ಮುದ್ದೇಬಿಹಾಳ: ನಗರವು ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆಗಳನ್ನು ಹೊಂದಿದೆ. ತಾಲೂಕಿನ ನೆರೆಹೊರೆಯ ತಾಲೂಕುಗಳಾದ ನಿಡಗುಂದಿ, ತಾಳಿಕೋಟಿ, ಬಸವನ ಬಾಗೇವಾಡಿ, ಕೋಲ್ಹಾರ ಹಾಗೂ ದೇವರ ಹಿಪ್ಪರಗಿ ಇವೆಲ್ಲವುಗಳನ್ನು ಸೇರಿಸಿ ನೂತನ ಮುದ್ದೇಬಿಹಾಳ ಜಿಲ್ಲೆ ರಚಿಸಿದಲ್ಲಿ ಈ ಭಾಗದ ಎಲ್ಲಾ ಜನರಿಗೆ ಅನುಕೂಲವಾಗುತ್ತದೆ. ಅಲ್ಲದೇ ಮುದ್ದೇಬಿಹಾಳದಿಂದ ವಿಜಯಪುರಕ್ಕೆ ೮೫ ಕಿಮೀ ಅಂತರವಿದ್ದು, ಇಲ್ಲಿಯ ಜನರು ವಿವಿಧ ಕೆಲಸಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ತುಂಬಾ ತೊಂದರೆ ಆಗುತ್ತಿದ್ದು, ಕೂಡಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮುದ್ದೇಬಿಹಾಳ ಜಿಲ್ಲೆ ರಚನೆಗೆ ಕ್ರಮ ಕೈಗೊಳ್ಳಲು ವಿನಂತಿಸಿ ಹಿರಿಯ ನ್ಯಾಯವಾದಿ ಸಂಗಮೇಶ ಹೂಗಾರ ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

