Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಆಸ್ತಿ ವಿಚಾರವಾಗಿ ವ್ಯಕ್ತಿಯ ಹತ್ಯೆ ನಡೆದಿರುವ ಘಟನೆ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವರದಿಯಾಗಿದೆ.ಬಾಲಪ್ಪ ಅಮರಪ್ಪ ಕ್ಷತ್ರಿ (೪೫) ಕೊಲೆಗೀಡಾದ ದುರ್ದೈವಿ. ಜಮೀನಿನ ಬದುವಿಗೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎನ್ನಲಾಗಿದೆ.ಮೊದಲಿನಿಂದಲೂ ಜಮೀನಿನ ವಿಷಯದಲ್ಲಿ ಕಲಹಗಳಿದ್ದು ಗುರುವಾರವೂ ಜಮೀನಿನ ಬದುವಿಗೆ ಸಂಬಂಧಿಸಿದಂತೆ ಪುನಃ ಗಲಾಟೆಗಳಾಗಿವೆ. ಮಾತಿಗೆ ಮಾತು ಬೆಳೆದು ಅತಿರೇಕಕ್ಕೇರಿ ಮಾರಕಾಸ್ತçಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಮೃತ ದೇಹದ ತಲೆಯ ಭಾಗ ಸೊಂಟದ ಭಾಗದಲ್ಲಿ ಹೆಚ್ಚು ಪೆಟ್ಟು ಬಿದ್ದಿದ್ದು ಅತೀಯಾದ ರಕ್ತಸ್ರಾವವಾಗಿದೆ. ಮೃತ ದೇಹದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.ಪಿಎಸ್ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ಆರಾಧ್ಯದೈವ ವರದಾನಿ ಲಕ್ಕಮ್ಮದೇವಿ ಜಾತ್ರಾಮಹೋತ್ಸವ ಬುಧವಾರ ಆರಂಭಗೊಂಡಿದ್ದು. ಜಾತ್ರಾ ಆರಂಭದ ದಿನ ಬುಧವಾರ ಬೆಳಗ್ಗೆ ಸಕಲ ವಾದ್ಯ ವೈಭವದೊಂದಿಗೆ ಏಳು ಪಾಂಡವರ ಗಿಡಕ್ಕೆ ಹೋಗಿ ಲಕ್ಕಮ್ಮದೇವಿಯನ್ನು ಬರಮಾಡಿಕೊಳ್ಳಲಾಯಿತು. ನಂತರ ವಿವಿಧ ಗ್ರಾಮಗಳಿಂದ ಬರುವ ಒಂಭತ್ತು ಪಲ್ಲಕ್ಕಿಗಳನ್ನು ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು. ಜಾತ್ರೆಯಂಗವಾಗಿ ಬೆಳಗ್ಗೆ ಪಗಡಿ ಪಂದ್ಯಾವಳಿ ಜರುಗಿತು. ರಾತ್ರಿ ಬ್ಯಾಲ್ಯಾಳ ಕೃಷ್ಣ ಪಾರಿಜಾತ ಮಂಡಳಿಯಿಂದ ಶ್ರೀಕೃಷ್ಣ ಪಾರಿಜಾತ ಬಯಲಾಟ ಪ್ರದರ್ಶನಗೊಂಡಿತು.ಜಾತ್ರೆಯ ಎರಡನೇ ದಿನ ಗುರುವಾರದಂದು ಬೆಳಗ್ಗೆ ಶ್ರೀದೇವಿಯ ಗಂಗಸ್ಥಲ ಪೂಜೆ ಮುಗಿಸಿದ ನಂತರ ಸಕಲ ವಾದ್ಯವೈಭವ, ಡೊಳ್ಳಿನ ವಾಲಗದೊಂದಿಗೆ ಹನ್ನೊಂದು ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಲಕ್ಕಮ್ಮದೇವಿ ದೇವಸ್ಥಾನಕ್ಕೆ ಶ್ರೀದೇವಿಯನ್ನು ಕರೆತರಲಾಯಿತು. ನಂತರ ಗ್ರಾಮದೇವತೆ ಉಡಿ ತುಂಬಲಾಯಿತು. ಪಲ್ಲಕ್ಕಿ ಉತ್ಸವದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಹನ್ನೊಂದು ಪೂಜಾರಿಗಳಿಂದ ಹೇಳಿಕೆಗಳು (ಶಿವವಾಣಿ) ಜರುಗಿದವು. ಪೂಜಾರಿಗಳಿಂದ ಹಿಂಗಾರು ಮುಂಗಾರು ಮಳೆ ಉತ್ತಮ. ಹತ್ತಿ,ತೊಗರಿ ಬೆಳೆ ಉತ್ತಮವಾಗಿ ಬೆಳೆಯುತ್ತದೆ. ಹಿಂಗಾರಿನಲ್ಲಿ ಜೋಳ ಮುಂದಾಗುತ್ತದೆ ಸೇರಿದಂತೆ ಅನೇಕ ಹೇಳಿಕೆಗಳು ಕೇಳಿಬಂದವು. ಪಲ್ಲಕ್ಕಿ…
ಬಸವನಬಾಗೇವಾಡಿ: ಗ್ರಾಮೀಣ ಪ್ರದೇಶದಲ್ಲಿ ಮಕ್ಕಳನ್ನು ಉನ್ನತ ವಿದ್ಯಾಭ್ಯಾಸ ಮಾಡಿಸಲು ಮುಂದಾಗುತ್ತಿರುವುದು ಅತ್ಯುತ್ತಮ ಬೆಳವಣಿಗೆ. ಇದರಿಂದಾಗಿ ದೇಶದಲ್ಲಿ ಅನಕ್ಷರಸ್ಥರ ಸಂಖ್ಯೆ ಕಡಿಮೆಯಾಗಿ ದೇಶದ ಪ್ರಗತಿಗೆ ಪೂರಕವಾಗುತ್ತದೆ ಎಂದು ಡೋಣೂರ ಕಟ್ಟೀಮನಿ ಹಿರೇಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಡೋಣೂರ ಗ್ರಾಮದ ಕಟ್ಟೀಮನಿ ಹಿರೇಮಠದ ಗುರು ಮರುಳಸಿದ್ದೇಶ್ವರ,ಚೌಡಮ್ಮದೇವಿ ಜಾತ್ರಾಮಹೋತ್ಸವ ಹಾಗೂ ಹಜರತ್ ಸುಲೇಮಾನ ಉರುಸು ಅಂಗವಾಗಿ ಹಮ್ಮಿಕೊಂಡಿರುವ ಕಲಬರುಗಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಬುಧವಾರ ಸಂಜೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು, ಇಂದು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಪ್ರತಿಭಾವಂತರಾಗಿ ನಾಡಿಗೆ ಉತ್ತಮ ಸೇವೆ ಸಲ್ಲಿಸುವಂತಾಗಬೇಕು. ವಿದ್ಯಾರ್ಥಿಗಳು ತಮ್ಮ ಅಧ್ಯಯನದೊಂದಿಗೆ ಉತ್ತಮ ಸಂಸ್ಕಾರ, ಸಂಸ್ಕ್ರತಿಯನ್ನು ಮೈಗೂಡಿಸಿಕೊಳ್ಳಬೇಕು. ಗುರು-ಹಿರಿಯರಿಗೆ ಗೌರವ ನೀಡಬೇಕು. ಸದಾಚಾರ ವ್ಯಕ್ತಿತ್ವ ಮೈಗೂಡಿಸಿಕೊಳ್ಳಬೇಕೆಂದರು.ಕಾರ್ಯಕ್ರಮದಲ್ಲಿ ಎಸ್ಎಸ್ಎಸ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. ೮೫ ಕ್ಕಿಂತ ಹೆಚ್ಚು ಅಂಕ ಪಡೆದ ೩೦ ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು , ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರದರ್ಶನದ…
ಕೊಲ್ಹಾರ: ತಾಲೂಕಿನ ಕೂಡಗಿ ಎನ್ಟಿಪಿಸಿ ಸಿಎಸ್ಆರ್ ಅಡಿಯಲ್ಲಿ ಬಾಲಕಿಯರಿಗೆ ಸಬಲೀಕರಣ ಅಭಿಯಾನ-೨೦೨೪ ಕಾರ್ಯಕ್ರಮವನ್ನು ಎನ್ಟಿಪಿಸಿಯ ಮಹಾಕ್ತಿನಗರ ಟೌನ್ಶಿಪ್ನಲ್ಲಿ ಗುರುವಾರದಂದು ಮುಂಜಾನೆ ಪ್ರಾರಂಭವಾಯಿತು.ಈ ಕಾರ್ಯಕ್ರಮದಲ್ಲಿ ಎನ್ಟಿಪಿಸಿ ಕೂಡಗಿಯ ಪಲಾನುಭವಿ ಗ್ರಾಮಗಳಾದ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಮಗಳ ಸರಕಾರಿ ಹಾಗೂ ಸರಕಾರಿ ಅನುಧಾನಿತ ಪ್ರಾಥಮಿಕ ಶಾಲೆಗಳ ಐದನೇ ತರಗತಿಯಿಂದ ತೇರ್ಗಡೆಯಾದ ೪೦ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಮೂಲಭೂತ ಶಿಕ್ಷಣ, ಆರೋಗ್ಯ, ಮತ್ತು ಆತ್ಮ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಮೂಲಕ ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಲು ಬಾಲಕಿಯರ ಜೀವನದಲ್ಲಿ ಮಹತ್ವಪೂರ್ಣ ಬದಲಾವಣೆಯಾಗಲು ಕೆವಾ ಕಟ್ಟಡದಲ್ಲಿ ಬಾಲಕಿಯರಿಗೆ ಸಬಲೀರಕರಣ ಕುರಿತು ಅಭಿಯಾನ -೨೦೨೪ ನ್ನು ನಾಲ್ಕು ವಾರಗಳ ಅವಧಿಯ ನಂತರ ಮುಕ್ತಾಯ ಮಾಡಲಾಗುತ್ತದೆ.ಬಾಲಕಿಯರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಬಾಲಕಿಯರ ಸಬಲೀಕರಣ ಅಭಿಯಾನ ಕಾರ್ಯಕ್ರಮದಲ್ಲಿ ನಮಗೆ ವಿವಿಧ ಕೌಶಲ್ಯಗಳನ್ನು ಅಂದರೆ ಇಂಗ್ಲಿಷ್, ವಿಜ್ಙಾನ, ಕನ್ನಡ, ಗಣಿತ, ಹಿಂದಿ, ಸಾಮಾನ್ಯ ಜ್ಞಾನ, ಕರಾಟೆ, ಯೋಗ, ನೃತ್ಯ, ಸಂಗೀತ, ಚಿತ್ರಕಲೆ, ಆರೋಗ್ಯ, ಆತ್ಮ ಸುರಕ್ಷಾ ಹಾಗೂ ಜೀವನ…
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ಎಲ್ಲಾ ಬಸ್ ಘಟಕಗಳಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿರವರು ಸಸಿಗಳನ್ನು ನೆಟ್ಟು ಚಾಲನೆ ಮಾಡಿದರು.ಅಪರ ಜಿಲ್ಲಾಧಿಕಾರಿ (ಪ್ರಭಾರಿ) ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಎ.ಬಿರಾದಾರ, ವಿಭಾಗೀಯ ಲೆಕ್ಕಪತ್ರಾಧಿಕಾರಿ ಮಹಾಂತೇಶ ಕರಾಳೆ ಹಾಗೂ ತಾಂತ್ರಿಕ ಶಿಲ್ಪಿಗಳಾದ ಅಯಾಜ, ಘಟಕ ವ್ಯವಸ್ಥಾಪಕರು ಎ.ಬಿ.ಹೊಗಾರ, ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ವ್ದಯವಸ್ಥಾಕ ಜೆ.ಕೆ.ಹುಗ್ಗೆನ್ನವರ, ಜಯವಂತ ಅಂಗಡಿ ಹಾಗೂ ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಜಯಪುರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವಿಜಯಪುರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಿಜಯಪುರ, ಜಿಲ್ಲಾ ಪೋಲಿಸ್ ಇಲಾಖೆ ಮತ್ತು ಬಿ.ಎಲ್.ಡಿ.ಇ. ಸಂಸ್ಥೆ ವಿಜಯಪುರ ಇವರ ಸಂಯುಕ್ತಾ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ಯವಾಗಿ ಸಸಿ ನೇಡುವ ಕಾರ್ಯಕ್ರಮದಲ್ಲಿ ರಮೇಶ ಎಸ್. ಕಡಪಟ್ಟಿ, ಪರಿವೀಕ್ಷಣಾಧಿಕಾರಿಗಳು, ಸರಕಾರಿ ವೀಕ್ಷಣಾಲಯ ವಿಜಯಪುರ ರವರು ಮಾತನಾಡಿ, ಜೂನ ತಿಂಗಳಿನಲ್ಲಿ ನೆಟ್ಟಿರುವ ಸಸಿಗಳು ಮರವಾಗಿವೆ. ಅದೇ ರೀತಿ ನಮ್ಮ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ನೆಟ್ಟಿರುವ ಸಸಿಗಳನ್ನು ಮಗುವಿನಂತೆ ಗಾಳಿ ಮಳೆ ರಭಸದಲ್ಲಿ ಬೀಳದಂತೆ ಮುನ್ನೆಚ್ಚರಿಕೆ ವಹಿಸಿರುವ ಕಾರಣಕ್ಕಾಗಿ ಇಂದು ಕಾನೂನಿನ ಸೌರಕ್ಷಣೆಗೆ ಒಳಗಾದ ಮಕ್ಕಳಿಗೆ ಹಾಗೂ ಪಾಲಕರಿಗೆ ನೆರಳಾಗಿವೆ. ಇದು ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೆಮ್ಮೆ ತರುವ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕಾರ್ಯಕ್ರಮದ ಉದ್ಘಾಟಕರಾಗಿ ಮಲ್ಲಿಕಾರ್ಜುನ ಅಪ್ಪಾಸಾಹೆಬ ಅಂಬಲಿ ಗೌರವಾನ್ವಿತ ಪ್ರಿನ್ಸಿಪಲ್ ಸೀನೀಯರ್ ಸಿವಿಲ್ ಜಡ್ಜ್, ಸಿ.ಜೆ.ಎಮ್. ಮತ್ತು ಸದಸ್ಯ ಕಾರ್ಯದರ್ಶಿಗಳು ಕಾನೂನು ಸೇವಾ ಪ್ರಾಧಿಕಾರ ವಿಜಯಪುರ ರವರು ಮಾತನಾಡಿ, ಬಸವಾದಿ…
ವಿಜಯಪುರ: ನಗರದ ಹೊರ ವಲಯದಲ್ಲಿರುವ ಅರಕೇರಿ ಗ್ರಾಮದಲ್ಲಿರುವ ಇಂಡಿಯಾ ರಿಸರ್ವ ಬಟಾಲಿಯನಲ್ಲಿ ಪ್ರತಿವರ್ಷದಂತೆ ಈ ವರ್ಷವು ೨೦೨೪ರ ವಿಶ್ವ ಪರಿಸರ ದಿನವನ್ನು “ಭೂಮಿ ಮರುಸ್ಥಾಪನೆ, ಮರುಭೂಮಿ ಮತ್ತು ಬರ ಸ್ಥಿತಿಸ್ಥಾಪಕತ್ವ” ಎಂಬ ಘೋಷವಾಕ್ಯ ಪ್ರಮುಖ ಆಧಾರ ಸ್ಥಂಭವಾಗಿಟ್ಟುಕೊಡು,ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಎನ್.ಬಿ.ಮೆಳ್ಳೆಗಟ್ಟಿ ಕೆ.ಎಸ್.ಪಿ.ಎಸ್ ಕಮಾಂಡೆಂಟ್ ಐ.ಆರ್.ಬಿ ವಿಜಯಪುರ ರವರು ವಿಶ್ವ ಪರಿಸರ ದಿನ ಕಾರ್ಯಕ್ರಮ ಉಧ್ಘಾಟನೆ ಮಾಡಿ, ಜೈವಿಕ ವೈವಿಧ್ಯತೆ ಹಾಗೂ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸಲು ಮತ್ತು ಕ್ಷೀಣಿಸಿದ ಪರಿಸರ ವ್ಯವಸ್ಥೆಗಳನ್ನು ಪುನಃ ಸ್ಥಾಪಿಸಲು ಸಾಮೂಹಿಕ ಪ್ರಯತ್ನಗಳಿಗೆ ಕರೆ ನೀಡಿದರು.ಪರಿಸರ ವ್ಯವಸ್ಥೆಯ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸುವ ಮೂಲಕ, ಹವಾಮಾನ ಬದಲಾವಣೆಯಿಂದ ನಾವು ವ್ಯಾಪಕವಾದ ಪರಿಸರ ಸವಾಲುಗಳನ್ನು ಎದುರಿಸಬಹುದು, ಅದ್ದರಿಂದ ಎಲ್ಲರೂ ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಸುಸ್ಥಿರ ಭವಿಷ್ಯವನ್ನು ನಿರ್ಮಿಸುವಲ್ಲಿ ನಾವೆಲ್ಲರೂ ಪಾತ್ರವಹಿಸಬೇಕಾಗಿದೆ. ನಮ್ಮ ಉಸಿರಿಗಾಗಿ ಹಸಿರನ್ನು ಬೆಳೆಸೋಣ, ಪ್ರತಿಯೊಬ್ಬರು ಸಸಿನೆಟ್ಟು ಮರಗಳನ್ನು ಬೆಳೆಸೋಣ ಈ ಭೂಮಿಯನ್ನು ಹಸಿರುಮಯಗೊಳಿಸೋಣ ಎಂದು ತಿಳಿಸಿ ಅಧ್ಯಕ್ಷೀಯ ಭಾಷಣವನ್ನು ಮಾಡಿದರು.ಈ ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ…
ಸಿಂದಗಿ: ನೀರು ಭೂಮಿಯ ಮೇಲಿನ ಪ್ರಮುಖ ಮತ್ತು ಅತ್ಯಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದೆ ಎಂದು ತಾಲೂಕು ಯೋಜನಾಧಿಕಾರಿ ಪ್ರಸನ್ನ ಹೇಳಿದರು.ತಾಲೂಕಿನ ಗಣಿಹಾರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ಬೀದಿ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೀರು ಎಲ್ಲ ಜೀವನವನ್ನು ಉಳಿಸುತ್ತದೆ. ನೀರಿಲ್ಲದೆ ಜೀವನವಿಲ್ಲ. ನೀರು ಮಾನವನಿಗೆ ಮಾತ್ರವಲ್ಲದೇ ಇಡೀ ಪರಿಸರ ವ್ಯವಸ್ಥೆಗೆ ಮುಖ್ಯವಾಗಿದೆ. ಹಾಗಾಗಿ ಯಾವುದೇ ಜೀವಿಗಳ ಉಳಿವಿಗಾಗಿ ನಿರು ಎರಡನೆಯ ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಲಾ ತಂಡದವರಿಂದ ನೀರು ಉಳಿಸಿ ಅಭಿಯಾನ, ಪರಿಸರ ಸಂರಕ್ಷಣೆ ಬಗ್ಗೆ, ಸ್ವಚ್ಛತೆ, ಶೌಚಾಲಯ ಬಳಕೆಯ ಬಗ್ಗೆ ಬೀದಿ ನಾಟಕ ಹಾಗೂ ಜಾಗೃತಿ ಗೀತೆಗಳ ಮೂಲಕ ಅರಿವು ಮೂಡಿಸಿದರು.ಈ ವೇಳೆ ದಸ್ತಾಗಿರಸಾಬ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕಾವ್ಯ, ವಲಯದ ಮೇಲ್ವಿಚಾರಕಿ ರೇಣುಕಾ, ಹನುಮಂತಪ್ಪ, ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು ಒಕ್ಕೂಟ ಪದಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಇದ್ದರು.
ವಿದ್ಯುತ್ ಅಪಘಾತಕ್ಕೆ ತುತ್ತಾದ ದಿ.ಶಾಂತಪ್ಪ ಗಡಗಿಮನಿ ಕುಟುಂಬಕ್ಕೆ ಸಾಂತ್ವನ ಸಿಂದಗಿ: ಶಾಂತಪ್ಪ ಗಡಗಿಮನಿ ಅವರು ವಿದ್ಯುತ್ ಅಪಘಾತದಿಂದ ಸಾವನ್ನಪ್ಪಿದ್ದು ದುರಂತ. ಅವರ ಕುಟುಂಬಸ್ಥರ ಜೊತೆ ಸದಾ ಸರ್ಕಾರವಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ತಾಲೂಕಿನ ವಿದ್ಯುತ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತಿದ್ದ ತಾಲೂಕಿನ ಖೈನೂರ ಗ್ರಾಮದ ಶಾಂತಪ್ಪ ವಿಶ್ವನಾಥ ಗಡಗಿಮನಿ ಎಂಬುವವರು ಕರ್ತವ್ಯ ವೇಳೆಯಲ್ಲಿ ಮಾರಣಾಂತಿಕ ವಿದ್ಯುತ್ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ಅವರ ಕುಟುಂಬಸ್ಥರಿಗೆ ಶಾಸಕ ಅಶೋಕ ಮನಗೂಳಿ ಅವರು ಸರ್ಕಾರದಿಂದ ನೀಡಿರುವ ರೂ.೫ ಲಕ್ಷ ಪರಿಹಾರದ ಚೆಕ್ ವಿತರಿಸಿ ಸಾಂತ್ವಾನ ಹೇಳಿ ಮಾತನಾಡಿದ ಅವರು, ಕುಟುಂಬಸ್ಥರು ಭಯ ಪಡುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರಕ್ಕೆ ಈ ವರದಿಯನ್ನು ನೀಡಿದ ತಕ್ಷಣವೇ ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡಿದೆ ಎಂದರು.ಈ ವೇಳೆ ಹೆಸ್ಕಾಂ ಅಧಿಕಾರಿ ಚಂದ್ರಕಾಂತ ನಾಯಕ, ಕಾಂಗ್ರೆಸ್ ಬ್ಲಾಕ್ ತಾಲೂಕಾಧ್ಯಕ್ಷ ಸುರೇಶ ಪೂಜಾರಿ, ಶ್ರೀಕಾಂತ ಸೋಮಜ್ಯಾಳ, ಹೊನ್ನಪ್ಪಗೌಡ ಬಿರಾದಾರ, ಮೃತರ ತಂದೆ ವಿಶ್ವನಾಥ ಗಡಗಿಮನಿ,…
ಸಿಂದಗಿ: ಪ್ರತಿಯೊಬ್ಬರು ತಮ್ಮ ಮನೆಯ ಮುಂದೆ ಒಂದು ಗಿಡವನ್ನಾದರು ನೆಡಬೇಕು. ಪರಿಸರ ನಮ್ಮನ್ನು ಬಿಟ್ಟು ದೂರ ಹೊಗುತ್ತಿದೆ ಅದನ್ನು ಮತ್ತೆ ನಮ್ಮ ಬಳಿ ತರುವ ಕೆಲಸ ನಾವೆಲ್ಲರೂ ಕಡ್ಡಾಯವಾಗಿ ಮಾಡಲೇಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಿಕಾ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ ಹೇಳಿದರು.ಪಟ್ಟಣದ ವಿದ್ಯಾನಗರದ ಶ್ರೀ ಚೆನ್ನವೀರ ಸ್ವಾಮೀಜಿ ಉದ್ಯಾನವನದಲ್ಲಿ ಅವ್ವಾ ಫೌಂಡೇಶನ್ ಹಮ್ಮಿಕೊಂಡಿರುವ ವಿಶ್ವ ಪರಿಸರ ದಿನಾಚಾರಣೆ ನಿಮಿತ್ಯ ಸಸಿ ನೆಟ್ಟು ಮಾತನಾಡಿದ ಅವರು, ಇಂದಿನ ಜಾಗತಿಕ ಮಟ್ಟದಲ್ಲಿ ಪರಿಸರ ನಲುಗಿ ಹೋಗುತ್ತಿದೆ. ಇದರಿಂದ ಜೀವ ಸಂಕುಲಕ್ಕೆ ಅತಿದೊಡ್ಡ ಪೆಟ್ಟು ಬಿಳುತ್ತಿದೆ. ನಾವೆಲ್ಲರೂ ಪ್ರಜ್ಞಾವಂತರು ಪರಿಸರವನ್ನು ಸಂರಕ್ಷಣೆ ಮಾಡದಿದ್ದಲ್ಲಿ ನಮ್ಮ ಬದುಕನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ ಎಚ್ಚರದಿಂದ ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.ಈ ವೇಳೆ ಅವ್ವಾ ಫೌಂಡೇಶನ್ದ ಸಂಚಾಲಕ ಸಿದ್ದಲಿಂಗ ಕಿಣಗಿ ಮಾತನಾಡಿ, ಪರಿಸರ ನಮ್ಮನ್ನು ಸದಾರಕ್ಷಣೆ ಮಾಡುತ್ತದೆ. ಆದರೆ ಮಾನವರಾದ ನಾವೇಲ್ಲ ನಮ್ಮ ಸುಖದ ಬದುಕಿಗಾಗಿ ಪರಿಸರವನ್ನೇ ಹಾಳು ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಪ್ರತಿ ವರ್ಷ ಹತ್ತಾರು ಸಸಿಗಳನ್ನು ನೆಟ್ಟು…
