ಮುದ್ದೇಬಿಹಾಳದಲ್ಲಿ ಆಮ್ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿಕೆ
ಮುದ್ದೇಬಿಹಾಳ: ದೆಹಲಿಯಲ್ಲಿ ಆಪ್ ಜಾರಿಗೊಳಿಸಲಾದ ಉಚಿತ ಯೋಜನೆಗಳನ್ನು ಕದ್ದು ಕಾಂಗ್ರೇಸ್ ಸರ್ಕಾರ ಇಲ್ಲಿ ಜಾರಿಗೊಳಿಸಿದೆ ಎಂದು ಹಿರಿಯ ನಟ, ಆಮ್ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಪಟ್ಟಣದ ೧೮ನೇ ವಾರ್ಡಿನ ಉಪಚುನಾವಣೆ ಹಿನ್ನೆಲೆ ಪ್ರಚಾರಕ್ಕೆ ಆಗಮಿಸಿದಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವರು ಉಚಿತ ಯೋಜನೆಗಳನ್ನು ಜಾರಿ ಮಾಡಿದ್ದು ಚುನಾವಣೆಗೋಸ್ಕರ. ಈ ಹಿಂದೆ ಇವರ ಸರ್ಕಾರ ಆಡಳಿತದಲ್ಲಿದ್ದಾಗ ಸಿದ್ಧರಾಮಯ್ಯನವರೇ ಸಿಎಂ ಆಗಿದ್ರು. ಆಗ ಈ ಸಮಸ್ಯೆಗಳು ಇವರ ಗಮನಕ್ಕಿರಲಿಲ್ಲವೇ. ಇದೆಲ್ಲ ನಮ್ಮಿಂದ ಕದ್ದಿದ್ದಾರೆ.ಸಧ್ಯ ಕುಟುಂಬ ರಾಜಕಾರಣ, ಜಾತಿ, ಕೋಮುವಾದ ಹೆಚ್ಚಾಗಿರುವದರಿಂದ ಆಪ್ ಜನಸಾಮಾನ್ಯರನ್ನು ಕಣಕ್ಕಿಳಿಸುತ್ತಿದೆ. ಚುನಾವಣೆ ನಡೆಸಲು ಸಿಕ್ಕಾಪಟ್ಟೆ ಹಣ ಖರ್ಚು ಮಾಡುವ ಪಕ್ಷ ನಮ್ಮದಲ್ಲ. ಸಧ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಇಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ ಎಂದರು.
ಬಳಿಕ ಪಕ್ಷದ ಅಭ್ಯರ್ಥಿ ನ್ಯಾಯವಾದಿ ನೂರಅಹ್ಮದ ಶಿವಣಗಿ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು, ಉಪಾಧ್ಯಕ್ಷರಾದ ವಿಜಯ್ ಶರ್ಮಾ, ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಅವರು ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಡಾ:ಗೀತಾ ಹೂಗಾರ, ಹಾವೇರಿ ಜಿಲ್ಲಾ ಉಸ್ತುವಾರಿ ಫರೀದ ನದಾಫ್, ಮುದ್ದೇಬಿಹಾಳ ಮತಕ್ಷೇತ್ರದ ಉಸ್ತುವಾರಿ ಮೇಹಬೂಬ ಹಡಲಗೇರಿ, ವಿಜಯಪುರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವು ಕೊಳ್ಳಾರಿ, ಜಿಲ್ಲಾ ಕಾರ್ಯದರ್ಶಿ ಅಪ್ಪನಗೌಡ ಪಾಟೀಲ್, ಮಾಧ್ಯಮ ಉಸ್ತುವಾರಿ ಸಂಜು ಶೆಟಗಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳನವರ ಮುಖಂಡರಾದ ರಮೇಶ್ ದೊಡ್ಡಮನಿ ಹಾಗೂ ಮುದ್ದೇಬಿಹಾಳದ ಕಾರ್ಯಕರ್ತರು ಉಪಸ್ಥಿತರಿದ್ದರು.

