ವಿಜಯಪುರ: ಜ್ಞಾನ ಅಸೀಮವಾದುದು. ಜ್ಞಾನವೇ ನಿಜವಾದ ಪ್ರಕಾಶ. ಜೀವನ ಪೂರ್ತಿ ವಿದ್ಯೆ ಸಂಗ್ರಹಿಸಿ ಸಮಾಜದ ಒಳಿತಿಗೆ ಬಳಸಬೇಕು. ನಿಜವಾದ ವಿದ್ಯೆಯಿಂದ ಬದುಕು ಪರಿವರ್ತನೆ ಆಗಲು ಸಾಧ್ಯ ಎಂದು ಕಾತ್ರಾಳ-ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು.
ಅವರು ಇಟ್ಟಂಗಿಹಾಳ ರಸ್ತೆಯಲ್ಲಿರುವ ಏಕ್ಸಲೆಂಟ್ ಶಾಲೆಯಲ್ಲಿ ರವಿವಾರದಂದು ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಹಾಗೂ ಏಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ವಿದ್ಯಾಲಯ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಗತಿವಿಧಿ, ಪ್ರಾಂತ ಮಟ್ಟದ ಶಿಕ್ಷಕ ಸ್ವಾಧ್ಯಾಯ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಶಿಕ್ಷಕರು ಪ್ರಸನ್ನತೆಯಿಂದ ಮಕ್ಕಳಲ್ಲಿ ಹೃದಯವೈಶ್ಯಾಲ್ಯತೆ ಬೆಳೆಸಿ,ಅವರಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಹೇಳಿದರು.
ನಾಗಪುರದ ಭಾರತೀಯ ಶಿಕ್ಷಣ ಮಂಡಲದ ಅಖಿಲ ಭಾರತೀಯ ಸಂಘಟನಾ ಮಂತ್ರಿ ಬಿ ಆರ್ ಶಂಕರಾನಂದ
ಮಾತನಾಡಿ, ದೇಶದ ಪ್ರಗತಿಯ ಗುಣಮಟ್ಟ ನಿರ್ಧರಿಸಲು ಶಿಕ್ಷಣ ಅವಶ್ಯ. ಶಿಕ್ಷಕ ಆಚಾರ್ಯರಾಗಿ, ಋಷಿಯಾಗಿ ಮಕ್ಕಳ ಬದುಕನ್ನು ಕಟ್ಟಲು ಸಜ್ಜಾಗಬೇಕು. ಶಿಕ್ಷಕರು ದೇಶದ ಭವಿಷ್ಯ ಬರೆಯಬಲ್ಲರು.ಹಾಗಾಗಿ ಗುರುವಿಗೆ ಮಹತ್ತರ ಸ್ಥಾನವಿದೆ
ಎಂದು ಹೇಳಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ. ತುಳಸಿಮಾಲ ಮಾತನಾಡಿ,
ಮಗುವಿನ ವ್ಯಕ್ತಿತ್ವ ಹಾಗೂ ದೇಶದ ನಿರ್ಮಾಣ ಮಾಡುವದೇ ಶಿಕ್ಷಣದ ಪ್ರಮುಖ ಉದ್ದೇಶ. ದೇಶದ ಸುಸ್ಥಿರ ಅಭಿವೃದ್ಧಿಗೆ ಮೌಲ್ಯಯುತ ಶಿಕ್ಷಣ ಅಗತ್ಯ.ಕಲಿತ ಜ್ಞಾನವನ್ನು ವಿವೇಕವಾಗಿ ಬಳಸಿದಾಗ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಪ್ರಾಂತ ಅಧ್ಯಕ್ಷ ಡಾ.ಬಸವರಾಜ ಅನಾಮಿ ಅಧ್ಯಕ್ಷತೆ ವಹಿಸಿದ್ದರು. ಏಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ ಮೀನಾ ಚಂದಾವರ್ಕರ್,ಪ್ರೋ ರಾಜಕುಮಾರ ಮಾಲಿಪಾಟೀಲ, ವಿನಾಯಕ ಗ್ರಾಮಪುರೋಹಿತ, ಪ್ರೊ ಉದಯಕುಮಾರ ಕುಲಕರ್ಣಿ, ಪ್ರೊ ಅಶೋಕ ಸುರಪುರ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಗುಡ್ಡದ, ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ ಬಂಡೆ, ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷ ಬಿ ಎಸ್ ಬಾಪಗೊಂಡ ಸ್ವಾಗತಿಸಿ, ಪರಿಚಯಿಸಿದರು.ಡಾ ಎಸ್ ಟಿ ಬೋಳರೆಡ್ಡಿ ನಿರೂಪಿಸಿದರು.
ಪ್ರಾಂತ ಸಹ ಕಾರ್ಯದರ್ಶಿ ಸಿದ್ದು ಮದರಖಂಡಿ ವಂದಿಸಿದರು. 3 ದಿನದ ಶಿಕ್ಷಕ ಸ್ವಾಧ್ಯಾಯದಲ್ಲಿ ಭಾಗವಹಿಸಿದ 200 ಶಿಕ್ಷಕರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
Subscribe to Updates
Get the latest creative news from FooBar about art, design and business.
ನಿಜವಾದ ವಿದ್ಯೆಯಿಂದ ಬದುಕು ಪರಿವರ್ತನೆ ಸಾಧ್ಯ :ಅಮೃತಾನಂದ ಶ್ರೀ
Related Posts
Add A Comment

