ಒಳಮೀಸಲಾತಿ ಜಾರಿಗೆ ಆಗ್ರಹಿಸಿ ವಿಜಯಪುರದಲ್ಲಿ ಸಮಾವೇಶ | ಮುಖಂಡ ಉಮೇಶ ಕಾರಜೋಳ ಮನವಿ
ವಿಜಯಪುರ: ರಾಜ್ಯದೆಲ್ಲೆಡೆ ಮಾದಿಗ ಮುನ್ನಡೆ, ಮಾದಿಗರ ಆತ್ಮಗೌರವ ಸಮಾವೇಶವು ವಿವಿಧ
ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಅದರಂತೆ ವಿಜಯಪುರ ಜಿಲ್ಲಾ ಸಮಾವೇಶವನ್ನು ನಗರದ ಇಟಗಿ ಪೆಟ್ರೋಲ ಪಂಪ ಹತ್ತಿರದ
ಸಾಯಿ ಗಾರ್ಡನ್ ನಲ್ಲಿ ಡಿ.24 ಭಾನುವಾರ ಬೆಳಗ್ಗೆ 10:30ಕ್ಕೆ ಜಿಲ್ಲಾ ಸಮಾವೇಶ ಆಯೋಜಿಸಿದೆ ಎಂದು ಮುಖಂಡ ಉಮೇಶ ಕಾರಜೋಳ ಹೇಳಿದರು.
ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಈ ಸಮಾವೇಶದಲ್ಲಿ ಜಿಲ್ಲೆಯ ಸಮಸ್ತ
ಮಾದಿಗ, ಸಮಗಾರ, ಮೋಚಿ, ಡೋರ, ಭಂಗಿ, ಇತ್ಯಾದಿ ಮಾದಿಗ ಸಂಬಂಧಿತ ಜಾತಿಗಳ
ಯುವಕರು ಬುದ್ದಿಜೀವಿಗಳು, ನೌಕರರು, ಹೋರಾಟಗಾರರು, ಹಾಗೂ ವಿದ್ಯಾರ್ಥಿ ಸಮೂಹ ಮತ್ತು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದರು.
ಈಗಾಗಲೆ ಒಳಮೀಸಲಾತಿ ಶಿಫಾರಸ್ಸು ಮಾಡಿ ಕೇಂದ್ರಕ್ಕೆ
ಕಳುಹಿಸಿರುವದರಿಂದ ಕೇಂದ್ರ ಸರ್ಕಾರವು ಕೂಡಲೇ ಒಳ ಮೀಸಲಾತಿ ಜಾರಿಗೆ ಕ್ರಮ ವಹಿಸಲು
ಆಗ್ರಹಿಸಿ ಈ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಮುದಾಯದ ಸ್ವಾಭಿಮಾನದ ಸಂಕೇತವಾಗಿ ಬಸವಮೂರ್ತಿ ಮಾದರ ಚೆನ್ನಯ್ಯ, ಸ್ವಾಮಿಜಿಗಳು ಚಿತ್ರದುರ್ಗ ಇವರ ಸಾನಿಧ್ಯದಲ್ಲಿ ನಡೆಯುವ ಸಮಾವೇಶಕ್ಕೆ ಕೆಂದ್ರ ಸಚಿವ ಎ.ನಾರಾಯಣ ಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸದ ರಮೇಶ ಜಿಗಜಿಣಗಿ ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ಶಾಸಕರಾದ ದುರ್ಯೋಧನ ಐಹೊಳೆ, ಬಸವರಾಜ ಮತ್ತಿಮಡು, ಮಾಜಿ ಶಾಸಕ ಬಸವರಾಜ ದಡೆಸುಗುರು, ನಿವೃತ್ತ ಐಎಎಸ್/ಕೆಎಎಸ್ ಅಧಿಕಾರಿಗಳಾದ ಅನೀಲ ಕುಮಾರ, ಲಕ್ಷ್ಮೀ ನಾರಾಯಣ, ಗೋನಾಳ ಭೀಮಪ್ಪ,
ಬಾಬುರಾವ ಮುಡವಿ, ಸಾಗರ ಸರ್, ಭೀಮಾಶಂಕರ ಅಣಚಿ, ಮಲ್ಲಮ್ಮ ಹ. ಪೂಜಾರಿ, ವಿಜಯಕುಮಾರ ಅಡಕಿ, ಭೀಮಣ್ಣ ಬಿಲ್ಲವ, ರವೀಂದ್ರ ಜಲಧಾರೆ, ಈರಣ್ಣ ಮೌರ್ಯ, ಭಾಗವಹಿಸಲಿದ್ದಾರೆ.
ಮಾದಿಗರ ಈ ಆತ್ಮಗೌರವ ಸಮಾವೇಶಕ್ಕೆ ಸಮುದಾಯದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮುಖಂಡ ಉಮೇಶ ಕಾರಜೋಳ ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಣಮಂತ ಬಿರಾದಾರ, ಶರಣು ಬ್ಯಾಳಿ, ಬಾಲಪ್ಪ ಗೂಗಿಹಾಳ,ವಿಠ್ಠಲ ನಡುವಿನಕೇರಿ ಪರಶುರಾಮ ರೋಣಿಹಾಳ, ಸುರೇಶ ಗಚ್ಚಿನಮನಿ, ಸದಾನಂದ ಗುನ್ನಾಪುರ, ಅಯ್ಯಪ್ಪ ದೊಡಮನಿ, ಸುನೀಲ ಸಂದ್ರಿಮನಿ, ದೆವೆಂದ್ರ ಹಡಲಗಿ ಹಾಗೂ ಸಮಾಜದ ಮುಖಂಡರಿದ್ದರು.

