Author: editor.udayarashmi@gmail.com

ಲೇಖನ- ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಸಂಕ್ರಾಂತಿ ಎಂದರೆ ಸಂಕ್ರಮಣದ ಕಾಲ ಬದುಕಿನಲ್ಲಿ ಬರುವ ಸುಖ-ದುಃಖ,ನೋವು-ನಲಿವು ಸೋಲು-ಗೆಲುವು ಹೀಗೆ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸುವ ಕಾಲ.ಕೆಲ ಅನವಶ್ಯಕ ಅಭ್ಯಾಸಗಳನ್ನು ನಾವು ನಿರಂತರವಾಗಿ ಪಾಲಿಸಿಕೊಂಡು ಬಂದಿರುತ್ತೇವೆ. ಇನ್ನು ಕೆಲವು ನಾವುಬಿಟ್ಟೇನೆಂದರೂ ಬಿಡದೆ ನಮ್ಮೊಂದಿಗೆ ಇರುತ್ತವೆ. ಇನ್ನೂ ಕೆಲವು ಅಭ್ಯಾಸಗಳನ್ನು ಸಾಮಾಜಿಕ ಮನ್ನಣೆಯ ಕಾರಣದಿಂದ ನಾವು ನಿಭಾಯಿಸಬೇಕಾಗುತ್ತದೆ. ಮತ್ತೆ ಕೆಲವು ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕಾಗಿರುತ್ತದೆ. ಉತ್ತಮ ಅಭ್ಯಾಸಗಳು ವ್ಯಕ್ತಿಯ ವೈಯುಕ್ತಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಉತ್ತಮ ದೈಹಿಕ ಆರೋಗ್ಯ, ಮಾನಸಿಕ ಸಂತೃಪ್ತಿಯನ್ನು ಕೊಡುತ್ತದೆ. ಬನ್ನಿ ಈ ಸಂಕ್ರಮಣ ಕಾಲದಲ್ಲಿ ಅಂತಹ ಹಲವು ಅಭ್ಯಾಸಗಳ ಕುರಿತು ಧೇನಿಸೋಣ.ಮೈಗೂಡಿಸಿಕೊಳ್ಳೋಣ, ಅನುಷ್ಠಾನಕ್ಕೆ ತರೋಣ..ನೀರುನಮ್ಮ ಬಾಳಿನಲ್ಲಿ ಅತ್ಯಂತ ಅವಶ್ಯಕ ಪಾತ್ರವನ್ನು ವಹಿಸುತ್ತದೆ. ನಮ್ಮ ದೇಹದ ಶೇಕಡಾ 60 ಭಾಗ ನೀರು ತುಂಬಿಕೊಂಡಿದೆ. ಆದರೂ ಕೂಡ ಅವಶ್ಯಕ ಪ್ರಮಾಣದ ನೀರು ಸೇವನೆ ಮಾಡದೆ ಇರುವುದರಿಂದ ನಾವು ಆಮ್ಲ ಪಿತ್ತ, ಹುಳಿತೇಗು, ಹೊಟ್ಟೆ ಉಬ್ಬರ, ವಾಯು ಬಾಧೆ ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಜ್ಞಾವಂತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ನಿಸ್ವಾರ್ಥತೆ, ಸಮರ್ಪಣೆ ಮತ್ತು ಸಂತೃಪ್ತಿ ಭಾವ ಅತಿ ಮುಖ್ಯ. ಎಲ್ಲ ಸೇವೆಗಳಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಕಲೆ, ಪ್ರತಿಭೆಯನ್ನು ಗುರುತಿಸಿ, ಉತ್ತಮ ಶಿಕ್ಷಣ ನೀಡುತ್ತಾ, ಭಾವೀ ಭವ್ಯ ಭಾರತದ ಜವಾಬ್ದಾರಿಯುತ ನಾಗರೀಕರನ್ನಾಗಿ ರೂಪಿಸುವುದು ಅತಿ ಅಗತ್ಯವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಎ.ಟಿ.ಹಿರೇಮಠ ಅವರು ಅಭಿಪ್ರಾಯಪಟ್ಟರು.ನಗರದ ಅಥಣಿ ರಸ್ತೆಯ ಅಲ್-ಅಮೀನ ಆಸ್ಪತ್ರೆಯ ಎದುರಿಗೆ ಇರುವ ಸೇನಾ ನಗರದ ಆದಿಶಕ್ತಿ ದೇವಸ್ಥಾನದಲ್ಲಿ ಜರುಗಿದ ಶ್ರೀಮತಿ ಶಾರದಾ ಬಿರಾದಾರ ಪಾಟೀಲ ಶಿಕ್ಷಕಿಯರ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಪಠ್ಯ ವಿಷಯ ಜ್ಞಾನ ನೀಡಿದರೆ ಸಾಲದು. ಅವರು ಸಮಾಜದಲ್ಲಿ ಗೌರವಯುತವಾದ ಬದುಕು ನಡೆಸಲು ಉತ್ತಮ ಸಂಸ್ಕೃತಿ-ಸಂಸ್ಕಾರ, ನೈತಿಕ -ಮಾನವೀಯ ಮೌಲ್ಯಗಳು, ರಾಷ್ಟçಪ್ರೇಮ ಮತ್ತು ರಾಷ್ಟ್ರೀಯ ಐಕ್ಯತೆಯ ಗುಣಗಳನ್ನು ಒಡಮೂಡಿಸಬೇಕಾಗಿದೆ. ಈ ಶಿಕ್ಷಕಿಯರು ತಮ್ಮ ಇಡೀ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಜ್ಞಾನಧಾರೆ ಎರೆಯಲು…

Read More

ಲೇಖನ- ಬಿ.ವಿ.ಹಿರೇಮಠಶಿಕ್ಷಕರು ಸಿಂದಗಿವಿಜಯಪುರ ಜಿಲ್ಲೆಮೋ : 9972658355 ಉದಯರಶ್ಮಿ ದಿನಪತ್ರಿಕೆ ಉದಯರಶ್ಮಿ ದಿನಪತ್ರಿಕೆ ​ಭಾರತೀಯ ಹಬ್ಬಗಳಲ್ಲಿ ಸಂಕ್ರಾಂತಿಗೆ ವಿಶೇಷ ಸ್ಥಾನವಿದೆ. ಇದು ಕೇವಲ ಮನುಷ್ಯರಿಗಷ್ಟೇ ಅಲ್ಲ, ಪ್ರಕೃತಿ ಮತ್ತು ಪ್ರಾಣಿ ಸಂಕುಲಕ್ಕೂ ಸಂಬಂಧಿಸಿದ ಹಬ್ಬ. ಸೂರ್ಯನು ತನ್ನ ಪಥವನ್ನು ಬದಲಿಸಿ ಉತ್ತರಾಯಣಕ್ಕೆ ಕಾಲಿಡುವ ಈ ಕಾಲಘಟ್ಟವು ಬದುಕಿನಲ್ಲಿ ಹೊಸ ಬದಲಾವಣೆಯ ಸಂಕೇತವಾಗಿದೆ. ‘ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತಾಡಿ’ ಎಂಬ ಜನಪ್ರಿಯ ನಾಣ್ಣುಡಿಯೊಂದಿಗೆ ಬರುವ ಈ ಹಬ್ಬವು, ನಮ್ಮ ಸಂಸ್ಕೃತಿಯಲ್ಲಿ ಅಡಗಿರುವ ವೈಜ್ಞಾನಿಕ ಸತ್ಯಗಳನ್ನು ಮತ್ತು ಮಾನವೀಯ ಮೌಲ್ಯಗಳನ್ನು ಅನಾವರಣಗೊಳಿಸುತ್ತದೆ.​ವೈಜ್ಞಾನಿಕ ತಳಹದಿ ಮತ್ತು ಆರೋಗ್ಯ​ಸಂಕ್ರಾಂತಿಯ ಆಚರಣೆಗಳ ಹಿಂದೆ ಆಳವಾದ ವೈಜ್ಞಾನಿಕ ಕಾರಣಗಳಿವೆ. ಇಂತಹ ಅನೇಕ ವಿಚಾರಗಳನ್ನು ಎ.ಆರ್.ಮಣಿಕಾಂತ್ ಅವರ ಪ್ರಬಂಧ “ಸಂಕ್ರಾಂತಿಯಂದು ಸುಖ ದುಃಖ” (7ನೇ ತರಗತಿಯ ಪಠ್ಯ)ಲೇಖನದಲ್ಲಿ ಉಲ್ಲೇಖಿಸಿರುವಂತೆ, ಈ ಹಬ್ಬವು ಚಳಿಗಾಲದ ಅಂತ್ಯದಲ್ಲಿ ಬರುತ್ತದೆ. ಈ ಸಮಯದಲ್ಲಿ ನಮ್ಮ ದೇಹ ಮತ್ತು ಪರಿಸರದಲ್ಲಿ ಕೆಲವು ಬದಲಾವಣೆಗಳಾಗುತ್ತವೆ​ಎಳ್ಳು-ಬೆಲ್ಲದ ರಹಸ್ಯ ತೀವ್ರವಾದ ಚಳಿಯಿಂದಾಗಿ ದೇಹದ ಚರ್ಮ ಒಣಗಿರುತ್ತದೆ ಮತ್ತು ಶಕ್ತಿಯ ಕೊರತೆ ಇರುತ್ತದೆ.…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿ ನಡೆಯುತ್ತಿರುವ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯು ಸ್ವಾಮಿ ವಿವೇಕಾನಂದ ಜಯಂತಿಯಂಗವಾಗಿ ಸೋಮವಾರ ಯುಥ್-ಅಥಾನ್ (ಮ್ಯಾರಥಾನ್) ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು.ಸ್ಪರ್ಧೆಗೆ ಬಸವೇಶ್ವರ ದೇವಾಲಯ ಮುಂಭಾಗ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಅನಿಲ ಅಗರವಾಲ ಚಾಲನೆ ನೀಡಿದರು.ಬೆಳಗ್ಗೆ 6:45ಕ್ಕೆ ಆರಂಭವಾದ ಈ ಮ್ಯಾರಥಾನ್‌ನಲ್ಲಿ ಶಾಲೆಯ 6 ರಿಂದ 10 ನೇ ತರಗತಿಯವರೆಗಿನ ಒಟ್ಟು 355 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿ–ವಿದ್ಯಾರ್ಥಿನಿಯರು ಸುಮಾರು 3 ಲೋಮೀಟರ್ ದೂರದ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮರಳಿ ಶಾಲೆಗೆ ಬಂದರು. ನಂತರ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ವಿಜೇತರಿಗೆ ಪ್ರದಾನ ಮಾಡಲಾಯಿತು. ಜೊತೆಗೆ 50 ವಿದ್ಯಾರ್ಥಿಗಳಿಗೆ ಗೋಲ್ಡ್ ಮೆಡಲ್‌ಗಳನ್ನು ನೀಡಿ ಸಮಾರಂಭವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಎಸ್.ಎಸ್.ಝಳಕಿ, ಸದಸ್ಯರಾದ ಸುರೇಶಗೌಡ ಪಾಟೀಲ, ಡಾ.ವೀಣಾ ಗುಳೇದಗುಡ್ಡ, ಮುಖಂಡ ಕಲ್ಲು ಸೊನ್ನದ, ಶಾಲೆಯ ಪ್ರಾಚಾರ್ಯೆ ಆರ್.ಎಂ.ರೋಣದ, ಶಾಲಾ ಸಿಬ್ಬಂದಿ ಇತರರು…

Read More

ಮರ ನೆಡುವ ಸಂದೇಶ | ಚಿತ್ರಕಲೆಗಳ ಪ್ರದರ್ಶನ | ಹಾಡುಗಳು ಮತ್ತು ವಚನಗಳ ಸುಧೆ | ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ಉದಯರಶ್ಮಿ ದಿನಪತ್ರಿಕೆ ವರದಿ: ಬಸವರಾಜ ನಂದಿಹಾಳಬಸವನಬಾಗೇವಾಡಿ: ಪಟ್ಟಣದ ಬಸ್ ನಿಲ್ದಾಣ ಮುಂಭಾಗ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿನ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯ ವಿಶಾಲವಾದ ಆವರಣದಲ್ಲಿ ಸೋಮವಾರ ಸಂಜೆ ಸಂಕ್ರಾಂತಿ ಸಂಭ್ರಮದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ರುಚಿ-ಉತ್ಸವ ಆಹಾರ ಮೇಳವು ಜನಮನಸೂರೆಗೊಂಡಿತು.ಆವರಣದ ಸ್ವಾಗತ ಕಮಾನು ಪ್ರವೇಶಿಸುತ್ತಿದ್ದಂತೆ ಸಾಲುಮರದ ತಿಮ್ಮಕ್ಕ ಸ್ಮರಣಾರ್ಥವಾಗಿ ಶಾಲೆಯ ಚಿತ್ರಕಲಾ ಶಿಕ್ಷಕ ಅಮಿತ ಕಮ್ಮಾರ ಅವರು ತಯಾರಿಸಿದ್ದ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರ ಎಲ್ಲರನ್ನು ಮನಸೂರೆಗೊಳ್ಳುವ ಜೊತೆಗೆ ಮರ ನೆಡುವ ಸಂದೇಶ ಸಾರಿದ್ದು ವಿಶೇಷ.ಮಳಿಗೆಗಳ ಮಧ್ಯದಲ್ಲಿ ಶಾಲೆಯ ವಿದ್ಯಾರ್ಥಿಗಳು ಬಿಡಿಸಿದ ವಿವಿಧ ಚಿತ್ರಕಲೆಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಎರಡು ಬದಿಯಲ್ಲಿಯ ತಾತ್ಕಾಲಿಕ ಮಳಿಗೆಗಳಲ್ಲಿ‌ ತಿಂಡಿ ತಿನಿಸು ಖರೀದಿಸುತ್ತಿದ್ದ ಜನಜಂಗುಳಿ, ವೇದಿಕೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಂಗೀತಗಾರರು ಹಾಡಿದ ಹಾಡುಗಳು, ವಚನಗಳು ಜನರನ್ನು ಸಂಗೀತ ಲೋಕಕ್ಕೆ ತೆಗೆದುಕೊಂಡು ಹೋದವು.ವಿಶಾಲವಾದ…

Read More

” ಆಲಮೇಲ ಪಟ್ಟಣ ಪಂಚಾಯಿತಿ ಸ್ವಚ್ಚತಾ ಜಾಗೃತಿ ಕಾರ್ಯಕ್ರಮ” ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪರಿಸರ ಮತ್ತು ಆರೋಗ್ಯ ಸರಿಯಾಗಿರಬೇಕು ಎಂದರೆ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ.ಪಂ ಸಿ.ಓ ಸುರೇಶ ನಾಯಕ ಹೇಳಿದರು.ಮಂಗಳವಾರ ಪಟ್ಟಣ ಪಂಚಾಯತ ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮದ ಜಾಗೃತಿ ಜಾಥಾ ಆಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರು ತಮ್ಮ ಆರೋಗ್ಯ ದೃಷ್ಟಿಯಿಂದ ಆದರು ತಮ್ಮ ಮನೆಯ ಸೂತ್ತಮೂತ್ತಲು ಸ್ವಚ್ಚತೆ ಕಾಪಾಡಿಕೊಳ್ಳಬೆಡಕು ತಮ್ಮಿಂದ ಇನ್ನೊಬ್ಬರಿಗೆ ಪ್ರೇರಣೆ ಆಗುವಂತೆ ಸ್ವಚ್ಚತೆ ಕಾಪಾಡಿಕೊಂಡು ಇನ್ನೊಬ್ಬರಿಗೂ ಸಲಹೆ ನೀಡಿ. ಎಲ್ಲರು ಸ್ವಯಂಪ್ರೇರಿತವಾಗಿ ಮೊದಲು ನಮ್ಮ ಮನೆಯಿಂದ ಸ್ವಚ್ಚತೆ ಮಾಡುವದನ್ನು ಆರಂಬಿಸಿ ನಂತರ ಅಕ್ಕ ಪಕ್ಕ, ವಾರ್ಡ್ ನಗರ ಪಟ್ಟಣ ಹಿಗೆ ಎಲ್ಲೆಡೆ ಸ್ವಚ್ಚತೆ ಬಗ್ಗೆ ಎಲ್ಲರಲ್ಲಿಯೂ ಜಾಗೃತಿಯಾಗಬೇಕು ಎಂದು ಹೇಳಿದರು. ಕಿರಿಯ ಆರೋಗ್ಯ ನೀರಿಕ್ಷಕಿ ತೇಜಸ್ವಿನಿ ಮಗಿ, ಕಂದಾಯ ನಿರಿಕ್ಷಕ ಎಂ.ಎ.ಗುಣರೆ, ಪ್ರದೀಪ ದಳವೆ, ಸಚಿನ ಮೋರಟಗಿ, ಪ.ಪಂ. ಸದಸ್ಯ ಭಾಗ್ಯವಂತ ಆಲಮೇಲ್ಕರ, ಬೀಮು ಬೊಮ್ಮನಹಳ್ಳಿ, ಶಶಿ ಗಣಿಯಾರ ಹಾಗೂ ಸಿಬ್ಬಂದಿ, ಶಾಲಾ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನಿಂಬೆ ಬೆಳೆಗೆ ಉತ್ತಮ ಬೆಲೆಯ ಜೊತೆಗೆ ನಿಂಬೆಯಿಂದ ತಯಾರಾಗುವ ಉಪ ಉತ್ಪನ್ನಗಳ ಕಾರ್ಖಾನೆ ಸ್ಥಾಪನೆ ಸೇರಿದಂತೆ ನಿಂಬೆ ಬೆಳೆಗಾರರ ವಿವಿಧ ಸಮಸ್ಯೆಗೆ ಸರಕಾರ ಪರಿಹಾರ ದೊರಕಿಸಿ ಕೊಡುವಂತೆ ಒತ್ತಾಯಿಸಿ ನೂರಾರು ನಿಂಬೆ ಬೆಳೆಗಾರರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಒಂದು ಡಾಗ್ ನಿಂಬೆ ರಸ್ತೆಗೆ ಸುರುವಿ ಮಂಗಳವಾರ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾವಿ ಅವರಿಗೆ ಮನವಿ ಸಲ್ಲಿಸಿದರು.ಒಂದು ಡಾಗ್ ನಿಂಬೆಗೆ ೨೫೦೦ ರೂ, ಬೆಂಬಲ ಬೆಲೆ ಘೋಷಣೆ ಮಾಡಬೇಕು, ನಿಂಬೆ ಅಭಿವೃದ್ಧಿ ಮಂಡಳಿಯಿಂದ ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕು, ಇಂಡಿ ನಗರದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆ ಮಾಡಬೇಕು, ಬೇಸಿಗೆಯ ಸಂದರ್ಭದಲ್ಲಿ ನೀರಿನ ಕೊರತೆ ಅನುಭವಿಸುವ ನಿಂಬೆ ಬೆಳೆಗಾರ ರೈತರಿಗೆ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎನ್ನುವ ಪ್ರಮುಖ ಬೇಡಿಗೆಳನ್ನು ಈ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದ, ನಿಂಬೆ ಬೆಳೆಗಾರ ರೈತರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆಯ ಮೆರವಣಿಗೆ ಮಾಡಿ ಕೊನೆಗೆ ಇಂಡಿ ನಗರದ ಮಿನಿ ವಿಧಾನ ಸೌಧಕ್ಕೆ ತಲುಪಿದರು.ಅಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದಲ್ಲಿ ಐವತ್ತಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ತೇರದಾಳ ಶಾಸಕ ಸಿದ್ದು ಸವದಿಯವರ ನೇತ್ರತ್ವದಲ್ಲಿ ಸೋಮವಾರ ರಾತ್ರಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.ಇಲ್ಲಿನ ಎಂ.ಎಂ. ಹಟ್ಟಿಯವರ ಮನೆಯ ಆವರಣದಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಪ್ರಮುಖರು ಗ್ರಾ.ಪಂ. ಮಾಜಿ ಸದಸ್ಯರಾದ ಮಲ್ಲಪ್ಪ ಮುಂದಿನಮನಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪಿರಸಾಬ ನದಾಫ, ರಮೇಶ ಶಿರೋಳ, ಶೌಕತ್ ಮಿರ್ಜಿ, ಪ್ರಭಾಕರ ಚಲವಾದಿಯವರ ಮುಂದಾಳತ್ವದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಜನ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು.ಶಾಸಕ ಸಿದ್ದು ಸವದಿ ಎಲ್ಲರನ್ನು ಶಾಲುಹೊದಿಸಿ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಗುರಲಿಂಗಪ್ಪ ಪೂಜಾರಿ, ಬೀರಪ್ಪ ಹಳೇಮನಿ, ನಿಂಗಣ್ಣ ಪೂಜಾರಿ, ಪರಪ್ಪ ನೇಸೂರ, ಬಸವರಾಜ ಕುಂಚನೂರ, ಪ್ರಭು ಮೂಧೋಳ, ಪ್ರಕಾಶ ಪಾಟೀಲ, ಚನ್ನಪ್ಪ ತೇಲಿ, ಮಹಾಂತೇಶ ಜಾಲಿಕಟ್ಟಿ, ಅವ್ವನಪ್ಪ ಮುಗಳಖೋಡ ಸೇರಿದಂತೆ ಹಲವಾರು ಜನ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಗದ್ದಿಗೆ: ಸೇವೆ ಎನ್ನುವ ಪದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯಂತ ಮಹತ್ವವನ್ನು ಪಡೆದಿದೆ. ನಮ್ಮಲ್ಲಿರುವ ಶ್ರಮ, ವಿದ್ಯೆ, ಬುದ್ಧಿ, ಜ್ಞಾನ, ಕೌಶಲ್ಯ, ಆರ್ಥಿಕ ಸೌಲಭ್ಯ ಇತ್ಯಾದಿಗಳನ್ನು ಸಮಾಜ, ದೇಶದ ಒಳಿತಿಗಾಗಿ ಫಲಾಪೇಕ್ಷೆ ಇಲ್ಲದೆ ಅರ್ಪಣಾಮನೋಭಾವದಿಂದ ನೀಡುವ ಸಹಾಯವೇ ಸೇವೆ. ಸೇವಾ ಚಟುವಟಿಕೆ ನಮ್ಮ ಜೀವನದ ಅವಿಭಾಜ್ಯ ಭಾಗ ಹಾಗೂ ಸ್ವಭಾವವಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಕುಂಟೇಗೌಡ ಅಭಿಪ್ರಾಯಪಟ್ಟರು.ಹುಣಸೂರು ತಾಲೂಕಿನ ಗದ್ದಿಗೆ ಶ್ರೀ ಕೆಂಡಗಣೇಶ್ವರ ದೇವಸ್ಥಾನ ಆವರಣದಲ್ಲಿ ಜೆಎಸ್ ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ರಾಷ್ಟ್ರೀಯ ಸೇವಾ ಯೋಜನೆಯ ಬಗ್ಗೆ ಕೆಲವರಲ್ಲಿ ತಪ್ಪು ತಿಳುವಳಿಕೆ ಇದೆ. ಯಾವುದೋ ಒಂದು ಕಡೆ ಹೋಗಿ ಕಸ ಸಂಗ್ರಹ ಮಾಡುವುದು, ಚರಂಡಿ ಸ್ವಚ್ಛ ಮಾಡಿಸಿ, ಒಂದು ಫೋಟೋ ತೆಗೆದು ಹಾಕ್ತಾರೆ ಎಂಬ ಭಾವನೆ ಬಹುತೇಕ ಜನರಲ್ಲಿ ಇದೆ. ಆದರೆ ರಾಷ್ಟ್ರೀಯ…

Read More

ದಾನಿಗಳ ನೆರವು, ಗುಣಮಟ್ಟ ಶಿಕ್ಷಣ, ಸ್ಮಾರ್ಟ್ ಕ್ಲಾಸ್ ಗೆ ಆದ್ಯತೆ ಉದಯರಶ್ಮಿ ದಿನಪತ್ರಿಕೆ ವರದಿ: ಶ್ರೀಕಂಠ ಈಶ್ವರ್ಹೆಚ್ ಡಿ ಕೋಟೆ: ಖಾಸಗಿ ಶಾಲೆಗಳ ಹಾವಳಿಯಿಂದ ಸರ್ಕಾರಿ ಶಾಲೆಗಳು ನಿರ್ಲಕ್ಷ್ಯಗೊಳಗಾಗುತ್ತಿವೆ ಎಂಬ ಅಪವಾದ ಇದೆ. ಶಾಲೆಗಳ ಸುಧಾರಣೆಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡರೂ ಸರ್ಕಾರಿ ಶಾಲೆಗಳು ಏಳಿಗೆ ಕಾಣುತ್ತಿಲ್ಲ. ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತಿಲ್ಲ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ. ಆದರೆ ಇದೆಲ್ಲದಕ್ಕೂ ಅಪವಾದ ಎಂಬಂತೆ ಇಲ್ಲೊಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಣಮಟ್ಟ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು, ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳನ್ನೇ ತನ್ನೆಡೆಗೆ ಸೆಳೆಯುತ್ತಿದೆ.ಹೆಚ್ ಡಿ ಕೋಟೆ ತಾಲೂಕಿನ ಯಲಮತ್ತೂರು ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಣಮಟ್ಟದ ಶಿಕ್ಷಣ ಮೂಲಕ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುತ್ತಿದೆ. ಗುಣಮಟ್ಟದ ಶಿಕ್ಷಣದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಬಲವಾಗಿ ನಂಬಿರುವ ಇಲ್ಲಿನ ಶಿಕ್ಷಕರು ಕ್ರಿಯಾ ಯೋಜನೆ ರೂಪಿಸಿ ಮಕ್ಕಳ ಬುದ್ದಿ ಮಟ್ಟಕ್ಕೆ ತಕ್ಕಂತೆ ಬೋಧನೆ ಮಾಡುತ್ತಿದ್ದಾರೆ. ಎಲ್ಲಕ್ಕಿಂತ…

Read More