Author: editor.udayarashmi@gmail.com

ಇಂಡಿ: ಕೃಷಿ ಮೇಳ, ಜಾತ್ರೆಗಳು ರೈತರಿಗೆ ಅತ್ಯಂತ ಉಪಯೋಗಕಾರಿ, ಅಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಶನಿವಾರ ತಾಲೂಕು ಆಡಳಿತ ಸೌಧದ ಆವರಣದಲ್ಲಿ ತೋಟಗಾರಿಕೆ ಹಾಗೂ ಎಸ್ ಡಬ್ಲ್ಯೂ ಎ ಆರ್ ಡಿ‌ ಎಸ್ ಸಂಸ್ಥೆ ಸಹಯೋಗದೊಂದಿಗೆ “ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಲಿಂಬೆ ಬೆಳೆಗಾರರಿಗೆ ಕೃಷಿ ಮೇಳ ಪ್ರವಾಸ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ‌‌ ಚಾಲನೆ‌ ನೀಡಿದರು.ಕೃಷಿಕರು ಸುಸ್ಥಿರ ಮತ್ತು ಸಾವಯವ ಬೇಸಾಯ‌ದ ಬಗ್ಗೆ ಮಾಹಿತಿ ಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಉತ್ತಮ‌ ಮಾರುಕಟ್ಟೆ, ಕೃಷಿ ವೈಜ್ಞಾನಿಕ ಪದ್ದತಿಗಳ ಬಗ್ಗೆ ಅರ್ಥಮಾಡಿಕೊಳ್ಳಲು ಅತ್ಯಂತ ಸೂಕ್ತ ವೇದಿಕೆ ಕೃಷಿ‌ಮೇಳ ಹಾಗೂ ಕೃಷಿ ಜಾತ್ರೆ ಎಂದು ಹೇಳಿದರು. ಕೃಷಿಯಲ್ಲಿ ವೈಜ್ಞಾನಿಕ ಪದ್ದತಿ ಅಳವಡಿಕೊಂಡಾಗ ಮಾತ್ರ ರೈತರು ಒಳ್ಳೆಯ ಫಸಲು ಪಡೆಯಲು ಸಾಧ್ಯೆ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.ಇದೆ ಸಂದರ್ಭದಲ್ಲಿ ತೋಟಗಾರಿಕೆ ಹಿರಿಯ ಸಹಾಯಕ ನಿರ್ಧೇಶಕ ಎಚ್ ಎಸ್ ಪಾಟೀಲ…

Read More

ಪುಲಿಯನ್ ಸಾಮ್ರಾಜ್ಯ ಪಾಕ್ಷಿಕ ಪತ್ರಿಕೆ ದಶಮಾನೋತ್ಸವ ಕಾರ್ಯಕ್ರಮ ಆಲಮೇಲ: ನಮ್ಮ ಪುಲಿಯನ್ ಸಾಮ್ರಾಜ್ಯ ಪಾಕ್ಷಿಕ ಪತ್ರಿಕೆ ೨೦೧೩ ರಲ್ಲಿ ಪ್ರಾರಂಭಗೊಂಡು ೨೦೨೩-೨೪ ಕ್ಕೆ ೧೦ ವರ್ಷ ಪೂರೈಸುತ್ತಿದೆ. ಕಾರಣ ಆಲಮೇಲದಲ್ಲಿ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಸಂಪಾದಕ ಪ್ರಕಾಶ ಮಾಡ್ಯಾಳ ತಿಳಿಸಿದ್ದಾರೆ.ಮುಖ್ಯ ವೇದಿಕೆಯಲ್ಲಿ ೫೦೦ ಜನ ಸಾಧಕರಿಗೆ ಸನ್ಮಾನ, ಕವಿಗೋಷ್ಠಿ, ಉಪನ್ಯಾಸ, ೧೦೦೦ ಪುಟಗಳ ಸ್ಮರಣ ಸಂಚಿಕೆ, ಪದಗ್ರಹಣಮುಂತಾದ ಕಾರ್ಯಕ್ರಮ ಇದ್ದು,ಪ್ರಶಸ್ತಿ-ಸನ್ಮಾನಕ್ಕಾಗಿ, ಕವಿಗೋಷ್ಠಿ, ಲೇಖನಗಳಿಗೆ ಅರ್ಜಿಅಹ್ವಾನಿಸಲಾಗಿದೆ.ಸಹಕಾರ ರತ್ನ ಪುರಸ್ಕಾರ, ಆದರ್ಶ ಶಿಕ್ಷಕ ಪುರಸ್ಕಾರ, ಆದರ್ಶ ಶಿಕ್ಷಕಿ ಪುರಸ್ಕಾರ, ಆದರ್ಶ ಶಾಲಾ ಪುರಸ್ಕಾರ, ಕಾಯಕ ರತ್ನ ಪುರಸ್ಕಾರ, ಯುವ ರತ್ನ ಪುರಸ್ಕಾರ, ಉದ್ಯಮ ರತ್ನ ಪುರಸ್ಕಾರ, ದಕ್ಷ ಆರಕ್ಷಕ ಪುರಸ್ಕಾರ, ಸೇವಾ ರತ್ನಪುರಸ್ಕಾರ, ರಾಜನೀತಿಜ್ಞ ಪುರಸ್ಕಾರ, ಪತ್ರಿಕಾ ದಿಗ್ಗಜ ಪುರಸ್ಕಾರ, ಆದರ್ಶ ದಂಪತಿ ಪುರಸ್ಕಾರ, ಶಾಂತಿ ರತ್ನ ಪುರಸ್ಕಾರ, ಬುದ್ಧ ರತ್ನ ಪುರಸ್ಕಾರ, ಜೈಬೀಮ ರತ್ನ ಪುರಸ್ಕಾರ, ಬಸವ ಚೇತನ ಪುರಸ್ಕಾರ, ಅಭಿನಂದನಾ ಪುರಸ್ಕಾರ, ಧರ್ಮ ತೇಜಪುರಸ್ಕಾರ, ಧರ್ಮವೀರಚಕ್ರ ಪುರಸ್ಕಾರ, ಕಲಾ…

Read More

ನನ್ನ ರಾಜಕೀಯ ಜೀವನ ತೆರೆದ ಪುಸ್ತಕ | ಪ್ರತಿ ಪುಟಗಳು ಪಾರದರ್ಶಕ ಮತ್ತು ಪ್ರಾಮಾಣಿಕ | ಸಿಎಂ ಸಿದ್ದರಾಮಯ್ಯ ಸ್ಪಷ್ಠನೆ ಬೆಂಗಳೂರು: ಅಧಿವೇಶನದಲ್ಲಿ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಆಡಳಿತ ಪಕ್ಷದವರು ಬೆಳಕು ಚೆಲ್ಲಿ ಚರ್ಚಿಸಿದರು. ಆದರೆ, ವಿರೋಧ ಪಕ್ಷದವರು ನೆಪಕ್ಕೂ ರಾಜ್ಯದ ಜನರ ಸಂಕಷ್ಟಗಳ ಬಗ್ಗೆ ಚಕಾರವನ್ನೇ ಎತ್ತಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಪ್ರತಿ ಪುಟಗಳು ಪಾರದರ್ಶಕ ಮತ್ತು ಪ್ರಾಮಾಣಿಕ. ಸಣ್ಣದೊಂದು ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯದ ಪಾವಿತ್ರ್ಯತೆ ಕಾಪಾಡಿಕೊಂಡಿದ್ದೇನೆ. ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನದಂತೆ ಪ್ರತಿಪಕ್ಷಗಳು ನಡೆದುಕೊಂಡವು” ಎಂದು ಆರೋಪಿಸಿದರು.“ಬಿಜೆಪಿ, ಜೆಡಿಎಸ್ ಹತಾಶರಾಗಿದ್ದಾರೆ. ನಾವು 135 ಸ್ಥಾನ ಗೆದ್ದ ಬಳಿಕ ರಾಜಕೀಯ ಪ್ರೇರಿತವಾದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಾನು ಎರಡನೇ ಬಾರಿ ಸಿಎಂ ಆಗಿರುವುದು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದರು.“ಎರಡು ವಾರವೂ ವಾಲ್ಮೀಕಿ ನಿಗಮದ ಒಂದೇ ವಿಚಾರ ಪ್ರಸ್ತಾಪ ಆಗಿದೆ.…

Read More

ವಿಜಯಪುರ: ವಿಜಯಪುರ ನಗರದ ಮನಗೂಳಿ ಅಗಸಿ ಬಡಾವಣೆಯ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಜಾಗಕ್ಕೆ ಸಂಬಂಧಿಸಿದ ಸಮಸ್ಯೆಯ ಕುರಿತು ಸುದೀರ್ಘವಾದ ಹೋರಾಟ ಕೈಗೊಂಡರು ಕೂಡ ಜಾಗದ ಸಮಸ್ಯೆಯನ್ನು ಬಗೆ ಹರಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದಲಿತ ಮುಖಂಡ ಪ್ರತಾಪ ಚಿಕ್ಕಲಕಿ ಆಕ್ರೋಶ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ವಿಜಯಪುರ ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮನಗೂಳಿ ಅಗಸಿ ಬಡಾವಣೆಯ ಅಂಬೇಡ್ಕರ್ ಭವನದ ಜಾಗಕ್ಕೆ ಖಾಸಗಿ ವ್ಯಕ್ತಿಗಳು ತಕರಾರು ತಗೆಯುತ್ತಿರುವ ಬಗ್ಗೆ ತಿಂಗಳಗಳ ಹಿಂದೆಯೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ಗಮನಕ್ಕೆ ತಂದರೆ ಯಾವುದೇ ಪ್ರಯೊಜನೆಯಾಗಿರುವುದಿಲ್ಲ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬ ಅನುಮಾನ ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಕೂಡಲೇ ಅಂಬೇಡ್ಕರ್ ಭವನದ ಜಾಗಕ್ಕೆ ಹೋಗಲು ಖಾಸಗಿ ವ್ಯಕ್ತಿಗಳು ನಿರ್ಮಿಸಿದ ತಡೆಗೊಡೆಯನ್ನು ತೆರವುಗೊಳಿಸಿ ಅನುಕೂಲ ಮಾಡಿಕೊಡಬೇಕೆಂದು…

Read More

ವಿಜಯಪುರ: ಭೀಮಸೇನಾ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘ ಜಿಲ್ಲಾ ಘಟಕ ವಿಜಯಪುರ ಇದರ ವತಿಯಿಂದ ಸನ್ ೨೦೨೩-೨೪ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. ೮೦ ಕ್ಕಿಂತ ಹೆಚ್ಚು ಅಂಕ ಪಡೆದ ಚಲವಾದಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ೦೧-೦೭-೨೦೨೩ ರಿಂದ ೩೦-೦೬-೨೦೨೪ರ ಅವಧಿಯಲ್ಲಿ ನಿವೃತ್ತ ಗೊಂಡ ನೌಕರರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ನಗರದ ಸಾರಿಪುತ್ರ ಬುದ್ದವಿಹಾರ, ಜಲನಗರ, ವಿಜಯಪುರ ಇಲ್ಲಿ ದಿನಾಂಕ : ೨೮-೦೭-೨೦೨೪ ರಂದು ರವಿವಾರ ಬೆಳಿಗ್ಗೆ ೧೦.೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಕಾರಣ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಚಲವಾದಿ ಸಮಾಜದ ಬಂಧುಗಳು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘದ ಅಧ್ಯಕ್ಷರಾದ ರಾವುಸಾಹೇಬ್ ಗವಾರಿ ಹಾಗೂ ಕಾರ್ಯದರ್ಶಿಗಳಾದ ವಿಜಯಾನಂದ ಮುದ್ದೇಬಿಹಾಳ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಸನ್ ೨೦೨೩-೨೪ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.೮೦ ರಷ್ಟು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸನ್ಮಾನ, ನಿವೃತ್ತ ಗೊಂಡ ಉಪ್ಪಾರ ಸಮಾಜದ ನೌಕರರು ಹಾಗೂ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಕುರಿತು ಚರ್ಚಿಸಲು ಪೂರ್ವಭಾವಿ ಸಭೆಯನ್ನು ದಿ : ೨೮-೦೭-೨೦೨೪ ರಂದು ರವಿವಾರ ಬೆಳಿಗ್ಗೆ ೧೧.೦೦ ಗಂಟೆಗೆ ನಗರದ ಶ್ರೀ ಹನುಮಾನ ಪ್ರೌಢಶಾಲೆ, ಶಿಕಾರಖಾನೆ, ವಿಜಯಪುರ ಇಲ್ಲಿ ಜಿಲ್ಲಾ ಉಪ್ಪಾರ ಸೇವಾ ಸಂಘ ಹಾಗೂ ಜಿಲ್ಲಾ ಉಪ್ಪಾರ ನೌಕರರ ಸಂಘ ಇವುಗಳ ಅಡಿಯಲ್ಲಿ ವಿಷಯಗಳನ್ನು ಚರ್ಚಿಸಲಾಗುವದು. ಕಾರಣ ಸಂಘದ ಸಮಸ್ತ ಉಪ್ಪಾರ ಸಮಾಜ ಸಂಘದ ಪದಾಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸಿ ತಮ್ಮ ಸಲಹೆ ಸೂಚನೆ ನೀಡಬೇಕೆಂದು ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷರಾದ ಜಕ್ಕಪ್ಪ ಎಡವೆ ಹಾಗೂ ಕಾರ್ಯದರ್ಶಿ ಸಿದ್ದು ಗೇರಡೆ ರವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Read More

ಸಿಂದಗಿ: ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದೇ ಹಾಗೂ ಸ್ಥಳೀಯವಾಗಿ ಈ ಸೌಲಭ್ಯ ಸಿಗುವುದರಿಂದ ಸಮಯ ವ್ಯರ್ಥವಾಗುವುದಿಲ್ಲ. ಮತ್ತು ಅಲೆದಾಟ ತಪ್ಪುತ್ತದೆ. ಹಾಗಾಗಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಇಒ ರಾಮು ಅಗ್ನಿ ಸಲಹೆ ನೀಡಿದರು.ಶುಕ್ರವಾರ ಸಾಯಂಕಾಲ ತಾಲೂಕಿನ ಕೊಕಟನೂರ ಗ್ರಾಂಪಂ ಗೆ ಭೇಟಿ ನೀಡಿ ಸಿಬ್ಬಂದಿಗಳ ಹಾಜರಾತಿ, ಸಿಬ್ಬಂದಿಗಳ ವೇತನ, ಇ-ಸ್ವತ್ತು, ಪರಿಶೀಲಿಸಿದರು.ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರಕಾರದ ಆದೇಶದಂತೆ ಗ್ರಾಮ ಪಂಚಾಯತನಲ್ಲಿ ಜನನ, ಮರಣ, ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಇರಲಿಲ್ಲ. ಇದಕ್ಕೆ ಜನರು ತಾಲೂಕು ಕೇಂದ್ರಕ್ಕೆ ಹೋಗಿ ಪಡೆಯುತ್ತಿದ್ದರು. ಆದರೆ ಒಂದೇ ದಿನಕ್ಕೆ ಕೆಲಸವಾಗದೇ ಇರುವುದರಿಂದ ಅನೇಕ ಬಾರಿ ಹೋಗಿ ಹಣ ಜೊತೆಗೆ ಸಮಯ ವ್ಯರ್ಥವಾಗುತ್ತಿತ್ತು. ಪ್ರಸ್ತುತ ದಿನಮಾನಗಳಲ್ಲಿ ಈ ಅವಕಾಶ ಗ್ರಾಮೀಣ ಪ್ರದೇಶದಲ್ಲಿ ಇರುವದರಿಂದ ಕಡಿಮೆ ಅವಧಿ ಮತ್ತು ಯಾವುದೇ ಹಣ ಖರ್ಚು ಆಗದಂತೆ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಜನರಿಗೆ ಅನುಕೂಲವಾಗಲಿದೆ ಎಂದರು.ಈ ವೇಳೆ ಗ್ರಾಮದ ನಿವಾಸಿಯ ಹುಸೇನ್ ಸಾಬ್…

Read More

ವಿಜಯಪುರ: ಭೀಮಸೇನಾ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘ ಜಿಲ್ಲಾ ಘಟಕ ವಿಜಯಪುರ ಇದರ ವತಿಯಿಂದ ಸನ್ ೨೦೨೩-೨೪ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. ೮೦ ಕ್ಕಿಂತ ಹೆಚ್ಚು ಅಂಕ ಪಡೆದ ಚಲವಾದಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ೦೧-೦೭-೨೦೨೩ ರಿಂದ ೩೦-೦೬-೨೦೨೪ರ ಅವಧಿಯಲ್ಲಿ ನಿವೃತ್ತ ಗೊಂಡ ನೌಕರರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ನಗರದ ಸಾರಿಪುತ್ರ ಬುದ್ದವಿಹಾರ, ಜಲನಗರ, ವಿಜಯಪುರ ಇಲ್ಲಿ ದಿನಾಂಕ : ೨೮-೦೭-೨೦೨೪ ರಂದು ರವಿವಾರ ಬೆಳಿಗ್ಗೆ ೧೦.೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಕಾರಣ ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಚಲವಾದಿ ಸಮಾಜದ ಬಂಧುಗಳು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘದ ಅಧ್ಯಕ್ಷರಾದ ರಾವುಸಾಹೇಬ್ ಗವಾರಿ ಹಾಗೂ ಕಾರ್ಯದರ್ಶಿಗಳಾದ ವಿಜಯಾನಂದ ಮುದ್ದೇಬಿಹಾಳ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಸನ್ ೨೦೨೩-೨೪ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.೮೦ ರಷ್ಟು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸನ್ಮಾನ, ನಿವೃತ್ತ ಗೊಂಡ ಉಪ್ಪಾರ ಸಮಾಜದ ನೌಕರರು ಹಾಗೂ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಕುರಿತು ಚರ್ಚಿಸಲು ಪೂರ್ವಭಾವಿ ಸಭೆಯನ್ನು ದಿ : ೨೮-೦೭-೨೦೨೪ ರಂದು ರವಿವಾರ ಬೆಳಿಗ್ಗೆ ೧೧.೦೦ ಗಂಟೆಗೆ ನಗರದ ಶ್ರೀ ಹನುಮಾನ ಪ್ರೌಢಶಾಲೆ, ಶಿಕಾರಖಾನೆ, ವಿಜಯಪುರ ಇಲ್ಲಿ ಜಿಲ್ಲಾ ಉಪ್ಪಾರ ಸೇವಾ ಸಂಘ ಹಾಗೂ ಜಿಲ್ಲಾ ಉಪ್ಪಾರ ನೌಕರರ ಸಂಘ ಇವುಗಳ ಅಡಿಯಲ್ಲಿ ವಿಷಯಗಳನ್ನು ಚರ್ಚಿಸಲಾಗುವದು. ಕಾರಣ ಸಂಘದ ಸಮಸ್ತ ಉಪ್ಪಾರ ಸಮಾಜ ಸಂಘದ ಪದಾಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸಿ ತಮ್ಮ ಸಲಹೆ ಸೂಚನೆ ನೀಡಬೇಕೆಂದು ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷರಾದ ಜಕ್ಕಪ್ಪ ಎಡವೆ ಹಾಗೂ ಕಾರ್ಯದರ್ಶಿ ಸಿದ್ದು ಗೇರಡೆ ರವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Read More

ಸಿಂದಗಿ: ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದೇ ಹಾಗೂ ಸ್ಥಳೀಯವಾಗಿ ಈ ಸೌಲಭ್ಯ ಸಿಗುವುದರಿಂದ ಸಮಯ ವ್ಯರ್ಥವಾಗುವುದಿಲ್ಲ. ಮತ್ತು ಅಲೆದಾಟ ತಪ್ಪುತ್ತದೆ. ಹಾಗಾಗಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಇಒ ರಾಮು ಅಗ್ನಿ ಸಲಹೆ ನೀಡಿದರು.ಶುಕ್ರವಾರ ಸಾಯಂಕಾಲ ತಾಲೂಕಿನ ಕೊಕಟನೂರ ಗ್ರಾಂಪಂ ಗೆ ಭೇಟಿ ನೀಡಿ ಸಿಬ್ಬಂದಿಗಳ ಹಾಜರಾತಿ, ಸಿಬ್ಬಂದಿಗಳ ವೇತನ, ಇ-ಸ್ವತ್ತು, ಪರಿಶೀಲಿಸಿದರು.ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರಕಾರದ ಆದೇಶದಂತೆ ಗ್ರಾಮ ಪಂಚಾಯತನಲ್ಲಿ ಜನನ, ಮರಣ, ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಇರಲಿಲ್ಲ. ಇದಕ್ಕೆ ಜನರು ತಾಲೂಕು ಕೇಂದ್ರಕ್ಕೆ ಹೋಗಿ ಪಡೆಯುತ್ತಿದ್ದರು. ಆದರೆ ಒಂದೇ ದಿನಕ್ಕೆ ಕೆಲಸವಾಗದೇ ಇರುವುದರಿಂದ ಅನೇಕ ಬಾರಿ ಹೋಗಿ ಹಣ ಜೊತೆಗೆ ಸಮಯ ವ್ಯರ್ಥವಾಗುತ್ತಿತ್ತು. ಪ್ರಸ್ತುತ ದಿನಮಾನಗಳಲ್ಲಿ ಈ ಅವಕಾಶ ಗ್ರಾಮೀಣ ಪ್ರದೇಶದಲ್ಲಿ ಇರುವದರಿಂದ ಕಡಿಮೆ ಅವಧಿ ಮತ್ತು ಯಾವುದೇ ಹಣ ಖರ್ಚು ಆಗದಂತೆ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಜನರಿಗೆ ಅನುಕೂಲವಾಗಲಿದೆ ಎಂದರು.ಈ ವೇಳೆ ಗ್ರಾಮದ ನಿವಾಸಿಯ ಹುಸೇನ್ ಸಾಬ್…

Read More