Author: editor.udayarashmi@gmail.com

ವಿಜಯಪುರ: ಈ ಕಾಮರ್ಸ್ ನಲ್ಲಿ ವ್ಯಾಪಾರ ವಹಿವಾಟು ಮಾಡುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಅಪರಿಚಿತ ವ್ಯಕ್ತಿಗಳು ಅವರ ಹಣವನ್ನು ಮೋಸದಿಂದ ಸೆಳೆಯುವ ಸಾಧ್ಯತೆ ಇದ್ದು ಗ್ರಾಹಕರು ತಮ್ಮ ವಹಿವಾಟಿನ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಕಳುಹಿಸಿದ ಸಂದೇಶಗಳನ್ನೂ ನಂಬಿ ಲಿಂಕ್ ಕ್ಲಿಕ್ ಅಥವಾ ವ್ಯಯಕ್ತಿಕ ಮಾಹಿತಿಗಳನ್ನು ನೀಡದೇ ಗ್ರಾಹಕರು ಜಾಗರೂಕತೆಯಿಂದ ವ್ಯವಹರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಕುಂದರ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಆಹಾರ ಸುರಕ್ಷತಾ ಇಲಾಖೆ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ನ್ಯೂ ಸಂಸ್ಥೆ ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಪ್ರಯುಕ್ತ ಗ್ರಾಹಕರಿಗೆ ನ್ಯಾಯಯುತ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿವಂತಿಕೆ ಕಾರ್ಯಕ್ರಮ ಉದ್ಘಾಟಿಸಿ…

Read More

ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಇಬ್ಬರು ವೈದ್ಯರು ಹಾಗೂ ಓರ್ವ ಎಂಜಿನೀಯರ್ ನಡೆಸಿದ ಸಂಶೋಧನೆಗೆ ಕೇಂದ್ರ ಸರಕಾರದಿಂದ ಪೇಟೆಂಟ್ ದೊರೆತಿದೆ.ಆಸ್ಪತ್ರೆಯ ಜಿಲ್ಲಾ ವಿಕಲಚೇತನ ಮತ್ತು ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಮತ್ತು ಅಂಗರಚನಾ ಶಾಸ್ತ್ರ ವಿಭಾಗದ ಡಾ. ಈಶ್ವರ ಬ. ಬಾಗೋಜಿ, ಎಂಜಿನೀಯರ್ ಕೆ. ಸಿ. ಮೊಹಂತಿ ಹಾಗೂ ಎಲಬು ಮತ್ತು ಕೀಲು ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗಿರೀಶ ಖೋದ್ನಾಪೂರ ಅವರು ಜಂಟಿಯಾಗಿ ನಡೆಸಿ ಸಂಶೋಧನೆಗೆ ಪೇಟೆಂಟ್ ಲಭಿಸಿದೆ.ಎ ನೊವೆಲ್ ಫೋಲ್ಡೆಬಲ್ ಆರ್ಟಿಫಿಸಿಯಲ್ ಲೆಗ್(A Novel Foldable Artificial Leg) ಸಂಶೋಧನೆ ನಡೆಸಿದ್ದರು. 2020 ರಲ್ಲಿ ನಡೆಸಿದ ಈ ಸಂಶೋಧನೆ ಕೃತಕ ಅಂಗಾಂಗ ವಿಭಾಗದಲ್ಲಿ ಲಾಕಿಂಗ್ ಮತ್ತು ಅನ್‌ಲಾಕಿಂಗ್ ತಂತ್ರಜ್ಞಾನದಡಿ ಕರ್ನಾಟಕ ರಾಜ್ಯದಲ್ಲಿ ನಡೆಸಲಾದ ಪ್ರಥಮ ಸಂಶೋಧನೆ ಎಂಬ ಖ್ಯಾತಿಗೆ ಪಾತ್ರವಾಗಿದೆ.ವೈದ್ಯರು ಮತ್ತು ಎಂಜಿನೀಯರ್ ಪಡೆದಿರುವ ಪೇಟೆಂಟ್‌ಗೆ ವಿಶ್ವವಿದ್ಯಾಲಯದ ಕುಲಾಧಿಪತಿಯು ಆಗಿರುವ ಸಚಿವ ಎಂ. ಬಿ.…

Read More

ವಿಜಯಪುರ: ರೋಗಿಗಳು ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಂಡರೆ ಕಿಡ್ನಿಗೆ ಆಗುವ ಹಾನಿಯನ್ನು ತಪ್ಪಿಸಬಹುದು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಮೂತ್ರಜನಕಾಂಗ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ. ಪಾಟೀಲ ಹೇಳಿದ್ದಾರೆ.ಗುರುವಾರ ಆಸ್ಪತ್ರೆಯಲ್ಲಿ ಮೂತ್ರಜನಕಾಂಗ ರೋಗ ಹಾಗೂ ಮೂತ್ರಪಿಂಡ (ಕಿಡ್ನಿ) ಚಿಕಿತ್ಸಾ ವಿಭಾಗಗಳ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಕಿಡ್ನಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಕಿಡ್ನಿ ಆರೋಗ್ಯ ಮುಖ್ಯವಾಗಿದೆ. ಹೀಗಾಗಿ ಸಾರ್ವಜನಿಕರು ವರ್ಷಕ್ಕೆ ಒಮ್ಮೆಯಾದರೂ ಕಿಡ್ನಿ ತಪಾಸಣೆ ಮಾಡಿಸಿಕೊಳ್ಳಬೇಕು. ಸಮಸ್ಯೆಗಳಿದ್ದರೆ ವೈದ್ಯರ ಸಲಹೆಯಂತೆ ಔಷಧಿ ಪಡೆದರೆ ಹಾನಿಯನ್ನು ತಪ್ಪಿಸಬಹುದು. ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಕರ್ನಾಟಕ ಸರಕಾರದ ಜೀವಸಾರ್ಥಕತೆ ಅಡಿಯಲ್ಲಿ ಕೆಡವರಿಕ್ ಕಿಡ್ನಿ ಟ್ರಾನ್ಸಪ್ಲ್ತಾಂಟ್ ಮಾಡಲು ಮಾನ್ಯತೆಯನ್ನು ಪಡೆದಿದೆ. ಕಿಡ್ನಿ ಕಸಿಗೆ ಒಳಗಾಗಬೇಕಿರುವ ರೋಗಿಗಳ ಹೆಸರು ನೋಂದಣಿ ಮಾಡಿಕೊಳ್ಳಲು ಆಸ್ಪತ್ರೆಯ ಸಂಪರ್ಕಾಧಿಕಾರಿಯನ್ನು ಭೇಟಿ ಮಾಡಿ ವೈದ್ಯಕೀಯ ದಾಖಲಾತಿಗಳನ್ನು ಒದಗಿಸಬೇಕು. ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿಯೂ ಕಿಡ್ನಿ ಕಸಿ…

Read More

ಚಡಚಣ: ಪಟ್ಟಣದ ಶ್ರೀನಿವಾಸ ಕಂದಗಲ್ ಅವರು ಬಿಜೆಪಿ ಎಸ್.ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿಯ ಎಸ.ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಂಜುನಾಥ ಮೀಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇವರ ಆಯ್ಕೆಗೆ ಪಟ್ಟಣ ಪಂಚಾಯ್ತಿ ಸದಸ್ಯ ಮಲ್ಲು ದೋತ್ರೆ, ಮುಖಂಡರಾದ ಸುರೇಶ ವಡ್ಡರ, ಕೃಷ್ಣ ಗುಂಜೇ, ಶಿವಾನಂದ ಪಾಟೀಲ, ನಾಮದೇವ ಕಂದಗಲ, ಮಾದೇವ ಪೂಜಾರಿ, ಶಿವಾನಂದ ಮೇತ್ರಿ, ಸಿದ್ದು ಪೂಜಾರಿ, ಸುಧೀರ ಅಂಕೋಲೆ, ಸುಭಾಸ್ ತಳಕೇರಿ, ಶಂಕರ್ ಗೌಂಡಿ, ಶಿವಪ್ಪ ತಿಮ್ಮಣ್ಣ ಗೌಂಡಿ, ಸುರೇಶ್ ಎಲ್ಲಪ್ಪ ಪವಾರ, ವಿದ್ಯಾಧರ ಬನಪಟ್ಟಿ, ಪರಶುರಾಮ ಬನಪಟ್ಟಿ, ರಾಮಚಂದ್ರ ಬನಪಟ್ಟಿ, ತಿಮ್ಮಣ್ಣ ಗಾಡಿವಡ್ಡರ್ ಹರ್ಷ ವ್ಯಕ್ತಪಡಿಸಿದ್ದಾರೆ.

Read More

’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಲೇಖನ) – ಜಯಶ್ರೀ.ಜೆ. ಅಬ್ಬಿಗೇರಿ, ಇಂಗ್ಲೀಷ್ ಉಪನ್ಯಾಸಕರು,ಬೆಳಗಾವಿ ಮೊ:೯೪೪೯೨೩೪೧೪೨ ಸಕಾರಾತ್ಮಕ ಮನೋಭಾವ ಎಂದರೆ..ಸಕಾರಾತ್ಮಕ ಮನೋಭಾವದ ಕುರಿತು ರೆಮೆಜ್ ನಾಸನ್ ಹೀಗೆ ಹೇಳುತ್ತಾರೆ. ‘ಧನಾತ್ಮಕ ಚಿಂತನೆಯು ಮಾನಸಿಕ ಮತ್ತು ಭಾವನಾತ್ಮಕ ಮನೋಭಾವವಾಗಿದ್ದು. ಅದು ಜೀವನದ ಪ್ರಕಾಶಮಾನವಾದ ಭಾಗವನ್ನು ಕೇಂದ್ರೀಕರರಿಸುತ್ತದೆ ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸುತ್ತದೆ.’ ಇನ್ನೊಂದು ಹೆಚ್ಚು ವಿಸ್ತೃತವಾದ ಚರ‍್ರಿಯವರು ನೀಡಿರುವ ವ್ಯಾಖ್ಯಾನವನ್ನು ನೋಡುವುದಾದರೆ ‘ ಧನಾತ್ಮಕ ಚಿಂತನೆಯು ವಾಸ್ತವವಾಗಿ ಜೀವನದ ಸವಾಲುಗಳನ್ನು ಸಕಾರಾತ್ಮಕ ದೃಷ್ಟ್ಟಿಕೋನದಿಂದ ಸಮೀಪಿಸುವುದು ಎಂದರ್ಥ. ಕೆಟ್ಟ ವಿಷಯಗಳನ್ನು ತಪ್ಪಿಸುವುದು ಅಥವಾ ನಿರ್ಲಕ್ಷಿಸುವುದು ಎಂದರ್ಥವಲ್ಲ. ಬದಲಾಗಿ ಸಂಭಾವ್ಯ ಕೆಟ್ಟ ಸನ್ನಿವೇಶಗಳನ್ನು ಹೆಚ್ಚು ಬಳಸಿಕೊಳ್ಳುವುದು. ಇತರ ಜನರಲ್ಲಿ ಉತ್ತಮವಾದುದದ್ದನ್ನು ನೋಡಲು ಪ್ರಯತ್ನಿಸುವುದು ಮತ್ತು ನಿಮ್ಮನ್ನು ನಿಮ್ಮ ಸಾಮರ್ಥ್ಯಗಳನ್ನು ಸಕಾರಾತ್ಮಕವಾಗಿ ನೋಡುವುದನ್ನು ಒಳಗೊಂಡಿರುತ್ತದೆ.’ ಧನಾತ್ಮಕವಾದ ಮನಸ್ಥಿತಿಯು ಪ್ರಕಾಶಮಾನವಾದ ಬದಿಯಲ್ಲಿ ಗಮನಹರಿಸುವ ಮತ್ತು ಸವಾಲುಗಳನ್ನು ಧನಾತ್ಮಕ ದೃಷ್ಟಿಕೋನದಿಂದ ಸಮೀಪಿಸುವ ಪ್ರವೃತ್ತಿಯೆಂದು ಈ ವ್ಯಾಖ್ಯಾನಗಳಿಂದ ತಿಳಿದು ಬರುತ್ತದೆ. ಸಕಾರಾತ್ಮಕ ಮನಸ್ಥಿತಿಯನ್ನು ಹೊಂದುವುದು ಎಂದರೆ ಧನಾತ್ಮಕ ಚಿಂತನೆಯನ್ನು ಅಭ್ಯಾಸ ಮಾಡುವುದು. ನಿರಂತರವಾಗಿ…

Read More

ಬಸವನಬಾಗೇವಾಡಿ: ಪಟ್ಟಣದ ಪುರಸಭೆ ವಾರ್ಡ್ ೨೦ ರ ಹುಡ್ಕೋ ಕಾಲೋನಿ ಸೇರಿದಂತೆ ಕೆಲ ಭಾಗದಲ್ಲಿ ಕಳೆದ ೧೫ ದಿನಗಳಿಂದ ಕುಡಿಯುವ ನೀರು ಬರುತ್ತಿಲ್ಲ. ನಮ್ಮ ಭಾಗಕ್ಕೆ ನೀರು ಬಿಡಿಸುವಂತೆ ವಾರ್ಡಿನ ಸದಸ್ಯೆ ಫರಜಾನ ಚೌಧರಿ ಅವರ ನಿವಾಸಕ್ಕೆ ಗುರುವಾರ ಅಲ್ಲಿನ ನಿವಾಸಿಗಳು ಭೇಟಿ ನೀಡಿ ಮನವಿ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ನಮ್ಮ ಭಾಗದಲ್ಲಿ ಚರಂಡಿ ಸ್ವಚ್ಛತೆ ಸರಿಯಾಗಿ ಮಾಡುತ್ತಿಲ್ಲ. ಇದರ ಬಗ್ಗೆಯೂ ಸದಸ್ಯರು ಗಮನ ಹರಿಸಬೇಕೆಂದು ಹೇಳಿದರು.ನಿವಾಸಿಗಳ ಮನವಿಗೆ ಪುರಸಭೆ ಸದಸ್ಯೆ ಪತಿ ನಿಸಾರ ಚೌಧರಿ ಅವರು ಇದರ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದು ಇಂದೇ ನೀರು ಬಿಡಿಸುವ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಡಿ.ಮಣ್ಣೂರ, ಅಶೋಕ ಬಾರಿಕಾಯಿ, ಸಂಗಪ್ಪ ಬಿರಾದಾರ, ಅಶೋಕ ಗೋನಾಳ, ಮಾನು ಚವ್ಹಾಣ, ಮುತ್ತು ಒಡೆಯರ, ಸಿದ್ದು ಭಜಂತ್ರಿ, ಸಂಗಣ್ಣ ಮುತ್ತಗಿ, ಎ.ಐ.ನಧಾಪ, ರಾವುತಪ್ಪ ದೊಡಮನಿ ಇತರರು ಇದ್ದರು.

Read More

ವಿಶ್ವ ಮಹಿಳಾ ದಿನಾಚರಣೆಯಂಗವಾಗಿ ಉಚಿತ ದಂತ ತಪಾಸಣಾ ಶಿಬಿರ ಬಸವನಬಾಗೇವಾಡಿ: ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಸೊಪ್ಪು, ತರಕಾರಿ, ಹಣ್ಣಿನಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳ ರಕ್ಷಣೆಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಖನಿಜಯುಕ್ತ ಆಹಾರ ಸೇವಿಸಬೇಕೆಂದು ಡಾ.ಆನಂದ ಪಾಟೀಲ ಹೇಳಿದರು.ಪಟ್ಟಣದ ವಿದ್ಯಾನಗರದ ಗಂಗಾಂಬಿಕ ಅಕ್ಕನ ಬಳಗವು ವಿಶ್ವ ಮಹಿಳಾ ದಿನಾಚರಣೆಯಂಗವಾಗಿ ವಿಜಯಪುರದ ಐಡಿ ಸಹಯೋಗದಲ್ಲಿ ಸ್ಥಳೀಯ ಈರಕಾರಮುತ್ಯಾ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಯಿ ಮನುಷ್ಯನ ಕನ್ನಡಿ ಇದ್ದಹಾಗೆ. ನಮ್ಮ ಮುಖದ ಸೌಂದರ್ಯ ಚೆನ್ನಾಗಿ ಇರುವದರಲ್ಲಿ ಹಲ್ಲಿನ ಪಾತ್ರ ಬಹಳವಿದೆ. ಮಹಿಳೆಯರು ಗರ್ಭಿಣಿಯರಿದ್ದಾಗ ಹಲ್ಲುಗಳನ್ನು ಉಜ್ಜಬಾರದು ಎಂಬ ತಪ್ಪು ಕಲ್ಪನೆಯಿದೆ. ಇದರ ಸರಿಯಲ್ಲ. ಗರ್ಭೀಣಿ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ದಿನಕ್ಕೆ ಎರಡು ಸಲ ಹಲ್ಲು ಉಜ್ಜಬೇಕು. ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕೆಂದರು.ಸೌಭಾಗ್ಯ ಗುಬ್ಬ ಮಾತನಾಡಿ, ತಾಯಂದಿರಿಗೆ ಮಕ್ಕಳ ಆರೋಗ್ಯದಲ್ಲಿ ಹಲ್ಲುಗಳ ರಕ್ಷಣೆ ಕುರಿತು, ಮನುಷ್ಯನ ಅಂಗಗಳಲ್ಲಿ ಹಲ್ಲಿನ ಪಾತ್ರ…

Read More

ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದಲ್ಲಿರುವ ಮಾರುತೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮಾಡಬೇಕೆಂಬುವದು ಬಹುದಿನಗಳಿಂದ ಆಶೆ ನಮ್ಮದಾಗಿತ್ತು.ಎಲ್ಲಕ್ಕೂ ಕಾಲ ಕೂಡಿಬರಬೇಕು. ಈಗ ಕಾಲ ಕೂಡಿಬಂದಿದೆ. ಇದೀಗ ಇಲ್ಲಿನ ವಿಪ್ರಸಮಾಜ ಬಾಂಧವರು ಮುಂದೆ ಬಂದು ಮಾರುತೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಂದಾಗಿ ರೂ.೭೫ ಲಕ್ಷ ಹಣ ಸಂಗ್ರಹ ಮಾಡಿರುವುದು ಶ್ಲಾಘನೀಯ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಹೃದಯಭಾಗದಲ್ಲಿರುವ ಮೆಗಾಮಾರುಕಟ್ಟೆ ಪಕ್ಕದಲ್ಲಿರುವ ಮಾರುತೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಬುಧವಾರ ಸಂಜೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ದೇವಸ್ಥಾನವು ಜಿಲ್ಲೆಯಲ್ಲಿಯೇ ವಿಶಿಷ್ಠ ದೇವಸ್ಥಾನವಾಗಿ ರೂಪಗೊಳ್ಳುವಂತೆ ನಿರ್ಮಾಣವಾಗಬೇಕು. ದೇವಸ್ಥಾನದ ಪಾವಿತ್ರ್ಯತೆ ಕಾಪಾಡುವ ಅಗತ್ಯವಿದೆ. ದೇವಸ್ಥಾನದ ನೀಲಿನಕ್ಷೆ ಸಿದ್ದಗೊಳ್ಳುತ್ತಿದ್ದಂತೆ ರೂ.೫೦ ಲಕ್ಷ ಅನುದಾನ ತಕ್ಷಣವೇ ನೀಡುವುದಾಗಿ ಭರವಸೆ ನೀಡಿದರು.ಆರಂಭದಲ್ಲಿ ರೂ. ೧.೨೫ ಕೋಟಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭವಾಗಲಿ. ಮುಂಬರುವ ದಿನಗಳಲ್ಲಿ ದೇವಸ್ಥಾನಕ್ಕೆ ಬೇಕಾದ ಅನುದಾನವನ್ನು ಕೊಡುವ ಭರವಸೆ ನೀಡಿದರು.ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ…

Read More

ಬಸವನಬಾಗೇವಾಡಿ: ತಾಲೂಕಿನ ಕಣಕಾಲ ಗ್ರಾಮದ ಸ್ನೇಹ ಸದನ ಗೃಹಣಿ ಕೇಂದ್ರದ ಮುಂದೆ ಬಸ್ ನಿಲ್ಲಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಕಾರ್ಯರ್ತರು ಬಸ್ ಡಿಪೋ ವ್ಯವಸ್ಥಾಪಕ ಪಿ.ಕೆ.ಜಾಧವ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.ಅವರು ಸಲ್ಲಿಸಿದ ಮನವಿಯಲ್ಲಿ ಬಸವನಬಾಗೇವಾಡಿ ಮಾರ್ಗದಿಂದ ಕಾನ್ನಾಳ ಗ್ರಾಮಕ್ಕೆ ಸಂಚರಿಸುವ ಬಸ್ ಗೃಹಣಿ ಕೇಂದ್ರ ಮುಂದೆ ಬಸ್ ನಿಲ್ಲಿಸುತ್ತಿಲ್ಲ. ಅಲ್ಲಿ ಸ್ನೇಹ ಸದನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ, ನ್ಯೂ ಹೈಸ್ಕೂಲ್, ಮಡಿವಾಳೇಶ್ವರ ಪ್ರಾಥಮಿಕ ಶಾಲೆ ಹಾಗೂ ಸ್ನೇಹ ಸದನ ಶಾಲೆಯಲ್ಲಿ ಹಾಸ್ಟೇಲ್ ವ್ಯವಸ್ಥೆ ಹಾಗೂ ಯುವತಿಯರಿಗೆ, ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ. ದಿನಾಲೂ ನೂರಾರು ಮಹಿಳೆಯರು ಸ್ನೇಹ ಸದನ ಗೃಹಣಿ ಕೇಂದ್ರಕ್ಕೆ ಬರುತ್ತಾರೆ. ಈ ಕೇಂದ್ರ ಕಣಕಾಲ ಬಸ್ ತಂಗುದಾಣದಂದ ೮ ನೂರು ಮೀಟರ್ ಅಂತರವಿದೆ. ಬಸ್ ತಂಗುದಾಣದಿಂದ ಮಹಿಳೆಯರು ೮ ನೂರು ಮೀಟರ್ ನಡೆದುಕೊಂಡು ಈ ಗೃಹಣಿ ಕೇಂದ್ರಕ್ಕೆ ಬಂದು ಹೋಗಬೇಕು. ಇದೇ ಮಾರ್ಗವಾಗಿ ಬಸ್ ಮುಂದೆ ಹೋಗುವದರಿಂದ ಈ ಗೃಹಣಿ ಕೇಂದ್ರ ಮುಂದೆ…

Read More