ಇಂಡಿ: ದುಂದು ವೆಚ್ಚ ಮಾಡದೇ ಪೂಜ್ಯರ, ಗಣ್ಯರ ಸಮ್ಮುಖ ನಡೆಯುವ ಮದುವೆ ಭಾಗ್ಯವಂತರ ಮದುವೆ ಎಂದು ನಾಗಣಸೂರದ ಶ್ರೀಕಂಠ ಶಿವಾಚಾರ್ಯರು ಹೇಳಿದರು.
ಸೋಮವಾರ ಪಟ್ಟಣದ ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಶಾಂತೇಶ್ವರ ದೇವಸ್ಥಾನ ಟ್ರಸ್ ಕಮೀಟಿ ಹಾಗೂ ಶ್ರೀ ಶಾಮಥೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು ಮಾತನಾಡಿ, ಬಡವರ ಹಿತ ಬಯಸುವವರು ಪರಮಾತ್ಮನ ಸ್ವರೂಪಿಗಳು. ಅವರು ಸಮಾಜದ ಮಕ್ಕಳು. ಅವರು ಮಾಡುವ ಸಾಮೂಹಿಕ ಮದುವೆ ನಮ್ಮ ಧರ್ಮ, ಸಂಸ್ಕಾರ, ನೀತಿ ಬೋಧಿಸುತ್ತದೆ ಎಂದರು.
ಜೈನಾಪುರದ ರೇಣುಕಾಶಿವಾಚಾರ್ಯರರು ಮಾತನಾಡಿ, ಮದುವೆ ಭಾರತೀಯ ಸಂಸ್ಕೃತಿಯಲ್ಲಿ ಶತ ಶತಮಾನದಿಂದ ಬಂದಿದ್ದು ಇತ್ತಿತ್ತಲಾಗಿ ಜನರು ಮದುವೆ ದುಂದು ವೆಚ್ಚದಿಂದ ಮಾಡುತ್ತಿದ್ದು ಸಂಸಾರಗಳಿಗೆ ಮಾರಕವಾಗುತ್ತಿದೆ ಎಂದರು.
ಪ್ರವಚನಕಾರ ಗೌಡಗಾಂವದ ಶಾಂತವೀರ ಶಿವಾಚಾಯ್ರರು, ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ, ಗೋರನಾಳದ ವೀರಪಾಕ್ಷ ದೇವರು, ಸಿದ್ದು ಲಾಳಸಂಗಿ ಮಾತನಾಡಿದರು.
ಈ ಬಾರಿಯ ಸಾಮೂಹಿಕ ವಿವಾಹದ ವೆಚ್ಚವನ್ನು ಸಿದ್ದಣ್ಣ ತಾಂಬೆ ವಹಿಸಿದ್ದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ಒಂದು ತಿಂಗಳ ನಡೆದ ಪ್ರವಚನ ಮತ್ತು ಜಾತ್ರೆಯ ನಿಮಿತ್ಯ ಪ್ರಸಾದ ವ್ಯವಸ್ಥೆ ಮಾಡಿದರು.
ವೇದಿಕೆಯ ಮೇಲೆ ರೇಣುಕಾ ಶಿವಾಚಾರ್ಯರರು ಅರ್ಜುಣಗಿ, ಹಿರೇಬೇವನೂರ ಮಾತೋಶ್ರೀ ಶರಣಮ್ಮ ತಾಯಿ, ರೋಡಗಿಯ ಶಿವಲಿಂಗೇಶ್ವರ ಶಿವಾಚಾರ್ಯರರು, ಬಿ.ಎಲ್.ಡಿ.ಈ ವೈದ್ಯಕೀಯ ಮಹಾವಿದ್ಯಾಲಯದ ಡಾ|| ಮಂಜುನಾಥ ಕೊಟೆಣ್ಣವರ, ಶಾಂತೇಶ್ವರ ಸಲಗರ, ಜೈನ ಸಮಾಜದ ಗುರು ಅಶೋಕ ಪಂಡಿತ, ಶ್ರೀಕಾಂತ ದೇವರ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ಭೀಮನಗೌಡ ಪಾಟೀಲ, ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಸಿಡಿಪಿಒ ಗೀತಾ ಗುತ್ತರಗಿಮಠ, ಈರಣ್ಣ ಮೈದರಗಿ, ಭೀಮರಾಯ ಮದರಖಂಡಿ, ರಾಜಶೇಖರ ಗುರುಗಳು, ಬಿ.ಕೆ.ಮಸಳಿ ವಕೀಲರು, ಪ್ರಕಾಶ ಬಿರಾದಾರ ಮತ್ತಿತರಿದ್ದರು.
ಸಾಮೂಹಿಕ ವಿವಾಹದಲ್ಲಿ ೧೧ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
Subscribe to Updates
Get the latest creative news from FooBar about art, design and business.
ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ :ಶ್ರೀಕಂಠ ಶ್ರೀ
Related Posts
Add A Comment

