಳನ್ನು ಮಕ್ಕಳ ಮೇಲೆ ಒತ್ತಾಯಪೂರ್ವಕವಾಗಿ ಹೇರುತ್ತೇವೆ. ಅವುಗಳನ್ನು ಮಕ್ಕಳು ಪಾಲಿಸದೆ ಹೋದಾಗ ಅವರನ್ನು ದಂಡಿಸುತ್ತೇವೆ ಕಠಿಣವಾಗಿ ಮಾತನಾಡುತ್ತೇವೆ, ಆದರೆ ಅವರು ನಮ್ಮ ಮಕ್ಕಳು ನಮ್ಮದೇ ಪ್ರತಿರೂಪ. ಅತಿಯಾದ ಶಿಸ್ತು ಮಕ್ಕಳು ಪಾಲಕರ ವಿರುದ್ಧ ತಿರುಗಿ ಬೀಳುವಂತೆ ಮಾಡುತ್ತದೆ. ಅವರು ಪಾಲಕರ ಮಾತನ್ನು ಮೀರಬಹುದು. ವಿದ್ಯಾಭ್ಯಾಸದಲ್ಲಿ, ಆಟೋಟಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು. ಆದರೆ ಇಲ್ಲಿ ಇನ್ನೊಂದು ಪದ ಇದೆ…. ಅದುವೇ ಬದ್ಧತೆ. ಬದ್ಧತೆ ಎಂದರೆ ಯಾವುದೇ ಒಂದು ವಿಷಯಕ್ಕೆ ದೃಢವಾಗಿ ಕಚ್ಚಿಕೊಂಡು ನಿಲ್ಲುವುದು, ನಿಲುವಿಗೆ ಬದ್ಧರಾಗುವುದು. ಇಂಥವರು ನನ್ನ ಜೊತೆಗಿದ್ದರೆ ನಾನು ಪರ್ವತವನ್ನೇ ಕಿತ್ತಿ ತರಬಲ್ಲೆ ಎಂಬ ಭಾವವನ್ನು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರ ತಾಲೂಕಿನಲ್ಲಿ ಬರುವ ವಿದ್ಯುತ್ ಉಪ ಕೇಂದ್ರಗಳಿಂದ ವಿತರಣೆಯಾಗುವ ಎಲ್ಲಾ ೧೧ ಕೆ.ವ್ಹಿ ಮಾರ್ಗಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ಮಾರ್ಚ್ ೧೫ರ ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆ ವರೆಗೆ ಬಬಲೇಶ್ವರ ತಾಲೂಕಿನ ೧೧ ಕೆ.ವ್ಹಿ ಪಂಪಸೆಟ್ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಬಲೇಶ್ವರ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಿಶು ಅಭಿವೃದ್ಧಿ ಯೋಜನೆ ಮುದ್ದೇಬಿಹಾಳ ವ್ಯಾಪ್ತಿಯಲ್ಲಿನ ಹಂದ್ರಾಳ ಗ್ರಾಮದ ೦೧ನೇ ಅಂಗನವಾಡಿ ಕೇಂದ್ರದಲ್ಲಿ ಖಾಲಿಯಿರುವ ಅಂಗನವಾಡಿ ಸಹಾಯಕಿಯರ ೦೧ ಹುದ್ದೆಗೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಮುದ್ದೇಬಿಹಾಳದ ಶಿಶು ಅಭಿವೃದ್ಧಿ ಯೋಜನೆಯ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.ಮಾರ್ಚ್ ೨೪ರೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಮುದ್ದೇಬಿಹಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೆಪಿಟಿಸಿಎಲ್ ಇವರ ಮೂಲಕ ೧೧೦ ಕೆ.ವ್ಹಿ ಬೇ ಗಳ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ, ೧೧೦/೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರ ಮಮದಾಪುರ, ಬೆಳ್ಳುಬ್ಬಿ, ದೇವರಗೆಣ್ಣೂರ, ಶಿರಬೂರ, ಬಬಲೇಶ್ವರ, ಕಂಬಾಗಿ, ಕಾಖಂಡಕಿ ಹಾಗೂ ನಿಡೋಣಿ ೧೧೦ ಕೆ.ವ್ಹಿ ಸ್ವೀಕರಣಾ ಕೇಂದ್ರದಿಂದ ೩೩ಕೆವ್ಹಿ ಹಾಗೂ ೧೧ ಕೆವ್ಹಿ ವಿದ್ಯುತ್ ಮಾರ್ಗಗಳಿಗೆ ಮಾರ್ಚ್ ೧೫ರ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಕಾರಣ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುಗಾದಿ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಜರಗುವ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ನಿಮಿತ್ಯ ಭ್ರಮರಾಂಬಾ ಹಾಗೂ ಮಲ್ಲಿಕಾರ್ಜುನ ಸ್ವಾಮಿಯ ದರ್ಶನಕ್ಕೆ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.ಕೇಂದ್ರ ಬಸ್ ನಿಲ್ದಾಣದಿಂದ, ಬಸವನಬಾಗೇವಾಡಿ ಮುದ್ದೆಬಿಹಾಳ, ಇಂಡಿ, ಸಿಂದಗಿ, ತಾಳಿಕೋಟೆ ಘಟಕಗಳಿಂದ ನೇರವಾಗಿ ಶ್ರೀಶೈಲಕ್ಕೆ ವಾಹನಗಳ ಸೌಕರ್ಯ ಒದಗಿಸಲಾಗಿರುತ್ತದೆ.ವಿಜಯಪುರ ವಿಭಾಗದಿಂದ ಸುಮಾರು ೨೫೦ ವಾಹನಗಳನ್ನು ಕಾರ್ಯಾಚರಣೆ ಮಾಡುತ್ತಿದ್ದು, ಶ್ರೀಶೈಲ ಮಲ್ಲಿಕಾರ್ಜುನ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.ಇಂದು ವೀರರಾಣಿ ಕಿತ್ತೂರು ಚೆನ್ನಮ್ಮ ಕೇಂದ್ರ ಬಸ್ ನಿಲ್ದಾಣ ವಿಜಯಪುರದಲ್ಲಿ ವಿಭಾಗಿಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಹಾಗೂ ವಿಭಾಗದ ಅಧಿಕಾರಿಗಳು ಭಕ್ತಾದಿಗಳ ಸಮ್ಮುಖದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಪೂಜೆ ಸಲ್ಲಿಸುವ ಮೂಲಕ ಸಾರಿಗೆ ವ್ಯವಸ್ಥೆಗೆ ಚಾಲನೆ ನೀಡಿರುತ್ತಾರೆ. ಭಕ್ತಾದಿಗಳು ಸಾರಿಗೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದಾಗಿ ರಂಗಭೂಮಿಯ ಶ್ರೇಷ್ಠ ನಾಟಕ ಕಲೆ ಕಣ್ಮರೆಯಾಗುತ್ತಿದೆ, ಅದನ್ನು ರಕ್ಷಿಸಿ ಬೆಳೆಸುವ ಅಗತ್ಯ ಇದೆ ಎಂದು ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.ಸಮೀಪದ ಬೆಕಿನಾಳ ಗ್ರಾಮದಲ್ಲಿ ಹುಬ್ಬಳ್ಳಿ ಶ್ರೀ ಸಿದ್ದಾರೂಢರ ಪುರಾಣ ಮಹಾಮಂಗಲೋತ್ಸವದ ಅಂಗವಾಗಿ ಹಮ್ಮಿಕೊಂಡ “ಅನ್ನ ಕೊಟ್ಟ ರೈತನಿಗೆ ಸಾವು ಕೊಟ್ಟ ಸರಕಾರ” ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೇವಲ ಮನೋರಂಜನೆಗಾಗಿ ನಾಟಕಗಳನ್ನು ನೋಡದೆ ಅದರಲ್ಲಿರುವ ಒಳ್ಳೆಯದನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಈ ಗ್ರಾಮದ ರಂಗಭೂಮಿ ಹವ್ಯಾಸಿ ಕಲಾವಿದರೇ ಈ ನಾಟಕವನ್ನು ಮಾಡುತ್ತಿರುವುದು ಸಂತೋಷದ ವಿಷಯವಾಗಿದ್ದು ಅವರನ್ನು ಅಭಿನಂದಿಸುತ್ತೇನೆ ಎಂದರು.ಅಧ್ಯಕ್ಷತೆ ವಹಿಸಿದ ದೇವರ ಹಿಪ್ಪರಗಿ ಮತಕ್ಷೇತ್ರ ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ) ಅವರು ಮಾತನಾಡಿ ನಾಟಕ ಒಂದು ಪ್ರಭಾವ ಪೂರ್ಣವಾದ ಮಾಧ್ಯಮವಾಗಿದ್ದು ನಮ್ಮ ಬದುಕನ್ನು ಬದಲಿಸಬಲ್ಲ ಶಕ್ತಿ ಅದಕ್ಕಿದೆ ಆದ್ದರಿಂದ ನಾಟಕದ ಹಿಂದಿರುವ ತಿರಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ಎಂದರು.ಗುಂಡಕನಾಳ ಬ್ರಹನ್ಮಠದ ಶ್ರೀಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಅವಿರಳಜ್ಞಾನಿ ಚನ್ನಬಸವಣ್ಣನವರ ಜನ್ಮಸ್ಥಳ ತಾಲೂಕಿನ ಇಂಗಳೇಶ್ವರ ಗ್ರಾಮದಿಂದ ಚನ್ನಬಸವಣ್ಣನವರ ಐಕ್ಯಸ್ಥಳ ಉಳುವಿಯವರೆಗೆ ಹೊರಟ ಪಾದಯಾತ್ರೆಯ ಯಾತ್ರಾತ್ರಿಗಳನ್ನು ಸೋಮವಾರ ಸ್ವಾಗತಿಸಿಕೊಂಡು ಸ್ಥಳೀಯ ವಿರಕ್ತಮಠದಲ್ಲಿ ಪೂಜೆ ನೆರವೇರಿಸಿದ ನಂತರ ಸೋಮವಾರ ಬೀಳ್ಕೊಡಲಾಯಿತು.ಸ್ಥಳೀಯ ವಿರಕ್ತ ಮಠದ ಸಿದ್ದಲಿಂಗಸ್ವಾಮೀಜಿ ಮಾತನಾಡಿ, ಇಂಗಳೇಶ್ವರ ವಚನಶಿಲಾ ಮಂಟಪದ ರೂವಾರಿ ಲಿಂಗೈಕ್ಯ ಚನ್ನಬಸವ ಸ್ವಾಮೀಜಿ 40 ವರ್ಷಗಳವರೆಗೆ ಪಾದಯಾತ್ರೆ ಮಾಡಿರುವದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಸಮಾಜದ ಬದಲಾವಣೆಯ ಉದ್ದೇಶದಿಂದ ಅವರು ಪಾದಯಾತ್ರೆ ಮಾಡಿ ಸಾಕಷ್ಟು ಭಕ್ತರ ಪ್ರೀತಿಯ ಪಾತ್ರರಾಗಿದ್ದರು. ಆ ಪರಂಪರೆಯನ್ನು ಉಳಿಸಿಕೊಂಡು ಅಲ್ಲಿನ ಶ್ರೀಮಠದ ಭಕ್ತರು ಹೋಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.ಬಸವಾದಿ ಶರಣರ ವಚನ ಸಾಹಿತ್ಯವನ್ನು ಉಳಿಸಿದ ಕೀರ್ತಿಗೆ ಪಾತ್ರರಾದ ಚನ್ನಬಸವಣ್ಣನವರ ಐಕ್ಯಸ್ಥಳ ನಮಗೆಲ್ಲರಿಗೂ ಶ್ರದ್ಧಾ ಕೇಂದ್ರವಾಗಿದೆ. ವಚನ ಸಾಹಿತ್ಯವನ್ನು ಪರಿಚಯಿಸುವದು ಯಾತ್ರೆಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಯಾತ್ರಾ ಕಮೀಟಿಯ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಸಂಚಾಲಕ ವೀರಣ್ಣ ಸಜ್ಜನ, ವೀರನಗೌಡ ಬಿರಾದಾರ, ಭೀಮನಗೌಡ ಬಿರಾದಾರ, ಬಸಮ್ಮ ಮದ್ದರಕಿ, ಬಸನಗೌಡ ಉತ್ನಾಳ, ಬಸವರಾಜ…

Read More

ತಹಸೀಲ್ದಾರರಿಗೆ ಸಂಪೂರ್ಣ ಅಧಿಕಾರ ವಹಿಸಿ ಕೊಡುವಂತೆ ಅಖಂಡ ರೈತ ಸಂಘ ಒತ್ತಾಯ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಜಮೀನು ದಾರಿ ಸಮಸ್ಯೆ ಇತ್ಯರ್ಥಕ್ಕಾಗಿ ಕಾನೂನು ತಿದ್ದುಪಡಿ ಮಾಡಿ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ತಹಸೀಲ್ದಾರರಿಗೆ ಸಂಪೂರ್ಣ ಅಧಿಕಾರವನ್ನು ಸರ್ಕಾರ ನೀಡುವ ಮೂಲಕ ಜಮೀನು ದಾರಿ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಬಸವನಬಾಗೇವಾಡಿ ತಾಲೂಕಾ ಅಧ್ಯಕ್ಷ ಉಮೇಶ ವಾಲೀಕಾರ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀನು ದಾರಿ ಸಮಸ್ಯೆ ರಾಜ್ಯಾದಂತ ರೈತರಿಗೆ ದೊಡ್ಡ ತಲೆನೋವಾಗಿದೆ. ದಿನನಿತ್ಯ ಹಳ್ಳಿಗಳಲ್ಲಿ ಹೊಲಗಳ ದಾರಿಗಾಗಿ ಕಲಹಗಳು ನಡೆಯುತ್ತಲೆ ಇವೆ. ಆದರೆ ಸರ್ಕಾರಿ ಮಾತ್ರ ಅದಕ್ಕೂ ನಮಗೂ ಸಂಬಂಧವಿಲ್ಲ ಅನ್ನುವ ರೀತಿಯಲ್ಲಿ ಮೌನ ವಹಿಸಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ರೈತರು ದಾರಿಗಾಗಿ ಹೊಡದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದು ಮಾಮುಲಾಗಿಬಿಟ್ಟಿದೆ. ಪೊಲೀಸ್ ಇಲಾಖೆ ಅಧಿಕಾರಿಗಳು ಇದು ಸಿವ್ಹಿಲ್…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿದ್ಯಾರ್ಥಿಗಳು ಪ್ರತಿದಿನವೂ ಯೋಜನಾಬದ್ಧವಾಗಿ ಅಭ್ಯಾಸದ ಕ್ರಮಗಳನ್ನು ಅನುಸರಿಸಿ ಸಕಾರಾತ್ಮಕ ಆಲೋಚನೆಯೊಂದಿಗೆ ಅಧ್ಯಯನ ನಡೆಸಬೇಕು. ಅಭ್ಯಾಸವು ಮನುಷ್ಯನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡುತ್ತದೆ ಎಂದು ಸಾಹಿತಿ, ಸಾಂಸ್ಕೃತಿಕ ಚಿಂತಕ ಡಾ.ಮಾಧವ ಗುಡಿ ಅಭಿಪ್ರಾಯಪಟ್ಟರು.ತಾಲೂಕಿನ ಮನಗೂಳಿ ಪಟ್ಟಣದ ಕೌಟಿಲ್ಯ ಶಿಕ್ಷಣ ಸಂಸ್ಥೆಯ ಶ್ರೀರಾವುಸಾಹೇಬ ಮಾರುತಿರಾವ ಗುಂಡ ಪ್ರೌಢಶಾಲೆಯಲ್ಲಿ ಈಚೆಗೆ ಜರುಗಿದ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ವಿದ್ಯೆ ಪಡೆದವನಿಗೆ ಜಗತ್ತಿನ ತುಂಬೆಲ್ಲ ಅಪಾರ ಗೌರವ ಮನ್ನಣೆ ದೊರೆಯಲಿದೆ ಎಂದರು.ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಬಿ.ಸಜ್ಜನಶೆಟ್ಟಿ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ನಾಣ್ಣುಡಿಯೊಂದಿಗೆ ಗುರಿ ತಲುಪಲು ಕಠಿಣ ಪರಿಶ್ರಮ, ಏಕಾಗ್ರತೆ, ತಾಳ್ಮೆ ಅತ್ಯವಶ್ಯಕ ಎಂದರು.ಮುಖ್ಯ ಅತಿಥಿ ಸಿ.ಆರ್.ಪಿ ರಮೇಶ ಬೆಳ್ಳುಬ್ಬಿ ಮಾತನಾಡಿ, ಸಮಯವನ್ನು ಗೌರವಿಸುವವರಿಗೆ ಸಮಾಜದಲ್ಲಿ ಅಪಾರ ಮೌಲ್ಯವಿದೆ. ಸಮಯದ ಸದುಪಯೋಗಪಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಬಾಳಬೇಕೆಂದು ಶುಭ ಹಾರೈಸಿದರು.ಅಧ್ಯಕ್ಷತೆ ವಹಿಸಿದ್ದ ಕೌಟಿಲ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ…

Read More