ಮುದ್ದೇಬಿಹಾಳ: ತಾಲೂಕಿನ ಅಗಸಬಾಳ ಗ್ರಾಮದಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ, ಧರ್ಮಸಭೆ ಹಾಗೂ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಡಿ.೨೫ ಮತ್ತು ೨೬ರಂದು ರಂದು ಹಮ್ಮಿಕೊಳ್ಳಲಾಗಿದೆ.
ಡಿ.೨೫ ರ ಬೆಳಿಗ್ಗೆ ೬ ಗಂಟೆಗೆ ಹುಲಗೆಮ್ಮ ದೇವಿ ದೇವಸ್ಥಾನದಲ್ಲಿ ರಾಯಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿ ಕುಂಭ ಕಳಸ, ವಾದ್ಯ ವೈಭವದೊಂದಿಗೆ ಅದ್ಧೂರಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ತಂದು ಪ್ರತಿಷ್ಠಾಪನೆ ಮಾಡಲಾಗುವದು. ನಂತರ ಧರ್ಮ ಸಭೆ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ರಾತ್ರಿ ೧೦ಗಂಟೆಗೆ ಮುಗಲಿಹಾಳದ ಮಾಳಿಂಗರಾಯ ಡೊಳ್ಳಿನ ಸಂಘ, ಸಂಕನಾಳದ ಅಮೋಘ ಸಿದ್ದೇಶ್ವರ ಡೊಳ್ಳಿನ ಸಂಘದ ವತಿಯಿಂದ ವಾದಿ-ಪ್ರತಿವಾದಿ ಡೊಳ್ಳಿನ ಪದಗಳ ಕಾರ್ಯಕ್ರಮ ನಡೆಯಲಿದೆ.
ಡಿ.೨೬ ರಂದು ಬೆಳಿಗ್ಗೆ ೧೦ಕ್ಕೆ ಸಾಗ ಚೀಲ ಹೊತ್ತು ಹೋಗುವ ಸ್ಪರ್ದೆ, ಮಧ್ಯಾಹ್ನ ೨ಕ್ಕೆ ಹಾಲು ಹಲ್ಲು ಟಗರಿನ ಕಾಳಗ ಸ್ಪರ್ದೆ, ಮತ್ತು ಎರಡು ಹಲ್ಲು ಟಗರಿನ ಕಾಳಗ ಸ್ಪರ್ದೆ ರಾತ್ರಿ ೯ಕ್ಕೆ ಗಾನಯೋಗಿ ಮೆಲೋಡೀಸ್ ಮತ್ತು ಆರ್ಕೆಸ್ಟ್ರಾ ಇವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
ಧರ್ಮ ಸಭೆ ಹಾಗೂ ನಿವೃತ್ತ ಸೈನಿಕರ ಸನ್ಮಾನದ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಸರೂರ ಶಾಖಾ ಮಠ ಮತ್ತು ಅಗತೀರ್ಥದ ಪರಮ ಪೂಜ್ಯ ರೇವಣಸಿದ್ದೇಶ್ವರ ಶಾಂತಮಯ ಶ್ರೀಗಳು, ಹುಲಜಂತಿಯ ಪರಮ ಪೂಜ್ಯ ಮಾಳಿಂಗರಾಯ ಮಹಾರಾಜರು ವಹಿಸಲಿದ್ದು ಪಾವನ ಸಾನಿಧ್ಯವನ್ನು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ. ಚೆನ್ನವೀರ ದೇವರು, ಯರಝರಿಯ ಯಲ್ಲಾಲಿಂಗೇಶ್ವರ ಮಠದ ಪರಮ ಪೂಜ್ಯ ಮಲ್ಲಾರಲಿಂಗ ಮಹಾಸ್ವಾಮಿಗಳು ಹಾಗೂ ಹಳ್ಳೂರಿನ ಅವದೂತ ಮಠದ ಮುತ್ತಪ್ಪ ಶರಣರು ವಹಿಸಲಿದ್ದಾರೆ. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಮೂರ್ತಿ ಅನಾವರಣಗೊಳಿಸಲಿದ್ದು, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಧರ್ಮ ಸಭೆಯನ್ನು ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಭಾಜಪಾ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ, ಕಾಂಗ್ರೇಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ, ಭಾಜಪಾ ಮುಖಂಡ ಮಲಕೇಂದ್ರಗೌಡ ಪಾಟೀಲ, ನ್ಯಾಯವಾದಿ ಪಿ.ಬಿ.ಮಾತಿನ ಅತಿಥಿಗಳಾಗಿ ಢವಳಗಿ ಗ್ರಾ.ಪಂ ಉಪಾಧ್ಯಕ್ಷ ಸುರೇಶಗೌಡ ಪಾಟೀಲ ಸದಸ್ಯರಾದ ದುಂಡಪ್ಪ ಅರಸುಣಗಿ, ಗುರುಬಾಯಿ ಕಾಶಿನಕುಂಟಿ, ಶಾಂತು ಹೊಸಮನಿ ಸೇರಿದಂತೆ ಮತ್ತೀತರರು ಅತಿಥಿಗಳಾಗಿ ಆಗಮಿಸಲಿದ್ದಾರೆ. ತಾಲೂಕಿನ ಎಲ್ಲ ಸದ್ಭಕ್ತರು ತನು, ಮನ, ಧನದಿಂದ ಸೇವೆ ಸಲ್ಲಿಸಿ ಕನಕದಾಸರ ಕೃಪೆಗೆ ಪಾತ್ರರಾಗುವಂತೆ ಸದ್ಭಕ್ತ ಮಂಡಳ
ಪ್ರಕಟಣೆಯಲ್ಲಿ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

