ಆಸ್ಪತ್ರೆಗಳಲ್ಲಿ ಹಣ್ಣು-ಚಹಾ ವಿತರಿಸಿದ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ
ಸಿಂದಗಿ: ನಗರದ ತಾಲೂಕಾ ಸರಕಾರಿ ಆಸ್ಪತ್ರೆ ಹಾಗೂ ಜಾಲಗೇರಿ ಆಸ್ಪತ್ರೆಗೆ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಪದಾಧಿಕಾರಿಗಳು, ಕಾರ್ಯಕರ್ತರು ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿ ಚಹಾ ಮತ್ತು ಹಣ್ಣು-ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ಮೌಲಾನಾ ದಾವೂದ್ ನದ್ವಿ ಮಾತನಾಡಿ, ನಾವೆಲ್ಲ ಸ್ವಾರ್ಥ ಮತ್ತು ಸ್ವಂತ ಲಾಭದ ಭಾವನೆಯನ್ನು ಮರೆತು ಮಾನವರ ಸೇವೆಗೆ ಮುಂದೆ ಬರುವುದು ಅವಶ್ಯವಾಗಿದೆ. ಸಮಾಜ ಸೇವೆಯ ಹಾಗೂ ದತ್ತಿ ಕಾರ್ಯಗಳ ಮೂಲಕ ಮಾನವರ ಸೇವೆ ಮಾಡುವುದರಿಂದ ಸುಂದರ ಸಮಾಜ ನಿರ್ಮಾಣವಾಗುತ್ತದೆ. ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಜೊತೆ ಸಹಾನುಭೂತಿ ತೊರಬೇಕು. ಮಾನವೀಯ ಮೌಲ್ಯಗಳನ್ನು ಉಳಿಸಿದರೆ ಹಾಗೂ ಸೂಕ್ತವಾದ ಪ್ರಾಯೋಗಿಕ ಕ್ರಮಗಳನ್ನು ಕೈಗೊಂಡರೆ ಮಾತ್ರ ಸಮೃದ್ಧ ದೇಶ ಮತ್ತು ಸಮಾಜವನ್ನು ನಿರ್ಮಿಸಲು ಸಾಧ್ಯ. ನೈತಿಕ ಅಧಃಪತನವನ್ನು ತಡೆಯದೆ ಹೊದರೆ, ದೇಶ ಮತ್ತು ದೇಶದಲ್ಲಿ ವಾಸಿಸುವ ಜನರ ಪರಿಣಾಮ ಕೆಟ್ಟು ಹೋಗುವುದು. ದೇಶದ ಅಖಂಡತೆ ಮತ್ತು ಜನರ ಕಲ್ಯಾಣಕ್ಕಾಗಿ ನಾವು ಮುಂದೆ ಬರಬೇಕಾಗಿದೆ. ಪ್ರಸ್ತುತ ಸಮಯದಲ್ಲಿ ಮಾನವೀಯತೆಯ ನಿಸ್ವಾರ್ಥ ಸೇವೆ ಮಾಡುವವರ ಅವಶ್ಯಕತೆ ತುಂಬಾ ಇದೆ. ಎರಡು ವಸ್ತು ದುಬಾರಿಯಾಗುತ್ತವೆ. ಒಂದು ಚಿಕಿತ್ಸೆ,ಇನ್ನೊಂದು ವಿದ್ಯಾಭ್ಯಾಸ. ಅನೇಕ ಬಡಜನರಿಗೆ ಸಹಾಯದ ಅವಶ್ಯಕತೆ ಇದೆ. ಮಾನವೀಯತೆಯ ಹಿತೈಷಿಗಳು ಮುಂದೆ ಬಂದು ಈ ಸತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು, ಮಾನವೀಯತೆ ಸಂದೇಶ ವೇದಿಕೆ ಈ ಎರಡು ಕ್ಷೇತ್ರಗಳಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸುತ್ತಿದೆ, ವೇದಿಕೆ ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸಲು ಇಂತಹ ಕಾರ್ಯಕ್ರಮ ಹಮ್ಮಕೊಳುತ್ತದೆ. ಬನ್ನಿ ಈ ಪ್ರೀತಿಯ ಸಂದೇಶವನ್ನು ಹರಡೋಣ ಮತ್ತು ಮಾನವ ಸಮಾಜ ಸೇವೆ ಮಾಡಿ ದ್ವೇಷದ ಬೆಂಕಿಯನ್ನು ನಂದಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಯಲ್ಲದೆ, ಮೌಲಾನಾ ರಿಯಾಜುದ್ದೀನ್ ನದ್ವಿ, ಮೌಲಾನಾ ಕಲೀಮುಲ್ಲಾಹ ನದ್ವಿ, ಹಾಫೀಜ್ ಬಿಲಾಲ್ ಸಾಹಿಬ್ ಶಫೀಕ್ ಸಾಬ ಮತ್ತು ಫಿರೋಜ್ ಸಾಹಬ ಉಪಸ್ಥಿತರಿದ್ದರು.

