Author: editor.udayarashmi@gmail.com

ಬಸವನಬಾಗೇವಾಡಿ: ತಾಲೂಕಿನ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪ ಮುತ್ಯಾ ಜಾತ್ರೆಯಂಗವಾಗಿ ಗುರುವಾರ ಭಾರವಾದ ಗುಂಡು ಎತ್ತುವದು, ಸಂಗ್ರಾಣಿ ಕಲ್ಲು ಸಾಗ ಎತ್ತುವದು ಸ್ಪರ್ಧೆಗಳು ಜರುಗಿದವು.ಭಾರವಾದ ಗುಂಡು ಎತ್ತುವ ಸ್ಪರ್ಧೆ ಪ್ರಥಮ ಸ್ಥಾನ ನಗದು ರೂ.೧೦ ಸಾವಿರ ಯಾಳವಾರ ಗ್ರಾಮದ ಮಾಳಪ್ಪ ಕೊಂಡಗುಳಿ ಪೂಜಾರಿ, ಹಳ್ಳೂರಿನ ಚಂದ್ರಶೇಖರ ಯಾಳವಾರ, ದ್ವಿತೀಯ ಸ್ಥಾನ ಯಾಳವಾರದ ಮಾಳಪ್ಪ ಬಿಸನಾಳ ಪಡೆದುಕೊಂಡರು.ಸಂಗ್ರಾಣಿ ಕಲ್ಲು ಮೇಲೆ ಒತ್ತಗಲ್ಲು ಸ್ಪರ್ಧೆಯಲ್ಲಿ ಗೋಕಾಕ ತಾಲೂಕಿನ ಶಿವು ಬೆಳಬೆಂಕಿ ದ್ವಿತೀಯ ವಿಠ್ಠಲ ಬೆನ್ನಿಕಟ್ಟಿ, ತೃತೀಯ ಶಿವರಾಜ ಹುಣಶ್ಯಾಳ ಪಡೆದುಕೊಂಡರು. ಸಂಗ್ರಾಣಿ ಕಲ್ಲು ಸಾಗ ಎತ್ತುವ ಸ್ಪರ್ಧೆಯಲ್ಲಿ ಅಫಝಲಖಾನ ಮುಜಾವರ ಪ್ರಥಮ ಸ್ಥಾನ, ವಿಠ್ಠಲ ಬೆನ್ನಕಟ್ಟಿ ದ್ವಿತೀಯ ಸ್ಥಾನ ಪಡೆದುಕೊಂಡರು. ಭಾರವಾದ ಚೀಲ ಎತ್ತುವ ಬಿದರಕುಂದಿಯ ಮಲ್ಲಣ್ಣ ಹನುಮಸಾಗರ, ಗೋನಾಳದ ವಿಠ್ಠಲ ಗೋನಾಳ ಬಹುಮಾನ ಪಡೆದುಕೊಂಡರು. ಮಧ್ಯಾನ್ಹ ಜಂಗೀ ಕುಸ್ತಿಗಳು ಜರುಗಿದವು. ರಾತ್ರಿ ಜಮಖಂಡಿ ತಾಲೂಕಿನ ಕುಲ್ಲಹಳ್ಳಿಯ ಶಿವಲಿಂಗೇಶ್ವರ ನಾಟ್ಯ ಸಂಘದಿಂದ ತವರಿಗೆ ಬಂದ ತಂಗಿ ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಯಿತು. ಜಾತ್ರೆಯಂಗವಾಗಿ…

Read More

ದೇವರಹಿಪ್ಪರಗಿ: ಮುಳಸಾವಳಗಿ ಗ್ರಾಮದಲ್ಲಿ ಈದ್ ಉಲ್ ಫಿತ್ರ್ ಪ್ರಯುಕ್ತ ಮಲ್ಲಿಕಾರ್ಜುನ ದೇವಸ್ಥಾನ ಕಮೀಟಿ ಪದಾಧಿಕಾರಿಗಳು ಸೇರಿದಂತೆ ಸಮಸ್ತ ಗ್ರಾಮದ ಹಿಂದೂ ಸಮದಾಯದವರು ಮುಸ್ಲಿಂ ಬಾಂಧವರಿಗೆ ಪ್ರಸಾದ, ತಂಪುಪಾನೀಯ, ಮಜ್ಜಿಗೆ ಬಾಳೆಹಣ್ಣು ನೀಡಿ ಸಾಮಾಜಿಕ ಸಾಮರಸ್ಯದ ಸಂದೇಶ ಸಾರಿದರು.ತಾಲ್ಲೂಕಿನ ಮುಳಸಾವಳಗಿ ಗ್ರಾಮ ಹಜರತ್ ಮತಾಬ್ ಸಾಹೇಬ್ ದರ್ಗಾ ಉರುಸ್ ಹಾಗೂ ಮಲ್ಲಯ್ಯ ದೇವಸ್ಥಾನ ಐದೇಶಿ ಹಾಗೂ ಜಾತ್ರೆಗೆ ಹೆಸರಾಗಿದ್ದು, ಸೌಹಾರ್ದತೆಗೆ ಮಾದರಿಯಾಗಿದೆ. ಇಲ್ಲಿ ಹಿಂದೂ ಮುಸ್ಲಿಂರೆಲ್ಲರೂ ಸೇರಿ ಹಬ್ಬ ಆಚರಿಸಿರುವುದು ವಿಶೇಷ. ಅಂತೆಯೇ ಈದ್ ಉಲ್ ಫಿತ್ರ್ ಹಬ್ಬದ ನಿಮಿತ್ಯ ಗ್ರಾಮದ ಮುಸ್ಲಿಂ ಜನತೆಗೆÉ ಪ್ರಸಾದ ವ್ಯವಸ್ಥೆ ಮಾಡಿ ಸಾಮರಸ್ಯಕ್ಕೆ ಸಾಕ್ಷಿಯಾದರು.ಕಳೆದ ವಾರವಷ್ಟೆ ಮಲ್ಲಯ್ಯನ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಂ ಸಮುದಾಯ ಮುಂದೆ ನಿಂತು ಹಿಂದೂ ಜನತೆಗೆ ಪ್ರಸಾದ, ತಂಪುಪಾನೀಯ ವಿತರಿಸಿ ಸಾಮರಸ್ಯಕ್ಕೆ ನಾಂದಿ ಹಾಡಿದ್ದರು. ಇದೇ ದಾರಿಯಲ್ಲಿ ಹಿಂದೂ ಸಮುದಾಯದವರು ಇಂದಿನ ಹಬ್ಬದಲ್ಲಿ ಪ್ರಸಾದ ವಿತರಿಸಿ ಒಬ್ಬರಿಗೊಬ್ಬರೂ ಶುಭಾಶಯ ವಿನಿಮಯ ಮಾಡಿಕೊಂಡರು.ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಶರಣಗೌಡ ಪಾಟೀಲ, ಜಿ.ಪಿ.ಬಿರಾದಾರ, ಅಂಜುಮನ್ ಕಮೀಟಿ…

Read More

ದೇವರಹಿಪ್ಪರಗಿ: ಸಕಲ ಪ್ರಕೃತಿ ಆ ದೇವರು ನಮಗೆ ಕೊಟ್ಟ ಅಮೂಲ್ಯ ಕೊಡುಗೆಗಳಾಗಿವೆ. ಆದ್ದರಿಂದ ನಾವು ದೇವರನ್ನು ಸದಾ ಸ್ಮರಿಸುವುದರ ಮೂಲಕ ಚಿರಋಣಿಯಾಗಿರಬೇಕು. ಎಂದು ಮೌಲಾನಾ ಇಸ್ಮಾಯಿಲ್ ಚಟ್ಟರಕಿ ಹೇಳಿದರು.ಪಟ್ಟಣದ ಈದಗಾ ಮೈದಾನದಲ್ಲಿ ಈದ್ ಉಲ್ ಫಿತ್ರ ನಿಮಿತ್ಯ ಗುರುವಾರ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಯೊಬ್ಬರ ಪ್ರಾಮಾಣಿಕತೆಯಿಂದ ಸಾಗಬೇಕು. ಪ್ರತಿಯೊಂದು ಧರ್ಮದ ಸಾರವು ಒಂದೇ ಆಗಿದ್ದು, ಇಡೀ ಜಗತ್ತು ದೇವರು ನೀಡಿದ ಕೊಡುಗೆಯಾಗಿದೆ . ಈ ಕೊಡುಗೆಯನ್ನು ಸ್ಮರಣೆ ಮಾಡುವುದರ ಜೊತೆ ನಮ್ಮ ಕಾಯಕದೊಂದಿಗೆ ದೇವರ ಧ್ಯಾನ ಮಾಡಲು ಆ ದೇವರೇ ಸದಾವಕಾಶ ಕಲ್ಪಿಸಿಕೊಟ್ಟಿದ್ದಾನೆ. ಅದುವೇ ಪವಿತ್ರ ರಮಜಾನ್ ಮಾಸ. ಈ ಪವಿತ್ರ ಮಾಸವನ್ನು ಉತ್ತಮ ರೀತಿಯಲ್ಲಿ ಆಚರಿಸಿ ಪಾವನರಾಗಬೇಕಾಗಿದೆ ಎಂದರು.ಪಟ್ಟಣದ ಸಮಸ್ತ ಮುಸ್ಲಿಂ ಸಮುದಾಯ ಈದಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ನಂತರ ಪರಸ್ಪರ ಆಲಂಗಿಸಿಕೊAಡು ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆಯನ್ನು ಮೌಲ್ವಿ ಇಸ್ಮಾಯಿಲ್‌ಸಾಬ್ ಲಾಳಸಂಗಿ ನಡೆಸಿಕೊಟ್ಟರು.ಪ್ರಾರ್ಥನೆಯಲ್ಲಿ ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ), ಸಿಂದಗಿ ಕ್ಷೇತ್ರದ…

Read More

ವಿಜಯಪುರ: ಇಲ್ಲಿನ ಪುಲಕೇಶಿ ನಗರದ ಶ್ರೀ ಜಗಜ್ಯೋತಿ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಗಿರೀಶ ಹೆಳವರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರತಿಶತ 93 ರಷ್ಟು ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಬಂದಿದ್ದಾನೆ.ಗಿರೀಶ ಹೆಳವರ ಪತ್ರಕರ್ತ ದೇವೇಂದ್ರ ಹೆಳವರ ಅವರ ಪುತ್ರನಾಗಿದ್ದು, ಪರೀಕ್ಷೆಯಲ್ಲಿ 600 ಕ್ಕೆ 558 ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾನೆ.ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಈ ವಿದ್ಯಾರ್ಥಿಗೆ ಕಾಲೇಜಿನ ಪ್ರಾಚಾರ್ಯರು, ಎಲ್ಲ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ತಾಳಿಕೋಟಿ: ಪವಿತ್ರ ರಮಜಾನ್ ಹಬ್ಬದ ನಿಮಿತ್ಯ ಇಲ್ಲಿಯ ನೂತನ ಈದಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಈದ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಈ ಸಮಯದಲ್ಲಿ ಈದ ಪ್ರವಚನ ನೀಡಿದ ಡಾ. ಮಿನಹಾಜುದ್ದೀನ ಖಾಜಿ ಅವರು ರಮಜಾನ್ ತಿಂಗಳಿನಲ್ಲಿ ಮುಸ್ಲಿಂ ಬಾಂಧವರು ಉಪವಾಸ ವೃತಗಳ ಮೂಲಕ ಗಳಿಸಿಕೊಂಡ ಶಾಂತಿ ಮತ್ತು ಸಹನೆ ಗುಣವನ್ನು ಸಮಾಜದಲ್ಲಿ ಹರಡಲು ಪ್ರಯತ್ನಿಸಬೇಕು ಪ್ರವಾದಿ ಮೊಹಮ್ಮದರ ಆದರ್ಶ ಬದುಕು ಅವರಿಗೆ ಮಾದರಿಯಾಗಬೇಕು ಎಂದರು.ಇಂದು ಸಮಾಜದಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಧರ್ಮದ ಹೆಸರಿನಲ್ಲಿ ಅಶಾಂತಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಇಂಥವರು ಎಲ್ಲ ಸಮಾಜಗಳಲ್ಲೂ ಇದ್ದಾರೆ ಜಗತ್ತಿನ ಯಾವ ಧರ್ಮವು ಹಿಂಸೆಯನ್ನು ಬೋಧಿಸುವುದಿಲ್ಲ. ಶಾಂತಿಯಲ್ಲ ಧರ್ಮಗಳ ಮೂಲ ಮಂತ್ರವಾಗಿದೆ ಶಾಂತಿ ಮತ್ತು ಸಾಮರಸ್ಯವನ್ನು ಬೆಳೆಸಲು ನಾವೆಲ್ಲರೂ ಶಕ್ತಿಮೀರಿ ಪ್ರಯತ್ನಿಸಬೇಕಾಗಿದೆ. ಭಾರತ ಒಂದು ವೈವಿಧ್ಯಮಯವಾದ ಬಹುಸಂಸ್ಕೃತಿಯ ದೇಶವಾಗಿದೆ. ಶತ ಶತ ಮಾನಗಳಿಂದ ಇಲ್ಲಿ ನಾವೆಲ್ಲರೂ ಕೂಡಿಕೊಂಡು ಬದಕುತ್ತಿದ್ದೇವೆ ಈ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು. ಪ್ರವಾದಿ…

Read More

ಬಸವನಬಾಗೇವಾಡಿ: ಪಟ್ಟಣದ ನಾಗೂರ ರಸ್ತೆಯಲ್ಲಿರುವ ಬಸವನಕಟ್ಟೆ ಸಮೀಪ ಮಾಳಿ ಸಮಾಜ ಬಾಂಧವರು ಗುರುವಾರ ಮಹಾತ್ಮ ಜ್ಯೋತಿಬಾ ಪುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಹಾತ್ಮ ಜ್ಯೋತಿಬಾ ಪುಲೆ ಅವರ ೧೯೭ ನೇ ಜಯಂತಿಯನ್ನು ಆಚರಿಸಿದರು.ಈ ಸಂದರ್ಭದಲ್ಲಿ ಮಾಳಿ ಸಮಾಜ ಯುವ ಮುಖಂಡ ಜಟ್ಟಿಂಗರಾಯ ಮಾಲಗಾರ ಮಾತನಾಡಿ, ದೇಶದಲ್ಲಿ ಶಿಕ್ಷಣದ ಮಹತ್ವ ಗುರುತಿಸುವಲ್ಲಿ ಜ್ಯೋತಿಬಾ ಪುಲೆ ಅವರು ನೀಡಿದ ಕೊಡುಗೆ ಅನನ್ಯ ಮತ್ತು ಶ್ರೇಷ್ಠವಾಗಿದೆ. ಧರ್ಮ, ಪಂಥ, ಸಂಪ್ರದಾಯ ಮೊದಲಾದ ಸಂಕುಚಿತ ಭಾವನೆಗಳಿಗೆ ಮರುಳಾಗದೇ ಮಾನವ ಧರ್ಮವನ್ನು ಅಂಗೀಕರಿಸಬೇಕು ಎಂದು ಹೇಳಿದ್ದರು. ಇಂತಹ ಮಹನೀಯರ ಜೀವನವನ್ನು ಯುವಜನಾಂಗ ಅರಿತುಕೊಳ್ಳಬೇಕೆಂದರು.ಸಾಮಾಜಿಕ ಕ್ರಾಂತಿಕಾರಿ ಹೋರಾಟಗಾರರಾಗಿ ಜೋತಿಬಾ ಪುಲೆ ಅವರು ಸಮಾಜ ಸುಧಾರಕರಾಗಿ ಸಮಾನತೆಯ ಹರಿಕಾರರಾಗಿ ದೀನದಲಿತ ಹಿಂದುಳಿದ ಸೇರಿದಂತೆ ಎಲ್ಲ ವರ್ಗಗಳ ಜನರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಧೀಮಂತ ಹೋರಾಟಗಾರರಾಗಿ ಇತಿಹಾಸ ಪುಟದಲ್ಲಿ ದಾಖಲಾಗಿದ್ದಾರೆ. ಇವರು ಸ್ಥಾಪಿಸಿದ ಸತ್ಯ ಶೋಧಕ ಸಮಾಜ ಸಂಘವು ಜಾತಿಗಳ ಮೇಲು-ಕೀಳು ಭಾವನೆ, ಶೂದ್ರ ಭಾವನೆ ಹೋಗಲಾಡಿಸುವ ನಿಟ್ಟಿನಲ್ಲಿ ಸಾಕಷ್ಟು…

Read More

– ಬಸವರಾಜ ನಂದಿಹಾಳಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಜಾಯವಾಡಗಿ ಗ್ರಾಮದ ಆರಾಧ್ಯದೈವ ಸೋಮನಾಥೇಶ್ವರ, ಶಿವಪ್ಪಮುತ್ಯಾನ ಜಾತ್ರೆಯಂಗವಾಗಿ ನಡೆಯುವ ಜಾನುವಾರುಗಳ ಜಾತ್ರೆಯಲ್ಲಿ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಜಾನುವಾರುಗಳು ಗುರುವಾರ ಜಾತ್ರೆಯಲ್ಲಿ ಕಂಡುಬಂದವು. ಬರಗಾಲದಲ್ಲಿಯೂ ಜಾನುವಾರುಗಳ ಜಾತ್ರೆಯಲ್ಲಿ ಜಾನುವಾರುಗಳನ್ನು ಖರೀದಿಸಲು, ಮಾರಾಟ ಮಾಡಲು ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದು ಕಂಡುಬಂದಿತ್ತು.ಈ ಸಲದ ಜಾನುವಾರುಗಳ ಜಾತ್ರೆಯಲ್ಲಿ ಎತ್ತುಗಳು ರೂ.೧.೫೦ ರಿಂದ ೨ ಲಕ್ಷ ಅಧಿಕದವರೆಗೂ ಮಾರಾಟವಾದವು. ಜಾನುವಾರುಗಳಿಗೆ ಬೇಕಾದ ಸಾಮಗ್ರಿಗಳು ಸಹ ಮಾರಾಟಕ್ಕೆ ಬಂದಿದ್ದವು. ರೈತ ಬಾಂಧವರು ತಮಗೆ ಬೇಕಾದ ಜಾನುವಾರುಗಳನ್ನು ಖರೀದಿ ಮಾಡುವ ಜೊತೆಗೆ ಜಾನುವಾರುಗಳಿಗೆ ಬೇಕಾದ ಹಗ್ಗ, ಗೆಜ್ಜೆ ಸರ, ಹಣೆಕಟ್ಟು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು.ಬುಧವಾರದಿಂದ ಆರಂಭವಾಗಿರುವ ಜಾನುವಾರುಗಳ ಜಾತ್ರೆಗೆ ಜಿಲ್ಲೆ ಸೇರಿದಂತೆ ಶಹಾಪೂರ, ಯಾದಗಿರಿ, ಬಾಗಲಕೋಟ, ರಾಯಚೂರ ವಿವಿಧ ಜಿಲ್ಲೆಯ ರೈತ ಬಾಂಧವರು ಮಾರಾಟ ಮಾಡುವ ಉದ್ದೇಶದಿಂದ ಅವುಗಳಿಗೆ ಅಗತ್ಯವಿರುವ ಮೇವಿನೊಂದಿಗೆ ಬಂದು ಬಿಡು ಬಿಟ್ಟಿದ್ದಾರೆ. ಬಿರು ಬಿಸಿಲಿನಿಂದಾಗಿ ಬಸವಳಿಯುತ್ತಿರುವ ಎತ್ತುಗಳಿಗೆ ಕೆಲ ರೈತರು ನೆರಳು ಮಾಡಿರುವುದು ಕಂಡುಬಂದಿತ್ತು.ರೂಡಗಿ ರೈತರೊಬ್ಬರು…

Read More

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಗುರುವಾರ ಮುಸ್ಲಿಂ ಬಾಂಧವರು ಈದ್ಉಲ್ ಫಿತ್ರ ಹಬ್ಬವನ್ನು (ರಂಜಾನ್) ಸಡಗರ-ಸಂಭ್ರಮದಿಂದ ಆಚರಿಸಿದರು.ಮಕ್ಕಳು, ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ಹೊಸ ಬಟ್ಟೆ ತೊಟ್ಟು ಬೆಳಗ್ಗೆ ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಈದ್ಗಾ ಮೈದಾನದಲ್ಲಿ ಜಾಮೀಯಾ ಮಸೀದಿಯ ಹಾಫೀಜ್ ಮಹ್ಮದಅಲಿ ಮಿಲಿ ಅವರು ಸಾಮೂಹಿಕ ಪ್ರಾರ್ಥನೆ ಮಾಡಿಸಿದರು.ಈ ಸಂದರ್ಭದಲ್ಲಿ ಎಂ.ಡಿ.ಬಳಗಾನೂರ ಮಾತನಾಡಿದರು.ಸಾಮೂಹಿಕ ಪ್ರಾರ್ಥನೆಯಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷ ಶಬ್ಬಿರಅಹ್ಮದ ನದಾಫ್, ಕಮಲಸಾಬ ಕೊರಬು,ಅಲ್ತಾಫ್ ಮುದ್ದೇಬಿಹಾಳ, ಎಚ್.ಆರ್.ಬಾಗವಾನ, ಅಬ್ದುಲರಜಾಕ ಬಾಗವಾನ, ಮತಾಬ ಬಮ್ಮನಹಳ್ಳಿ, ಜಾಫರ ಮಕಾನದಾರ, ಚಾಂದಬಾಷಾ ಕೊರಬು, ರಫೀಕ್ ಹೊಕ್ರಾಣಿ, ಅಲ್ಲಾಭಕ್ಷ ಕೊರಬು, ಜಮ್ಮೀಲ್ ಇಬ್ರಾಹಿಂಪೂರ, ಮಹಿಬೂಬ ನಾಯ್ಕೋಡಿ, ಮನ್ನಾನ ಶಾಬಾದಿ, ಎಚ್.ಎಂ.ನದಾಫ,ಬಸೀರ ಮನಗೂಳಿ, ಬಂದೇನವಾಜ ನಂದವಾಡಗಿ, ನಜೀರ ಗಣಿ, ದಸ್ತಗೀರ ವಜ್ಜಲ, ರಮಜಾನ ಹೆಬ್ಬಾಳ, ಸಲೀಂ ಸಯ್ಯದ, ಅಬ್ದುಲರಜಾಕ ಕೊರಬು, ರಫೀಕ ಸಾಠಿ, ಅಬ್ದುಲರಶೀದ ಅವಟಿ, ಮೀರಾಸಾಬ ಕೊರಬು, ನಿಸಾರ…

Read More

ಆಲಮಟ್ಟಿ: ಸ್ಥಳಿಯ ಶ್ರೀಮದ್ ವೀರಶೈವ ವಿದ್ಯಾಲಯ ಅಸೊಷಿಯೇಶನ್ ನ ಮಂಜಪ್ಪ ಹರ್ಡೇಕರ ಪಿ.ಯು.ಕಾಲೇಜು ೨೦೨೩-೨೪ ನೇ ಸಾಲಿನ ದ್ವಿತೀಯ ಪಿ.ಯು.ಪರೀಕ್ಷೆಯಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ಒಟ್ಟು ೧೩೩ ವಿದ್ಯಾರ್ಥಿಗಳಲ್ಲಿ ೧೩೦ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.೯೮ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಕಲಾ ವಿಭಾಗದಲ್ಲಿ ೮೧ ವಿದ್ಯಾರ್ಥಿಗಳಲ್ಲಿ ೮೦ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಶೇ.೯೮.೭೮% ಪ್ರತಿಶತ ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ೫೧ವಿದ್ಯಾರ್ಥಿಗಳಲ್ಲಿ ೪೯ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಶೇ.೯೬.೦೭% ಫಲಿತಾಂಶ ಬಂದಿದೆ.ಕಲಾ ವಿಭಾಗದಲ್ಲಿ ಯಲ್ಲಮ್ಮ ಗೂಗಿಹಾಳ ೫೭೨(ಶೇ.೯೫.೩೩) ಪ್ರಥಮ ತಸ್ಮಿಯಾ ನಿಂಬಿಹಾಳ ೫೫೮(ಶೇ.೯೩%) ಕಾಲೇಜಿಗೆ ದ್ವಿತೀಯ ಸ್ಥಾನ ಪ್ರೀತಿ ವಡಗೇರಿ.೫೪೬(೯೧%)ತೃತೀಯ ಸ್ಥಾನ ಪಡೆದು ಕೊಂಡಿದ್ದಾಳೆ.ವಾಣಿಜ್ಯ ವಿಭಾಗದಲ್ಲಿ ಅಕ್ಷತಾ ಪಾಟೀಲ.೫೫೫(೯೨.೫%) ಪ್ರಥಮ ಸ್ಥಾನವನ್ನು ವಿಜಯಲಕ್ಷ್ಮಿ ರಾಠೋಡ.೫೫೨ (೯೨%) ದ್ವಿತೀಯ ಸ್ಥಾನ ತೈಸಿನ ಕಡಲಗಿ ೫೧೫(೮೫.೮%) ತೃತೀಯ ಸ್ಥಾನ ಪರೀಕ್ಷೆಯಲ್ಲಿ ಉತ್ತಮ ಸಾಧನೆಯೊಂದಿಗೆ ತೇರ್ಗಡೆ ಹೊಂದಿ ಶಾಲೆಗೆ,ಸಂಸ್ಥೆಗೆ, ಊರಿಗೆ ಕೀರ್ತಿ ತಂದಂಥ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾಗಿರುವ ಗದುಗಿನ ತೋಂಟದ ಡಾ|| ಸಿದ್ದರಾಮ ಮಹಾಸ್ವಾಮಿಗಳವರು ಹಾಗೂ…

Read More