ಸಿಂದಗಿ: ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಅವರನ್ನು ಕರ್ತವ್ಯದ ಲೋಪದಡಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ನಗರದ ಸ್ವಚ್ಚ ಮತ್ತು ನೈರ್ಮಲ್ಯತೆ ಕುರಿತಾಗಿ ಸಾರ್ವಜನಿಕರು ನೀಡಿದ ದೂರುಗಳನ್ನು ಪುರಸಭೆ ಮುಖ್ಯಾಧಿಕಾರಿ ಕಡೆಗಣಿಸಿದ್ದರು. ಕಳೆದ ನಾಲೈದು ದಿನಗಳ ಹಿಂದೆ ನಗರದಲ್ಲಿ ಸೂರಿದ ಬಾರಿ ಮಳೆಯಿಂದ ಪಟ್ಟಣದ ೨೩ ವಾರ್ಡಗಳಲ್ಲಿ ಚರಂಡಿ ನೀರು ಹೊರ ಬಂದು ಮನೆಗಳಲ್ಲಿ ನುಗ್ಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ಅವರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿಲ್ಲ. ಜೊತೆಗೆ ಕಛೇರಿಯ ಯಾವುದೇ ಸಭೆಗಳಿಗೆ ಹಾಜರಿರುವುದಿಲ್ಲ. ಪುರಸಭೆಯಲ್ಲಿ ನಡೆಯುವ ವ್ಯವಹಾರದ ಕುರಿತಾಗಿ ಜಿಲ್ಲಾಧಿಕಾರಿಗಳು ಮಾಹಿತಿ ಕೇಳಿದಾಗ ಅವರು ಯಾವುದೇ ಉತ್ತರ ನೀಡಿರುವುದಿಲ್ಲ. ಇಂತಹ ಹಲವಾರು ವಿಚಾರಗಳ ಕುರಿತಾಗಿ ಕರ್ತವ್ಯ ವೈಫಲ್ಯಗಳನ್ನು ಉಲ್ಲೇಖಿಸಿ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಅವರನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅಮಾನತ್ತು ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

