ಆಹೇರಿ ಗ್ರಾಮದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಉದ್ಘಾಟನೆ
ವಿಜಯಪುರ: ಮತ್ತೊಬ್ಬರನ್ನು ನೋಡಿ ಆಡಂಬರದ ಬದುಕು ಸಾಗಿಸುವುದಕ್ಕಿಂತ ಹಾಸಿಗೆ ಇದಷ್ಟು ಕಾಲು ಚಾಚಲು ಕಲಿಯಬೇಕು, ಸಾಲ ಇಲ್ಲದ ಬಾನ ಉಣ್ಣುವಂತಾಗಬೇಕು. ಆಧುನಿಕ ಜಗತ್ತಿನ ಈ ನಾಗಾಲೋಟದಲ್ಲಿ ದಿನೆ ದಿನೇ ಖರ್ಚುಗಳು ಹೆಚ್ಚಾಗುತ್ತಿವೆ ಈ ನಿಟ್ಟಿನಲ್ಲಿ ಕೇವಲ ಕೃಷಿ ಮಾತ್ರ ಮಾಡಿದರೆ ಸಾಲದು, ಕಡಿಮೆ ಖರ್ಚಿನಲ್ಲಿ ಸಾವಯವ ಕೃಷಿ ಮಾಡುತ್ತಾ ಅದರೊಂದಿಗೆ ಉಪಕಸುಬುಗಳಾದ ಹೈನುಗಾರಿಕೆ, ಮೀನಾಗಾರಿಕೆ, ಜೇನುಸಾಕಾಣಿಕೆ, ಆಡು, ಕುರಿ, ಕೋಳಿ ಸಾಕಾಣಿಕೆ ಮಾಡುತ್ತಾ ದಿನನಿತ್ಯ ಲಾಭ ಪಡೆಯುವಂತಾಗಬೇಕು ಅಂದಾಗ ಮಾತ್ರ ರೈತ ಆತ್ಮಹತ್ಯೆಯಂತಹ ಕೆಟ್ಟು ಪಿಡುಗುಗಳನ್ನು ಈ ಸಾಮಾಜದಲ್ಲಿ ತಡೆಯಬಹುದಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಹೇಳಿದರು.
ವಿಜಯಪುರ ತಾಲೂಕಿನ ಆಹೇರಿ(ಜಂಬಗಿ) ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕದ ಉದ್ಗಾಟನಾ ಸಮಾರಂಭದಲ್ಲಿ ಸ್ವಾಮಿಜಿಗಳು ಹಾಗೂ ಅತಿಥಿಗಳೊಂದಿಗೆ ದೀಪ ಬೆಳಗಿಸುವದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ರೈತ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾ ಮಾತನಾಡಿದರು.
ರೈತ ಸಂಘಟನೆ ಎನ್ನುವುದು ೧೯೭೦ರಲ್ಲಿ ಪ್ರೋ.ಎಂ,ಡಿ ನಂಜುಡಸ್ವಾಮಿ ಅವರ ನೇತೃತ್ವದಲ್ಲಿ ಪ್ರಾರಂಭವಾಗಿ ರಾಜ್ಯದ ಎಲ್ಲಾ ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡುತ್ತಾ ರೈತರಿಗಾಗುವ ಅನ್ಯಾಯ ಹಾಗೂ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತಿ ಲಂಚ ಮುಕ್ತವಾದ ಸಮಾಜ ನಿರ್ಮಾಣ ಮಾಡಲು ಹಾಗೂ ಸರಕಾರದ ಎಲ್ಲಾ ಯೋಜನೆಗಳನ್ನು ಕಟ್ಟಕಡೆಯ ಹಳ್ಳಿಯ ರೈತರಿಗೂ ಸಿಗುವಂತೆ ಮಾಡುವುದರ ಜೊತೆಗೆ ಕೃಷಿಯಲ್ಲಿ ಆಗುತ್ತಿರುವ ಹೊಸ ಹೊಸ ತಂತ್ರಾಜ್ಞಾನಗಳ ಕುರಿತು ತರಬೇತಿ ನೀಡಿ ರೈತರನ್ನು ಸ್ವಾವಲಂಭಿಯಾಗಿ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವಂತೆ ಸದಾ ರೈತರ ಏಳಿಗೆಗಾಗಿ ಶ್ರಮ ವಹಿಸುತ್ತಾ ಬಂದಿದೆ ಎಂಧರು.
ಕೊಡೆಕಲ್ಲದ ಪುರಾಣಿಕರಾದ ಬಸವರಾಜ ಅವರು ಮಾತನಾಡುತ್ತಾ, ಇಡೀ ನಾಡಿಗೆ ಯಾವುದೇ ಫಲಾಪೇಕ್ಷೆ ಮಾಡದೇ ಎಲ್ಲರಿಗೂ ಅನ್ನ ನೀಡುತ್ತಿರುವ ಅನ್ನದಾತರ ಸೇವೆ ಘಣನೀಯವಾದದು, ಈ ಸಂಘಟನೆ ಇಂದು ಈ ಗ್ರಾಮದಲ್ಲಿ ಪ್ರಾರಂಭವಾಗಿ ಪ್ರತಿಯೊಬ್ಬ ರೈತರು ಕೂಡಾ ಇದರಲ್ಲಿ ಸದಸ್ಯರಾಗಿ ಯಾರೊಬ್ಬರಿಗಾದರೂ ಅನ್ಯಾಯವಾದರೂ ಎಲ್ಲರೂ ಕೂಡಿಕೊಂಡು ಹೋರಾಟ ಮಾಡುವದರೊಂದಿಗೆ ನ್ಯಾಯ ಕೊಡಿಸುವ ಕೆಲಸ ಮಡಬೇಕು ಎಂದರು.
ಈ ವೇಳೆ ಆಹೇರಿಯ ಮಠದ ಚಿಲ್ಲಾಲಿಂಗ ಸ್ವಾಮಿಜಿ, ಓಂ ಶಾಂತಿಯ ಮಹಾದೇವಪ್ಪ ತೇಲಿ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಶಿಕ್ಷಕ ಜಕರಾಯ ಪೂಜಾರಿ, ನಿವೃತ್ತ ಶಿಕ್ಷಕ ಆತ್ಮಾನಂದ ಇಬ್ರಾಹಿಂಪುರ ಮಾತನಾಡಿದರು.
ಶರಣಪ್ಪ ಸಾತಿಹಾಳ ನಿರೂಪಿಸಿದರು,
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರಾದ ಸಂಗಪ್ಪ ಟಕ್ಕೆ, ಜಿಲ್ಲಾ ಸಂಚಾಲಕರಾದ ಮಹಾಂತೇಶ ಮಮದಾಪುರ, ತಾಲೂಕಾ ಅಧ್ಯಕ್ಷರಾದ ಮಹಾದೇವಪ್ಪ ತೇಲಿ, ಉಪಾಧ್ಯಕ್ಷರಾದ ಪ್ರಕಾಶ ತೇಲಿ, ಬಸವರಾಜ ಮಸೂತಿ, ಬಸವರಾಜ ಗಾಣಗೇರ, ನಾಗಠಾಣ ಹೋಬಳಿ ಅಧ್ಯಕ್ಷರಾದ ರಾಮಸಿಂಗ ರಜಪೂತ, ಆಹೇರಿ ಗ್ರಾಮ ಅಧ್ಯಕ್ಷರಾದ ಆತ್ಮಾನಂದ ಭೈರೋಡಗಿ, ಮಹಾದೇವ ವಾಲಿ, ಚಂದ್ರಾಮ ಬಿಸನಾಳ, ಜಯಸಿಂಗ ರಜಪೂತ, ಬಸವಂತ ತೇಲಿ, ಚನ್ನು ವಾಲಿ, ಬಸವರಾಜ ಮಸೂತಿ, ತುಕಾರಾಮ ಪೂಜಾರಿ, ಚಂದ್ರಾಮ ಬಿಸನಾಳ, ಬಸವರಾಜ ಬೈರೋಡಗಿ, ಸಿದ್ದಲಿಂಗ ಹತ್ತರಕಾಳ, ರಾಜಾಸಾ ನದಾಫ, ಸೇರಿದಂತೆ ನೂರಾರು ಜನ ಇದ್ದರು

