ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಗುರು ವೀರಘಂಟೈ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಡಿ.೨೪ ರಂದು ಸಂಜೆ ೬ ಗಂಟೆಗೆ ಧಮ೯ಸಭೆ ನಡೆಯಲಿದೆ ಎಂದು ಮಠಾಧ್ಶಕ್ಷ ಗುರುಲಿಂಗಯ್ಶ ಸ್ವಾಮೀಜಿ ತಿಳಿಸಿದ್ದಾರೆ. ಮಾಗಣಗೇರಾ ಬೃಹನ್ಮಠದ ಡಾ.ವಿಶ್ವರಾಧ್ಶ ಶಿವಾಚಾಯ೯ರು, ಯಂಕಂಚಿ ಕುಂಟೋಜಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾಯ೯ರು ಧಮ೯ಸಭೆಯ ದಿವ್ಶ ಸಾನ್ನಿಧ್ಶವಹಿಸುವರು. ಶ್ರೀಮಠದ ಗುರುಲಿಂಗಯ್ಶ ಗದ್ದಗಿಮಠ ಸ್ವಾಮೀಜಿ, ಅಯ್ಶಪ್ಪಯ್ಶ ಸ್ವಾಮೀಜಿ ನೇತೃತ್ವ. ಕುಳಗೇರಾ ದಗಾ೯ದ ಸಯ್ಶದ ಹುಸೇನಪಾಷಾ ಮೋದಿನಪಾಷಾ ಸಜ್ಜಾದೇ ನಶೀನ ದಗಾ೯, ಸಾಗನೂರದ ಗುರುಸಿದ್ದಯ್ಶ ಹಿರೇಮಠ ಉಪಸ್ಥಿತಿ, ಯಂಕನಗೌಡ ಪಾಟೀಲ ಅಧ್ಶಕ್ಷತೆ, ಶಾಸಕ ಅಶೋಕ ಮನಗೂಳಿ ಧಮ೯ಸಭೆ ಉದ್ಘಾಟಿಸುವರು. ಮಾಜಿ ಶಾಸಕ ರಮೇಶ ಭೂಸನೂರ ಜ್ಶೋತಿ ಬೆಳಗಿಸುವರು. ಮಡಿವಾಳಪ್ಪಗೌಡ ಬಿರಾದಾರ ಮಾಗಣಗೇರಾ, ಸಂಗನಗೌಡ ಪಾಟೀಲ ಖಾನಾಪೂರ, ಸಿಂದಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಶಕ್ಷ ಸುರೇಶ ಪೂಜಾರಿ ಸೇರಿದಂತೆ ವಿವಿಧ ರಾಜಕೀಯ ಮುಖಂಡರು, ಗಣ್ಶರು, ಪತ್ರಕತ೯ರು, ಗುತ್ತೆಗೆದಾರರು ಭಾಗವಹಿಸಲಿದ್ದಾರೆ.
ಡಿ.೨೫ ರಂದು ಸಂಜೆ ೭ ಗಂಟೆಗೆ ಮಹಾ ಪುರಾಣ ಮಂಗಲಗೊಳ್ಳವುದು. ಡಿ.೨೬ ರಂದು ಬೆಳಗ್ಗೆ ೫-೩೦ ಗಂಟೆಗೆ ಮಠದ ಗುರುಲಿಂಗಯ್ಶ ಗದ್ದಗಿಮಠ ಸ್ವಾಮೀಜಿ ಅವರಿಂದ ಅಗ್ನಿ ಪ್ರವೇಶ ಜರುಗಲಿದೆ. ಸಂಜೆ ೫-೩೦ ಕ್ಕೆ ಸಕಲ ವಾಧ್ಶವೈಭವಗಳೊಂದಿಗೆ ರಥೋತ್ಸವ ನಡೆಯಲಿದೆ ಎಂದು ಶ್ರಿಮಠದ ವಿಶ್ವನಾಥ ಗದ್ದಗಿಮಠ ಶ್ರೀಗಳು ತಿಳಿಸಿದ್ದಾರೆ.
ಖಾನಾಪೂರದಲ್ಲಿ ಮಡಿವಾಳೇಶ್ವರ ಜಾತ್ರೆ
ಸಿಂದಗಿ ತಾಲೂಕಿನ ಖಾನಾಪೂರ ಗ್ರಾಮದ ವೀರಘಂಟೈ ಮಡಿವಾಳೇಶ್ವರ ಜಾತ್ರೆ ಅಂಗವಾಗಿ ಡಿ.೨೬ ರಂದು ಬೆಳಗ್ಗೆ ೬ಕ್ಕೆ ಮಠದ ಒಡೆಯ ಮೌನಯೋಗಿ ಕಲ್ಶಾಣದಯ್ಶ ಸ್ವಾಮೀಜಿ ಅವರಿಂದ ಅಗ್ನಿ ಪ್ರವೇಶ ಜರುಗಲಿದೆ. ಸಂಜೆ ೫ಕ್ಕೆ ರಥೋತ್ಸವ ನಡೆಯಲಿದೆ.

