ಮುದ್ದೇಬಿಹಾಳ: ಭಗವದ್ಗೀತೆ ಕೇವಲ ಧರ್ಮಗ್ರಂಥವಲ್ಲ ಅದು ಹಿಂದೂಗಳ ಶಕ್ತಿ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ನುಡಿದರು.
ಪಟ್ಟಣದ ಬಸವನಗರದ ಉದ್ಯಾನ ವನದಲ್ಲಿ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ ಹಾಗೂ ಶ್ರೀ ಭಗವದ್ಗೀತಾ ಅಭಿಯಾನ ತಾಲೂಕಾ ಸಮಿತಿ ಮುದ್ದೇಬಿಹಾಳ ಮತ್ತು ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆ ಮುದ್ದೇಬಿಹಾಳ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಭಗವದ್ಗೀತಾ ಜಯಂತಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಭಗವದ್ಗೀತೆ ಆತ್ಮಾಭಿಮಾನ, ಶಿಸ್ತು, ತಾಳ್ಮೆಯ ಜೊತೆಗೆ ಬದುಕಿನ ಪುಟಕ್ಕೆ ಹೊಸ ಜೀವನದ ಪಾಠ ಕಲಿಸುತ್ತದೆ. ರಾಜಕಾರಣಿ, ಸಂಸಾರಿಗಳಿಗೆ ಹೊಸದಾದ ನೀತಿಯನ್ನು ಬೋಧಿಸುತ್ತದೆ. ಮನುಷ್ಯ ಜೀವನದಲ್ಲಿ ಯಾರನ್ನೂ ಯಕಶ್ಚಿತ ಭಾವನೆಯಿಂದ ನೋಡಬಾರದು. ಧರ್ಮದ ಸದಾಚಾರ ವೃತ್ತಿಯನ್ನು ರೂಢಿಸಿಕೊಳ್ಳಬೇಕು. ಗುಣವಂತನಾಗಿರಬೇಕು, ಒಳ್ಳೆಯ ಮತ್ತು ಕೆಡುಕುಗಳನ್ನು ನಿರ್ಧರಿಸುವಲ್ಲಿ ಗೀತೆಯ ವಿಚಾರಗಳು ಪ್ರಧಾನ ಪಾತ್ರವಹಿಸುತ್ತದೆ. ಯಾವುದೇ ಕಾರಣಕ್ಕೂ ಉದಾಸೀನ, ತಾತ್ಸರ ಪ್ರವೃತ್ತಿ ರೂಢಿಸಿಕೊಳ್ಳದೇ ಉತ್ತಮ ಬದುಕನ್ನು ಕಟ್ಟಿಕೊಳ್ಳುವಂತೆ ಕಿವಿಮಾತು ಹೇಳಿದರು.
ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಜಿ.ಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು,
ಸರಕಾರಿ ಪ.ಪೂ ಪ್ರಾಚಾರ್ಯ ಎಸ್.ಎಸ್.ಅಂಗಡಿ ವಿಶೇಷ ಉಪನ್ಯಾಸ ನೀಡಿದರು.
ಪುರಸಭೆ ಸದಸ್ಯ ರಫೀಕ್ ದ್ರಾಕ್ಷಿ ಕಾರ್ಯಕ್ರದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಬಿ.ಪಿ.ಕುಲಕರ್ಣಿ, ಪ್ರಭು ಎಸ್.ಕಡಿ, ಡಾ. ಪರಶುರಾಮ ಪವಾರ, ಸತೀಶ ಓಸ್ವಾಲ್, ಪು.ಸ ಯಲ್ಲಪ್ಪ ನಾಯಕಮಕ್ಕಳ, ಯಶವಂತ ಕಲಾಲ್, ವಿಕ್ರಂ ಓಸ್ವಾಲ್, ಕುಬಾಸಿಂಗ್ ಜಾಧವ್, ಮಲ್ಲಣ್ಣ ಪತ್ತಾರ, ಮಾಣಿಕ ದಂಡಾವತಿ, ಬಿ.ಎಸ್.ಜಾಧವ್, ಶಿವಾಜಿ ವಿಜಾಪೂರ, ಸಂತೋಷ ಹೂಗಾರ, ಎಸ್.ಎಲ್.ಗುರವ್ ಎನ್.ಎಮ್.ಕುಂಬಾರ್, ಸಂಗಣ್ಣ ಹಡಪದ, ಅಶೋಕ ಮಣಿ, ಲೀಲಾ ಭಟ್ಟ, ಅರುಣ ಹುನಗುಂದ ಸೇರಿದಂತೆ ಮತ್ತೀತರರು ಇದ್ದರು.
ತಾಲೂಕಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಲಾಯಿತು.
ಸಂಚಾಲಕ ರಾಮಚಂದ್ರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಆರ್.ಬೆಳ್ಳಿಕಟ್ಟಿ ಸ್ವಾಗತಿಸಿ ನಿರ್ವಹಿಸಿದರು. ಮಂಜುನಾಥ ಪಡದಾಳಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

