ವಿಜಯಪುರದಲ್ಲಿ ಶ್ವಾನಗಳ ಪ್ರದರ್ಶನಕ್ಕೆ ಶಾಸಕರಾದ ಯತ್ನಾಳ, ಕಟಕದೊಂಡರಿಂದ ಚಾಲನೆ
ವಿಜಯಪುರ: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪೊಲೀಸ್ ಪರೇಡ್ ಗ್ರೌಂಡನಲ್ಲಿ ಭಾನುವಾರ ಏರ್ಪಡಿಸಿದ ಶ್ವಾನ ಪ್ರದರ್ಶನಕ್ಕೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಚಾಲನೆ ನೀಡಿದರು.
ಈ ಪ್ರದರ್ಶನದಲ್ಲಿ ಸುಮಾರು ೨೪ ತಳಿಯ ಶ್ವಾನಗಳು ಪಾಲ್ಗೊಂಡು, ಸಾರ್ವಜನಿಕರ ಗಮನ ಸೆಳೆದವು. ಪ್ರದರ್ಶನಕ್ಕೆ ೨೫೦ ಶ್ವಾನಗಳ ಮಾಲೀಕರು ಪ್ರದರ್ಶನಕ್ಕೆ ನೋಂದಣಿ ಮಾಡಿಕೊಂಡು ಪಾಲ್ಗೊಂಡರು. ಗ್ರೇಟ್ ಫೇನ್, ಬೀಗಲ್, ಬಾಕ್ಸರ್, ಪೂಡಲ್, ಬೆಲ್ಜಿಯಂ ಮಾಸ್ಟಿಪ್, ಪಸ್ಮಿ ಪಂಜಾಬಿ, ಮಿನಿಯೇಚರ್ ಪಮೇರಿಯನ್, ಸ್ವಿಡ್ಜು, ಕಾಕರ್ ಸ್ಫೇನಿಯಲ್, ಮುದೋಳ ಹೌಂಡ, ಲ್ಯಾಬ್ರಡಾರ್, ಡಾಬರ್ ಮನ್, ಕೇನ್ ಕಾರ್ಸೋ, ಸೈಬೇರಿಯನ್ ಹಸ್ಕಿ,ಗೋಲ್ಡನ್ ರಿಟ್ರೆಂವರ್ ಗ್ರೇ ಹೌಂಡ್ ಹೀಗೆ ವಿವಿಧ ತಳಿಯ ಮುದ್ದು ಸ್ವಾನಗಳು ಎಲ್ಲರ ಗಮನ ಸೆಳೆದವು. ಅಪರೂಪದ ಶ್ವಾನಗಳನ್ನು ಸಾರ್ವಜನಿಕರು ಕಣ್ತುಂಬಿಕೊಂಡರು.
ವಿವಿಧ ತಳಿಯ ಶ್ವಾನಗಳು ಅಬಾಲವೃದ್ಧರಾದಿಯಾಗಿ ನೆರೆದ ಜನರಿಗೆ ಮನರಂಜನೆ ನೀಡಿದವು. ಶ್ವಾನಗಳ ಮಾಲೀಕರು ಅವುಗಳ
ಬಸನಗೌಡ ಪಾಟೀಲ ಯತ್ನಾಳ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಿಂದ ಈ ಪ್ರದರ್ಶನ ಏರ್ಪಾಡಿಸುತ್ತಾ ಬರಲಾಗುತ್ತಿದೆ. ವಿವಿಧ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿವೆ. ಪ್ರಾಣಿ ಪ್ರೀತಿ, ಪ್ರಾಣಿ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗ. ಪ್ರಾಣಿಗಳನ್ನು ಪ್ರೀತಿಯಿಂದ ಕಾಣಬೇಕು. ಪ್ರತಿಯೊಂದು ಪ್ರಾಣಿಗಳಿಗೆ ಗೌರವ ಕೊಡುವ ಸಂಸ್ಕೃತಿ ಭಾಗವಾಗಿದೆ. ಎಲ್ಲಾ ಪಶು ಪಕ್ಷಿಗಳಿಗೆ ನಿಸರ್ಗದಲ್ಲಿ ಅವುಗಳ ಪಾಲಿದೆ. ಮುಧೋಳ ಶ್ವಾನ ಬಹಳ ಪ್ರಸಿದ್ದಿ ಹೊಂದಿದ್ದು, ಮುಧೋಳದ ಶ್ವಾನಗಳು ಭಾರತೀಯ ಸೇನೆಯಲ್ಲಿರುವುದು ನಮಗೆ ಗೌರವ. ಪಶು ಪಕ್ಷಿಗಳಿಗೆ ಆಹಾರ ನೀಡಿ, ಅವುಗಳ ರಕ್ಷಣೆ ಮಾಡಬೇಕು.ಇಲ್ಲಿ ಭಾಗವಹಿಸುವ ಶ್ವಾನಗಳಿಗೆ ಪಾರಿತೋಷಕ ಹಾಗೂ ಬಹುಮಾನ ನೀಡಲಾಗುತ್ತಿದೆ. ಶ್ವಾನ ಪ್ರದರ್ಶನ ಯಶಸ್ವಿಯಾಗಲಿ ಎಂದರು.
ಶ್ವಾನಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕಾ ಅಭಿಯಾನ ಜಿಲ್ಲಾದ್ಯಂತ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಜಾನುವಾರುಗಳಿಗೆ ಅಗತ್ಯ ಲಸಿಕೆ ಹಾಕಿಸಬೇಕು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಅಶೋಕ ಘೋಣಸಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಂಕರ್ ಮಾರಿಹಾಳ,ಮುಖ್ಯ ಪಶುವೈದ್ಯಾಧಿಕಾರಿ ಡಾ. ಬಿ.ಎಸ್ ಕನಮಡಿ, ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಎನ್.ನಾಗರಾಜ್ ಹಾಗೂ ಡಾ.ಡಿ.ಆರ್.ಮಂಜುನಾಥ ಸೇರಿದಂತೆ ನಾಗರಿಕರು ಉಪಸ್ಥಿತರಿದ್ದರು.


