ಓಂ ಪ್ರಾಥಮಿಕ ಶಾಲೆಯಲ್ಲಿ ಆಧುನಿಕ ಸಂತೆ ಮೇಳ ಉದ್ಘಾಟಿಸಿದ ಶಾಸಕ ವಿಠ್ಠಲ ಕಟಕಧೋಂಡ ಅಭಿಮತ
ಚಡಚಣ: ಮಕ್ಕಳಲ್ಲಿ ವ್ಯಾಪಾರ ವ್ಯವಹಾರ ಬೆಳಸಲು ಸಂತೆ ಮೇಳ ಸಹಕಾರಿಯಾಗಲಿದೆ ಎಂದು ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ಪಟ್ಟಣದ ಓಂ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಲಾದ ಮಕ್ಕಳ ಆಧುನಿಕ ಸಂತೆ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಸಂತೆಮೇಳ ಆಯೋಜಿಸುವದರಿಂದ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಯಲ್ಲಿ ವ್ಯವಹಾರ ಬೆಳೆಸಲು ಸಹಾಯವಾಗುತ್ತದೆ. ದಿನನಿತ್ಯ ಸೇವಿಸುವ ಆಹಾರ ವಸ್ತುಗಳು ರಸ್ತೆಮೇಲೆ ಇಟ್ಟು ಮಾರಾಟ ಮಾಡದೇ ಸೂಕ್ತ ಸ್ಥಳ ನಿಯೋಜನೆ ಮಾಡುವುದು ಅವಶ್ಯಕತೆ ಇದೆ. ಇಂದಿನ ಯುಗದಲ್ಲಿ ಇಡಬಾರದ ವಸ್ತುಗಳು ಶೋರೂಮದಲ್ಲಿ ಇಟ್ಟು, ದಿನ ನಿತ್ಯ ಸೇವಿಸುವ ಆಹಾರ ವಸ್ತುಗಳನ್ನು ರಸ್ತೆ ಮೇಲೆ ಇಟ್ಟು ಮಾರಾಟ ಮಾಡುತ್ತಿರುವುದು ದುರದೃಷ್ಠಕರ ಎಂದರು.
ಸಂತೆಯಲ್ಲಿ ಮಕ್ಕಳು ಎಲ್ಲಾ ತರಹದ ತರಕಾರಿಗಳನ್ನು, ದವಸ-ಧಾನ್ಯಗಳನ್ನು, ಹಣ್ಣು-ಹಂಪಲುಗಳನ್ನು, ಸ್ಟೇಷನರಿ ವಸ್ತುಗಳನ್ನು, ಇಲೆಕ್ಟ್ರಿಕಲ್ ವಸ್ತುಗಳನ್ನು, ಮಾರಾಟಕ್ಕೆ ಇಟ್ಟಿದ್ದರು, ಸಂತೆಯಲ್ಲಿ ಉಪಜೀವನಕ್ಕಾಗಿ ಕರಡಿ ಆಡಿಸುವವರು, ಡೊಂಬರಾಟದವರು, ಗರದಿ ಗಮ್ಮತ್ತು ಆಡಿಸುವವರು ಹೀಗೆ ವಿವಿಧ ವೇಷ ಭೂಷಣಗಳಲ್ಲಿ ಮಕ್ಕಳು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಂಕರ ಹಾವಿನಾಳ, ಶಿಕ್ಷಣ ಸಂಯೋಜಕ ಎಸ್ ಆಯ್ ಚನಗೊಂಡ, ಎಮ್ ಎಲ್ ಪಾಂಡ್ರೆ, ಎಸ್ ಎಸ್ ಸೂರಜ ಸಿ ಆರ್ ಪಿ ಬಿ ಕೆ ವಾಘ್ಮೋರೆ, ರಮೇಶ ಬಿರಾದಾರ, ಶ್ರೀಕಾಂತ ಬಗಲಿ,ವಿನಯ ಜೀರಂಕಲಗಿ, ಪ್ರಕಾಶ ಮಾಲಗಾರ, ಅಜ್ಜು ಖಾಜಿ, ನಿವೃತ್ ಶಿಕ್ಷಕರಾದ ಎಸ್ ಜಿ ಬನಸೋಡೆ, ಎ ಎಸ್ ಎಳಮೇಲಿ, ಸಂಜೀವ ಕಟ್ಟಿಮನಿ, ಧರ್ಮರಾಜ ಕರಂಡೆ, ರಮಜಾನ ಅಂಗಡಿ, ಮುಖ್ಯ ಶಿಕ್ಷಕ ಸುರೇಶ ಜಂತಿ, ಶಿಕ್ಷಕರಾದ ಪಿ ಎಚ್ ಪುಜಾರಿ, ಮಹೇಶ ಚವ್ಹಾಣ, ಅರ್ಪಿತಾ ಭಂಡರಕವಟೆ, ಸಂಗೀತಾ ಬಣಗಾರ, ಭೀಮವ್ವಾ ಮಡ್ಡಿ, ಪ್ರೀಯಾಂಕಾ ಅಂಜುಟಗಿ, ಲಕ್ಷ್ಮೀ ಕುಂಬಾರ, ಮಹಾದೇವಿ ಕೋಳಿ ಸೇರಿದಂತೆ ಪೋಷಕರು ಪಾಲ್ಗೊಂಡಿದ್ದರು.

