Author: editor.udayarashmi@gmail.com

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದ ಶತಾಯುಷಿ ಲಿಂ.ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೪೧ ನೇ ಪುಣ್ಯಸ್ಮರಣೋತ್ಸವ ಹಾಗೂ ಪಂಚಭಾಷಾ ಪಂಡಿತರಾಗಿದ್ದ ಲಿಂ.೨೦೦೮ ಜಗದ್ಗುರು ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ೧೧ ನೇ ಜಾತ್ರಾಮಹೋತ್ಸವದಂಗವಾಗಿ ಮೇ. ೨೩ ರಿಂದ ರೋಣ ತಾಲೂಕಿನ ಹೊನ್ನಿಗನೂರಿನ ವಿರುಪಾಕ್ಷ ಶಾಸ್ತ್ರೀ ಅವರಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಪುರಾಣವನ್ನು ಪ್ರತಿನಿತ್ಯ ಸಂಜೆ ೭ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಮೇ. ೨೩ ರಂದು ಸಂಜೆ ೭ ಗಂಟೆಗೆ ಪುರಾಣ ಪ್ರಾರಂಭೋತ್ಸವದ ಸಾನಿಧ್ಯವನ್ನು ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಅತಿಥಿಗಳಾಗಿ ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ ಆಗಮಿಸುವರು. ಅಧ್ಯಕ್ಷತೆಯನ್ನು ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ವಹಿಸುವರು. ಮನಗೂಳಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ಪುರಾಣ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Read More

ಇಂಡಿ : ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ನಲ್ಲಿ ಕೆಲವೇ ಸೀಟುಗಳು ಲಭ್ಯವಿವೆ ಎಂದು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ. 2024 ನೇ ಸಾಲಿನ ಪ್ರವೇಶಗಳು ಪ್ರಾರಂಭವಾಗಿದ್ದು,ಡಿಪ್ಲೋಮಾ ಇನ್ ಹೆಲ್ಲ ಇನ್ಸಪೆಕ್ಟರ ಕೋರ್ಸ್ ಡಿಪ್ಲೋಮಾ ಇನ್ ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ (DMLT- Diploma in Lab Technician Course) ಪ್ರವೇಶಗಳಿವೆ. ಅಲ್ಲದೇ, SSLC Pass /PUC Fail ಆಧವರಿಗೆ 3 ವರ್ಷ ಈ ಕೋರ್ಸ್ ಗಳು ಕಲಿಯಬೇಕು. ತದನಂತರ 100 ಕ್ಕೆ 100 ರಷ್ಟು ಸರಕಾರಿ/ಅರೆ ಸರಕಾರಿ ಉದ್ಯೋಗ ಖಚಿತವಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಸಂತೋಷ ಕೆಂಬೋಗಿ ತಿಳಿಸಿದ್ದಾರೆ. ಅದಕ್ಕಾಗಿ ಹೆಚ್ಚಿನ ಮಾಹಿತಿಗಾಗಿ 9731549997,9449213039 ಸಂಪರ್ಕಿಸಬಹುದು ಎಂದರು.

Read More

ಸಿಂದಗಿ: ಬದುಕಿನಲ್ಲಿ ಕಣ್ಣು ಅತ್ಯಮೂಲ್ಯ. ಕಾಲ ಕಾಲಕ್ಕೆ ಅವುಗಳನ್ನು ಸಂರಕ್ಷಣೆ ಮಾಡಬೇಕಾದರೆ ಕಾಳಜಿ ಬಹಳ ಮುಖ್ಯ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ಪಟ್ಟಣದ ಸಾರಂಗಮಠದಲ್ಲಿ ಲಿಂ.ಶ್ರೀ ಚನ್ನವೀರ ಸ್ವಾಮೀಜಿಗಳ ೩೩ನೆಯ ಪುಣ್ಯ ಸ್ಮರಣೋತ್ಸವ ನಿಮಿತ್ಯವಾಗಿ ಸಿಂದಗಿ ಪೂಜ್ಯ ಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ, ವಿಜಯಪುರ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಜಿ.ಪಿ.ಪೋರವಾಲ್ ಪದವಿ ಮಹಾವಿದ್ಯಾಲಯ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಗತ್ತನ್ನು ನೋಡಿ ಸಂತೋಷ ಪಡಬೇಕಾದರೆ ಕಣ್ಣನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಸೇವೆ ಅನನ್ಯವಾದದ್ದು. ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಸಮಾಜದ ಬದಲಾವಣೆಗೆ ಈ ಸಂಸ್ಥೆಯು ಶ್ರಮಿಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಆಯೋಜನೆ ಮಾಡಿಲಿ ಎಂದು ಶುಭ ಹಾರೈಸಿದರು.ಈ ವೇಳೆ ತಾಲೂಕಿನ ೩೦೦ಕ್ಕೂ ಅಧಿಕ ಜನರು ನೇತ್ರ ತಪಾಸಣೆಯನ್ನು ಮಾಡಿಕೊಂಡರು. ಮತ್ತು ೧೨೦ಕ್ಕೂ ಹೆಚ್ಚು ಜನರಿಗೆ ಅನುಗ್ರಹ ಕಣ್ಣಿನ ಆಸ್ಪತ್ರೆಗೆ…

Read More

ವಿಜಯಪುರ : ಹೊರದೇಶದ ಕಾಬೂಲ್ನಲ್ಲಿ ನಿಮ್ಮ ವಿರುದ್ಧ ದೂರು ದಾಖಲಾಗಿದೆ, ಇಷ್ಟು ಹಣ ಹಾಕಿದರೆ ನೀವು ಸೇಫ್, ನಿಮ್ಮ ದಾಖಲಾತಿಗಳನ್ನು ಕೂಡಲೇ ಸಲ್ಲಿಸಿ, ನಿಮ್ಮ ವಿದ್ಯಾರ್ಹತೆ ಅನುಗುಣವಾಗಿ ನಿಮಗೆ ನೌಕರಿ ಬಂದಿದೆ, ಕೂಡಲೇ ಡಿಫಾಸಿಟ್ ಅಮೌಂಟ್ ಹಣ ಹಾಕಿ ಎಂದು ದೇಶದಾದ್ಯಂತ ಆನಲೈನ್ ವಂಚನೆ ಜಾಲ ದೇಶದಾದ್ಯಂತ ನಿದ್ದೆಗೆಡಿಸಿದೆ.ವಿಜಯಪುರದ ಖ್ಯಾತ ವೈದ್ಯರೊಬ್ಬರನ್ನು ವಂಚಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ವಿಜಯಪುರ ಜಿಲ್ಲೆಯ ಪೊಲೀಸರು ಈ ಪ್ರಕರಣ ಬೇಧಿಸುವಲ್ಲಿ ಮಾಡಿದ ತನಿಖೆ ಪರಿಣಾಮವಾಗಿ ದೇಶದಲ್ಲಿ ನಡೆದ ಹಲವಾರು ಪ್ರಕರಣಗಳು ಬೇಧಿತವಾಗಿವೆ.ವಿಜಯಪುರ ಪೊಲೀಸರು ಬಂಧಿಸಿರುವ ಆರೋಪಿಗಳೇ ದೇಶಾದ್ಯಂತ ಒಟ್ಟು 502 ಜನರಿಗೆ ವಂಚನೆ ಮಾಡಿದ ಬಗ್ಗೆ ತಿಳಿದು ಬಂದಿದದ್ದು, ಈ ಆರೋಪಿಗಳು ಅನಾಮಧೆಯರ ಹೆಸರಿನಲ್ಲಿ ವಿವಿಧ ಬ್ಯಾಂಕ್ಳಲ್ಲಿ ಸುಮಾರು 170 ಖಾತೆಗಳನ್ನು ತೆರೆದೆ ಜನರಿಗೆ ವಂಚನೆ ಮಾಡಿರುವ ಪ್ರಸಂಗ ಸಹ ಬೆಳಕಿಗೆ ಬಂದಿದೆ, ಆರೋಪಿತರು ಅನಾಮಧೆಯರ ಹೆಸರಿನಲ್ಲಿ ವಿವಿಧ ಕಂಪನಿಯ 120 ಸಿಮ್ ಗಳನ್ನು ಉಪಯೋಗ ಮಾಡಿದ ದೊಡ್ಡ ಜಾಲವೂ ಸಹ ತನಿಖೆ ವೇಳೆ ತಿಳಿದು…

Read More

ಆಲಮಟ್ಟಿ: ಇಲ್ಲಿಯ ಪುರವರ ಹಿರೇಮಠದಶ್ರೀ ಅನ್ನದಾನೇಶ್ವರ ಶಿವಯೋಗಿಗಳ ಜಾತ್ರೆ ಮೇ.23 ಗುರುವಾರ ಜರುಗಲಿದೆ.ಜಾತ್ರೆಯ ಅಂಗವಾಗಿ ಬೆಳಿಗ್ಗೆಅನ್ನದಾನೇಶ್ವರ ಶಿವಯೋಗಿಗಳವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಮತ್ತು ಮಹಾಮಂಗಳಾರತಿ ಜರುಗಲಿದೆ.ಬೆಳಿಗ್ಗೆ 8.30 ಕ್ಕೆಷಟ್ಟಸ್ಥಲ ಧ್ವಜಾರೋಹಣವನ್ನು ನಿಡಗುಂದಿಯ ರುದ್ರಮುನಿ ಸ್ವಾಮೀಜಿ ಹಾಗೂ ರಾಷ್ಟ್ರ ಧ್ವಜಾರೋಹಣವನ್ನು ಭರತರಾಜ ಅ. ದೇಶಮುಖ ನೆರವೇರಿಸುವರು.ಮಧ್ಯಾಹ್ನ 3.30 ಕ್ಕೆ ಪಲ್ಲಕ್ಕಿ ಉತ್ಸವವು ಆಲಮಟ್ಟಿ ಆರ್.ಎಸ್. ಬಸವಣ್ಣ ದೇವಸ್ಥಾನದಿಂದ ಸಕಲ ವಾದ್ಯ ವೈಭವ ಹಾಗೂ ಬಿರುದಾವಳಿಗಳೊಂದಿಗೆ ಹೊರಟು ಈಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಬಿ.ಎ. ದೇಶಮುಖ (ಗಣಿ) ಅವರ ವಾಡೆಯಲ್ಲಿ ಪೂಜೆಯೊಂದಿಗೆ ಶ್ರೀ ಹನುಮಾನ ಮಂದಿರದಲ್ಲಿ ಪೂಜೆ ನೆರವೇರಿಸಿ, ಆಲಮಟ್ಟಿ ಸರ್ಕಲ್ ಮಾರ್ಗವಾಗಿ ಶ್ರೀಮಠಕ್ಕೆ ಬಂದು ತಲುಪಲಿದೆ.ಧರ್ಮ ಸಭೆ; ಸಂಜೆ 5 ಕ್ಕೆ ನಡೆಯುವ ಧರ್ಮಸಭೆಯಲ್ಲಿ ನಿಡಗುಂದಿಯ ಶ್ರೀ ರುದ್ರಮುನಿ ಸ್ವಾಮೀಜಿ,ಗಿರಿಸಾಗರದ ರುದ್ರಮುನಿ ಸ್ವಾಮೀಜಿ, ಮುತ್ತತ್ತಿಯ ಗುರುಲಿಂಗ ಸ್ವಾಮೀಜಿ, ಬಿಲ್ ಕೆರೂರಿನ ಸಿದ್ದಲಿಂಗ ಸ್ವಾಮೀಜಿ, ಕೊಣ್ಣೂರಿನ ವಿಶ್ವಪ್ರಭುದೇವ ಸ್ಚಾಮೀಜಿ, ಬೀಳಗಿಯ ಗುರುಪಾದ ಸ್ಚಾಮೀಜಿಚಿಮ್ಮಲಗಿಯ ಸಿದ್ಧರೇಣುಕ ಸ್ಚಾಮೀಜಿ, ನಂದವಾಡಗಿಯಅಭಿನವ ಚನ್ನಬಸವ ಸ್ಚಾಮೀಜಿ,ಇಟಗಿಯ ಗುರು…

Read More

“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ)- ಜಯಶ್ರೀ.ಜೆ. ಅಬ್ಬಿಗೇರಿ ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ಮೊ:೯೪೪೯೨೩೪೧೪೨ ಜೀವನವೆನ್ನುವುದು ಏರಿಳಿತಗಳಿಂದ ಕೂಡಿದೆ. ಅದು ಹೀಗೆ ಇರುತ್ತದೆ ಹೀಗೇ ಸಾಗುತ್ತದೆಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಹೀಗಿದ್ದಾಗ್ಯೂ ಕೆಲವರು ಮಾತ್ರ ಏರಿಳಿತಗಳನ್ನು ಲೆಕ್ಕಿಸದೇ ತಾವು ಅಂದುಕೊಂಡಂತೆ ಗೆಲುವನ್ನು ದಾಖಲಿಸಿಯೇ ಬಿಡುತ್ತಾರೆ. ಒಮ್ಮೆಲೇ ಭರ‍್ರನೇ ಬೀಸುವ ಬಿರುಗಾಳಿಯಾಗಲಿ, ಮನಸ್ಸಿಗೆ ಮುದನೀಡುವ ತಂಗಾಳಿಯಾಗಲಿ ಅವರಿಗೆ ಯಾವುದೇ ವ್ಯತ್ಯಾಸ ತರುವುದಿಲ್ಲ. ಅದಕ್ಕೆ ಅವರು ಮೂಗಿನ ಮೇಲೆ ಬೆರಳಿಡುವ, ಅಚ್ಚರಿಯನ್ನು ಮೂಡಿಸುವ ಯಶಸ್ಸಿನ ಕಿರೀಟವನ್ನು ಮುಡಿಗೇರಿಸಿಕೊಳ್ಳುತ್ತಾರೆ. ಸೋಲುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ಅವುಗಳಿಂದ ಪಾಠ ಕಲಿಯುತ್ತ ಗೆಲುವಿನ ಮಾರ್ಗದಲ್ಲಿ ನಡೆಯುತ್ತಾರೆ. ಹಾಗಾದರೆ ಗೆಲುವಿನ ಸರದಾರರಿಗೂ ಸೋತು ಸುಣ್ಣವಾಗುವ ವ್ಯಕ್ತಿಗಳಿಗೂ ಇರುವ ವ್ಯತ್ಯಾಸವಾದರೂ ಏನು? ಎನ್ನುವ ಪ್ರಶ್ನೆ ತಲೆಯಲ್ಲಿ ಸುಳಿಯುತ್ತದೆ. ಯಶಸ್ವಿ ವ್ಯಕ್ತಿಗಳು ಮತ್ತು ವಿಫಲ ವ್ಯಕ್ತಿಗಳನ್ನು ಪ್ರತ್ಯೇಕಿಸುವ ಅತ್ಯಂತ ಸ್ಪಷ್ಟವಾದ ಅಂಶಗಳು ಬಹಳಷ್ಟು ಇವೆ. ಅದರಲ್ಲಿ ಸ್ಥಿರತೆಯ ಶಕ್ತಿ ಪ್ರಮುಖವಾದುದು. ಯಶಸ್ವಿ ವ್ಯಕ್ತಿಗಳು ಅಸಾಧಾರಣ ಫಲಿತಾಂಶಗಳನ್ನು ಉಂಟು ಮಾಡಬಲ್ಲರು. ಏಕೆಂದರೆ ಅವರು ತಮ್ಮ…

Read More

ವಿಜಯಪುರ: ಇತ್ತೀಚಿಗೆ ಯಾವ ಕೊಲೆ ಪ್ರಕರಣಗಳಲ್ಲಿ ಮುಸ್ಲಿಂ ಆರೋಪಿ ಇದ್ದರೆ ಮಾತ್ರ ಪ್ರತಿಭಟನೆ ಮಾಡುವ ಮೂಲಕ ಬಿಜೆಪಿ ಹೆಣಗಳ ಮೇಲೆಯೂ ರಾಜಕಾರಣ ಮಾಡುವ ಕೆಟ್ಟ ಪರಂಪರೆಗೆ ಮುಂದಾಗಿದೆ ಎಂದು ಅಹಿಂದ ವಿಜಯಪುರ ಜಿಲ್ಲಾ ಘಟಕದ ಧುರೀಣ ಎಸ್.ಎಂ. ಪಾಟೀಲ ಗಣಿಹಾರಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿಅಂಜಲಿ ಅಂಬಿಗೇರ ಅವರ ಸಾವನ್ನು ಖಂಡಿಸಿ ಬಿಜೆಪಿ ಏಕೆ ಧರಣಿ ನಡೆಸುತ್ತಿಲ್ಲ, ಆಕ್ರೋಶ ಹೊರಹಾಕುತ್ತಿಲ್ಲ, ಅವರು ಹಿಂದೂಗಳು ಅಲ್ಲವೇ? ಅಲ್ಲಿ ಮುಸ್ಲಿಂ ಆರೋಪಿ ಇಲ್ಲ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದ್ದೆಯೇ? ಎಂದು ಪ್ರಶ್ನಿಸಿದರು.ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇ, ನೇಹಾ ಹಿರೇಮಠ, ರುಕ್ಸಾನಾ, ಮಂಗಳೂರು ಸೇರಿದಂತೆ ಅನೇಕ ಯುವತಿಯರ ಕೊಲೆ ನಡೆದಿರುವುದು ನೋವಿನ ಸಂಗತಿ, ಅಪರಾಧಿಗಳಿಗೆ ಜಾತಿ ಇಲ್ಲ, ಅಪರಾಧಿಗಳು ಅಪರಾಧಿಗಳೇ ಎಂದರು.ಮಣಿಪುರದಲ್ಲಿ ಯುವತಿ ಮೇಲೆ ಅಮಾನವೀಯವಾದ ದೌರ್ಜನ್ಯ ನಡೆದರೂ ಐವತ್ತಾರೂ ಇಂಚಿನ ಪ್ರಧಾನಿ ತುಟಿ ಪಿಟಕ್ ಎನ್ನಲಿಲ್ಲ, ದೇಶ ಕಂಡ ಅತ್ಯಂತ ಅಶಕ್ತ ಪ್ರಧಾನಿ ಮೋದಿ ಎಂದರು.ನೇಹಾ ಹಿರೇಮಠ ಅವರ ಕೊಲೆ ಖಂಡನೀಯ,…

Read More

ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಆತ ಹುಟ್ಟಿದ್ದು ರಾಜವಂಶದಲ್ಲಿ. ಕೋಸಲ ರಾಜ್ಯವನ್ನು ಆಳುತ್ತಿದ್ದ ಶಾಖ್ಯ ವಂಶದ ಮಹಾರಾಜ ಶುದ್ಧೋದನ ಆತನ ತಂದೆ, ತಾಯಿ ಮಾಯಾದೇವಿ. ಈತನ ಮೂಲ ಹೆಸರು ಸಿದ್ದಾರ್ಥ ಗೌತಮ. ರಾಜ ಮನೆತನದಲ್ಲಿ ಹುಟ್ಟಿದ ಸಿದ್ದಾರ್ಥನ ಜಾತಕವನ್ನು ಪರಿಶೀಲಿಸಿದ ರಾಜ ಪುರೋಹಿತರು ಈತ ಮುಂದೆ ಸರ್ವ ಸಂಗ ಪರಿತ್ಯಾಗಿಯಾಗಿ ಜಗದೋದ್ಧಾರಕನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿರುವನು ಎಂದು ಹೇಳಿದರು. ಇದರಿಂದ ಚಿಂತಿತನಾದ ರಾಜನು ತನ್ನ ಮಗನಿಗೆ ಯಾವುದೇ ರೀತಿಯ ನೋವು ಸಂಕಟಗಳ ದೃಶ್ಯಾವಳಿಗಳು ಕಣ್ಣಿಗೆ ಬೀಳದಂತೆ ಅರಮನೆಯ ಚಿನ್ನದ ಪಂಜರದಲ್ಲಿ ಸುಖದ ಸುಪ್ಪತ್ತಿಗೆಯ ಮೇಲೆ ಬೆಳೆಸಿದನು. ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿದನು. ಪ್ರಾಪ್ತ ವಯಸ್ಕನಾದಾಗ ಯಶೋಧರೆ ಎಂಬ ಕನ್ಯಾಮಣಿಯೊಂದಿಗೆ ವಿವಾಹವನ್ನು ಮಾಡಿದನು. ಆತನ ದಾಂಪತ್ಯದ ಫಲವಾಗಿ ಓರ್ವ ಪುತ್ರ ರಾಹುಲನನ್ನು ಪಡೆದನು. ಇಷ್ಟಕ್ಕೆ ಮುಗಿಯಲಿಲ್ಲ ಆತನ ಜೀವನ ಯಾನ…. ಇಲ್ಲಿಂದ ಆರಂಭವಾಯಿತು ಬುದ್ಧನ ಮಹಾ…ಗಮನ. ಎಷ್ಟೇ ಅರಮನೆಯ ಕಣ್ಕಾವಲಿನಲ್ಲಿ ಮಗನನ್ನು ಮಹಾರಾಜನು ಬೆಳೆಸಿದರೂ ಒಂದು ದಿನ ರಥದಲ್ಲಿ ಕುಳಿತು ಪ್ರಯಾಣಿಸುವಾಗ ರಾಜಕುಮಾರ…

Read More

ವಿಜಯಪುರ: ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳ ಹಿಂದೆ ನಡೆದ ರೋಹಿತ್ ಪವಾರ ಎಂಬ ಯುವಕನ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಓರ್ವ ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ನಿವಾಸಿ ಮುಜ್‌ಮಿಲ್ ಹಾಸೀಮ್‌ಖಾದ್ರಿ ಇನಾಮದಾರ (೨೨), ರಾಜಾಜಿನಗರ ನಿವಾಸಿ ಸಾಯಿನಾಥ ಪರಶುರಾಮ ಪವಾರ (೨೦), ಗಚ್ಚಿನಕಟ್ಟಿ ಕಾಲೊನಿ ನಿವಾಸಿ ಶರಣು ಶಿವಾನಂದ ಕುರಿ ಎಂದು ಗುರುತಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವನೆ ಮಾತನಾಡಿ, ನಗರವನ್ನೇ ಬೆಚ್ಚಿ ಬೀಳಿಸಿದ್ದ ಈ ಪ್ರಕರಣವನ್ನು ಬೇಧಿಸುವಲ್ಲಿ ರಚನೆ ಮಾಡಲಾಗಿದ್ದ ಸಿಪಿಐ ಮಲ್ಲಯ್ಯ ಮಠಪತಿ ಅವರ ನೇತೃತ್ವದ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.ಕಳೆದೆರಡು ದಿನಗಳ ಹಿಂದೆ ಇಂಡಿ ರಸ್ತೆಯ ಬಂಬಳ ಅಗಸಿ ನಿವಾಸಿ ರೋಹಿತ್ ಸುಭಾಸ ಪವಾರ ಎಂಬಾತನನ್ನು ಈ ಆರೋಪಿಗಳನ್ನು ಮಾರಕಾಸ್ತçಗಳಿಂದ ಹೊಡೆದು ಕೊಲೆ ಮಾಡಿದ್ದರು ಎಂದು ಗಣೇಶ ಪವಾರ ದೂರು ನೀಡಿದ್ದರು. ಈ ದೂರಿನನ್ವಯ ಪ್ರಕರಣ ಬೇಧಿಸಲು ವಿಶೇಷ ತಂಡ…

Read More

-ಮಂಡ್ಯ ಮ.ನಾ.ಉಡುಪ ಜೇನು ಅಬ್ಬಾ ಇದರ ರುಚಿಗೆ ಮರುಳಾಗದ ಮನುಷ್ಯರೇ ಇಲ್ಲ. ಪುರಾತನ ಕಾಲದ ಪಾಶ್ಚಾತ್ಯರಿಗೆ ಗೊತ್ತಿದ್ದ ಏಕಮೇವ ಸಿಹಿಯೆಂದರೆ ಜೇನು ಮಾತ್ರವೇ. ಕೂಡಿಬಾಳುವುದಕ್ಕೆ ಮಾನವನಿಗೆ ಹಾದಿಹಾಕಿಕೊಟ್ಟಿದ್ದು ಈ ಜೇನುಗೂಡಿರಲೂ ಸಾಕು.ಹಿಂದಿನ ಕಾಲದಲ್ಲಿ ಸತ್ತು ಕೊಳೆತ ಪ್ರಾಣಿಗಳ ದೇಹದಿಂದ ಜೇನುನೊಣಗಳು ಹುಟ್ಟುತ್ತವೆಂದು ನಂಬಿದ್ದರು ಮತ್ತು ಜೇನು ಹುಳುಗಳನ್ನು ಹೂವುಗಳಿಂದ ಸಂಗ್ರಹಿಸುತ್ತವೆಂದು ನಂಬಿದ್ದರು. ಅರಿಸ್ಟಾಟಲನು ತನ್ನಪುಸ್ತಕ ನ್ಯಾಚುರಲ್ ಹಿಸ್ಟರಿಯಲ್ಲಿ ಜೇನುನೊಣಗಳ ವರ್ಣನೆಯನ್ನು ಹಾಗೂ ಕೆಲಸಕಾರ್ಯಗಳನ್ನೂ ಅದೇ ತೆರೆನಾಗಿ, ತನ್ನ ಜಿಯೊರಿಕ್ ಪುಸ್ತಕ ದಲ್ಲಿ ವರ್ಜಿಲ್ನು ಜೇನು ನೊಣಗಳ ಕುರಿತು ಬರೆದ ನಂತರದಲ್ಲಿ ಜನರು ಈ ನಂಬಿಕೆಯನ್ನು ಬಿಟ್ಟರು. ನಂತರದ ಕಾಲದಲ್ಲಿ ಪಲಾದಿಯಸ್, ಪ್ಲಿನಿ, ಮೋಲೇ, ಮೊದಲಾದ ಮಹನೀಯರು ಜೇನು ಕುರಿತು ಬರೆದು ಜನರಿಗೆ ಹೆಚ್ಚಿನ ಅರಿವು ಮೂಡಿಸಿದರು. ವೇದಕಾಲದಲ್ಲಿಯೇ ಭಾರತೀಯರಲ್ಲಿ ಜೇನಿನ ಬಗ್ಗೆ ಹೆಚ್ಚಿನ ಅರಿವು ಇತ್ತು ಎಂಬುದು ಅಥರ್ವಣ ವೇದದ ಮಧುಸೂಕ್ತದಿಂದ ಕಂಡುಬರುವುದು.ಮಧುಮತೀ ರೋಷಧೀರ್ದ್ಯಾಪ ಆಪೋ ಮಧುವನ್ನೋ ಭವತ್ವಂತರಿಕ್ಷಂ ಕ್ಷೇತ್ರಸ್ಯ ಪತಿರ್ಮಧುಮಾನ್ನೋ ಅಸ್ಟ್ತರಿಷ್ಯಂತೋ ಅನ್ವೇನಂ ಚರೇಮ. ಪನ್ನಾಯ್ಯಂ ತದಶ್ಚಿನಾ ಕೃತಂವಾ ವೃಷಭೋ…

Read More