ವಿಜಯಪುರ: ೨೦೨೪-೨೫ನೇ ಸಾಲಿನ ಜಿಲ್ಲಾ ಕ್ರೀಡಾ ಶಾಲೆ ಮತ್ತು ವಸತಿ ನಿಲಯಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಡಿ.೧೮ರಿಂದ ಪ್ರಾರಂಭಗೊಂಡಿದ್ದು, ಜ.೨ರವರೆಗೆ ಆಯಾ ತಾಲೂಕಿನಲ್ಲಿ ಬೆಳಿಗ್ಗೆ ೯:೩೦ರಿಂದ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಡಿ. ೧೯ರಂದು ಚಡಚಣ ತಾಲೂಕಿನ ಚಡಚಣ ಶ್ರೀ ಸಂಗಮೇಶ್ವರ ಪ್ರೌಢಶಾಲೆ ಮೈದಾನದಲ್ಲಿ ತರಬೇತಿದಾರ ಸಲ್ಲಾವುದ್ದೀನ ಮಳಗಿ (ಮೊ: ೯೯೦೧೭೪೭೮೬೬), ದೇವರಹಿಪ್ಪರಗಿ ತಾಲೂಕಿನ ದೇವರಹಿಪ್ಪರಗಿ ಬಿಎಲ್ಡಿಇ ಕಾಲೇಜು ಆವರಣದಲ್ಲಿ ಬಸವರಾಜ ಬೆಳ್ಳುಬ್ಬಿ (ಮೊ:೯೯೭೨೬೯೧೧೭೯) ಹಾಗೂ ಬಬಲೇಶ್ವರ ತಾಲೂಕಿನ ಬಬಲೇಶ್ವರದ ಶಾಂತವೀರ ಪ್ರೌಢಶಾಲೆ ಮೈದಾನದಲ್ಲಿ ಸದಾಶಿವ ಅಮರಪ್ಪಗೋಳ (ಮೊ:೯೭೪೨೬೮೧೯೯೪), ಡಿ.೨೦ ರಂದು ವಿಜಯಪುರ ತಾಲೂಕಿಗೆ ಸಂಬಂಧಿಸಿದಂತೆ ನಗರದ ಜಿಲ್ಲಾ ಕ್ರೀಡಾಂಗಣ ಮೈದಾನದಲ್ಲಿ ತರಬೇತಿದಾರ ರಾಜು ಚವ್ಹಾಣ (ಮೊ: ೭೦೧೯೧೬೭೨೪೩) ಹಾಗೂ ಇಂಡಿ ತಾಲೂಕು ಕ್ರೀಡಾಂಗಣದಲ್ಲಿ ಯಲ್ಲಪ್ಪ ಜಂಪ್ಲೆ (ಮೊ:೯೮೪೫೦೦೭೩೪೨), ಡಿ.೨೧ ರಂದು ಕೋಲ್ಹಾರ ತಾಲೂಕಿನ ಕೋಲ್ಹಾರ ಶ್ರೀ ಸಂಗಮೇಶ್ವರ ಪ್ರೌಢಶಾಲೆ ಮೈದಾನದಲ್ಲಿ ತರಬೇತಿದಾರ ಸದಾಶಿವ ಅಮರಪ್ಪಗೋಳ (ಮೊ:೯೭೪೨೬೮೧೯೯೪) ಹಾಗೂ ತಿಕೋಟಾ ತಾಲೂಕಿನ ತಿಕೋಟಾ ಬಿ.ಎಲ್.ಡಿ.ಇ ಪ್ರೌಢಶಾಲೆ ಆವರಣದಲ್ಲಿ ರಾಜು ಚವ್ಹಾಣ (ಮೊ:೭೦೧೯೧೬೭೨೪೩) ಅವರು ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ.
ಡಿ.೨೬ ರಂದು ಬಸವನ ಬಾಗೇವಾಡಿ ತಾಲೂಕಿನ ಬ.ಬಾಗೇವಾಡಿ ಶ್ರೀ ಬಸವೇಶ್ವರ ಪಿ.ಯು. ಕಾಲೇಜು ಮೈದಾನದಲ್ಲಿ ಮಹ್ಮದರಫಿ ನದಾಫ್ (ಮೊ:೯೮೮೬೧೧೫೯೦೯) ಹಾಗೂ ಆಲಮೇಲ ತಾಲೂಕಿನ ಆಲಮೇಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ತರಬೇತಿದಾರ ಸಲ್ಲಾವುದ್ದೀನ ಮಳಗಿ (ಮೊ:೯೯೦೧೭೪೭೮೬೬), ಡಿ.೨೮ ರಂದು ನಿಡಗುಂದಿ ಸರಕಾರಿ ಪ್ರಾಥಮಿಕ ಮಣಗೂರ ಆವರಣದಲ್ಲಿ ತರಬೇತಿದಾರ ಮಹ್ಮದರಫಿ ನದಾಫ್ (ಮೊ:೯೮೮೬೧೧೫೯೦೯), ಡಿ. ೨೯ರಂದು ಮುದ್ದೇಬಿಹಾಳ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿ ಮಲ್ಲನಗೌಡ ಪಾಟೀಲ (ಮೊ:೯೯೦೧೪೪೯೩೩೭) ಮತ್ತು ಜ. ೦೨ ರಂದು ತಾಳಿಕೋಟಿ ಶ್ರೀ ಖಾಸ್ಗತೆಶ್ವರ ಪ್ರೌಢಶಾಲೆ ಮೈದಾನದಲ್ಲಿ ಮಲ್ಲನಗೌಡ ಪಾಟೀಲ ಅವರು ಹಾಗೂ ತರಬೇತಿದಾರರು ಭಾಗವಹಿಸಿ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತರಬೇತಿದಾರರನ್ನು ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಮೊ: ೮೭೯೨೧೮೫೧೪೧ ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಕ್ರೀಡಾ ಶಾಲೆ ವಸತಿ ನಿಲಯಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ
Related Posts
Add A Comment
