Author: editor.udayarashmi@gmail.com

ಇಂಡಿ: ೨೦೨೪-ಮಾರ್ಚ್ ತಿಂಗಳಲ್ಲಿ ನಡೆದ ೨೦೨೩-೨೪ ನೇ ಸಾಲಿನ ಚವಡಿಹಾಳದ ಗುರುಬಸವ ಪ.ಪೂ ವಿಜ್ಞಾನ ಕಾಲೇಜಿನ ಒಟ್ಟು ೫೬ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ ೫೬ ವಿದ್ಯಾರ್ಥಿಗಳು ಪಾಸ್ ಆಗಿದ್ದು, ಒಟ್ಟಾರೆ ಫಲಿತಾಂಶ ಶೇಕಡಾ ೧೦೦% ರಷ್ಟು ಆಗಿರುತ್ತದೆ.ಕುಮಾರ. ಬಿಳೇನಸಿದ್ಧ ಹಿರೇಕುರಬರ ಇವನು ಶೇಕಡಾ ೯೬.೫೦% ರಷ್ಟು (೫೭೯) ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಕುಮಾರಿ. ಭಾಗ್ಯಶ್ರೀ ಹೊಸಮನಿ ೯೫.೫೦% ರಷ್ಟು (೫೭೩) ಅಂಕ ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ ಹಾಗೂ ಕುಮಾರಿ. ಕಾಂಚನಾ ಚೋರಗಿಮಠ ೯೫.೩೩% ರಷ್ಟು (೫೭೨) ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾಳೆ.ಜೀವಶಾಸ್ತ್ರ ವಿಷಯದಲ್ಲಿ ೭ ವಿದ್ಯಾರ್ಥಿಗಳು ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಪ್ರಾಚಾರ್ಯರು ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕಲಕೇರಿ: ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುಧಾನಿತ ಬಸವೆಶ್ವರ ಸಂಯುಕ್ತ ಪದವಿಪೂರ್ವ ಮಹಾವಿಧ್ಯಾಲಯದ ೨೦೨೪ ನೇ ಸಾಲಿನ ದ್ವಿತೀಯ ಪಿಯುಸಿ (ಕಲಾ ವಿಭಾಗ) ಪಲಿತಾಂಶ ಶೇ.೯೮ ರಷ್ಟಾಗಿದೆ. ಕುಮಾರಿ ಭಾಗ್ಯ ಪರಶುರಾಮ ಶೇ.೯೬.೩೩ (ಪ್ರಥಮ) ಕುಮಾರಿ ರೇಣುಕಾ ಬೀರನೂರ ಶೇ.೯೫.೧೬ (ದ್ವಿತೀಯ) ಕುಮಾರಿ ಬಾಗ್ಯಶ್ರೀ ಕೆಂಭಾವಿ ಶೇ.೯೩.೩೩ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.ಪರೀಕ್ಷೆಗೆ ಹಾಜರಾದ ಒಟ್ಟು ೧೩೩ ವಿಧ್ಯಾರ್ಥಿಗಳಲ್ಲಿ ೧೭ ವಿಧ್ಯಾರ್ಥಿಗಳು ಉನ್ನತ ಶ್ರೇಣಿ, ೯೪ ವಿಧ್ಯಾರ್ಥಿಗಳು ಪ್ರಥಮ ಶ್ರೇಣಿ,೧೭ ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೆರ್ಗಡೆ ಹೊಂದಿದ್ದು ಕಾಲೇಜಿನ ಒಟ್ಟು ಪಲಿತಾಂಶ ಶೇ.೯೮.೪೯ ರಷ್ಟಾಗಿದೆ. ವಿಧ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯ ಸಿ ಎಸ್ ಹಿರೇಮಠ, ಸಂಸ್ಥೇಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಜೋಗುರ,ಅಧ್ಯಕ್ಷ ಶಾಂತಗೌಡ ಪಾಟೀಲ,ಆಡಳಿತ ಮಂಡಳಿ ಸರ್ವ ಸದಸ್ಯರು ಹಾಗೂ ಸಿಬ್ಬಂದ್ದಿ ವರ್ಗ ಅಭಿನಂದಿಸಿದ್ದಾರೆ.

Read More

ಆಲಮೇಲ: ತಾಲೂಕಿನ ದೇವರನಾವದಗಿ ಗ್ರಾಮದ ಶ್ರೀ ಕಲ್ಲಪ್ಪ ಗುರಪ್ಪ ಗುಗ್ಗರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.೧೦೦ಕ್ಕೆ ನೂರು ಫಲಿತಾಂಶ ಬಂದಿದೆ. ಒಟ್ಟು ೯೨ ವಿದ್ಯಾರ್ಥಿಗಳಲ್ಲಿ ೯೨ ವಿದ್ಯಾರ್ಥಿಗಳು ಉತ್ತಿರಣರಾಗಿದ್ದಾರೆ. ಅದರಲ್ಲಿ ೬೪ ವಿದ್ಯಾರ್ಥಿಗಳು ಡಿಸ್ಟಿಂಗಷನ್, ೨೮ ಪ್ರಥಮ ಸ್ಥಾನದಲ್ಲಿ ಉತ್ತಿರಣರಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ ಪಡೆದುಕೊಂಡಿದ್ದು ಮತ್ತು ಪರೀಕ್ಷಾ ಕೇಂದ್ರಕ್ಕು ಪ್ರಥಮ ಮತ್ತು ದ್ವಿತೀಯ ಸ್ಥಾನವು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.ವಿದ್ಯಾರ್ಥಿನಿ ಬನಶಂಕರಿ ಹೂವಿನಹಳ್ಳಿ ಮತ್ತು ಸಂಗಮ್ಮ ಸಿನ್ನೂರ ಇಬ್ಬರು ವಿದ್ಯಾರ್ಥಿನಿಯರು ೫೯೩(೯೮.೮೩%) ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ ಪಡೆದುಕೊಂಡಿದ್ದಾರೆ ಮತ್ತು ಪರೀಕ್ಷಾ ಕೇಂದ್ರಕ್ಕೆ ಪ್ರಥಮ, ಅಂಬಿಕಾ ಮಾನಕರ ೫೯೧(೯೮%) ಅಂಕ ಪಡೆದು ಪರೀಕ್ಷಾ ಕೇಂದ್ರಕ್ಕೆ ದ್ವಿತೀಯ ಸ್ಥಾನ, ಮೇಲಪ್ಪಗೌಡ ಬಿರಾದಾರ ೫೮೯(೯೮%) ಅಂಕ ಪಡೆದು ತೃತೀಯ ಸ್ಥಾನದಲ್ಲಿ ಆಯ್ಕೆ ಆಗಿದ್ದಾರೆ.ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಅವರ ಸಾಧನೆಗೆ ಸಂಸ್ಥೆ ಅಧ್ಯಕ್ಷ ಮಹಾಂತೇಶ ಗುಗ್ಗರಿ, ಆಡಳಿತ ಮಂಡಳಿ ಹಾಗೂ…

Read More

ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ಬಸವೇಶ್ವರರ ತಾಯಿ ಮಾದಲಾಂಬಿಕೆ ಸ್ಮಾರಕ ಭವನ ಮುಂಭಾಗ ಮಂಗಳವಾರಬಸವರಾಜ ಬಿರಾದಾರ ಅವರು ಬರೆದ ಬಸವ ರಾಜಕೀಯ ಪುಸ್ತಕವು ಜೋಡೆತ್ತಿನ ರೈತರಿಂದ ಲೋಕಾರ್ಪಣೆಗೊಂಡಿತು. ಇಂಗಳೇಶ್ವರ ಗ್ರಾಮದ ಹಿರಿಯ ಜೋಡೆತ್ತಿನ ರೈತ ಸಿದ್ರಾಮಪ್ಪ ಬಾಗೇವಾಡಿ ಅವರು ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿ, ನಾಲ್ಕು ಕಾಲಿನಬಸವಣ್ಣ ಉಳಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಅನ್ನ ದೊರೆಯುವುದು. ಆದರೆ, ಇಂದು ಸಮಾಜವು ಜೋಡೆತ್ತಿನ ಕೃಷಿಕರ ಮಹತ್ವವನ್ನು ಅರಿಯದೇ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಪುಸ್ತಕದ ಲೇಖಕ ಬಸವರಾಜ ಬಿರಾದಾರ ಅವರು ಮಾತನಾಡಿ, ಜೋಡೆತ್ತಿನ ಕೃಷಿ ಪುನಶ್ಚೇತನದಮಾರ್ಗೋಪಾಯಗಳನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಬಸವ ಧರ್ಮದ ಮೂಲ ಬೇರು ಜೋಡೆತ್ತಿನ ಕೃಷಿಯಾಗಿದೆ. ಜೋಡೆತ್ತಿನ ಕೃಷಿ ಉಳಿದರೆ ಮಾತ್ರ ಬಸವ ಧರ್ಮ ಉಳಿಯಲು ಸಾಧ್ಯ ಎಂಬ ವಿಚಾರವನ್ನು ಮೂಲಾಧಾರವಾಗಿ ಇಟ್ಟುಕೊಂಡು ಪುಸ್ತಕ ಬರೆಯಲಾಗಿದೆ ಎಂದರು.ಜೋಡೆತ್ತಿನ ಕೃಷಿ ಉಳಿದರೆ ಮಾತ್ರ ಬಯಲು ಸೀಮೆಯ ನಾಗರೀಕತೆಗಳು ಉಳಿಯಲು ಸಾಧ್ಯ. ಎತ್ತು ಸಾಕಾಣಿಕೆದಾರರಿಗೆ ಸೂಕ್ತ ಪ್ರೋತ್ಸಾಹ ದೊರೆಯದ ಕಾರಣ ಜೋಡೆತ್ತಿನಕೃಷಿ ಪ್ರತಿ ಗ್ರಾಮಗಳಲ್ಲಿ…

Read More

– ಬಸವರಾಜ ನಂದಿಹಾಳಬಸವನಬಾಗೇವಾಡಿ: ತಾಲೂಕಿನ ಕರಭಂಟನಾಳ ಗ್ರಾಮದ ರೈತ ನೀಲಕಂಠರಾಯ ಲಿಂಗರೆಡ್ಡಿ ಅವರ ಎರಡನೇ ಸುಪುತ್ರಿ ಶ್ರೀಲತಾ ಲಿಂಗರೆಡ್ಡಿ ಅವಳು ಹೂವಿನಹಿಪ್ಪರಗಿಯ ಎಂ.ಜಿ.ಕೋರಿ ಮತ್ತು ಡಾ.ಬಿ.ಜಿ.ಬ್ಯಾಕೋಡ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ಹೂವಿನಹಿಪ್ಪರಗಿಯ ಬಾಲಕಿಯರ ವಸತಿ ನಿಲಯದಲ್ಲಿದ್ದುಕೊಂಡು ನಿರಂತರ ಅಧ್ಯಯನದಿಂದ ಪಿಯುಸಿ ಕಲಾ ವಿಭಾಗದಲ್ಲಿ ೫೯೨ ಅಂಕ(ಶೇ.೯೮.೬೬) ಪಡೆಯುವ ಮೂಲಕ ರಾಜ್ಯಕ್ಕೆ ಹದಿನೇಳನೇ ಸ್ಥಾನ ಪಡೆದುಕೊಂಡು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾಳೆ.ಶ್ರೀಲತಾ ಲಿಂಗರೆಡ್ಡಿ ಅವಳು ಇತಿಹಾಸ, ಸಮಾಜಶಾಸ್ತ್ರ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕ, ಕನ್ನಡ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ವಿಷಯದಲ್ಲಿ ೧೦೦ ಕ್ಕೆ ೯೯ ಅಂಕ, ಆಂಗ್ಲ ವಿಷಯಕ್ಕೆ ೧೦೦ಕ್ಕೆ ೯೫ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ. ಪ್ರಾಥಮಿಕ ಶಾಲೆಯಿಂದಲೂ ನಿರಂತರ ಅಧ್ಯಯನ ಶೀಲತೆ ಬೆಳೆಸಿಕೊಂಡಿದ್ದ ಶ್ರೀಲತಾ ಎಸ್ಎಸ್ಎಲ್ಸಿಯಲ್ಲಿಯೂ ಉತ್ತಮ ಸಾಧನೆಯನ್ನು ಮಾಡಿದ್ದಾಳೆ. ಗ್ರಾಮೀಣ ಭಾಗದಲ್ಲಿದ್ದುಕೊಂಡು ಉತ್ತಮ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ.ಶ್ರೀಲತಾ ಲಿಂಗರೆಡ್ಡಿ ಅವಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ನಾನು ಕಾಲೇಜು ಆರಂಭವಾದ ದಿನದಿಂದಲೂ ನಿರಂತರ ಅಧ್ಯಯನ ಮಾಡುತ್ತಿದ್ದೆ. ನನಗೆ…

Read More

ಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಜಾಯವಾಡಗಿ ಗ್ರಾಮದ ಆರಾಧ್ಯದೇವ ಸೋಮನಾಥೇಶ್ವರ, ಶಿವಪ್ಪ ಮುತ್ಯಾರ ಜಾತ್ರಾಮಹೋತ್ಸವದಂಗವಾಗಿ ಮಂಗಳವಾರ ಸಂಜೆ ಅಪಾರ ಭಕ್ತರ ಜಯಘೋಷದೊಂದಿಗೆ ಸಡಗರ, ಸಂಭ್ರಮದಿಂದ ರಥೋತ್ಸವ ಜರುಗಿತು.ರಥೋತ್ಸವದಂಗವಾಗಿ ಪೂರ್ವಭಾವಿಯಾಗಿ ವಿವಿಧ ವಾದ್ಯಮೇಳದೊಂದಿಗೆ ಬ್ಯಾಕೋಡ ಗ್ರಾಮಸ್ಥರು ರಥಕ್ಕೆ ಕಳಸ ಏರಿಸಿದರು. ಸೋಲವಾಡಗಿ ಗ್ರಾಸ್ಥರು ಎತ್ತಿನ ಗಾಡಿಯಲ್ಲಿ ಮೆರವಣಿಗೆಯೊಂದಿಗೆ ಆಗಮಿಸಿ ರಥದ ಮಿಣಿ ಕಟ್ಟಿದರು. ಅಗಸಬಾಳ ಗ್ರಾಮಸ್ಥರು ಬೆಳ್ಳಿ-ಛತ್ರಿ ಛಾಮರ ತೆಗೆದುಕೊಂಡು ಬಂದರು. ಬ್ಯಾಕೋಡ ಗ್ರಾಮದಿಂದ ಕಳಸದ ಮೆರವಣಿಗೆ ಆಗಮಿಸಿತು.ವಿವಿಧ ಶ್ರೀಗಳ ಸಾನಿಧ್ಯದಲ್ಲಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತ ಸಮೂಹ ಜಯಘೋಷದೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸೋಮನಾಥ ದೇವಸ್ಥಾನದಿಂದ ಪಾದಗಟ್ಟೆಯವರೆಗೆ ನಡೆದ ರಥೋತ್ಸವದ ಸಮಯದಲ್ಲಿ ಭಕ್ತರು ಜೈ ಸೋಮನಾಥೇಶ್ವರ, ಜೈ ಶಿವಪ್ಪ ಮುತ್ಯಾ ಎಂಬ ಘೋಷಣೆಗಳನ್ನು ಹಾಕಿದರು. ಉತ್ತತ್ತಿ, ಬಾಳೆಹಣ್ಣು, ಕಬ್ಬಿನ ಜಲ್ಲೆ, ಹೂ-ಹಣ್ಣುಗಳನ್ನು ಎಸೆದು ಧನ್ಯತಾಭಾವ ಅನುಭವಿಸಿದರು. ರಥೋತ್ಸವದಲ್ಲಿ ಜ್ಙಾನಯೋಗಿ ಸಿದ್ದೇಶ್ವರ ಭಾವಚಿತ್ರ, ಜೋಡೆತ್ತು ಉಳಿಸಿ ಅಭಿಯಾನ ಗಮನ ಸೆಳೆದವು.ವಿಜಯಪುರ, ಬಾಗಲಕೋಟ, ಕಲಬುರ್ಗಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಪಾರ ಪ್ರಮಾಣದ ಭಕ್ತರು ಜಾತ್ರಾಮಹೋತ್ಸವದಲ್ಲಿ…

Read More

ಬರದ ಛಾಯೆ ಮಧ್ಯೆ ಸಂಭ್ರಮದ ಯುಗಾದಿ ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮಂಗಳವಾರ ಯುಗಾದಿ ಪಾಡ್ಯ ಹಬ್ಬವನ್ನು ಬರದ ಛಾಯೆ ಮಧ್ಯೆಯೂ ಸಡಗರ, ಸಂಭ್ರಮದಿಂದ ಜನರು ಆಚರಣೆ ಮಾಡಿದರು.ಹಬ್ಬದಂಗವಾಗಿ ಅಮವಾಸ್ಯೆ ದಿನದಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವಗಳು ಜರುಗಿದವು. ಯುಗಾದಿ ಪಾಡ್ಯದಂದು ಹೊಸ ಬಟ್ಟೆ ತೊಟ್ಟ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು.ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನಕ್ಕೆ ವಿವಿಧೆಡೆಗಳಿಂದ ಅಪಾರ ಸಂಖ್ಯೆಯ ಜನರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಯುಗಾದಿ ಪಾಡ್ಯದಂದು ಜನರು ತಮ್ಮ ಮನೆಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಅಕ್ಕಪಕ್ಕದ ಮನೆಯವರಿಗೆ, ಸ್ನೇಹಿತರಿಗೆ ಬೇವು ವಿತರಿಸಿ ಯುಗಾದಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಬೇವನ್ನು ಸವಿದ ಜನರು ಜೀವನದಲ್ಲಿ ಸಿಹಿ-ಕಹಿ ಅನುಭವವನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶವನ್ನು ಸಾರಿದರು.ಪಂಚಾಂಗ ವಾಚನ: ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ರವೀಂದ್ರ ಆಚಾರ್ಯ ಅವರು ಪಂಚಾಂಗ ಪೂಜೆ ನೆರವೇರಿಸಿ ಕ್ರೋದಿನಾಮ ಸಂವತ್ಸರ…

Read More

ಬಸವನಬಾಗೇವಾಡಿ: ಇಂದಿನ ಜನಾಂಗಕ್ಕೆ ಹಂಡೆ ಅರಸರ ಇತಿಹಾಸವನ್ನು ತಿಳಿಸುವ ಉದ್ದೇಶದಿಂದ ಹಂಡೆ ಅರಸರ ಕುಲತಿಲಕ, ಬಳ್ಳಾರಿಯ ನವನಿರ್ಮಾಪಕ ಹಂಡೆ ಅರಸ ಹನುಮಪ್ಪನಾಯಕ ಜಯಂತ್ಯೋತ್ಸವವನ್ನು ಪ್ರತಿವರ್ಷ ಏ.೯ ರಂದು ರಾಜ್ಯ ಸರ್ಕಾರದಿಂದ ಆಚರಿಸುವಂತೆ ಆಗಬೇಕೆಂದು ಅಖಿಲ ಕರ್ನಾಟಕ ವೀರಶೈವರ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಹೇಳಿದರು.ತಾಲೂಕಿನ ವಡವಡಗಿ ಗ್ರಾಮದ ನಂದಿಮಠದ ಆವರಣದಲ್ಲಿ ಅಖಿಲ ಕರ್ನಾಟಕ ವೀರಶೈವರ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘ, ಕಲಬುರಗಿಯ ಚಾಲುಕ್ಯ ಸಂಸ್ಕ್ರತಿ ಅಧ್ಯಯನ ಪೀಠ, ಸಂಘದ ಜಿಲ್ಲಾ, ತಾಲೂಕು, ಗ್ರಾಮ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಹಂಡೆ ಅರಸ ಹನುಮಪ್ಪನಾಯಕನ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಕಲಬುರಗಿಯ ಚಾಲುಕ್ಯ ಸಂಸ್ಕ್ರತಿ ಅಧ್ಯಯನ ಪೀಠವು ಹಂಡೆ ಪಾಳೆಗಾರರ ಇತಿಹಾಸ ಪರಂಪರೆ ಸೇರಿದಂತೆ ಹಂಡೆ ಅರಸರ ಇತಿಹಾಸದ ಮೇಲೆ ಸಾಕಷ್ಟು ಕೃತಿಗಳನ್ನು ಹೊರತರುವ ಮೂಲಕ ಹಂಡೆ ಅರಸರ ಇತಿಹಾಸವನ್ನು ದಾಖಲೀಕರಣ ಮಾಡಿದೆ. ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಜನಿಸಿದ ಹನುಮಪ್ಪನಾಯಕನು ಬಳ್ಳಾರಿ ಸೇರಿ ಇತರೆಡೆ ಕೋಟೆ,…

Read More

ದ್ವಿತಿಯ ಪಿಯುಸಿ ಪರೀಕ್ಷೆ ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವೇದಾಂತ ನಾವಿ ವಿಜಯಪುರ: 2024 ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆಯ ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ನಮ್ಮ ಜಿಲ್ಲೆಯ ಎಸ್.ಎಸ್.ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವೇದಾಂತ ಜ್ಞಾನೋಬಾ ನಾವಿ ಅವರಿಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಅಭಿನಂದಿಸಲಾಯಿತು.ಅಭಿನಂದಿಸಿ ಮಾತನಾಡಿದ ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ಅತ್ಯಂತ ಕಡು ಬಡತನದಲ್ಲಿ ಬಿಸಿಎಂ ವಸತಿ ನಿಲಯದಲ್ಲಿ ಉಳಿದುಕೊಂಡು ಕಠಿಣವಾದ ಪರಿಶ್ರಮದಿಂದ 596 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವದರೊಂದಿಗೆ ಜಿಲ್ಲೆಗೆ ಕೀರ್ತಿ ತಂದಿದ್ದಾನೆಂದು ಪ್ರಶಂಸಿದರು.ವೇದಾಂತ ಜ್ಞಾನೋಬಾ ನಾವಿ ಅವನ ಕಲಿಕೆಗೆ ಸಹಕರಿಸಿದ ಕಾಲೇಜಿನ ಪ್ರಾಚಾರ್ಯ, ಸಿಬ್ಬಂದಿಗಳಿಗೂ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ, ಚಂದ್ರಶೇಖರ ಹೊಸಮನಿ ಹಾಗೂ ಸಿಬ್ಬಂದಿಗಳಿಗೂ ಅಭಿನಂದನೆಗಳನ್ನು ಸಲ್ಲಿಸಲಾಯಿತು.ವಿಜಯಪುರ ಜಿಲ್ಲೆ ಕಳೆದ ಸಾಲಿನಲ್ಲಿ 84% ಪ್ರತಿಶತ ಫಲಿತಾಂಶದೊಂದಿಗೆ ರಾಜ್ಯಕ್ಕೆ 5 ನೇ ಸ್ಥಾನದಲ್ಲಿತ್ತು. ಈ ಸಲ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮ…

Read More

ದೇವರಹಿಪ್ಪರಗಿ: ಪ್ರತಿಯೊಬ್ಬ ಅರ್ಹ ಮತದಾರ ಕಡ್ಡಾಯವಾಗಿ ಮತದಾನ ಮಾಡುವುದರ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ ಹೇಳಿದರು.ಪಟ್ಟಣದಲ್ಲಿ ಬುಧವಾರ ಲೋಕಸಭಾ ಚುನಾವಣಾ ಪ್ರಯುಕ್ತ ಸಿಬ್ಬಂದಿಯೊಂದಿಗೆ ಸೇರಿ ಮತದಾನ ಜಾಗೃತಿ ಜಾಥಾ ಕೈಗೊಂಡು ಅರಿವು ಮೂಡಿಸಿ ಮಾತನಾಡಿದರು. ದೇಶದ ಭವಿಷ್ಯ ನಿರ್ಧರಿಸುವಲ್ಲಿ ಚುನಾವಣೆಗಳ ಪಾತ್ರ ಹಿರಿದಾದದು. ಆದ್ದರಿಂದ ಬರುವ ಲೋಕಸಭೆಯ ಚುನಾವಣೆಯ ಅಂಗವಾಗಿ ಮೇ ೭ ರಂದು ಎಲ್ಲರೂ ತಮ್ಮ ಕಾರ್ಯಗಳಿಗೆ ಬಿಡುವು ನೀಡಿ ಮತದಾನದಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಮತಶಕ್ತಿಯನ್ನು ತೋರಬೇಕು ಎಂದರು.ಮತದಾನ ಜಾಗೃತಿ ಜಾಥಾ ಪಟ್ಟಣ ಪಂಚಾಯಿತಿಯಿಂದ ಹೋರಟು ಬಸ್ ನಿಲ್ದಾಣ ಮೂಲಕ ಅಂಬೇಡ್ಕರ್ ವೃತ್ತ ತಲುಪಿತು. ಇಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸುವುದರ ಜೊತೆಗೆ ಮತದಾರರ ಪ್ರತಿಜ್ಞಾವಿಧಿ ಭೋದಿಸಲಾಯಿತು. ನಂತರ ಕಳೆದ ಬಾರಿ ಕಡಿಮೆ ಮತದಾನ ಮಾಡಿದ ೦೮, ೦೯, ೧೧ ನೇ ವಾರ್ಡುಗಳಲ್ಲಿ ಸಂಚರಿಸಿ ಅಲ್ಲಿಯೂ ಸಹ ಮತದಾನದ ಅರಿವು ಮೂಡಿಸಲಾಯಿತು.ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಸೋಮಶೇಖರ…

Read More