ವಿಜಯಪುರ: ಇಂದಿರಾ ನಗರ ಕೆ.ಎಚ್.ಬಿ , ಕಾಲೋನಿ ಹತ್ತಿರ ಜುಮ್ಮಾ ಮಸೀದಿ ಹತ್ತಿರ ವಿಜಯಪುರ ಓವರ್ ಟ್ಯಾಂಕ್ ಹೊಸದಾಗಿ ನಿರ್ಮಿಸಿದ್ದು. ಸದ್ಯ ಇದು ಲಿಕೆಜ್ ಆಗುತ್ತಿದ್ದು, ಈ ಕಳಪೆ ಕಾಮಗಾರಿಯ ನಿರ್ವಹಿಸಿದ ಜೈನ್ ಕಂಪನಿ ಗುತ್ತಿಗೆದಾರರ ಮೇಲೆ ತನಿಖೆಗೊಳಿಸುವಂತೆ ಆಗ್ರಹಿಸಿ ಮಾನವ ಹಕ್ಕು ಮಂಡಳಿಯ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾನವ ಹಕ್ಕು ಮಂಡಳಿ ಕಾರ್ಯದರ್ಶಿ ಮಾತನಾಡಿ, ನಿಜಾಮೋದ್ದೀನ ಹಿರಿಯಾಳ ಅವರು ಮಾತನಾಡಿ, ಓವರ್ ಟ್ಯಾಂಕ್ ಲಿಕೆಜ್ ಮತ್ತು ಕಾಮಾಗಾರಿ ಕಳಪೆ ಮಟ್ಟದಿಂದ ಕೂಡಿದ್ದರ ಕುರಿತು ಜಲಮಂಡಳಿಯ ಕಾರ್ಯಪಾಲಕ ಅಭಿಯಂತರರಾದ ಶಿವುಕುಮಾರ ಪಟ್ಟಣಶೆಟ್ಟಿ ಇವರಿಗೆ ಹಲವಾರು ಬಾರಿ ಈ ಕುರಿತು ಗಮನಕ್ಕೆ ತಂದರೂ ಸಹ ಇವರು ಜೈನ್ ಕಂಪನಿಯ ಮೇಲೆ ಯಾವುದೇ ಕ್ರಮ ಕೈಗೊಂಡಿರುವದಿಲ್ಲ. ಸದ್ಯ ನಿರ್ಮಾಣಗೊಂಡಿರುವ ಓವರ್ ಟ್ಯಾಂಕ್ ದಿನನಿತ್ಯ ಸೋರುತ್ತಿದ್ದು, ಇದರಿಂದ ಇಲ್ಲಿ ವಾಸವಾಗಿರುವ ಜನರಿಗೆ ತೊಂದರೆ ಉಂಟಾಗುತ್ತಿದೆ. ಕಾರಣ ಈ ಕಳಪೆ ಕಾಮಗಾರಿಯಲ್ಲಿ ಶಾಮೀಲಾಗಿರುವ ಜೈನ್ ಕಂಪನಿ ಗುತ್ತಿಗೆದಾರರ ಮೇಲೆ ಹಾಗೂ ಕಾರ್ಯಪಾಲಕ ಅಭಿಯಂತರರಾದ ಶಿವುಕುಮಾರ ಪಟ್ಟಣಶೆಟ್ಟಿ ಇವರ ಮೇಲೆ ಕ್ರಮ ಕೈಗೊಳ್ಳದೇ ಹೋದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆ ಹೋರಾಟ ಕೈಗೊಳ್ಳಲಾಗುವದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ತೌಸೀಫ ಇನಾಮದಾರ , ಮಕಸೂದ ಮುಲ್ಲಾ, ಜಿಲಾನಿಪೀರಾ ಜಾಗೀರದಾರ, ಯುನುಸು ಅತಾರ ಔದ, ಶಬ್ಬೀರ ಬಾಗವಾನ, ಮೊಹ್ಮದ ಪಠಾಣ, ಹಬೀಬ ಪಟೇಲ, ಅಬ್ದುಲ ಮಾಜೀದ ಅತ್ತಾರ, ಇನ್ನಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಓವರ್ ಟ್ಯಾಂಕ್ ಲೀಕೆಜ್: ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಆಗ್ರಹ
Related Posts
Add A Comment

