ಢವಳಗಿ: ಗ್ರಾಮದ ಸರಕಾರಿ ಶಾಲೆ, ಬಸವ ಬಾಲ ಭಾರತಿ ಶಾಲೆ,ಪ್ರೌಢಶಾಲೆ ಸೇರಿದಂತೆ ಎಲ್ಲಾ ಸಮೀಪದ ಹಳ್ಳೂರ ಗ್ರಾಮದಿಂದ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದವು. ಆದರೆ ಪ್ರತಿ ಶನಿವಾರದಂದು ಶಾಲೆ ಬಿಡುವ ಸಮಯಕ್ಕೆ ಅನುಗುಣವಾಗಿ ಹಳ್ಳೂರ ಗ್ರಾಮದಿಂದ ಬಂದಂತಹ ವಿದ್ಯಾರ್ಥಿಗಳಿಗೆ ಮರಳಿ ಹೋಗಲು ಬಸ್ ಸೌಲಭ್ಯವಿಲ್ಲದೆ ಸಾಯಂಕಾಲದ ವರೆಗೆ ಕಾಯುವ ಸ್ಥಿತಿ ಉಂಟಾಗಿತ್ತು. ಅದನ್ನು ಅರಿತ ಬಸವ ಬಾಲ ಭಾರತಿ ಶಾಲೆಯ ಮುಖ್ಯ ಗುರು ರಮೇಶ ಮೂಲಿಮನಿ ಅವರು ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೊತೆಗೂಡಿ ಮುದ್ದೇಬಿಹಾಳ ಘಟಕದ ವ್ಯವಸ್ಥಾಪಕರಿಗೆ ಕಳೆದ ಶನಿವಾರದಂದು ಮನವಿ ಮಾಡಿದ್ದರು.
ಅದಕ್ಕೆ ಸ್ಪಂದಿಸಿದ ಮುದ್ದೇಬಿಹಾಳ ಘಟಕದ ವ್ಯವಸ್ಥಾಪಕ ಮದಬಾವಿ ಅವರು ಮಕ್ಕಳ ಹಾಗೂ ಶಿಕ್ಷಕರ ಸಮಸ್ಯೆಯನ್ನು ಆಲಿಸಿ ಪ್ರತಿ ಶನಿವಾರದಂದು ಮಧ್ಯಾಹ್ನ 12 ಗಂಟೆಗೆ ಮುದ್ದೇಬಿಹಾಳದಿಂದ ಢವಳಗಿ ಮಾರ್ಗವಾಗಿ ಹಳ್ಳೂರ ಗ್ರಾಮಕ್ಕೆ ಬಸ್ ಬಿಟ್ಟು ವಿದ್ಯಾರ್ಥಿಗಳ ಹಿತ ಕಾಪಾಡುವೆ ಎಂದು ಜುಲೈ 27 ಶನಿವಾರದಿಂದ ಬಸ್ ಸಂಪರ್ಕ ಕಲ್ಪಿಸಿದ ವ್ಯವಸ್ಥಾಪಕರಿಗೆ ಧನ್ಯವಾದಗಳನ್ನು ತಿಳಿಸಿ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಬಸವ ಬಾಲ ಭಾರತಿ ಶಾಲೆಯ ಮುಖ್ಯ ಗುರು ರಮೇಶ ಮೂಲಿಮನಿ ಅವರು ಹಳ್ಳೂರ ಗ್ರಾಮದಲ್ಲಿ ಸನ್ಮಾನಿಸಿ ಗೌರವಿಸಿದರು.
ಇದೇ ವೇಳೆಯಲ್ಲಿ ಢವಳಗಿ ಗ್ರಾಮಕ್ಕೆ ಬರುವ ಎಲ್ಲ ಶಾಲೆಯ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

