ವಿಜಯಪುರ: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ವತಿಯಿಂದ ಕೇಂದ್ರ ಸರ್ಕಾರದ ಬೆಲೆ ಸ್ಥಿರೀಕರಣ ಯೋಜನೆಯಡಿ ನ್ಯಾಫೆಡ್ ಸಂಸ್ಥೆಯವರು ತೊಗರಿ ಖರೀದಿಸುವ ಸಲುವಾಗಿ ವಿಜಯಪುರ ವ್ಯಾಪ್ತಿಯಲ್ಲಿ ೫೨ ತೊಗರಿ ಕೇಂದ್ರಗಳನ್ನು ತೆರೆಯಲಾಗಿದ್ದು ೨೦೨೩-೨೪ ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ತೊಗರಿ ಬೆಳೆದ ರೈತರಿಂದ ಮಾರುಕಟ್ಟೆ ದರದಲ್ಲಿ ಮತ್ತು ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಖರಿದಿಸಲಾಗುತ್ತಿದೆ ರೈತರಿಂದ ಖರೀದಿಸಿದ ತೊಗರಿಗೆ, ರೈತರ ಖಾತೆಗೆ ಡಿ.ಬಿ.ಟಿ ಮೂಲಕ ಹಣ ಜಮೆ ಮಾಡಲಾಗುವುದು. ಜಿಲ್ಲೆಯಲ್ಲಿ ತೊಗರಿ ಬೆಳೆದ ರೈತರು ತೊಗರಿ ಮಾರಾಟ ಮಾಡಲು ನಾಫೇಡ್ ಸಂಸ್ಥೆಯವರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ವತಿಯಿಂದ ನೊಂದಣಿ ಪ್ರಕೃಯೆ ಪ್ರಾರಂಬಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿಶಾಖಾ ವ್ಯವಸ್ಥಾಪಕರಾದ ಲಿಂಗರಾಜು .ಡಿ.ಎಮ್ ಮೋ.ಸಂಖ್ಯೆ ೯೪೪೯೮೬೪೪೫೨ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
