Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ನಿರಂತರ ಸೇವೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಶ್ರೀಶೈಲ ಮಲ್ಲಿಕಾರ್ಜುನನ ಆಶೀರ್ವಾದ ಸದಾ ಇರಲಿ ಎಂದು ರಮೇಶ ಹೂಗಾರ ಹೇಳಿದರು.ಸಿಂದಗಿ ಸದ್ಭಕ್ತರಿಂದ ಶ್ರೀಶೈಲ ಪಾದಯಾತ್ರಿಗಳಿಗೆ ಸತತವಾಗಿ ೧೭ ವರ್ಷಗಳಿಂದ ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಯ ಗಟ್ಟು ಗ್ರಾಮದಲ್ಲಿ ಹಮ್ಮಿಕೊಂಡ ದಾಸೋಹ ಸೇವೆಯಲ್ಲಿ ನಿರತರಾಗಿ ಮಾತನಾಡಿದ ಅವರು, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದಿಂದ ಆಗಮಿಸುವ ಭಕ್ತಾದಿಗಳಿಗೆ ಸಿಂದಗಿಯ ಗುತ್ತಿಗೇದಾರ ಮುತ್ತು ಮುಂಡೇವಾಡಗಿ ಅವರ ನೇತೃತ್ವದ ತಂಡದಿಂದ ಸತತವಾಗಿ ೧೭ವರ್ಷಗಳಿಂದ ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಯ ಗಟ್ಟು ಗ್ರಾಮದಲ್ಲಿ ದಾಸೋಹ ಸೇವೆ ನಡೆಯುತ್ತಿದೆ. ಬೆಳಿಗ್ಗೆ ಅಲ್ಪೋಪಹಾರ, ಮಧ್ಯಾಹ್ನ ಊಟದ ಸೇವೆ ನಿರಂತರವಾಗಿ ಜರುಗುತ್ತಿದೆ. ಮತ್ತು ಸಿಂದಗಿಯ ಧನ್ವಂತರಿ ಆಸ್ಪತ್ರೆಯ ವತಿಯಿಂದ ಪ್ರಥಮ ಹಂತದ ಚಿಕಿತ್ಸೆ ಸೇವೆ ಮಾಡಲಾಗುತ್ತಿದೆ. ಸಿಂದಗಿಯ ಹಲವಾರು ಭಕ್ತಾದಿಗಳು ದಾಸೋಹಕ್ಕೆ ಸ್ವ-ಇಚ್ಛೆಯಿಂದ ಸಹಾಯ ಮಾಡುತ್ತಾ ಬಂದಿದ್ದಾರೆ. ಅದರಂತೆ ಗಟ್ಟು ಗ್ರಾಮದ ಭಕ್ತಾದಿಗಳು ನಮಗೆ ಬೆಂಬಲವಾಗಿ ನಿಂತಿರುವುದು ಆತ್ಮಸ್ಥೈರ್ಯ ತುಂಬಿದೆ ಎಂದರು.ಆರು ದಿನಗಳ ಕಾಲ ನಡೆಯುವ ಈ ಸೇವೆಯಲ್ಲಿ…
ವಿಜಯಪುರ: ಇತ್ತೀಚಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿಕಾಂ ಎರಡನೇ ಸೆಮಿಸ್ಟರ್ ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಹುಣಶ್ಯಾಳ ಜಿಲ್ಲಾ ಪಂಚಾಯತಿ ಸೇವಾ ಆಕಾಂಕ್ಷಿ ಬಂಗಾರೆಮ್ಮ ಮಾನಪ್ಪ ದೊಡಮನಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಪ್ರಶ್ನೆ ಪತ್ರಿಕೆ ಸೋರಿಕೆಯಾದ ವರದಿ ವೃತ್ತಪತ್ರಿಕೆಗಳಲ್ಲಿ ಬಂದ ವಿಷಯ ಪ್ರಸ್ತಾಪಿಸಿ, ಇದರಿಂದ ಸಮಾಜ ಸುಶಿಕ್ಷಿತದಿಂದ ಅಶಿಕ್ಷಿತದ ಕಡೆಗೆ ಸಾಗುತ್ತದೆ, ಇದು ಅಕ್ಷಮ್ಯ ಎಂದರು. ಇಂತಹ ಘಟನೆಗಳಿಂದ ಕಷ್ಟಪಟ್ಟು ಪರೀಕ್ಷೆಗೆ ತಯಾರಿ ನಡೆಸಿ, ದೂರದ ಊರುಗಳಿಂದ ಪ್ರಯಾಣಿಸಿ, ಸರಿಯಾಗಿ ಊಟ, ನಿದ್ರೆ ಇಲ್ಲದೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಆತ್ಮವಿಶ್ವಾಸ ಕುಂದಿಸುತ್ತದೆ.ಎಸ್.ಎಸ್.ಎಲ್.ಸಿ ಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ವರೆಗೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವ ವಿಷಯ ಇತ್ತೀಚಿಗೆ ಸಾಮಾನ್ಯವಾಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ಗೊಂದಲವಾಗುತ್ತದೆ ಹಾಗೂ ಪ್ರಾಮಾಣಿಕ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ, ಇಂತಹ ಘಟನೆಗಳಿಗೆ ಕಾರಣರಾದ ವಿಶ್ವವಿದ್ಯಾಲಯ ಹಾಗೂ ಪರೀಕ್ಷಾ ಮಂಡಳಿಗಳ ಮೇಲುಸ್ತುವಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು.ನಕಲಿ ಅಭ್ಯರ್ಥಿಗಳ ಹಾಜರಿ, ಉತ್ತರ ಪತ್ರಿಕೆಗಳ ನಕಲು, ದಾಖಲೆಗಳನ್ನು ತಿರುಚುವುದು, ಮೆರಿಟ್ ಪಟ್ಟಿ ಸಿದ್ಧಪಡಿಸುವಲ್ಲಿ…
ಅಕಾಲಿಕ ಆಣೆಕಲ್ಲು ಮಳೆ ಹಾಗೂ ಬಿರುಗಾಳಿಗೆ ಬೆಳೆಹಾನಿ | ಪ್ರತಿಭಟನೆ ಎಚ್ಚರಿಕೆ ವಿಜಯಪುರ: ಶನಿವಾರ ಸಂಜೆ ಸುರಿದ ಅಕಾಲಿಕ ಆಣೆಕಲ್ಲು ಮಳೆ ಹಾಗೂ ಭೀಕರ ಗಾಳಿಯಿಂದ ಜಿಲ್ಲೆಯ ಹಲವೆಡೆ ಲಿಂಬೆ, ದ್ರಾಕ್ಷಿ, ದಾಳಿಂಬೆ, ಮಾವು, ಚಿಕ್ಕು, ತೆಂಗು ಸೇರಿದಂತೆ ವಿವಿಧ ರೀತಿಯ ತೋಟಗಾರಿಕೆ ಬೆಳೆಗಳು ನೆಲಕ್ಕೆ ಉರುಳಿವೆ, ಜೊತೆಗೆ ಸಿಡಿಲು ಬಡಿದು ಎತ್ತು, ಕುರಿ, ಕೋಳಿಗಳು ಸಾವನ್ನಪ್ಪಿರುವ ಘಟನೆಗಳು ನಡೆದು ರೈತರಿಗೆ ಸಾಕಷ್ಟು ನಷ್ಟವುಂಟಾಗಿದೆ ನಷ್ಟಗೊಂಡ ರೈತರಿಗೆ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿ ಪರಿಹಾರಕ್ಕಾಗಿ ಆಗ್ರಹಿಸಿದರು.ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡುತ್ತಾ, ಶನಿವಾರ ರಾತ್ರಿ ಜಿಲ್ಲೆಯ ಹಲವು ಕಡೆ ಏಕಾಏಕಿ ಅಕಾಲಿಕ ಆಣೆಕಲ್ಲು ಮಳೆ ಹಾಗೂ ಭೀಕರ ಗಾಳಿಯಿಂದಾಗಿ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿರುವುದು ಕಂಡು ಬಂದಿದೆ, ಸಮೀಪದ ಜಂಬಗಿ(ಆಹೇರಿ) ಮಾದಾಳ ವಸ್ತಿ ಎಂಭ ಗ್ರಾಮದ ಸುಮಾರು ೪೦-೫೦ ರೈತರ…
ತಿಕೋಟಾ: ಅಖಂಡ ಭಾರತ ದೇಶದೆಲ್ಲೆಡೆ ಆರು ಸಾವಿರಕ್ಕೂ ಹೆಚ್ಚು ಲಿಂಗಗಳನ್ನು ಸ್ಥಾಪನೆ ಮಾಡಿ ಜನರಲ್ಲಿ ಭಕ್ತಿ ಭಾವ ಹಾಗೂ ದೇಶ ಭಕ್ತಿ ಮೂಡಿಸುವ ಕಾರ್ಯ ಮಾಡುತ್ತಾ ಹಲವು ಪವಾಡಗಳನ್ನು ಮಾಡಿದ ಕೀರ್ತಿ ನವದೆಹಲಿಯ ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರೀ ಹವಾಮಲ್ಲಿನಾಥ ಮಹಾರಾಜರಿಗೆ ಸಲ್ಲುತ್ತದೆ ಎಂದು ಪ್ರವಚನಕಾರ ಬಾಬುರಾವ ಮಹಾರಾಜ ಹೇಳಿದರು.ತಾಲ್ಲೂಕಿನ ಕನಮಡಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಶ್ರೀ ಮುರುಘೇಂದ್ರ ಶಿವಯೋಗಿಗಳ ಶತಮಾನೋತ್ಸವ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಸಾರೋಹಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತಾನಾಡಿದರು.ಜನರಲ್ಲಿ ದೇಶಾಭಿಮಾನ ಬೆಳೆಯಬೇಕು. ಎಲ್ಲ ಭಕ್ತರು ಪರಿಶುದ್ಧವಾದ ಜೀವನ ನಡೆಸಬೇಕು. ಶಾಂತಿ ಸಮಾಧಾನ ಪಡೆದುಕೊಳ್ಳಬೇಕು. ಹಗಲು ರಾತ್ರಿ ಎನ್ನದೇ ದೇಶ ಸೇವೆಗೆ ತನ್ನ ಜೀವವನ್ನೆ ಮುಡುಪಾಗಿಟ್ಟ ಸೈನಿಕರನ್ನು ಕಂಡಾಗ, ಬಿಸಿಲು ಗಾಳಿ ಎನ್ನದೆ ಎಲ್ಲರಿಗೂ ಅನ್ನ ನೀಡುವ ಶ್ರಮ ಜೀವಿ ರೈತರನ್ನು ಕಂಡಾಗ, ಅಕ್ಷರ ಕಲಿಸಿ ಜ್ಞಾನ ನೀಡುವ ಶಿಕ್ಷಕರನ್ನು ಕಂಡಾಗ ಎಲ್ಲರ ಮನ ಮೀಡಿಯಬೇಕೆಂಬುದು ಹವಾ…
ಚಿಮ್ಮಡ: ನಮ್ಮ ಭಾಗದಲ್ಲಿಯೂ ಕಡಿಮೆ ಶುಲ್ಕದಲ್ಲಿ ವಿಶ್ವ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ಶಿಕ್ಷಣ ಸಂಸ್ಥೆಗೆ ಈ ಭಾಗದ ರೈತರು, ಶಿಕ್ಷಣ ಪ್ರೇಮಿ ಪಾಲಕರು ಸಹಕಾರ ನೀಡಬೇಕಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ಇಂಟರನ್ಯಾಷನಲ್ ಸ್ಕೂಲ್ ಆವರಣದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ಶಿಬಿರ ಪ್ರಾರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗುಣಮಟ್ಟದ ಶಿಕ್ಷಣಕ್ಕಾಗಿ ನಮ್ಮ ಭಾಗದಿಂದ ಮೂಡಬಿದರಿ, ಉಡುಪಿ, ಮಂಗಳೂರು ವಿದ್ಯಾಕೇಂದ್ರಗಳಿಗೆ ಪ್ರತೀವರ್ಷ ನೂರಾರು ವಿದ್ಯಾರ್ಥಿಗಳು ಪ್ರವೇಶ ಪಡೆಯುತಿದ್ದು. ಆ ಭಾಗದಿಂದ ವಿದ್ಯಾರ್ಥಿಗಳು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯುವಂಥಹ ಗುಣಮಟ್ಟದ ಶಿಕ್ಷಣವನ್ನು ಕಡಿಮೆ ಶುಲ್ಕದಲ್ಲಿ ನೀಡುವ ಉದ್ದೇಶ ಈ ಸಂಸ್ಥೆ ಹೊಂದಿದ್ದು ಇದೇ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಗಳು ಪ್ರಾರಂಭವಾಗಲಿವೆ ಎಂದರು.ನಿವೃತ್ತ ಪ್ರಾಂಶುಪಾಲ ಎಸ್.ಎಸ್. ಹೂಲಿ ಮಾತನಾಡಿ ಪ್ರತಿಯೊಬ್ಬ ಪಾಲಕರು ತಾವು ಎಷ್ಠೆ ತೊಂದರೆಯಲ್ಲಿದ್ದರು ತಮ್ಮ ಮಕ್ಕಳ ಶಿಕ್ಷಣ, ಭವಿಷ್ಯದ ಕುರಿತು ಯಾವುದೇ ರಾಜಿ ಮಾಡಿಕೊಳ್ಳದೆ ಶಿಕ್ಷಣ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಯಾಗಿದ್ದು ಅವರ…
ದೇವರಹಿಪ್ಪರಗಿ: ಗ್ರಾಮದ ೪ ಮತ್ತು ೫ ನೇ ವಾರ್ಡಿನ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದ ಗ್ರಾಮ ಪಂಚಾಯಿತಿ ಸಿಬ್ಬಂದಿ ವಿರುದ್ಧ ಮಹಿಳೆಯರು ಖಾಲಿ ಕೊಡಗಳನ್ನು ಇಟ್ಟು ಕೂಡಲೇ ನೀರು ಪೂರೈಸಲು ಆಗ್ರಹಿಸಿದರು.ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಸೋಮವಾರ ಮಹಿಳೆಯರು ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯಿತಿಗೆ ಆಗಮಿಸಿ ಕುಡಿಯುವ ನೀರಿನ ಸಮಸ್ಯೆಯ ಗಂಭೀರತೆಯ ಕುರಿತು ಸಿಬ್ಬಂದಿಯ ಗಮನ ಸೆಳೆದರು.ಈ ಸಂದರ್ಭದಲ್ಲಿ ಅನಸುಬಾಯಿ ಬಿರಾದಾರ ಮಾತನಾಡಿ, ನಮ್ಮ ವಾರ್ಡುಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ನೀರು ಸಮಯಕ್ಕೆ ಸರಿಯಾಗಿ ಪೂರೈಸಲು ಹಲವು ಬಾರಿ ಮನವಿ ಮಾಡಿದರೂ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಹೀಗಾದರೆ ನೀರಿಗಾಗಿ ಮಹಿಳೆಯರು ಯಾರನ್ನು ಕೇಳಬೇಕು? ಗ್ರಾಮದಲ್ಲಿ ೨೫ ಕೊಳವೆಭಾವಿ ಹಾಗೂ ೩ ಭಾವಿಗಳಿದ್ದರೂ ಅವುಗಳಲ್ಲಿ ನೀರಿನ ಕೊರತೆ ಕಂಡು ಬಂದಿದೆ. ಆದ್ದರಿಂದ ಗ್ರಾಮ ಪಂಚಾಯಿತಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನೀರು ಪೂರೈಸಲು ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮುಂದೆ ಉಗ್ರ ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿಸಿ ನಂತರ ಗ್ರಾಮ…
ವಿಜಯಪುರ: 70 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ನವರು ತಾವು ಎಷ್ಟು ಸ್ವಚ್ಚವಾಗಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಂಸದ ರಮೇಶ ಜಿಗಣಗಿ ಖಾರವಾಗಿ ಪ್ರಶ್ನಿಸಿದರು.ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿವಿಧ ಮೋರ್ಚಾಗಳ ಸಭೆಯನ್ನುದ್ದೇಶಿ ಮಾತನಾಡಿ, ಮುಸ್ಲಿಂ, ದಲಿತ, ಹಿಂದುಳಿದವರ ಮತ ಪಡೆದು ಅವರಿಗೆ ಏನು ಮಾಡಿದರು. ಅವರಿಗೆ ಒಂದು ಮನೆಯನ್ನಾದರೂ ಕಟ್ಟಿಸಿಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು. ಕೇವಲ ಅವರ ಮತ ಪಡೆದು ತಮ್ಮ ಮನೆ ತುಂಬಿಸಿಕೊಟ್ಟಿದ್ದಾರೆಂದು ಆರೋಪಿಸಿದರು.ಕಾಂಗ್ರೆಸ್ ನವರು ಎಷ್ಟೇ ಪ್ರಯತ್ನಿಸಿದರೂ 2 ರಿಂ3 ಸ್ಥಾನ ಗಳಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರಸ್ ಸರ್ಕಾರ ಇದ್ದರೂ, ಜನತೆ ನಮ್ಮ ಪರ ಇದ್ದಾರೆ. ದೇಶದ ರಕ್ಷಣೆ ಪ್ರದಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ದೇಶದ ಜನತೆಗೆ ಮನವರಿಕೆ ಆಗಿದೆ ಎಂದು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ ಮಾತನಾಡಿ, ಹಿಂದಿನ ಎಲ್ಲಾ ಸರ್ಕಾರಗಳು ಕೇವಲ ಭ್ರಷ್ಡಚಾರದಲ್ಲಿ ಮುಳುಗಿದ್ದವು. ರಾಜ್ಯದ ಕಾಂಗ್ರೆಸ್ ಸರ್ಕಾರ ಸಿಎಂ, ಡಿಸಿಎಂ ಅವರು ಆಡಳಿತಕ್ಕೆ ಬರುವಾಗ ಬಳೀ ಸುಳ್ಳು…
ವಿಜಯಪುರ: ಏ,೦೧- ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ೫ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮಕ್ಕೆ ವಿಜಯಪುರ ಉಪ ವಿಭಾಗಾಧಿಕಾರಿ ಶ್ರೀಮತಿ ಶ್ವೇತಾ ಬೀಡಕರ ಚಾಲನೆ ನೀಡಿದರು.ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಹಮ್ಮಿಕೊಂಡ ಲಸಿಕಾ ಕಾರ್ಯಕ್ರಮಕ್ಕೆ ಸೋಮವಾರ ಬುರಣಾಪುರದ ಸರ್ಕಾರಿ ಗೋಶಾಲೆಯಲ್ಲಿ ಗೋ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಏ.೧ ರಿಂದ ೩೦ರವರೆಗೆ ಲಸಿಕಾ ಕಾರ್ಯಕ್ರಮಕ್ಕೆ ಹಮ್ಮಿಕೊಂಡಿದ್ದು, ಲಸಿಕಾಕರಣ ಸಂದರ್ಭದಲ್ಲಿ ಲಸಿಕೆಯಿಂದ ಯಾವುದೇ ಜಾನುವಾರುಗಳು ವಂಚಿತವಾಗದಂತೆ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕುವಂತೆ ತಿಳಿಸಿದ ಅವರು, ರೈತರು ಸಹ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಅವರು ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಅಶೋಕ ಗೊಣಸಗಿ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಬಿ.ಎಸ್.ಕನಮಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ದೇವರಹಿಪ್ಪರಗಿ: ಪಟ್ಟಣದ ರಮೇಶ ಮಸಬಿನಾಳ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಹಾಗೂ ಚಟುವಟಿಕೆಗಳಿಗೆ ಪೂರಕವಾಗಿ ಈ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ಮೂಲಜೀಣೋದ್ಧಾರಕ ಲಿಂ. ಮಲ್ಲಪ್ಪ ಸಿಂಹಾಸನ ಪ್ರತಿಮೆ ಸಮೀಪವಿರುವ ಶುದ್ಧ ನೀರಿನ ಘಟಕ ಸೋಮವಾರ ಪುನಾರಂಭಗೊಂಡಿತ್ತು.ಶುದ್ಧ ನೀರಿನ ಘಟಕಕ್ಕೆ ಚಾಲನೆ ನೀಡಿದ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣಗೊಂಡಿರುವ ಈ ಶುದ್ಧ ನೀರಿನ ಘಟಕ ಬಹುದಿನಗಳಿಂದ ದುರಸ್ತಿಯಾಗದೇ ಹಾಗೇ ಉಳಿದುಕೊಂಡಿತ್ತು. ನಮ್ಮ ಸಮಿತಿಯಿಂದ ಶುದ್ಧ ನೀರಿನ ಘಟಕವನ್ನು ದುರಸ್ತಿ ಮಾಡುವಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿದ ಅಽಕಾರಿಗಳು ಈ ಶುದ್ಧ ನೀರಿನ ಘಟಕವನ್ನು ದುರಸ್ತಿಗೊಳಿಸಿ ಪುನಾರಂಭ ಮಾಡುತ್ತಿರುವದು ಒಳ್ಳೆಯ ಕಾರ್ಯ. ಬಿರುಬಿಸಿಲಿನಿಂದಾಗಿ ಶುದ್ಧ ನೀರು ತುಂಬಾ ಅಗತ್ಯವಿದೆ. ಪಟ್ಟಣಕ್ಕೆ ನಾನಾ ಗ್ರಾಮಗಳಿಂದ ಆಗಮಿಸುತ್ತಾರೆ. ಪಟ್ಟಣ ಸೇರಿದಂತೆ ಪಟ್ಟಣಕ್ಕೆ ಆಗಮಿಸುವ ಜನರಿಗೆ ಶುದ್ಧ ನೀರು ತುಂಬಾ ಅಗತ್ಯವಿದೆ. ಮಾರುಕಟ್ಟೆ ಪ್ರದೇಶದಲ್ಲಿರುವ ಈ ಶುದ್ಧ ನೀರಿನ ಘಟಕದಿಂದ ತುಂಬಾ ಜನರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ದುರಸ್ತಿ ಮಾಡಿ ಜನರಿಗೆ ಶುದ್ಧ ನೀರು ಒದಗಿಸಲು ಮುಂದಾಗಿರುವದು…
