ಸಿಂದಗಿ: ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದೇ ಹಾಗೂ ಸ್ಥಳೀಯವಾಗಿ ಈ ಸೌಲಭ್ಯ ಸಿಗುವುದರಿಂದ ಸಮಯ ವ್ಯರ್ಥವಾಗುವುದಿಲ್ಲ. ಮತ್ತು ಅಲೆದಾಟ ತಪ್ಪುತ್ತದೆ. ಹಾಗಾಗಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಇಒ ರಾಮು ಅಗ್ನಿ ಸಲಹೆ ನೀಡಿದರು.
ಶುಕ್ರವಾರ ಸಾಯಂಕಾಲ ತಾಲೂಕಿನ ಕೊಕಟನೂರ ಗ್ರಾಂಪಂ ಗೆ ಭೇಟಿ ನೀಡಿ ಸಿಬ್ಬಂದಿಗಳ ಹಾಜರಾತಿ, ಸಿಬ್ಬಂದಿಗಳ ವೇತನ, ಇ-ಸ್ವತ್ತು, ಪರಿಶೀಲಿಸಿದರು.
ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರಕಾರದ ಆದೇಶದಂತೆ ಗ್ರಾಮ ಪಂಚಾಯತನಲ್ಲಿ ಜನನ, ಮರಣ, ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಇರಲಿಲ್ಲ. ಇದಕ್ಕೆ ಜನರು ತಾಲೂಕು ಕೇಂದ್ರಕ್ಕೆ ಹೋಗಿ ಪಡೆಯುತ್ತಿದ್ದರು. ಆದರೆ ಒಂದೇ ದಿನಕ್ಕೆ ಕೆಲಸವಾಗದೇ ಇರುವುದರಿಂದ ಅನೇಕ ಬಾರಿ ಹೋಗಿ ಹಣ ಜೊತೆಗೆ ಸಮಯ ವ್ಯರ್ಥವಾಗುತ್ತಿತ್ತು. ಪ್ರಸ್ತುತ ದಿನಮಾನಗಳಲ್ಲಿ ಈ ಅವಕಾಶ ಗ್ರಾಮೀಣ ಪ್ರದೇಶದಲ್ಲಿ ಇರುವದರಿಂದ ಕಡಿಮೆ ಅವಧಿ ಮತ್ತು ಯಾವುದೇ ಹಣ ಖರ್ಚು ಆಗದಂತೆ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಜನರಿಗೆ ಅನುಕೂಲವಾಗಲಿದೆ ಎಂದರು.
ಈ ವೇಳೆ ಗ್ರಾಮದ ನಿವಾಸಿಯ ಹುಸೇನ್ ಸಾಬ್ ಬಾಗವಾನ್ ಇವರ ಮರಣ ಪತ್ರವನ್ನು ಅವರ ಸಂಬಂಧಿಕರಿಗೆ ನೀಡಿದರು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕರ ನಿತ್ಯಾನಂದ ಯಲಗೋಡ, ಪಿಡಿಒ ವಸಂತ ಅಮೀನಗಡ, ಬಸವರಾಜ ಹರಾನಾಳ, ಗ್ರಾಮ ಪಂಚಾಯತ ಸದಸ್ಯ ರಮೇಶ ಚಿನ್ನಾಕರ, ಮಡಿವಾಳಪ್ಪ ಜವಳಗಿ, ಪರಸು ಜವಳಗಿ, ತಾಂತ್ರಿಕ ಸಂಯೋಜಕರು ಶಿವಶರಣ ವಂದಗನೂರ, ಐಇಸಿ ಸಂಯೋಜಕ ಭೀಮರಾಯ ಚೌಧರಿ, ಕಾರ್ಯದರ್ಶಿ ಶಿವುಕುಮಾರ ಮಠ, ಪರಸು ಚಾವರ, ಅಭಿಯಂತರ ಶಂಕರ್ ಪೂಜಾರಿ, ಶೇಖರ್ ಕಾಂಬಳೆ ಮತ್ತು ಸಿಬ್ಬಂದಿ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
ಗ್ರಾಪಂನಲ್ಲಿ ಜನನ-ಮರಣ ಪ್ರಮಾಣ ಪತ್ರ ಪಡೆಯಲು ಅನುಕೂಲ :ಅಗ್ನಿ
Related Posts
Add A Comment

