ಕಲಕೇರಿ: ಗ್ರಾಮದ ಶ್ರೀಗುರುವೀರಘಂಟೈ ಮಡಿವಾಳೇಶ್ವರ ದೇವಸ್ಥಾನದಲ್ಲಿ “ಜಾತ್ರಾ ಮಹೋತ್ಸವದ ವೇಳೆ ಶರಣರು ಬರುತಾರ ಹೋಗೋನ ನಡಿ” ಎಂಬ ಜಾನಪದ ಶೈಲಿಯ ಶ್ರೀಗುರುವೀರಘಂಟೈ ಮಡಿವಾಳೇಶ್ವರರ ಧ್ವನಿಸುರುಳಿಯನ್ನು ಗ್ರಾಮದ ಹಿರಿಯರು ಮತ್ತು ಭಕ್ತ ಬಳಗದ ಸಮ್ಮುಖದಲ್ಲಿ ವೇ.ಮೂ.ಅಭಿಷೇಕ ಗದ್ದಗಿಮಠ ಅವರು ಯಾಂತ್ರಿಕವಾಗಿ ಬಿಡುಗಡೆಗೊಳಿಸಿದರು.
ಕಲಕೇರಿಯ ಪ್ರಕಾಶ ರಾ ಯರನಾಳ, ಪ್ರದೀಪ ಶ್ರೀ ವಿಶ್ವಕರ್ಮ, ಹಣಮಂತ.ಬಿ.ಯುಕ್ತಾಪುರ ನಾಗರಳ್ಳಿ ಮತ್ತು ಕಲಕೇರಿ ಗೆಳೆಯರ ಬಳಗ ಇವರ ಸಹಕಾರದೊಂದಿಗೆ ಆನಂದ ಬಿ.ನಾಯ್ಕೋಡಿ ಅವರ ಸಾಹಿತ್ಯ ಮತ್ತು ಯಲ್ಲಪ್ಪ ಎಮ್ ತಿಪ್ಪನಟಗಿ ಅವರ ಧ್ವನಿಯಲ್ಲಿ ಮೂಡಿ ಬಂದ ಈ ಧ್ವನಿಸುರುಳಿಯನ್ನು ಚಾಮನಾಳದ ಜನನಿ ರೆಕಾರ್ಡಿಂಗ್ ಸ್ಟುಡಿಯೋ ಅವರು ಧ್ವನಿ ಮುದ್ರಣದ ಕಾರ್ಯವನ್ನು ಮಾಡಿದೆ.
ಈ ವೇಳೆ ರೇವಣಸಿದ್ದೇಶ ಗದ್ದಗಿಮಠ, ಹಿರಿಯರಾದ ಎಸ್.ಬಿ.ಪಾಟೀಲ, ದೇವಿಂದ್ರ ಜಂಬಗಿ, ವಾಯ್.ಬಿ.ಕುಲಕರ್ಣಿ, ಡಿ.ಎನ್.ಚಿಕ್ಕಮಠ, ನಾನಾಗೌಡ ಚೌಧರಿ, ಸುಧಾಕರ ಕವದಿ, ಗಿರೀಶ ಹೆಗ್ಗಣದೊಡ್ಡಿ, ಸುಧಾಕರ ಅಡಕಿ, ಚೇತನ ಶಹಾಪೂರ, ಪ್ರದೀಪ ವಿಶ್ವಕರ್ಮ, ಪ್ರಕಾಶ ಯರನಾಳ ಗಾಯಕ ಯಲ್ಲಪ್ಪ ತಿಪ್ಪನಟಗಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

