Author: editor.udayarashmi@gmail.com

ವಿಜಯಪುರ: ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ಎನ್. ಜಯದೇವನಾಯ್ಕ ಅವರು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಜುಲೈ ೫ ರಂದು ತಿಕೋಟಾ ತಾಲೂಕಿನ ಸೋಮದೇವರ ಹಟ್ಟಿ ಎಲ್‌ಟಿ-೧ ತಾಂಡಾದಲ್ಲಿ ನಡೆಯುವ ಮಾತಾ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ವಿಜಯಪುರದಲ್ಲಿ ವಾಸ್ತವ್ಯ ಮಾಡುವರು.ಜುಲೈ ೬ ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಸಂಬಂಧ ಪ್ರಗತಿಯ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮತ್ತು ತಾಂಡ ಮುಖಂಡರೊಂದಿಗೆ ಸಭೆ ನಡೆಸಿ, ನಂತರ ಕೊಪ್ಪಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ಎನ್. ಜಯದೇವನಾಯ್ಕ ಅವರು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಜುಲೈ ೫ ರಂದು ತಿಕೋಟಾ ತಾಲೂಕಿನ ಸೋಮದೇವರ ಹಟ್ಟಿ ಎಲ್‌ಟಿ-೧ ತಾಂಡಾದಲ್ಲಿ ನಡೆಯುವ ಮಾತಾ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ವಿಜಯಪುರದಲ್ಲಿ ವಾಸ್ತವ್ಯ ಮಾಡುವರು.ಜುಲೈ ೬ ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಸಂಬಂಧ ಪ್ರಗತಿಯ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮತ್ತು ತಾಂಡ ಮುಖಂಡರೊಂದಿಗೆ ಸಭೆ ನಡೆಸಿ, ನಂತರ ಕೊಪ್ಪಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ಒಂದು ಹುದ್ದೆಗೆ ತಾತ್ಕಾಲಿಕ ನೇಮಕ ಮಾಡಿಕೊಳ್ಳಲು ಜುಲೈ ೧೮ರಂದು ಬೆಳಗ್ಗೆ ೧೧ಕ್ಕೆ ಸಂದರ್ಶನ ನಡೆಯಲಿದೆ ಎಂದು ಕೃಷಿ ಮಹಾವಿದ್ಯಾಲಯದ ಮುಖ್ಯಸ್ಥರು ತಿಳಿಸಿದ್ದಾರೆ.ಶೈಕ್ಷಣಿಕ ಅರ್ಹತೆಯುಳ್ಳ ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಮೂಲ ದಾಖಲೆಗಳ ಎರಡು ಝರಾಕ್ಸ್ ಪ್ರತಿ ತಮ್ಮ ಭಾವಚಿತ್ರದೊಂದಿಗೆ ಅರ್ಜಿ ನಮೂನೆಗೆ ಲಗತ್ತಿಸಿ, ಸಂದರ್ಶನಕ್ಕೆ ಆಗಮಿಸುವಾಗ ತೆಗೆದುಕೊಂಡು ಬರುವುದು. ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೩೫೨-೨೯೫೪೧೧ ಮೊ:೯೮೮೦೬೪೦೨೮೭ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಸಾಧಾರಣವಾಗಿ ಯೋಗ, ಧ್ಯಾನ ಮತ್ತು ರೇಖಿ ತರಗತಿಗಳಲ್ಲಿ ನಾವು ಚಕ್ರಗಳ ಕುರಿತು ಗುರುಗಳು, ತರಬೇತುದಾರರು ಹೇಳುವುದನ್ನು ಕೇಳಿರುತ್ತೇವೆ. ಏನೀ ಚಕ್ರಗಳು? ನಮ್ಮ ದೇಹದ ವಿವಿಧ ಭಾಗಗಳಲ್ಲಿ ಇರುವ ವೃತ್ತಾಕಾರದ ಆಕೃತಿಗಳನ್ನು ಚಕ್ರ ಎಂದು ಹೇಳುತ್ತೇವೆ. ಈ ಚಕ್ರಗಳು ದೇಹದ ಆಯಾ ಭಾಗದ ನರವ್ಯೂಹಗಳಿಗೆ ಮತ್ತು ದೇಹದ ಅಂಗಗಳಿಗೆ ಸಂಪರ್ಕವನ್ನು ಹೊಂದಿದ್ದು ಅವು ಸರಿಯಾಗಿ ಕಾರ್ಯನಿರ್ವಹಿಸಲು ತಮ್ಮ ಅಹರ್ನಿಶಿ ಪಾಲನ್ನು ಸಲ್ಲಿಸುತ್ತವೆ. ಚಕ್ರಗಳ ಸರಿಯಾದ ಕಾರ್ಯನಿರ್ವಹಣೆಗೆ ಅವುಗಳು ಸದಾ ತೆರೆದ ಇಲ್ಲವೇ ಸಮತೋಲನ ಸ್ಥಿತಿಯಲ್ಲಿ ಇರಬೇಕು. ಚಕ್ರಗಳು ಮುಚ್ಚಿದ ಸ್ಥಿತಿಯಲ್ಲಿದ್ದರೆ ದೇಹವು ವಿವಿಧ ರೀತಿಯ ಮನೋ ದೈಹಿಕ ತೊಂದರೆಗಳನ್ನು ಅನುಭವಿಸುತ್ತದೆ. ನಮ್ಮ ದೇಹದಲ್ಲಿ ಒಟ್ಟು 114 ಚಕ್ರಗಳನ್ನು ಗುರುತಿಸಿದ್ದು ಮುಖ್ಯವಾದ ಏಳು ಚಕ್ರಗಳು ನಮ್ಮ ಬೆನ್ನುಹುರಿಯ ತಳ ಭಾಗದಿಂದ ಹಿಡಿದು ನಡು ನೆತ್ತಿಯವರೆಗೆ ಒಂದೇ ಸರಳರೇಖೆಯಲ್ಲಿ ಇರುವ ಏಳು ಚಕ್ರಗಳನ್ನು ಮುಖ್ಯ ಚಕ್ರಗಳೆಂದು ಗುರುತಿಸಲಾಗಿದೆ. ಮೂಲಾಧಾರ ಚಕ್ರ….ಚಕ್ರಗಳಲ್ಲಿ ಮೊದಲನೆಯದು ಮೂಲಾಧಾರ ಚಕ್ರ. ಇದು ನಮ್ಮ…

Read More

ಬಾಲಮಂದಿರಕ್ಕೆ ಭೇಟಿ ನೀಡಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಧಿಕಾರಿಗಳಿಗೆ ಎಚ್ಚರಿಕೆ ವಿಜಯಪುರ: ಮಕ್ಕಳು ದೇವರ ಸಮಾನರು ಅವರ ಸೇವೆ ಮಾಡುವ ಸೌಭಾಗ್ಯ ದೊರೆತಿರುವ ಇಲ್ಲಿಯ ಸಿಬ್ಬಂದಿ ನಿಜಕ್ಕೂ ಭಾಗ್ಯವಂತರು. ಮಕ್ಕಳ ಸೇವಾ ಭಾಗ್ಯ ಒಂದು ಸೌಭಾಗ್ಯವೆಂದು ತಿಳಿಯಿರಿ. ಮಕ್ಕಳ ಸೇವೆಯೇ ಭಗವಂತನ ಸೇವೆ, ಬಾಲಮಂದಿರದಲ್ಲಿರುವ ಮಕ್ಕಳಿಗೆ ನೀವೇ ತಂದೆ-ತಾಯಿಯ ಪ್ರೀತಿಯನ್ನು ನೀಡಿ, ಪೋಷಿಸಿ, ಬೆಳೆಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಅಣಿಗೊಳಿಸಿ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು. ಅವರು ಗುರುವಾರ ನಗರದ ಜಿಲ್ಲಾ ಪಂಚಾಯತ ಹತ್ತಿರವಿರುವ ಬಾಲಕರ ಬಾಲಮಂದಿರಕ್ಕೆ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆಯನ್ನ ಪರಿಶೀಲಿಸಿ ಮಾತನಾಡಿದರು.ಬಾಲಮಂದಿರದಲ್ಲಿರುವ ಹಲವಾರು ನ್ಯೂನ್ಯತೆಗಳನ್ನು ಪಟ್ಟಿ ಮಾಡಿ ಒಂದು ವಾರದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು, ಸ್ವಚ್ಛತೆ, ಶುಚಿತ್ವ ಮತ್ತು ಗುಣಮಟ್ಟದ ಆಹಾರ ಒದಗಿಸದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ಬಾಲ ಮಂದಿರದಲ್ಲಿ ಸಸಿ ನೆಟ್ಟ ಅವರು, ವಿಜಯಪುರ ಜಿಲ್ಲಾ…

Read More

ಇಟಗಿ ಗ್ರಾಮದಲ್ಲಿ ಗಿಡ್ಡಯ್ಯ ಅಜ್ಜನ ಜಾತ್ರೆ ಪ್ರಯುಕ್ತ ಬಸವೇಶ್ವರ ಪ್ರವಚನಕ್ಕೆ ಚಾಲನೆ ನಿಡಗುಂದಿ: ಇಟಗಿ ಗ್ರಾಮದ ಗಿಡ್ಡಯ್ಯ ಅಜ್ಜನ ಜಾತ್ರೆ 44ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಭಕ್ತಗಣ ಸಂತಸದಿಂದ ಅಜ್ಜನ ಜಾತ್ರೋತ್ಸವದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆಯುತ್ತಿದ್ದಾರೆ. ಇಲ್ಲಿ ಅಜ್ಜನ ಆರಾಧನೆ ಶ್ರದ್ಧೆಯಿಂದ ಆಚರಿಸಲ್ಪಡುತ್ತಿದೆ. ಆಧ್ಯಾತ್ಮ ಎಂಬ ಪದದಲ್ಲಿ ಸಾಗಬೇಕಾದರೆ ಧ್ಯಾನ, ಸತ್ಸಂಗ ಪುರಾಣ, ಪುಣ್ಯ ಕಥೆಗಳು, ಭಜನೆಗಳು ಮಾನವನಿಗೆ ಊರುಗೋಲು ಇದ್ದ ಹಾಗೆ ಆದರಿಂದ ಪುರಾಣ ಪ್ರವಚನದಲ್ಲಿ ಭಾಗಿಯಾಗುವುದರಿಂದ ನಮ್ಮ ಜನ್ಮ ಪವಿತ್ರ ಪಾವನ ಆಗುತ್ತದೆ ಎಂದು ಪ್ರಾಣೇಶ ಜೋಶಿ ಹೇಳಿದರು..ನಿಡಗುಂದಿ ತಾಲೂಕಿನ ಇಟಗಿ ಗ್ರಾಮದ ಶ್ರೀ ಗುರು ನಿರುಪಾದೇಶ್ವರ ( ಗಿಡ್ಡಯ್ಯ ಅಜ್ಜಾ ) ನಾಗಲಿಂಗೇಶ್ವರ 44ನೇ ಜಾತ್ರೆಯ ಅಂಗವಾಗಿ ಇಟಗಿ ಗ್ರಾಮದಲ್ಲಿ ಮಂಗಳವಾರ ಆರಂಭವಾದ ಶ್ರೀ ಕಲಬುರ್ಗಿ ಶರಣಬಸವೆಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಶ್ರೀ ಕಲಬುರ್ಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಗದಗ ವಿರೇಶ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜಯ್ಯನವರ ತುಲಾಭಾರ…

Read More

ನವ ನಿಡಗುಂದಿ ಜನಾಭಿಪ್ರಾಯ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಜಂಟಿಯಾಗಿ ಮನವಿ ಸಲ್ಲಿಕೆ ನಿಡಗುಂದಿ: ಪಟ್ಟಣದ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರ ಪೊರೈಸುತ್ತಿಲ್ಲವೆಂದು ನವ ನಿಡಗುಂದಿ ಜನಾಭಿಪ್ರಾಯ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಜಂಟಿಯಾಗಿ ಆರೋಪಿಸಿ ಬುಧವಾರ ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿ ಮತ್ತು ಮಹಿಳಾ & ಮಕ್ಕಳ ಕಲ್ಯಾಣ ಸಚಿವೆಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ನವ ನಿಡಗುಂದಿ ಜನಾಭಿಪ್ರಾಯ ವೇದಿಕೆ ಮುಖಂಡ ವ್ಹಿ.ಎಂ.ಚಿನಿವಾರ ಮತ್ತು ಕರವೇ ಮುಖಂಡ ಆನಂದ ಭೋವಿವಡ್ಡರ ಮಾತನಾಡಿ, ಪಟ್ಟಣದ ಅಂಗನವಾಡಿ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೇ ಸಮಯಪಾಲನೆ ಮಾಡುತ್ತಿಲ್ಲ. ಮಕ್ಕಳಿಗೆ ಪೌಷ್ಠಿಕ ಆಹಾರ ಪೊರೈಸದಿರುವುದರಿಂದ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದೆ. ಮಾತೃವಂದನಾ ಹಾಗೂ ಭಾಗ್ಯಲಕ್ಷ್ಮಿ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ದೊರೆಯುತ್ತಿಲ್ಲ. ಕಾರಣ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ…

Read More

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಖಂಡಿಸಿ ಬಿಜೆಪಿ ಪ್ರತಿಭಟನಾ ಮೆರವಣಿಗೆ | ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ! ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಿಂದ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ನಾಯಕರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಮತ್ತು ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.ಆದರೆ ದಾರಿ ಮಧ್ಯೆಯೇ ಬಿಜೆಪಿ ನಾಯಕರನ್ನು ತಡೆದ ಪೊಲೀಸರು, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಖಂಡಿಸಿ ಇಂದು ಪ್ರತಿಭಟನಾ ಮೆರವಣಿಗೆ ಮೂಲಕ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಪೊಲೀಸರು ಕುಮಾರ ಕೃಪಾ ಗೆಸ್ಟ್ ಹೌಸ್ ರಸ್ತೆಯಲ್ಲಿ ವಶಕ್ಕೆ ಪಡೆದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಮಾಜಿ ಸಚಿವರಾದ ಎಸ್ ಸುನೀಲ್ ಕುಮಾರ್, ಆರಗ ಜ್ಞಾನೇಂದ್ರ, ಎಸ್ ಸುರೇಶ್ ಕುಮಾರ್, ಸಿ ಎನ್ ಅಶ್ವಥ್ ನಾರಾಯಣ್, ಸಿ ಟಿ ರವಿ ಸೇರಿದಂತೆ ಪಕ್ಷದ ಮುಖಂಡರು, ಹಲವು…

Read More

ಮುದ್ದೇಬಿಹಾಳ: ತಂದೆ-ತಾಯಿಗಳ ಪಾದಕಮಲಗಳಲ್ಲಿ ಸ್ವರ್ಗವಿದೆ. ಹೆತ್ತವರ ಸೇವೆಯನ್ನು ಮಕ್ಕಳು ಸದಾಕಾಲ ಮಾಡುತ್ತಿರಬೇಕು ಎಂದು ತಾಳಿಕೋಟೆ ಬಾಲ ಭಾರತಿ ಶಾಲೆಯ ಅಧ್ಯಕ್ಷ ಚಿದಂಬರ ಕರಮರಕರ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾಮಂದಿರ ಶಾಲೆಯಲ್ಲಿ ಜನನಿ ಜನಕನ ಪಾದಪೂಜೆ ವಿಶೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಾರತದ ಸಂಸ್ಕೃತಿಯಲ್ಲಿ ಮಾತಾಪಿತೃರಿಗೆ ಅಗ್ರಗಣ್ಯ ಸ್ಥಾನವಿದೆ. ತಲೆಮಾರಿನಿಂದ ತಲೆಮಾರಿಗೆ ಸಂಸ್ಕೃತಿ ವಾಹಕವಾಗಬೇಕಾಗಿದೆ ಎಂದರು.ಪ್ರೌಢ ಶಾಲೆ ಮುಖ್ಯಗುರು ರಾಮಚಂದ್ರ ಹೆಗಡೆ ಮಾತನಾಡಿ, ತಾಯಿಗೆ ಸಮಾನವಾದ ದೇವರು ಲೋಕದಲ್ಲಿ ಬೇರೊಂದಿಲ್ಲ. ಆದುದರಿಂದ ಯಾವುದೆ ಧಾರ್ಮಿಕ ಕಾರ್ಯಕ್ರಮದ ಪ್ರಾರಂಭದಲ್ಲಿ ಮಾತೃ ದೇವೋ ಭವ ಎನ್ನುವ ಮಂತ್ರದಿಂದಲೇ ಪ್ರಾರಂಭಗೊಳ್ಳುತ್ತದೆ. ಪಾದ ಶ್ರೇಷ್ಠವಾಗಿದೆ. ವ್ಯಕ್ತಿಯ ತಲೆಯಲ್ಲಿ ವಿದ್ಯೆ, ಹೃದಯದಲ್ಲಿ ಧೈರ್ಯ, ಗಟ್ಟಿಯಾದ ಬೆನ್ನು ಹಾಗೂ ಕಾಲು ಶ್ರಮಪಟ್ಟು ದುಡಿಯಲು ಗಟ್ಟಿಯಾಗಿರಬೇಕಾಗಿರುತ್ತದೆ. ಒಬ್ಬ ವ್ಯಕ್ತಿಯಲ್ಲಿಯೆ ಇದೆಲ್ಲ ಗುಣವನ್ನುಹೊಂದಿರಬೇಕು. ಆದುದರಿಂದಲೇ ಪಾದ ಶ್ರೇಷ್ಠವೆಂದು ಪಾದಕ್ಕೆ ವಂದಿಸಲಾಗುತ್ತದೆ ಎಂದರು.ಸಂಸ್ಥೆಯ ನಿರ್ದೇಶಕ ಡಾ. ಪರಶುರಾಮ ಪವಾರ, ಶಿಕ್ಷಕ ಶಿವಶಂಕರಯ್ಯ ಹಿರೇಮಠ, ಶಿಕ್ಷಕಿ ಅನ್ನಪೂರ್ಣ ನಾಗರಾಳ, ಲೀಲಾ ಭಟ್ಟ, ಶಾಂತಾ ಭಟ್ಟ. ಜಿ.ಜೆ.ಪಾದಗಟ್ಟಿ, ಪಿ.ಎಸ್.ನಾಗಠಾಣ, ಸಂಸ್ಥೆಯ…

Read More

ಮುದ್ದೇಬಿಹಾಳ: ಪಟ್ಟಣದ ಮುಖ್ಯ ಬಜಾರನಲ್ಲಿರುವ ಕೆ.ಬಿ.ಎಂ.ಪಿ.ಎಸ್ ಶಾಲೆಯಲ್ಲಿ ಭಾರತ ಸೇವಾದಳ ಶಿಕ್ಷಕ- ಶಿಕ್ಷಕಿಯರ ಪುನಶ್ಚೇತನ ಮಿಲಾಪ ಶಿಬಿರವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ಜಂಟಿ ನಿರ್ದೇಶಕ ಜಗದೀಶ್ವರ.ಟಿ ಮಾತನಾಡಿ, ಭಾರತ ಸೇವಾದಳವು ೧೯೨೩ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಪಂಡಿತ್ ಜವಾಹರಲಾಲ್ ನೆಹರು ಮತ್ತು ಡಾ.ನಾ.ಸು.ಹರ್ಡಿಕರ್ ಅವರ ಮುಂದಾಳತ್ವದಲ್ಲಿ ಸ್ಥಾಪನೆ ಮಾಡಲಾಯಿತು. ಆ ಸಂದರ್ಭ ಸ್ವಾತಂತ್ರ‍್ಯದ ಕಿಚ್ಚನ್ನು ಎಲ್ಲರಲ್ಲಿ ಹೆಚ್ಚಿಸಲು, ಶಿಸ್ತು, ದೇಶಾಭಿಮಾನ, ಬೆಳೆಸಲು ಹರ್ಡಿಕರ್ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದರು. ಅವರಲ್ಲಿರುವ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕರು ಬಿ.ವೈ.ಕವಡಿ ಮಾತನಾಡಿ, ಶಿಕ್ಷಕ ವೃತ್ತಿ ನಿಸ್ವಾರ್ಥ ಸೇವೆಯ ಒಂದು ಭಾಗವಾಗಿದೆ. ಶಿಕ್ಷಕರು ನೀಡುವ ಗುಣಾತ್ಮಕ ಶಿಕ್ಷಣ ಮಾರ್ಗದರ್ಶನ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ನೆರವಾಗುತ್ತದೆ ಎಂದರು.ಬೆಳಗಾವಿ ವಿಭಾಗದ ಸಂಚಾಲಕ ನಾಗೇಶ್ ಡೋಣೂರ ಸೇವಾದಳದ ತರಬೇತಿಯನ್ನು ಪಡೆದುಕೊಂಡು ತಮ್ಮ ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ದೇಶಾಭಿಮಾನ ಭಾವೈಕತೆ ನಾಯಕತ್ವ ಗುಣ, ಸೇವಾದಳದ ಬಗ್ಗೆ ಹೇಳಿಕೊಡುವುದರಿಂದ ಒಳ್ಳೆಯ ಪ್ರಜೆಯನ್ನಾಗಿ ರೂಪಿಸಬಹುದು ಎಂದರು.ಪ್ರಭು ಕಡಿ, ಸಿದ್ದಯ್ಯ ಕಲ್ಯಾಣ ಮಠ,…

Read More