ಬಸವನಬಾಗೇವಾಡಿ: ಸಹಕಾರಿ ಸಂಘಗಳು ದೇಶಕ್ಕೆ ಬಹುದೊಡ್ಡ ಕೊಡುಗೆಯನ್ನ ನೀಡಿವೆ ಎಂದು ಜವಳಿ, ಸಕ್ಕರೆ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿನ ಮನಗೂಳಿ ಗ್ರಾಮದಲ್ಲಿ ಶ್ರೀ ವಿನಾಯಕ ವಿವಿಧೋದ್ದೇಶಗಳ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ ನೇರವೆರಿಸಿ ಮಾತನಾಡಿದ ಅವರು ದೇಶದ ಜನತೆ ಅಗತ್ಯ ವಸ್ತುಗಳ ಅವಶ್ಯಕತೆಗಾಗಿ ವಿದೇಶದ ಮೇಲೆ ಅವಲಂಬಿತರಾಗಿರುವ ಕಾಲ ಒಂದಾಗಿತ್ತು ಆದರೆ ಇಂದಿನ ದಿನಮಾನಗಳಲ್ಲಿ ಸಹಕಾರಿ ರಂಗಗಳ ಸಹಾಯದಿಂದ ಅಗತ್ಯ ವಸ್ತುಗಳನು ನಮ್ಮ ದೇಶದಲ್ಲಿಯೇ ಪಡೆಯುವಂತಾಗಿದೆ, ಪ್ರಾಮಾಣಿಕವಾಗಿ ಸೇವೆ ಮಾಡಿದಾಗ ಖಂಡಿತವಾಗಿ ಯಶಸ್ಸು ನಮ್ಮದಾಗುತ್ತದೆ ಎನ್ನುವುದಕ್ಕೆ ಮನಗೂಳಿಯ ವಿನಾಯಕ ವಿವಿಧೋದ್ದೇಶಗಳ ಸಹಕಾರಿ ಸಂಘ ಸಾಕ್ಷಿಯಾಗಿದೆ ಇದೇ ರೀತಿಯಲ್ಲಿ ನಮ್ಮ ಡಿಸಿಸಿ ಬ್ಯಾಂಕಿನ ನಮ್ಮ ಹಿರಿಯರು ಕೇವಲ 63 ಸಾವಿರದಿಂದ ಆರಂಭವಾದ ಡಿಸಿಸಿ ಬ್ಯಾಂಕ್ ಇಂದು ರೂ,ಒಂದು ಸಾವಿರದಾ ಮೂರನೂರು ಕೋಟಿ ವ್ಯವಹಾರ ಹೊಂದಿದೆ, ಪ್ರಸಕ್ತ ವರ್ಷದಲ್ಲಿ ನಮ್ಮ ಬ್ಯಾಂಕ್ 28 ಕೋಟಿ ಲಾಭ ಗಳಿಸಿದೆ ಎಂದರು.
ಸಂಘ ಸಂಸ್ಥೆಗಳಲ್ಲಿ ಸಾಲ ಪಡೆದವರು ಸಕಾಲಕ್ಕೆ ಸಾಲ ಮರು ಪಾವತಿ ಮಾಡಿದಾಗ ಮಾತ್ರ ಸಂಘ ಸಂಸ್ಥೆಗಳು ಉಳಿಯಲು ಸಾಧ್ಯ ಈ ನಿಟ್ಟಿನಲ್ಲಿ ಸಾಲ ಮರು ಪಾವತಿ ಮಾಡುವಲ್ಲಿ ಸಂಘವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದರು.
ಸಂಘದ ಅಧ್ಯಕ್ಷ ವಿಶ್ವನಾಥಗೌಡ ಪಾಟೀಲ ಮಾತನಾಡಿ ಆಡಳಿತ ಮಂಡಳಿಯ ಸಹಕಾರ ಹಾಗೂ ಸರ್ವ ಸದಸ್ಯರ ವಿಶ್ವಾಸದಿಂದ ನಮ್ಮ ಸಂಘವು ಪ್ರಗತಿಯತ್ತ ಸಾಗುವ ಮೂಲಕ ಕೇವಲ 11 ವರ್ಷದಲ್ಲಿ ಅಂದಾಜು 1, 50 ಕೋಟಿ ವೆಚ್ಚದ ಸ್ವಂತ ಕಟ್ಟಡ ಹೊಂದಿದೆ, ಪ್ರತಿ ವರ್ಷ 32 ಲಕ್ಷಕ್ಕು ಅಧಿಕ ಲಾಭಂಶ ಗಳಿಸುವ ಮೂಲ ಪ್ರಗತಿ ಹೊಂದುತ್ತಿದೆ. ನಿಮ್ಮೆಲ್ಲರ ವಿಶ್ವಾಸದಿಂದ ನಾನು ಸತತವಾಗಿ ಮೂರು ಬಾರಿ ಅಧ್ಯಕ್ಷನಾಗಿ ಆಯ್ಕೆ ಆಗಿದ್ದು ನಿಮ್ಮೆಲ್ಲರ ವಿಶ್ವಾಸಕ್ಕೆ ಧಕ್ಕೆ ಬರದಂತೆ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ದೇವರಹಿಪ್ಪಗಿ ಶಾಸಕ ಭೀಮನಗೌಡ (ರಾಜುಗೌಡ) ಪಾಟೀಲ, ಮುಖಂಡ ಅಪ್ಪುಗೌಡ ಪಾಟೀಲ ಮಾತನಾಡಿದರು, ಮುಖಂಡರಾದ ಐ,ಸಿ ಪಟ್ಟಣಶೆಟ್ಟಿ, ಶಿವನಗೌಡ ಬಿರಾದಾರ, ರಾಜಶೇಖರ ಗುಡದಿನ್ನಿ, ಸಿ,ಎಸ್ ಪಾಟೀಲ, ಎಸ್ ಎಸ್ ಹಂಗರಗಿ, ಚಂದ್ರಶೇಖರಗೌಡ ಪಾಟೀಲ, ಸಿದ್ದಣ್ಣ ನಾಗಠಾಣ ಮುಂತಾದವರು ಇದ್ದರು, ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಸ್ವಾಗತಿಸಿದರು, ಸಿದ್ದನಗೌಡ ಪಾಟೀಲ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

